ಬೀಯಿಂಗ್ ಹ್ಯೂಮನ್

ಅದ್ಯಾಕೋ ಟೀವಿ ನೋಡೋಕೆ ಬೇಜಾರು ಆಗುತ್ತೆ. ಎಂತಹ ಕರುಣೆ ಇಲ್ಲದ ಜನ .. ಎಳೆ ಮಕ್ಕಳ ಮೇಲೆ ಪೌರುಷ...ನಿನ್ನೆ ಟೀವಿಯಲ್ಲಿ ಮಕ್ಕಳ ಮಾರಣ ಹೋಮ ಕಂಡಾಗ ಧರ್ಮ, ಜಾತಿ, ಲಿಂಗ ಯಾವುದೇ ಸಂಗತಿ ಆಗಿರಲಿ  ಪೌರುಷದ ಅಂತಿಮ ರೂಪ ಈ ರೀತಿ ವ್ಯಕ್ತ ಆಗೋದು ಮಾತ್ರ ನಿಜಕ್ಕೂ ಬೇಸರದ ಸಂಗತಿ. ಚಾನೆಲ್ ಹಾಕೋಕೆ ಬೇಸರ ಅಂತ ಅನ್ನಿಸುತ್ತೆ.


ಸಲ್ಮಾನ್ boy ತಮ್ಮ ತಂಗಿ ಮದುವೆ ಆದ ಬಗ್ಗೆ ಹೇಳುತ್ತಾ  ಅಂದು (ಹಳೆಯ ಸಂಗತಿ ಕಣ್ರೀ )ತನ್ನ ಮತ್ತು ಶಾರುಖ್ ನಡುವೆ ಈಗ ಮತ್ತೆ ಸ್ನೇಹ ಆರಂಭವಾಗಿದೆ ಎಂದು ಹೇಳಿದ್ರು ಬಿಗ್ ಬಾಸ್ ಸ್ಪರ್ಧಿಗಳ ಬಳಿ. ಕರಣ್ ಅರ್ಜುನ್ ಸಿನಿಮಾದ ಈ ಜೋಡಿಯ ಜಗಳ ಬೇಸರ ಅವೆಲ್ಲಕ್ಕೂ   ಅದರದ್ದೇ ಆದ  ಕಾರಣಗಳು ಇರುತ್ತವೆ. ಆದರೆ ಬ್ರೇಕಿಂಗ್ ನ್ಯೂಸ್ ಮಾಡುವ  ಹುಮ್ಮಸ್ಸಿನಲ್ಲಿ ?  ಹರಡುವ ವಿಧಾನ ಛೆ ! ಅನ್ನಿಸುತ್ತೆ.  ನನ್ನ ಮತ್ತು ಸಲ್ಮಾನ್ ನಡುವೆ ಪ್ಯಾಚಪ್ ಆಗಿಲ್ಲ.. (ಕಸಿವಿಸಿಯಿಂದ )ನನ್ನ ಸ್ನೇಹಿತ ಆತ ಎಂದು ಕಪಿಲ್ ಕಾರ್ಯಕ್ರಮದಲ್ಲಿ ಶಾರುಖ್ ಹೇಳಿದ್ರು. ಸಾಮಾನ್ಯವಾಗಿ ಜಗಳ ಕದನ ಇದ್ದಿದ್ದೆ . ನಮ್ಮಲ್ಲೂ  ಅಷ್ಟೇ ಅಂದ್ರೆ ಸ್ಯಾಂಡಲ್ ವುಡ್  ನಲ್ಲೂ ಸದಾ ಸುದೀಪ್ ಮತ್ತು ದರ್ಶನ್ ಮೇಲೆ ಕಣ್ಣು  ;-). 
