ಚಿಂಟು


courtesy : Dr. Krishnaveni Ghattu
ದಸರಾ ಬೇಡ ಅಂತ ಒಬ್ಬರು, ಬೇಕು ಎಂದು ಒಂದಷ್ಟು ಜನ. ರಾಜತ್ವದ ಸಂಕೇತ ಅಂದ್ರೆ, ಇದು ನಮ್ಮ ಹೆಮ್ಮೆಯ ಪ್ರತೀಕ ಎಂದು ಹೇಳುವವರು ಒಂದಷ್ಟು ಜನ. ಏನೇ ಹೇಳಿ ನನಗೆ ನವರಾತ್ರಿ ಬಗ್ಗೆ ವಿಶೇಷ ಒಲವು. ನಾಡ  ಹಬ್ಬ ದಸರಾ, ಮೈಸೂರು, ಬೊಂಬೆಗಳು, ಅದರ ಜೋಡಣೆ, ಎಲ್ಲವೂ ಇಷ್ಟ. ಅದರ ಬಗ್ಗೆ ಸಾಕಷ್ಟು ಆಸಕ್ತಿ.
ದಸರಾದಲ್ಲಿ ಹಿರಿಯ ಮಹಾರಾಜರಿಲ್ಲ. ಅದು ನೋವಿನ ಸಂಗತಿ. ಆದರೆ ಈಗ ಮತ್ತೋರ್ವ ಮಹಾರಾಜರು. ಅವರೇನು ರಾಜ್ಯ ನಡೆಸ ಬೇಕಿಲ್ಲ, ಆದರೆ ನಮ್ಮ ಸಂಸ್ಕೃತಿಯ ಪ್ರತೀಕ , ಕುರುಹು ಅದರ ಬಗ್ಗೆ ಗೌರವಿಸುವುದು ಬಹಳ ಮುಖ್ಯ.  ನಾನು ಕೆಲವೊಂದು ಸಂಗತಿಗಳು, ವಿಷಯಗಳ ಬಗ್ಗೆ ಹೆಚ್ಚು ಹೇಳೋಕೆ ಇಷ್ಟಪಡಲ್ಲ. ಯಾಕೆಂದ್ರೆ ಬೇಡಾ ಬೇಡಾ ಅನ್ನುವವರೇ ಅನೇಕ ವಿಷಯಗಳಲ್ಲಿ ಮುಂದೆ ಹೋಗಿ ಮೊದಲೇ ಆ ಸೌಲಭ್ಯ, ಗೌರವ ಪಡೆದಿರುತ್ತಾರೆ. ಅಂತಹ ದ್ವಂದ್ವಕ್ಕಿಂತ ನಮಗೆ ಏನು ಇಷ್ಟವೋ ಅದನ್ನು ಮಾಡುವುದೊಳಿತು. ಯಾಕೆ ಈ ಮಾತು ಹೇಳ್ತಾ ಇದ್ದೀನಿ, ನಾನು ಕೆಲಸ ಮಾಡುವ ಕಡೆ ಒಬ್ಬರು ಕೆಲಸದಿಂದ ತೆಗೆಸಿ ಹಾಕ್ತೀನಿ ಅಂತ ತಮ್ಮ ಮೂಗಿನ ನೇರಕ್ಕೆ ನಡೆಯದೆ ಇರುವವರ ಬಗ್ಗೆ ಹೇಳ್ತಾ ಇರ್ತಾರೆ ಬೆನ್ನ ಹಿಂದೆ. ನನ್ನ ಕಡೆಗೂ ಆ ಮಾತು ಎಸೆದಿದ್ದಾರಂತೆ. ಹಾಗಂತ ಸುದ್ದಿ :). ಈ ಪೀಟ್ಪೀಚೆ  ಜನಗಳು ಎಲ್ಲಾ ಕಡೆ ಇದ್ದಾರೆ , ಅವರಿಗೆ ಕಷ್ಟಪಟ್ಟು ಕೆಲಸ ಮಾಡಿ ಗೊತ್ತಿಲ್ಲ, ನಮಗೆ ಗೊತ್ತು.. ದುಡಿಯೋನಿಗೆ ಯಾವ ಕಲ್ಲಾದರೇನು ಕಣ್ರೀ ಮೂರ್ತಿ ಕೆತ್ತೋಕೆ ?


