ಕಾರ್ಯಕ್ರಮ !


ಯುಗಾದಿ ಹಬ್ಬದಲ್ಲಿ ಉದಯ ನ್ಯೂಸ್ನಲ್ಲಿ ಜಾನಪದ ಮತ್ತು ಸಿನಿಮ ಕಲಾವಿದರ ಸಮ್ಮಿಲನದ ಕಾರ್ಯಕ್ರಮ ಇತ್ತು. ನನ್ನ ಆಲ್ ಟೈಮ್ ಹಾಸ್ಯಕಲಾವಿದ, ಸಂಗೀತ ನಿರ್ದೇಶಕ ಸಾಧುಕೋಕಿಲ ಆ ಕಾರ್ಯಕ್ರಮದ ಮುಖ್ಯ ಭಾಗವಾಗಿದ್ದರು. ಸಿನಿಮಾಹಾಡುಗಳ ಜೊತೆಜೊತೆಗೆ ಅಲ್ಲಿ ಜಾನಪದ ಗೀತೆಗಳು ಸಹ ಇತ್ತು.ತುಂಬಾ ಖುಷಿ ಕೊಟ್ಟ ಕಾರ್ಯಕ್ರಮ. ಸಾಮಾನ್ಯವಾಗಿ ಹಾಸ್ಯದ ಕಾರ್ಯಕ್ರಮಗಳು ಅಂದ್ರೆಅತಿ ಹೆಚ್ಚು ಪ್ರೀತಿ ನನಗೆ . ಕನ್ನಡದಲ್ಲಿ ಉದಯ ಕಾಮಿಡಿ ನೋಡ್ತಾ ಇರ್ತೀನಿ. ಅದರಲ್ಲೂ ವಿಶೇಷವಾಗಿ ಸಾಧು ಕೋಕಿಲ ಅವರಸಿನಿಮಾ ಕ್ಲಿಪ್ಪಿಂಗ್ ಇದ್ರೆ ಖುಷಿ.. ಇನ್ನು ಜಗ್ಗೇಶ್ ಅಹಾ.. ಅದೇ ರೀತಿ ಇನ್ನು ಅನೇಕರಿದ್ದಾರೆ. ಅದನ್ನು ಹೊರತು ಪಡಿಸಿದರೆ ನ್ಯೂಸ್ ಚಾನೆಲ್ಗಳಲ್ಲಿ ಪ್ರಸಾರಿಸುವ ಹಾಸ್ಯ ಕಾರ್ಯಕ್ರಮಗಳನ್ನು ನೋಡ್ತೀನಿ.. ಈ ಹಾಸ್ಯ ಮಾಡುವವರದ್ದು ಒಂದೇ ರೀತಿ ಇರುತ್ತೆ.. ಒಂದರಲ್ಲಿ ಒಬ್ಬರು ಹೇಳಿದ್ದಾರೆ, ಅದನ್ನೇ ಸ್ವಲ್ಪ ತಿರುಗಿಸಿ ಮತ್ತೊಂದು ಕಾರ್ಯಕ್ರಮದಲ್ಲಿ ಹೇಳ್ತಾರೆ... ಅದೇ ರೀತಿ ಮತ್ತೊಂದು ಕಾರ್ಯಕ್ರಮದಲ್ಲಿ ಇನ್ನೊಬ್ಬರು.. ಒಟ್ಟಾರೆ ಇವರುಗಳು ಭೂಮಿ ಗುಂಡಗಿದೆ ಅಂತ ಮತ್ತೆ ಮತ್ತೆ ಸಾಬೀತು ಮಾಡಿಬಿಡ್ತಾರೆ ;-)  ತೆಲುಗು ಸಹ ನಾನು ಆಗಾಗನೋಡ್ತಾ ಇರ್ತೀನಿ... ಅದರಲ್ಲಿ ಜೆಮಿನಿ ಕಾಮಿಡಿ ಚಾನೆಲ್ ಹೆಚ್ಚು ವೀಕ್ಷಿಸೊದು... ಮಜಾ ಬರುತ್ತೆ ಹಾಸ್ಯ ನಟರು ನಟಿಸಿರುವ ದೃಶ್ಯಗಳನ್ನು ವೀಕ್ಷಿಸುವಾಗ ...