ಅದಕ್ಕೂ ಮುನ್ನ ಸಲ್ಮಾನ್ ತಂಗಿ ಮದುವೆ ಸಮಯದಲ್ಲಿ ಅರ್ಪಿತ ನನ್ನ ತಂಗಿ ನಾನು ಕರೆಯದೆ ಇದ್ರೂ ಹೋಗ್ತೀನಿ ಎಂದು ಹೇಳಿದ್ರು ಶಾರುಖ್..ಇವೆಲ್ಲ ಹೃದಯದಿಂದ ಮಾತುಗಳು. ಓರ್ವ ಸೆಲೆಬ್ರಿಟಿ ಯನ್ನು   ಮನುಷ್ಯ ಅಂತ ನೋಡಿದ್ರೆ  ಹಿಗ್ಗಾಮುಗ್ಗ ಬರೆಯಲ್ಲ ಮತ್ತು ಹೇಳಲ್ಲ. ಕಲರ್ ವಾಹಿನಿಯಲ್ಲಿ ಕಾಮಿಡಿ ವಿತ್ ಕಪಿಲ್ ನಲ್ಲಿ  ಡಿಡಿಎಲ್ಜೆ ವಿಶೇಷ ಕಾರ್ಯಕ್ರಮ ಸಕತ್ ಇತ್ತು. ಕಾಜೋಲ್ , ಶಾರುಖ್, ಕಪಿಲ್, ಸಿದ್ದು...ಆಹಾ! 
ನನಗೆ ಅತ್ಯಂತ ಇಂಪ್ರೆಸ್ ಮಾಡಿದಸಂಗತಿ ಅಂದ್ರೆ ಸಲ್ಮಾನ್  ಮತ್ತೊಬ್ಬ ತಾಯಿ ಹೆಲೆನ್ ಬಗ್ಗೆ. ಏಕೆಂದರೆ ಯಾವುದೇ ಕುಟುಂಬದಲ್ಲಿ ಆಗಲಿ ತಮ್ಮ ಎರಡನೇ ಸಂಬಂಧ ಮದುವೆ ಬಗ್ಗೆ ಒಪ್ಪಿಕೊಳ್ಳೋಲ್ಲ, ಬಚ್ಚಿಟ್ಟು, ಮುಚ್ಚಿಟ್ಟು ಕೊನೆಗೆ ವಿಧಿ ಇಲ್ಲದೆ ಹೇಳಿದವರೇ ಜಾಸ್ತಿ. ಅಂತಹುದರಲ್ಲಿ ಸಲ್ಮಾನ್ ತಂದೆ ನೊಂದ ಹೆಣ್ಣುಮಗಳಿಗೆ ಬದುಕು ಕೊಟ್ಟರು, ಪತಿಯ ನಿರ್ಣಯವನ್ನು  ಅವರ ಮೊದಲ ಪತ್ನಿ ಸ್ವೀಕರಿಸಿದರು, ಅದಕ್ಕಿಂತ ಹೆಚ್ಚಾಗಿ   ಯಾವುದೋ ತಾಯಿ ಮಡಿಲ ಮಗುವನ್ನು ಹೆತ್ತ ಕುಡಿಯಂತೆ ಸಾಕಿದರು. ಒಡಹುಟ್ಟಿದ ತಂಗಿಯಂತೆ ಪ್ರೀತಿಸಿ ಬೆಳೆಸಿ ಆಕೆಯ ಆಶಯದಂತೆ ಸಲ್ಮಾನ್ ಮದುವೆ ಮಾಡಿದರು. ಅವರ ಸಹೋದರರಾದ ಅರ್ಬಾಜ್, ಸೊಹೈಲ್, ಅಲ್ಲದೆ ಸಹೋದರಿ ಅಲ್ವಿರ... ತುಂಬಾ ವಿಶೇಷ ಅನ್ನಿಸಿತು. ಜೊತೆಗೆ ಆಕೆಯ ಇಚ್ಚೆಯಂತೆ ಗ್ರಾಂಡ್ ಮದುವೆ ಮಾಡಿದ್ದು .ಬೀಯಿಂಗ್ ಹ್ಯೂಮನ್ ಆಗಿದ್ದಾರೆ ಲೈಕ್ ಆಯ್ತು. 
