ಸಾಧು ಮಹಾರಾಜ್

ಚಿರತೆ (Leopard ). ಬಂಡೀಪುರದಲ್ಲಿ ಗುರು ತೆಗೆದ ಚಿತ್ರ.

ಸಾಮಾನ್ಯವಾಗಿ ಕೆಲವು ಪದಗಳ ಬಳಕೆ ಮಾಡುವಾಗ ಅದರ ಅರ್ಥ ತಿಳಿಯುವುದಕ್ಕೆ ಹೋಗಿರಲ್ಲ. ವಿಬ್ ಗಯಾರ್  ಚಿರತೆ ಅನಾಹುತಗಳ ಬಗ್ಗೆ ದೃಶ್ಯ  ಮಾಧ್ಯಮಗಳಲ್ಲಿ  ತಪ್ಪು ಹೆಸರು ಹೇಳಿದ್ದು ಈಗ ಹಳೆ ಸುದ್ದಿ. ಆದರೆ  ಮೈಸೂರು ನಿವಾಸಿಯಾಗಿರುವ ಪತ್ರಕರ್ತ ಮಿತ್ರ  ಗುರುಪ್ರಸಾದ್ ತುಂಬಸೋಗೆ ಅವರು ಅರಣ್ಯ, ಕಾಡು ಪ್ರಾಣಿಗಳು,ಪ್ರಕೃತಿ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವಂತಹವರು. ಅವರು ನಮ್ಮ ಚಿರತೆಯನ್ನು ಚೀತಾ ಎಂದು ಕರೆದ ಮಾಧ್ಯಮ ಮಿತ್ರರ ತಪ್ಪಿನ ಬಗ್ಗೆ ಹೇಳುತ್ತಾ ಚೀತಾ ಮತ್ತು ಚಿರತೆ ನಡುವಿನ ವ್ಯತ್ಯಾಸ ಹೇಳಿದ್ದಾರೆ. ಒಪ್ಪಿಸಿಕೊಳ್ಳಿ.. ಇದು ಮುಂದೆ  ನಿಮಗೆ ಸಹಾಯ ಆಗಬಹುದು ಎನ್ನುವ ದೃಷ್ಟಿಕೋನದಿಂದ ಇಲ್ಲಿ ಅಂಟಿಸಿದ್ದೇನೆ..ಅಂದಂಗೆ ಅವರು ಇದನ್ನು ಬರೆದು ಎರಡು ದಿನಗಳಾಗಿದೆ.. ನಾನು ಈಗ ನಿಮ್ಮ ಮುಂದೆ ಇಡಲು ಸಾಧ್ಯವಾಗಿದೆ. ಅದಕ್ಕೆ ಕ್ಷಮೆ ಇರಲಿ.
ಚೀತಾ (Cheetah ) ನಮ್ಮ ದೇಶದಲ್ಲಿ ಸಿಗುವುದಿಲ್ಲ. ----