ಕಳೆದವಾರ  ವಿ ಚಾನೆಲ್ ನೋಡುವಾಗ ಒಂದು ಕಾರ್ಯಕ್ರಮ ತುಂಬಾ ಗಮನ ಸೆಳೆಯಿತು.ಹೀರೋಸ್ ಅಂತ ಅದರ ಹೆಸರು. .. ಲೈಂಗಿಕ ಕಿರುಕುಳ ದಂತಹ   ಸಮಸ್ಯೆ, ಅಂತಹ ಹರಾಸ್ ಮೆಂಟ್ ಮತ್ತು  ಅಬ್ಯುಸ್ ನಂತಹ ಸಮಸ್ಯೆಗಳಿಂದ ಹೆಣ್ಣು ಯಾವರೀತಿ ತನ್ನನ್ನು ತಾನು ರಕ್ಷಿಸಿ ಕೊಳ್ಳುತ್ತಾಳೆ  ಎನ್ನುವುದು ಇದರ ಮುಖ್ಯ ಅಂಶ.. ಟೀನಿಗಳ ಕಾರ್ಯಕ್ರಮ. ಕಿವಿ ಕೇಳದ ಮತ್ತು ಮಾತು ಬರದ ಹುಡುಗಿಯೊಬ್ಬಳನ್ನು ಆಕೆಯ ಪಕ್ಕದ   ಮನೆಯಾತ, ಅದರಲ್ಲೂ ಬ್ರಹ್ಮಚಾರಿ, ಅದರಲ್ಲೂ ಆ ಹುಡುಗಿಯ ತಾಯಿಯನ್ನು ಮದುವೆಆಗ್ತಿನಿ ಎಂದು ಮಾತು  ಈ ಹುಡುಗಿಯ ದೇಹದ ರುಚಿ ನೋಡಲು ಪ್ರಯತ್ನಿಸುತ್ತಿದ್ದ ..ಇದನ್ನು ಆಕೆ ಎದುರಿಸಿದ್ದು.. ಅದನ್ನು ಜಗತ್ತಿಗೆ ತೋರಿದ್ದು .. ಎಲ್ಲವನ್ನು ಅದ್ಭುತವಾಗಿ ಪಿಕ್ಚರೈಸ್ ಮಾಡಿದ್ದರು... ಮತ್ತೆ ಎಂದಾದರು ಪ್ರಸಾರ ಮಾಡಿದರೆ ತಪ್ಪದೆ ನೋಡಿ.. ಆ ಮೂಕ ಹುಡುಗಿಯ ಪಾತ್ರ  ಮಾಡಿದ ಹೆಣ್ಣುಮಗಳ ನಟನೆ.. ನಿಜಕ್ಕೂ ಆ ಕಾರ್ಯಕ್ರಮ ಅತ್ಯಂತ ಆತಂಕ ಮತ್ತು ಗಾಬರಿಯಿಂದ .. ನೋಡಿದ್ದೇ..ನಿಜಕ್ಕೂ  ತಪ್ಪದೆ ನೋಡಲೇ ಬೇಕಾದ ಕಾರ್ಯಕ್ರಮ! 

ಕಲಸುಮೇಲೋಗರ


ಇಂದು ಪುಸ್ತಕ ಬಿಡುಗಡೆಗೆ ಹೋಗಿದ್ದೆ.. ಹೆಚ್ಚಾಗಿ ನಾನು ಇಂತಹ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಇತ್ತೀಚೆಗೆ... ಕಾರ್ಯಕ್ರಮ ತುಂಬಾ ಚೆಂದ ಇತ್ತು.. ಪುರುಷೋತ್ತಮ ಬಿಳಿಮಲೆ  ಸೇರಿದಂತೆ ವೇದಿಕೆ ಮೇಲಿದ್ದವರೆಲ್ಲರದ್ದು  ಮಾತು ಸಕತ್ತಾಗಿತ್ತು... 
ಕಾರ್ಯಕ್ರಮವೆಲ್ಲ ಪೂರ್ಣ ಆದ ಬಳಿಕ.. ಎಲ್ಲರು ಅತ್ತಿತ್ತ ವಿಂಗಡಣೆ   ಆದರು.. ನಾವು ಒಂದಷ್ಟು ಜನರು ಒಟ್ಟಿಗೆ ಸೇರಿದೆವು.. ಮಾತಿನ ಮಧ್ಯೆ ಬಂಡ ಅದಕ್ಕಿಂತಲೂ ಹೆಚ್ಚಿನ ಪ್ರಾಧಾನ್ಯತೆ ಪಡೆದ ಸಂಗತಿ ಅದರಲ್ಲೂ ಟೀವಿ ಷೋ ಅಂದರೆ ಕಾಮಿಡಿ ವಿತ್ ಕಪಿಲ್... ಕಲರ್ ವಾಹಿನಿಯ ಕಾಮಿಡಿ  ಕಪಿಲ್  ವಿಷಯವನ್ನು ಬೆಂಗಳೂರಿನ ಕನ್ನಡ ಬುಕ್ ರಿಲೀಸ್ ನಂತರ ಮಾತಾಡ್ತಾರೆ ಹೆಣ್ಣುಮಕ್ಕಳು ಅಂದ್ರೆ ಆ ಕಾರ್ಯಕ್ರಮ ಅದೆಷ್ಟು ಖುಷಿ ಕೊಟ್ಟಿರ ಬಹುದು ಅಲ್ವೇ!
ಕಾಮಿಡಿ... ಕಾರ್ಯಕ್ರಮದಲ್ಲಿ ನನಗೆ ಕಪಿಲ್ ಅಲ್ಲದೆ ಎಲ್ಲ ಪಾತ್ರಗಳು   ಇಷ್ಟ ಆಗುತ್ತದೆ.ಆದರೆ ನಾನು ಪ್ರತಿಬಾರಿ ಕಾಯುವುದು ಸಿದ್ದು ಪಾಜಿ ಧರಿಸಿರುವ ಪಗಡಿ ಯಾವ ಕಲರ್ ಅಂತ ನೋಡೋಕೆ (ಇದು ನಾನು ಬಟ್ಟೆ ತಗೊಳೋಕೆ ಸಾಕಷ್ಟು ಸಹಾಯ ಮಾಡಿದೆ ಅನೇಕ ಸಂದರ್ಭಗಳಲ್ಲಿ ;-) }ಮತ್ತು ದಾದಿ , ಬುವ , ಪಲಕ್ ... ಬಿಟ್ಟು ಅತ್ತೆ ಮತ್ತು ಅಜ್ಜಿ ಸಕತ್ ಖುಷಿ ಕೊಟ್ಟಿದ್ದಾರೆ ನಟನೆ ಮುಖಾಂತರ, ಅದೇ ರೀತಿ ಪಲಕ್ ಸಹಿತ..
ಇಲ್ಲಿ ಪಾತ್ರಗಳ ಕಲಸುಮೇಲೋಗರ ಇಲ್ಲ ... ಆದ ಕಾರಣ ಇಷ್ಟ ಆಗುತ್ತೆ. 