ಅದೇರೀತಿ  ಒಮ್ಮೆ ಅಂದರೆ ತುಂಬಾ ವರ್ಷಗಳ ಹಿಂದೆ ನಡೆದ ಸಂಗತಿ. ಹಿಂದಿವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಅಗ್ತಾ ಇತ್ತು. ಅದರಲ್ಲಿ ಪ್ರಾಯಶಃ ಆಜ್ ತಕ್ ಇರ ಬೇಕು, ಅದರಲ್ಲಿ ಭಾಗಶಃ  ಉತ್ತರ ಪ್ರದೇಶ ಇರಬೇಕು, ಅಲ್ಲಿನ ಇಬ್ಬರು ಸಯಾಮಿ ಹುಡುಗೀರು ಸಲ್ಮಾನ್ ಖಾನ್ ಗೆ ರಾಖಿ ಕಟ್ಟ ಬೇಕು ಅಂತ ಹಠ ಮಾಡಿದ್ರು, ಅವರಬಳಿ ರಾಖಿ ಕಟ್ಟಿಸಿಕೊಂಡು ಸಿಹಿ ತಿನ್ನಿಸಿದ್ದರು   ಸಲ್ಮಾನ್.. ಬದುಕಲ್ಲಿ ಹಿಂದೆ ನಡೆದ ಯಾವುದೇ ಸಂಗತಿಗಳಿರಲಿ, ಇರುವ ಸ್ವಲ್ಪ ಕಾಲ ಬೀಯಿಂಗ್  ಹ್ಯುಮನ್ ಆಗುವುದು ಬಹಳ ಮುಖ್ಯ. 



 ಮಾ ವಾಹಿನಿಯಲ್ಲಿ ಮತ್ತೆ ಟಾಲಿವುಡ್ ಮನ್ಮಥ ಅಕ್ಕಿನೇನಿ ನಾಗಾರ್ಜುನ ಅವರ ಕೋಟ್ಯಾಧಿಪತಿ ಆರಂಭವಾಗಿದೆ.ಅತ್ಯಂತ ಚಂದದ ಕಾರ್ಯಕ್ರಮ ಎಂದು ಹೊಗಳುವ ಅಗತ್ಯವಿಲ್ಲ  .. ಏಕೆಂದರೆ ಚಂದದ   ಕಾರ್ಯಕ್ರಮ ಅದು. ಆದರೆ ಈ  ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಕ್ಕಿನೇನಿ ನಾಗಾರ್ಜುನ ಅಂತ ವಿಶೇಷವಾಗಿ ಹೇಳ ಬೇಕಿಲ್ಲ. ನಾಗ್ ಪತ್ನಿ ಅಮಲ ಅಕ್ಕಿನೇನಿ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಬಾಲಿವುಡ್ ಚಿತ್ರದಲ್ಲಿ ಎಂದು ಓದಿದಾಗ ಹಾಗೆ ಗೂಗಲ್ ಸರ್ಫ್ ಮಾಡಿದಾಗ ಯಾಕ್ ಲೇ ಪುಟ್ನಂಜ ಪುಟ್ನನ್ಜಿನ್ ಹೊಡೆದ್ಯಂತೆ ಅನ್ನುವ ಹಾಡು ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೂ .. ಹಾಡು ನೆನಪಿಗೆ ಬಂದೆ ಬಿಡ್ತು..ಅಮಲಾಗೆ ಇಷ್ಟು ದೊಡ್ಡ ಮಗ ಇದ್ದಾನೆ ಅಂದ್ರೆ ನಂಬೋಕೆ ಆಗಲ್ಲ ಅಷ್ಟು ಚಂದ ಇದ್ದಾರೆ ಇನ್ನು. 
ಕೋಟ್ಯಾ ಧಿಪತಿಯು  ಯಾವ ಭಾಷೆಯಲ್ಲೂ ಪ್ರಸಾರ ಆದರು ಅದರ ಹೋಸ್ಟ್ ಗಳು ಅದ್ಭುತವಾಗಿ ಆ ಕಾರ್ಯಕ್ರಮ ಮುನ್ನಡೆಸಿದ್ದಾರೆ. ನಾಗ್ ವಿಷಯದಲ್ಲೂ ಅಷ್ಟೇ. ನನಗೆ ಅವರ ನಿರ್ಣಯಂ ಇಷ್ಟ ಆಗಿತ್ತು. ಅದೇರೀತಿ ಹೆಚ್ಚು ಖುಷಿಕೊಟ್ಟ  ಸಿನಿಮಾ ಅನ್ನಮಯ್ಯ. ಇಷ್ಟು ವರ್ಷಗಳಾದರೂ  ನಾಗ್ ಸ್ಟೈಲ್ಸ್ ಮಾದರಿ. 
ಭದ್ರ ಅಮಲ  ನಾಗ್ ಗೆ ಲೇಡಿ ಫ್ಯಾನ್ಸ್ ಗಳು ಜಾಸ್ತಿ. ಆಮೇಲ್ ಅಬ್ರಕದಬ್ರ ಅಂತ ಮಾಯಾ ಮಾಡಿ ಬಿಟ್ಟಾರು  ;-)