ಚಿತ್ರ ಇಂಟರ್ ನೆಟ್

ವಿಬ್ ಗಯಾರ್ ಚಿರತೆ ಹೊಕ್ಕ ಘಟನೆಗೆ ಸಂಬಂಧಪಟ್ಟಂತೆ ಸುದ್ದಿಗಳು ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ವರದಿಯಾದವು. ಹಲವರು ಅದನ್ನು ಚೀತಾ ದಾಳಿ ಎಂಬ ಪದ ಬಳಕೆ ಮಾಡುತ್ತಿದ್ದಾರೆ. (ನಾನು ಅವರು ಇವರು ಎಂದು ಬೊಟ್ಟ ಮಾಡುತ್ತಿಲ್ಲ.) ಆದರೆ ನಮ್ಮ ದೇಶದಲ್ಲಿ ಈಗಾಗಲೇ ಚೀತಾ ಎಂಬ ಪ್ರಭೇದ ನಿರ್ನಾಮವಾಗಿದೆ ಎಂದು ವನ್ಯಜೀವಿ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಭಾರತದಲ್ಲಿ ಇರುವುದು ಚಿರತೆಯೇ ಹೊರತು ಚೀತಾವಲ್ಲ. leopard ಎಂದರೆ 'ಚಿರತೆ'. Cheetah ಅಂದರೆ ಚೀತಾ
ಚೀತಾ ಮತ್ತು ಚಿರತೆ ಎರಡೂ ಬೆಕ್ಕಿನ ಜಾತಿಗೆ ಸೇರಿದ್ದರೂ ಆಫ್ರಿಕಾ ಖಂಡದಲ್ಲಿ ಚೀತಾ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ಸ್ವಾತಂತ್ರಪೂರ್ವದಲ್ಲಿ ಚೀತಾ ಇತ್ತೆಂದು ಕೆಲವು ಹೇಳುತ್ತಾರೆ ಚೀತಾ ದೇಹಕ್ಕೆ ಹೋಲಿಸಿದರೆ ಮುಖ ಸಣ್ಣದು. ದೇಹವೂ ನೀಳವಾಗಿ ಚಾಚಿದಂತೆ ಉದ್ದವಾಗಿದೆ. ವೇಗಕ್ಕೆ ಹೆಸರುವಾಸಿಯಾಗಿದೆ, ಆದರೆ ಮರ ಏರುವ ಸಾಮರ್ಥ್ಯದ ಕೊರತೆ ಇದೆ.
ಆದರೆ ಚಿರತೆ ಎದುರಾಳಿಯ ಮೇಲೆ ಮಿಂಚಿನ ವೇಗದಲ್ಲಿ ದಾಳಿ ಮಾಡುತ್ತದೆ. ಜತೆಗೆ ಮರವನ್ನು ಅಷ್ಟೇ ವೇಗದಲ್ಲಿ ಹತ್ತುತ್ತದೆ. ಜತೆಗೆ ಬೇಟೆಯನ್ನು ಕಚ್ಚಿಕೊಂಡು ಮರ ಹತ್ತುವುದು ವಿಶೇಷ.




Guru Prasad Thumbasoge (ವಿಕ  ಪತ್ರಕರ್ತರು )


Image result for orange color flower

ಬಹಳ ಹಿಂದೆ ಓದಿದ್ದ ನೆನಪು ರಂಗಭೂಮಿಯಲ್ಲಿ ಬದುಕನ್ನು ಕಂಡುಕೊಂಡಿದ್ದ  ಕಲಾವಿದರು ಸಿನಿರಂಗದಲ್ಲಿ ಸ್ಥಾನ ಪಡೆಯಲು ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ಅಂತಹ ಕಲಾವಿದರ ಪಟ್ಟಿಗೆ ಮುಸರಿ ಕೃಷ್ಣ ಮೂರ್ತಿ, ರತ್ನಾಕರ್, ಉಮೇಶ್  ಇನ್ನು ಅನೇಕರು ಸೇರ್ಪಡೆ ಆಗುತ್ತಾರೆ. ಮುಸರಿ ಕೃಷ್ಣ ಮೂರ್ತಿಯವರು ತಮ್ಮ ಧ್ವನಿ , ಆಂಗಿಕ ಶೈಲಿಯನ್ನು ಬದಲಾಯಿಸಿ ಜನರ ಮನದಲ್ಲಿ ಉಳಿದರು. ಅನೇಕರಿಗೆ ಗುರುವಾದರು.ವೀಕೆಂಡ್ ವಿತ್  ರಮೇಶ್ ಅತ್ಯಂತ ಸುಂದರ ಕಾರ್ಯಕ್ರಮ. ಸದಭಿರುಚಿಯ, ಮನಸೋಲ್ಲಾಸ ಹೆಚ್ಚಿಸುವ ಕಾರ್ಯಕ್ರಮ ಇದು. ಕನ್ನಡದ ಅತ್ಯುತ್ತಮ ನಟ, ನಿರ್ದೇಶಕ, ನಿರೂಪಕ........ ರಮೇಶ್ ಅರವಿಂದ್  ಈ ಕಾರ್ಯಕ್ರಮಕ್ಕೆ ಹೆಚ್ಚು ಕಳೆ ಕಟ್ಟಿದ್ದಾರೆ..
ಇತ್ತೀಚೆಗೆ  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ  ಬಹುಮುಖ ಪ್ರತಿಭೆ ಸಾಧುಕೋಕಿಲ  ಅವರ ಬದುಕಿನ ಅನಾವರಣ ನಡೆಯಿತು. ಶನಿ ಹಾಗೂ ಭಾನುವಾರ ತಪ್ಪದೆ ವೀಕ್ಷಿಸುವಂತೆ ಮಾಡಿದ ಕಾರ್ಯಕ್ರಮ. ಸಾಧು ಅವರ ಧ್ವನಿ  ಸಾಕಷ್ಟು ಅಭಿಮಾನಿಗಳಿಗೆ ಇಷ್ಟ.. ಮುಸರಿ ಕೃಷ್ಣ ಮೂರ್ತಿ ಅವರ ಧ್ವನಿ, ನಟನೆಯಿಂದ ಪ್ರೇರೇಪಿತರಾದ ಬಗ್ಗೆ ಸಾಧು ಮಹಾರಾಜ್ ಹೇಳಿದಾಗ ನನಗೆ ಮೇಲಿನ ವಾಕ್ಯಗಳು ನೆನಪಿಗೆ ಬಂತು . ಎಂತಹ ಕಂಠಸಿರಿ ಹೊಂದಿದ್ದಾರೆ ಸಾಧು ಅವರ ಕುಟುಂಬದ ಸದಸ್ಯರು..
 ಸಾಧು ಅವರು ಕಾಣದ ಕಡಲಿಗೆ ಭಾವಗೀತೆ ಹಾಡುವಾಗ ಕಣ್ಣೀರು ಬಂತು.
 ಎಂತಹ ಸಂಗೀತ ಸಂಯೋಜನೆ, ಗಾಯಕ  ..ಸಿ ಅಶ್ವಥ್ ಅವರು ಕನ್ನಡದ ಹೆಮ್ಮೆ..ಕರ್ನಾಟಕ  ಹಿರಿಮೆ ...
ಎಸ್ ಪಿ ಬಾಲಸುಬ್ರಮಣ್ಯಂ ಅವರು ಸಾಧು ಅವರ ಸಂಗೀತ ಪ್ರತಿಭೆ ಬಗ್ಗೆ ಆಗಾಗ ತಮ್ಮ ಕಾರ್ಯಕ್ರಮಗಳಲ್ಲಿ ನೆನಪಿಸಿಕೊಳ್ಳುತ್ತಿರುತ್ತಾರೆ..  ಇಂತಹ ಅಪರೂಪದ ಸಂಗೀತ ನಿರ್ದೇಶಕ, ಹಾಡುಗಾರ ನಟನೆಯತ್ತ ಮನ ಸೋತಿರುವ ಬಗ್ಗೆ ಸ್ವಲ್ಪ ಖೇದವಿರುತ್ತದೆ ಅವರ ಮಾತಲ್ಲಿ.. !
ವೆಲ್ ಅವೆಲ್ಲ ಎಸ್ಪಿಬಿ ಅವರು ನಡೆಸಿಕೊಡುವ ಟೀವಿ ಕಾರ್ಯಕ್ರಮಗಳಲ್ಲಿ ಕೇಳಿರೋದು ಮಾರ್ರೆ  !