ಕನ್ನಡದಲ್ಲಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಖುಷಿ ಕೊಡುವ ಕಾರ್ಯಕ್ರಮ ವಿಶ್ವ ಅವರ ಉಡೀಸ್...ವಿಶ್ವ ಜೊತೆಯ ಸಹ ಕಲಾವಿದ ಇತ್ತೀಚೆಗೆ ನನ್ನ ತಾಯಿ ಅವರ ತವರೂರಿಗೆ ಬಂದಿದ್ದರು ಮಿಮಿಕ್ರಿ ಕಾರ್ಯಕ್ರಮ ನಡೆಸಲು. ಅವರದ್ದು  ಸಾಮಾನ್ಯ ಜೋಕ್ಸ್ ಬಿಡಿ... ಆದರೆ ಮಾತಿನ ನಡುವೆ ಆತ ಅಲ್ಲಿನವರಿಗೆ ನಿಮ್ಮ ಬಳಿ 3ಜಿ ಫೋನ್  ನೋಡಿದ್ದಿರಾ ಅಂದ್ರು...ಒಂದರ್ಥಲ್ಲಿ ಅಲ್ಲಿನವರಿಗೆ ಅದರ ಬಗ್ಗೆ ಅರಿವೇ ಇಲ್ಲವೇನೋ ಎನ್ನುವಂತೆ ಮಾತಾಡಿದರು.. ನನ್ನ ತಾಯಿಯ ತವರೂರಲ್ಲಿ ಅಂದು ಪ್ರೌಢಶಾಲೆ ಐವತ್ತರ ಸಂಭ್ರಮದಲ್ಲಿ   ಇತ್ತು... ಅಲ್ಲಿ ಓದಿದ ಬಹುತೇಕರು ಐಎಸ್ , ಐಪಿಎಸ್ ಮಾತ್ರವಲ್ಲ , ವಕೀಲರು, ವೈದ್ಯರು, ಟೀಚರ್ ಹೀಗೆ ಅತ್ಯುತ್ತಮ ಹುದ್ದೆಯಲ್ಲಿ ಇದ್ದಾರೆ. ಹಳ್ಳಿಯಲ್ಲಿ ಇರುವ ತಾಯಿತಂದೆಯರು ದೆಹಲಿ, ಮುಂಬೈ ಮುಂತಾದ ಕಡೆ ಇರುವ  ತಮ್ಮ ಮಕ್ಕಳ ಮನೆಗೆ ಫ್ಲೈಟ್ ನಲ್ಲೆ ಓಡಾಡೋದು..  ಇರ್ಲಿ ಬಿಡಿ ಪಾಪ ಆ ಕಲಾವಿದರಿಗೆ ಏನು ಗೊತ್ತಿದೆ... ನನ್ನ ಅಮ್ಮ ನಾ ಕಂಡ ಅತ್ಯಂತ ಬುದ್ಧಿವಂತ ಹೆಣ್ಣುಮಕ್ಕಳಲ್ಲಿ ಒಬ್ಬರು.. ಟೂ  ಬ್ರಿಲಿಯಂಟ್ ...  ನನ್ನ ಅಮ್ಮನ ಊರು, ಅಲ್ಲಿನ ಸಾಧಕರನ್ನು ನೆನಪು ಮಾಡಿಕೊಂಡರೆ ಹೆಮ್ಮೆ ಆಗುತ್ತೆ ನನಗೆ :-)