courtesy : satish acharya


@ಉದಯ ವಾಹಿನಿಯಲ್ಲಿ ಬೇರೆ ಬೇರೆ ವಿಭಾಗಗಳು ಇವೆ. ಅದರಲ್ಲಿ ಮನೋರಂಜನೆ, ವಾರ್ತೆ, ಹಾಡುಗಳು, ಅದಲ್ಲದೆ ಹೆಚ್ಚು ಇಷ್ಟ ಆಗುವ ಮತ್ತೊಂದು ಚಾನೆಲ್ ಚಿಂಟು ಟೀವಿ. ಕನ್ನಡದ ಏಕೈಕ ಮಕ್ಕಳ ಚಾನೆಲ್. ಕನ್ನಡದಲ್ಲಿಯೇ   ಮಾತಾಡ್ತಾವೆ ಬೊಂಬೆಗಳು :). ಅತ್ಯಂತ ಉಲ್ಲಾಸ ಉಂಟು ಮಾಡುವ ವಾಹಿನಿ ಅದು. ಸಾಮಾನ್ಯವಾಗಿ ಎಲ್ಲರಂತೆ ಮಾಡುವುದಕ್ಕಿಂತ ಕನ್ನಡದ ಅನೇಕಾನೇಕ ಕಾರ್ಟೂನಿಸ್ಟ್ ಗಳು ಬರೆದ ಚಿತ್ರಕತೆಯನ್ನು ಪ್ರಸಾರ ಮಾಡಿದರೆ ಚಂದ. ನಾನಂತೂ ಸಾಮಾನ್ಯವಾಗಿ ಸತೀಶ್ ಆಚಾರ್ಯ, ಪಿ ಮಹಮದ್, ಜೀವನ್ ಶೆಟ್ಟಿ .. ಹೀಗೆ ಹಲವಾರು ಕಾರ್ಟೂನಿಸ್ಟ್ ಗಳ ಫ್ಯಾನ್. ಚಿಂಟು ಟೀವಿಯಲ್ಲಿ ಅವರುಗಳ ಗೆರೆ ಬಂದ್ರೆ ಆಹಾ !

ಒಬ್ಬ ಟೀವಿ ಜಾಕಿ. ಆತ ಸಾಹಸದ ಕಾರ್ಯಕ್ರಮಗಳಿಗೆ ಫೇಮಸ್. ಆತ ಒಮ್ಮೆ ಕಾಡಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ. ಆಗ ಆಗುವ ತೊಂದರೆ ಅಷ್ಟಿಷ್ಟಲ್ಲ . ಕಾಡ ಸಮೀಪದಲ್ಲೇ  ಇದ್ದ ಬಾಲಕನೊಬ್ಬ, ಅವನ ಜೊತೆಗೊಂದು ಹುಲಿ. ಈ ಜಾಕಿಕ್ಗೆ ಕಾಡಿನ ಸ್ವಲ್ಪ ತೊಂದರೆ ಸಹ ಎದುರಿಸೋಕೆ ಆಗಲ್ಲ.ಆ ಬಾಲಕನಿಗೆ ಆ ಸಾಹಸ ಜಾಕಿ ನಡೆಸಿಕೊಡುವ  ಕಾರ್ಯಕ್ರಮ ಇಷ್ಟ ಆಗಿರುತ್ತದೆ. ಆದರೆ ಆತ ಕಾರ್ಯಕ್ರಮದಲ್ಲಿ ತಿಳಿಸಿದಂತೆ ಸಾಹಸಿ ಅಲ್ಲ ಅನ್ನುವ ಸಂಗತಿ ಬೇಸರ ಉಂಟು ಮಾಡುತ್ತದೆ. ಮೀಡಿಯಾದಲ್ಲಿ ಷೋ ಆಫ್ ಮಂದಿಯನ್ನು ಸರಿಯಾಗಿ ತೋರಿಸಲಾಗಿದೆ ಆ ಕಾರ್ಟೂನ್ ನಲ್ಲಿ . ಏನೇ ಹೇಳಿ ಕಾರ್ಟೂನ್ ಗಳು ಚಂದ. ಅದರ ಬಗ್ಗೇನೂ ವಿಪರೀತ ವಿಮರ್ಶೆ ಬರೀತಾರೆ ಮಂದಿ. ಅವರ ಕಥೆ ನಮಗ್ಯಾಕೆ  !

