ಬಾಲ್ಯ ವಿವಾಹ !


 ನಿನ್ನೆ ಸಂಜೆ ಈ ಟೀವಿ ಕನ್ನಡ ವಾಹಿನಿಯನ್ನು ವೀಕ್ಷಿಸುವಾಗ ಮಿತ್ರ ಸುಘೋಷ್ ನಿಗಳೆ ಟಾಕ್  ಶೋನಲ್ಲಿ ಇದ್ದರು. ಈಟೀವಿ ಕನ್ನಡ ವಾಹಿನಿಯು ಯಾವಾಗ ಇಂತಹ ಟಾಕ್ ಶೋಗಳನ್ನು ಆರಂಭ ಮಾಡಿತು ಎನ್ನುವ ಆಶ್ಚರ್ಯದ ಜೊತೆಗೆ ಛಕ್ಕಂತ ನೆನಪಿಗೆ ಬ೦ತು ಅವರು ಕಳುಹಿಸಿದ್ದ ಮೆಸೇಜ್ . ಕೇವಲ ಅಶ್ವಿನಿ ನಕ್ಷತ್ರ ನೋಡಿ ಅನ್ನುವ ಸಂದೇಶ ಕಳುಹಿಸಿದ್ದರು.  ಸೂರ್ಯ ಬಿಟ್ಟು ಯಾವ ನಕ್ಷತ್ರ ವು ಕಾಣಿಸಲಿಲ್ಲ ;-)  ಸಂಜೆ ಈ ಅಶ್ವಿನಿ ನಕ್ಷತ್ರ ಧಾರಾವಾಹಿಯ ಬಗ್ಗೆ ಟಾಕ್ ಷೋ ನಡೆಯುತ್ತಿತ್ತು . ಆ ಧಾರಾವಾಹಿಯ ಹೀರೋ ಜೆಕೆ ನಾಪತ್ತೆ. ಆ ಕುರಿತು ಸಿಕ್ಕಾಪ ಟ್ಟೆ ಸೀರಿಯಸ್ ಆದ ಚರ್ಚೆ ನಡೆಯುತ್ತಿತ್ತು. ಅದು ಧಾರಾವಾಹಿಯ ಒಂದು ಭಾಗ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಸುಘೋಷ್ ಥೇಟ್ ನೇರ ಪ್ರಸಾರದ ಜರ್ನೋ ರಂತೆ ಮಾತನಾಡುತ್ತಿದ್ದರು .  ಟಿ ಎನ್ ಸೀತಾರಾಮ್ ಅವರ ಮುಕ್ತ ಮುಕ್ತ ಧಾರಾವಾಹಿಯಲ್ಲಿ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು.ಆ ಬಳಿಕ ಸಮಯ ಚಾನೆಲ್ ಗೆ ಹೋದವರು ಈಗ ಈ ಟೀವಿ ಕನ್ನಡದಲ್ಲಿ ಇದ್ದಾರೆ. ಕಾರ್ಯಕ್ರಮ ಚೆನ್ನಾಗಿತ್ತು. ಆ ಧಾರಾವಾಹಿಯ ಮುಖ್ಯಪಾತ್ರಧಾರಿ ಕಾರ್ತಿಕ್  ಬಾಲಿವುಡ್ ಚಿತ್ರದಲ್ಲಿ ಸೆಲೆಕ್ಟ್ ಆಗಿದ್ದಾರೆ ಅನ್ನುವ ಸುದ್ದಿ ಇದೆ. ಒಳ್ಳೆ ಗ್ಲಾಮಿ ನಟ. ಆದರೆ ಪಾಪ ಅನ್ನಿಸೋದು ಜೆಕೆ ಜೋತೆಯಾಗಿರುವಾಂದ್ರೆ ಹೆಂಡತಿ ಪಾತ್ರಧಾರಿ ಹುಡುಗಿಯನ್ನು ನೋಡಿದಾಗ ! ನಿರ್ದೇಶಕ ಆರೂರು ಜಗದೀಶ್  ಬಾಲ್ಯ ವಿವಾಹ ಮಾಡಿದ್ದಾರೆ ಅನ್ನಿಸುತ್ತೆ. ಹಿಂದಿಯ ಮಧುಬಾಲ ನೋಡಿದ್ದೀನಿ.. ಸೊ .... !



ನನಗೆ ಸಿಕ್ಕಾಪಟ್ಟೆ ಇಷ್ಟ ಆಗುವ ಕಾರ್ಯಕ್ರಮ ಅಂದ್ರೆ ಅಡುಗೇದು . ಅದು ಯಾವ ಭಾಷೆಯಲ್ಲಿಯಲ್ಲಿ ಆಗಿರಲಿ . ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗೋದು ಯಾಕೆ ಇಷ್ಟ  ಆಯ್ತು ಅಂದ್ರೆ ಅದರ ನಿರೂಪಕ ಅತಿಥಿ ಮಾಡಿದ ಅಡುಗೆಯತ್ತ ಗಾಬರಿಯಾಗಿ ನೋಡಿ ಆ ಬಳಿಕ ಸೇವಿಸುವುದು :-) ಮುಖ್ಯವಾಗಿ ನಿರೂಪಕರಿಗೆ ಅಂತಹ ಯಾವುದೇ ಚಾನ್ಸ್ ಇಲ್ಲ .. ಆದರೆ ಗೌತಂ ಮಾಚಯ್ಯ ತಮ್ಮ ಚಾನೆಲ್ ಮಂದಿಗೆ ಆ ಅವಕಾಶ ಮಾಡಿಕೊಟ್ಟಿದ್ದಾರೆ . ವಾವ್ ಯಾ :-)