ತಮನ್ನ -ಲೈವ್

Image result for orange color flower
ಸ್ಟಾರ್ ವಾಹಿನಿಯಲ್ಲಿ ಕಳೆದ ವಾರದಿಂದ ತಮನ್ನ  ಎಂಬ  ಹೆಸರಿನ   ಧಾರವಾಹಿ ಆರಂಭವಾಗಿದೆ. ತುಂಬಾ ಚೆನ್ನಾಗಿದೆ. ಅದರಲ್ಲಿ ಮುಖ್ಯ ಅಂಶ   ಮಹಿಳಾ ಕ್ರಿಕೆಟ್  ಕ್ರೀಡಾಪಟು ಬದುಕು. ಯಾವರೀತಿ ಭಾರತದಂತಹ ದೇಶಗಳಲ್ಲಿ, ಅದರಲ್ಲೂ ಸಾಂಪ್ರದಾಯಿಕ ನೆಲೆಗಟ್ಟು ಇರುವ   ಮನೆಗಳಲ್ಲಿ ಹೆಣ್ಣುಮಕ್ಕಳು ವಿಶೇಷ ಸಾಧನೆ ಮಾಡ ಬೇಕಾದರೆ ಎಷ್ಟೆಲ್ಲಾ ಅಡ್ಡಿ ಆತಂಕ ಎದುರಿಸ ಬೇಕು ಎನ್ನುವ ಕಥೆಯು ಇದರ ತಳಹದಿ.
ತುಂಬಾ ಸರಳವಾಗಿ ಆರಂಭವಾಗಿದೆ ಕಥೆ. ಗುಜರಾತಿನ  ಸಾಂಪ್ರದಾಯಿಕ  ಮನೆತನದ ಹೆಣ್ಣುಮಗಳು  ಈ ಕಥೆಯಲ್ಲಿ  ನಾಯಕಿಯನ್ನಾಗಿ ಮಾಡಿದ್ದಾರೆ  ನಿರ್ದೇಶಕರು. ಧರ  ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಾದರೂ ಆಕೆಯ ಅಜ್ಜಿ, ಅಮ್ಮ , ಪ್ರತಿಭಾವಂತ ಹೆಣ್ಣುಮಕ್ಕಳ ಕನಸನ್ನು ಬೆಳೆಸುವ ಅಪ್ಪ ಎಲ್ಲರು ತುಂಬಾ ಮುಖ್ಯ ಅನ್ನಿಸುವಷ್ಟು ಚಂದ ಇದೆ ಕಥೆ.ಪ್ರತಿದಿನ ರಾತ್ರಿ ಹತ್ತು ಗಂಟೆಗೆ ಪ್ರಸಾರ ಆಗುತ್ತದೆ ಈ ಧಾರವಾಹಿ. ಅತ್ತೆ ಸೊಸೆ, ಶೋಷಣೆ , ಗಲಾಟೆ, ಜಗಳ ಇಲ್ಲದ   ಚಂದದ ಧಾರವಾಹಿ.
Image result for orange color flower
@ ಕಲರ್ ಹಿಂದಿ ವಾಹಿನಿಯಲ್ಲಿ ಭಾನುವಾರ ಕಾಮಿಡಿ ನೈಟ್ ಲೈವ್  ಹಾಸ್ಯ ಕಾರ್ಯಕ್ರಮ ವೀಕ್ಷಿಸಿದೆ. ಕೃಷ್ಣ, ಭಾರತಿ ಮತ್ತು ಮಿಕಾ ಸಿಂಗ್  ಜಡ್ಜ್  ಹಾಗೆನ್ನುವುದಕ್ಕಿಂತ  ಮುಖ್ಯ ಸ್ಥಾನದಲ್ಲಿ ಕುಳಿತು ನಕ್ಕೂ ನಕ್ಕೂ ಒದ್ದಾಡುವ ಸೆಲೆಬ್ರಿಟಿ .
ಕೃಷ್ಣ ಹಾಗೂ ಭಾರತಿ ಇರುವ ಕಡೆ ನಗುವಿಗೇನೂ ಕೊರತೆ ಇರಲ್ಲ.. ತಿಳಿ ಹಾಸ್ಯದ ಜೊತೆ ಸ್ವಲ್ಪ ನೀಲಿ ಹಾಸ್ಯ ಬೆರೆಸುವ  ಜಾಣತನ ಭಾರತಿ ಮತ್ತು ಕೃಷ್ಣ  ಜೋಡಿಗಿದೆ. ಆದರೂ ಹೆಚ್ಚು ಪ್ರಭಾವ  ಬೀರುವುದು ತಿಳಿ ಹಾಸ್ಯ..
ಕಾಮಿಡಿ ವಿತ್ ಕಪಿಲ್ ಕಾರ್ಯಕ್ರಮದ ಬಳಿಕ ಭಾನುವಾರದ  ಖಾಲಿತನ  ಈ ಕಲಾವಿದರು ತುಂಬಿದ್ದಾರೆ.  ಅಂದು ಇದ್ದಕ್ಕಿದ್ದಂತೆ  ಸಲ್ಮಾನ್ ಸಹ ಕಾರ್ಯಕ್ರಮಕ್ಕೆ ಬಂದ್ರು.. :-)
ಬಹಳ ದಿನಗಳ ನಂತರ ಸಲ್ಮಾನ್ boy ನ್ನು ಈ ಕಾರ್ಯಕ್ರಮದಲ್ಲಿ ನೋಡುವ ಖುಷಿ ಅವರ ಅಭಿಮಾನಿಗಳಿಗೆ ಸಿಕ್ತು. ಸಲ್ಮಾನ್ ಅದೆಷ್ಟು ಆತುರಾತುರವಾಗಿ ಬಂದಿದ್ರು ಈ ಸೆಟ್ ಗೆ ಅಂದ್ರೆ  ಟ್ರಾಕ್  ಸೂಟ್ ನಲ್ಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಜಾಗಿಂಗ್ .. ರನ್ನಿಂಗ್ ಮತ್ತು ಶೂಟಿಂಗ್  ಮೂರು ಆಯ್ತು ನೋಡಿ .. ಇಂತಹ  ನಟರಿದ್ದರೆ ನಿರ್ಮಾಪಕರಿಗೆ ಎಷ್ಟು ಸಹಾಯ ಆಗುತ್ತೆ ಅಲ್ವೇ ;-)