ಚೌಕಟ್ಟು

Image result for dasara images
ಇಂದು ಮಹಾಲಯ ಅಮಾವಾಸ್ಯೆ. ದಸರಾ ಸಂಭ್ರಮ ಆರಂಭವಾಗುವ ಖುಷಿ. ನಾಡ ಹಬ್ಬ ಅಂದ್ರೆ ಅತಿ ಹೆಚ್ಚಿನ ಸಂಭ್ರಮ ಉಂಟು ಮಾಡುವಂತಹದ್ದು.  ಬೊಂಬೆ ಇಡುವುದು ದಸರಾ ಖುಷಿಯ ಒಂದು ಬಹು ಮುಖ್ಯ ಭಾಗ. ಪ್ರತಿವರ್ಷ ಈ ಸಂಭ್ರಮ ಹೆಚ್ಚಾಗುವಂತೆ ಆಸಕ್ತರು ಬೊಂಬೆಗಳನ್ನು ವಿನೂತನವಾಗಿ ಜೋಡಿಸಿ ಕಣ್ಮನ ಸೆಳೆಯುತ್ತಾರೆ. ಸಾಂಪ್ರದಾಯಿಕ ಅಂಶಗಳ ಜೊತೆ ರಾಜಕೀಯ, ಸಾಮಾಜಿಕ, ಪ್ರತಿಯೊಂದು ಸಂಗತಿಗಳ ಬಗ್ಗೆ ಆದ್ಯತೆ ನೀಡುತ್ತಾರೆ. ಮಧ್ಯಮ ವರ್ಗದ ಹೆಣ್ಣುಮಕ್ಕಳು ಬಿಡಿ ಅವರ ವಿಷಯ ಹೇಳುವಷ್ಟೇ ಇಲ್ಲ. ನನ್ನ ಪತ್ರಿಕೆಗೆ ಒಬ್ಬ ಹೆಣ್ಣುಮಗಳನ್ನು ಸಂದರ್ಶನ ಮಾಡಿದ್ದೆ. ಆಕೆಯ ಇಷ್ಟದ ಕೆಲಸಗಳಲ್ಲಿ ಬೊಂಬೆ ಇಡೋದು ಸಹ ಸೇರಿತ್ತು. ವಿಶೇಷ ಅಂದ್ರೆ ಆಕೆ ಬೊಂಬೆಗೆಂದು ಒಂದು ಎರಡು ಮೂರು ಕೋಣೆಯನ್ನು ಮೀಸಲಿಡುತ್ತಾರೆ. ಅಲ್ಲಿ ಜೋಡಿಸುವ ಕೆಲಸ  ಸರಿಸುಮಾರು ಒಂದು ವಾರದ  ಮೊದಲಿನಿಂದಲೇ   ಆರಂಭವಾಗುತ್ತದೆ. ಪ್ರತಿಬಾರಿ ಹೊಸ ವಿಷಯಗಳನ್ನು ಬೊಂಬೆ ಜೋಡಣೆಯ ಮೂಲಕ  ತೋರಿಸುತ್ತಾರೆ. ಆದರೆ ಪ್ರತಿ ಸರ್ತಿ  ಅವರು ಮಾಡುವ ಒಂದು ಕೆಲಸ ಅಂದ್ರೆ,  ಬಂದವರಿಗೆ ತಾಂಬೂಲದ ಜೊತೆ ವಿಶೇಷ ಕಾಣಿಕೆ , ರವಿಕೆ ಬಟ್ಟೆ  ನೀಡಲು ಹಬ್ಬದ ಆರೇಳು ತಿಂಗಳಿನಿಂದಲೇ  ವಸ್ತುಗಳನ್ನು ಕೊಳ್ಳಲು ಆರಂಭ ಮಾಡುತ್ತಾರೆ. ಸಾಮಾನ್ಯ ಆರ್ಥಿಕ ಸ್ಥಿತಿ ಹೊಂದಿರುವ ಆಕೆಯ ಈ ಗುಣ ಮಾತ್ರ ಅತಿಸಾಮಾನ್ಯ. ಇಂತಹ ಮನಸ್ಥಿತಿ ಬಹಳಷ್ಟು ಹೆಣ್ಣುಮಕ್ಕಳಲ್ಲಿ ಇದೆ. ಬಂದವರ ಮೆಚ್ಚುಗೆಗಾಗಿ  ಕಾಯುವ ಬೊಂಬೆಗಳು, ಅದನ್ನು ಜೋಡಿಸಿಟ್ಟವರ ಪರಿಶ್ರಮ ಅನನ್ಯ. ಸಾಕಷ್ಟು ಕಡೆ ಬೊಂಬೆ ಇಟ್ಟಿರುತ್ತಾರೆ. ಸಾಧ್ಯವಾದೆ ಒಮ್ಮೆ ಹೋಗಿ ಮೆಚ್ಚಿಗೆ ಸೂಚಿಸಿ ಡಿಯರ್ ರೀಡರ್ಸ್.
Image result for dasara images
ಆರಂಭವಾಗಿ ಹೆಚ್ಚು ದಿನಗಳ ಬಳಿಕ ಈಟೀವಿ ನ್ಯೂಸ್  ನಮ್ಮ ಮನೆಯಲ್ಲಿ ಪ್ರಸಾರವಾಗಲು ಆರಂಭವಾಗಿದೆ.ಯಾವ ಕಾರ್ಯಕ್ರಮದ ಬಗ್ಗೆಯೂ ಹೆಚ್ಚು ಗೊತ್ತಾಗಿಲ್ಲ. ಏಕೆಂದರೆ ನಿನ್ನೆ ನಾನು ಅದನ್ನು ನೋಡಿದ್ದು. ಕನ್ನಡದಲ್ಲಿ ಅನೇಕ ನ್ಯೂಸ್ ಚಾನೆಲ್ ಗಳು ಆರಂಭವಾಗಿದ್ದರೂ, ಪ್ರಸಾರದ ಸಂಖ್ಯೆ ಬಹಳ ಕಡಿಮೆ. ಏಕೆಂದರೆ ಸಾಮಾನ್ಯವಾಗಿ ಕೇಬಲ್ ಹಾಕಿಸಿ ಕೊಂಡವರಿಗೆ ಪ್ರಸಾರವಾಗುವ ಅನೇಕ ಚಾನೆಲ್ಗಳು ಕೊಡೆ ಹಾಕ್ಸಿ ಕೊಂಡವರಿಗೆ  ಬರಲ್ಲ. ಬರದೆ ಇರುವ, ಉಳಿಯದೆ ಇರುವ ಸಂಬಂಧ ಬಾಂಧವ್ಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳ  ಬಾರದು.. ಯಾಕೇಂದ್ರೆ ನಾವು ಪದೇಪದೇ ಬಾಂಧವ್ಯ ಬೆಳೆಸುವ ಪ್ರಯತ್ನಾ ಮಾಡ್ತಾನೆ ಇರ್ತೀವಿ, ಒಂದು ಕಡೆಯಿಂದ ಅದು ಮುರಿತಾನೆ ಇರುತ್ತೆ.
ಬಿಡಿ ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ.
Image result for dasara bombe  images
@ ಕಲರ್ ವಾಹಿನಿಯಲ್ಲಿ  ಈಗ ಹಿಂದಿ  ಬಿಗ್ ಬಾಸ್ ಆರಂಭವಾಗಿದೆ.  ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಬಹಳಷ್ಟು ಜನರಿಗೆ ಒಂದು ರೀತಿ ಬೇಜಾರು, ಆದರೆ ನನಗೆ ಆ ಕಾರ್ಯಕ್ರಮ ಇಷ್ಟ. ಅದಕ್ಕೆ ಮುಖ್ಯ ಕಾರಣ ಬೇರೆ ಬೇರ ನೆಲೆಗಟ್ಟು, ಆರ್ಥಿಕವಾಗಿ ಭಿನ್ನತೆ, ಮಾನಸಿಕವಾಗಿ ಇನ್ನು ವಿಶೇಷ ಹಾಗೂ ವಿಚಿತ್ರ ಅಂಶಗಳನು ಒಳಗೊಂಡ ಮನಸ್ಥಿತಿಯವರು. ಅಂತಹವರೆಲ್ಲರೂ ಒಂದೇ ಮನೆಯಲ್ಲಿ.. ಏಕೆಂದರೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತಿರುವವರೇ, ನಮ್ಮ ಆಪ್ತರೇ ನಮ್ಮ ಮುಂದೆ ಇಗೋ ತೋರಿಸಿ ಹರ್ಟ್ ಮಾಡಿರುತ್ತಾರೆ, ಅಂತಹುದರಲ್ಲಿ ಈ ರೀತಿ ಬೇರೆ ಬೇರೆಯವರು , ಬೇರೆಬೇರೆ ...!  ಜಗಳ ಆದಷ್ಟು ಇಲ್ಲಿ ಟಿಆರ್ಪಿ  ಸಂಭ್ರಮ ಹೆಚ್ಚಾಗುತ್ತದೆ ಅದು ಸತ್ಯ. ಆದರೆ ಅದರೊಂದಿಗೆ ಜಗಳ ಆಡಿದವರು ಇಷ್ಟು ದಿನದ ಇದ್ದ ವಾತಾವರಣಕ್ಕಿಂತ ಭಿನ್ನವಾದ ಮನಸ್ಥಿತಿ, ಅವ್ಯಕ್ತವಾಗಿರುವ ಸ್ಥಿತಿ ಹೊರಹಾಕುತ್ತಾರೆ. ನಮ್ಮನ್ನು  ನಾವು  ಹೆಚ್ಚು ಶಕ್ತಿಯುತ ಮಾಡಿಕೊಳ್ಳಲು ಅಂತಹ ಒಂದು ಚೌಕಟ್ಟು ಬಹಳ ಮುಖ್ಯ ಅಲ್ವೇ !
ಮತ್ತೊಂದು ಸಂಗತಿ ಈ ಬಾರಿ ಬಿಗ್ ಬಾಸ್ ಮನೆ ಮನೆ ರೀತಿ ಇದೆ. ಭಿನ್ನತೆ ಮಾಡಲು ಹೋಗಿ ಎರಡು ಬಾರಿ ಬೋರ್ ಹೊಡೆಸಿದ್ದರು ಚಾನೆಲ್ ಮಂದಿ.
  ಇದರ ಮುಖ್ಯ ಆಕರ್ಷಣೆ ಸಲ್ಮಾನ್ boy  ಈಗ ಗಜ್ನಿ ಬಾಯ್ ಆಗಿರೋದು ಕಂಡ್ರೆ ಕ್ಯಾ ಯಾರ್ ನಿಮ್ದುಕೆ ಯಾರ್ದುಕೆ ಜೊತೆ ಪಂಥ ಕಟ್ಟಿದ್ರಾ ? ಅದರಲ್ಲಿ ಸೋತು ಹಿಂಗಾಯಿತೆ ಹೇರ್ ಸ್ಟೈಲ್ ? ;-)