ಶುಭಾಷಯ

Image result for orange flower
ನನಗೆ ಹೆಚ್ಚು ಇಷ್ಟ ಆಗುವ ಕಾರ್ಯಕ್ರಮಗಳಲ್ಲಿ ಅಡುಗೆ ಕಾರ್ಯಕ್ರಮಗಳು ಸೇರಿವೆ. ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಮುರಳಿ ಅವರ ನೇತೃತ್ವದ ಅಡುಗೆ ಮುಖ್ಯವಾಗಿ ವೆಜ್ ಫುಡ್  ಕಾರ್ಯಕ್ರಮ ಅಂದ್ರೆ ಸಕತ್ ಇಷ್ಟ. ತಕ್ಕಮಟ್ಟಿಗೆ ಅಡುಗೆ ಮಾಡುವ ವಿಷಯದಲ್ಲಿ ನಾನು ಒಳ್ಳೆಯ ಹೆಸರು ಪಡೆದಿದ್ದೇನೆ.ಅದಕ್ಕೆ ಅಡುಗೆ ಕಾರ್ಯಕ್ರಮಗಳಲ್ಲಿ ಪ್ರಸಾರ ಆಗುವ ಟಿಪ್ಸ್, ಬಳಸ ಬಹುದಾದ ಪದಾರ್ಥಗಳ ಬಗ್ಗೆ ತಿಳಿಯುತ್ತಾ ಆದಷ್ಟು ಉತ್ತಮ ರೀತಿಯ ಪದಾರ್ಥ ತಯಾರಿಸುವ ಉತ್ಸಾಹ ನನ್ನದು.
ಮುರಳಿ ಕಾರ್ಯಕ್ರಮದಲ್ಲಿ ಅವರು ಆಹಾರವನ್ನು ಸವಿಯುವ ವಿಧಾನ, ಮುಖ್ಯವಾಗಿ ಕನ್ನಡದಲ್ಲಿಯೇ ತಮ್ಮ  ಭಾವನೆಗಳನ್ನು  ವ್ಯಕ್ತ ಪಡಿಸುತ್ತಾ ಮನಕ್ಕಾನಂದ ನೀಡುವ ಗುಣ ಕಾರ್ಯಕ್ರಮ ನೋಡಲೇ ಬೇಕು ಅನ್ನುವಂತೆ ಮಾಡುತ್ತದೆ . ಮುಖ್ಯವಾಗಿ ಬಂದ ಸ್ಪರ್ಧಿಯನ್ನು ಅವರು ಆರಾಮವಾಗಿ ಕೆಲಸ ಮಾಡುವಂತೆ ಮಾಡುವ ವಿಧಾನ ಇದೆಯಲ್ಲ, ಜೊತೆಗೆ ತಿಳಿ ಹಾಸ್ಯ, ಪಾಕ ಪ್ರಾವೀಣ್ಯತೆ, ಆಹಾರ ಪದಾರ್ಥಗಳ ಬಗೆಗಿನ ಮಾಹಿತಿ ಎಲ್ಲವು ಇಷ್ಟ ಆಗುತ್ತದೆ .ಸೋಮವಾರ ಮತ್ತು ಗುರುವಾರ ವೆಜ್ ಅಡುಗೆಗಳನ್ನು ಜನರ ಮುಂದಿಡುವ ಮುರಳಿ ಟೀಮ್ ಮಧ್ಯಾಹ್ನ ಎರಡು ಗಂಟೆ ಬಳಿಕ     ಮಿಲಿಟರಿ ಹೋಟೆಲ್   ಮೂಲಕ ಪ್ರತಿದಿನ ನಾನ್ ವೆಜ್ ಅಡುಗೆ ತೋರಿಸುತ್ತಾರೆ. ಪ್ರತಿದಿನ ಮುರಳಿ ಮಿಲಿಟರಿಯಲ್ಲೂ  ನಾನ್ ವೆಜ್ ಹಾಗೂ ವಾರದಲ್ಲಿ ಬಹುತೇಕ ದಿನ ( ಮಧ್ಯಾಹ್ನ 1 -2 ಪ್ರೈಮ್ ಟೈಮ್ ) ಸಹ ನಾನ್ ವೆಜ್ ಯಾಕೆ ಎನ್ನುವುದು ವೆಜ್ ಪ್ರಿಯರ ಬೇಸರ.. ಮುರಳಿ ಅವರೇ ... ವೆಜ್ ಪ್ರಿಯ ವೀಕ್ಷಕ ಬೇಜಾರು ನಿಮ್ಮ ಬಳಿಗೆ ತಲುಪಿಸಿದ್ದೇವೆ.. ಮುಂದಿನ ಕ್ರಮ- ಯೋಜನೆ  ಎಲ್ಲವೂ ನಿಮ್ಮ ಕೈಲಿದೆ.
Image result for orange flower
@ ಕನ್ನಡ ರಾಜ್ಯೋತ್ಸವದ ದಿನ ಮಾತ್ರ ಕನ್ನಡ ಮಾತಾಡ ಬೇಡಿ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡಕ್ಕೆ ಪ್ರಾಮುಖ್ಯತೆ ಕೊಡದೆ ಸದಾ ಕನ್ನಡ ಅನುಕ್ಷಣವೂ ಕನ್ನಡವಿರಲಿ ಎನ್ನುವುದು ಕನ್ನಡ ಮನಗಳು ಬಯಸುವುದು.. ಅದೇ ರೀತಿ ಕನ್ನಡ ಬರೆಯುವ ಬಗ್ಗೆ ಸಹ ಸಾಕಷ್ಟು ಬೇಸರ ಇದೆ, ಕೆಲವೊಂದು ಪದ ಅದೆಷ್ಟರಮಟ್ಟಿಗೆ ಬಹುತೇಕರಿಗೆ ಗೊಂದಲ ಉಂಟು ಮಾಡಿದೆ ಅಂದ್ರೆ ವರ್ಣಿಸೋಕೆ ಆಗಲ್ಲ ಬಿಡಿ !ಆ ಪದ ಶುಭಾಶಯ...
ಆದರೆ ಬಹುತೇಕ ಹುಟ್ಟು ಹಬ್ಬದ ಶುಭಾಷಯಗಳು ಅಂತ ಬರೀತಾರೆ , ಹಬ್ಬಕ್ಕೂ ಅದೇ ಶುಭಾಷಯ... ಅದು ತಪ್ಪು ರೀ ಆಶಯ.... ಶುಭಾಶಯ  ಅಂದ್ರೂ ಬಿಡದೆ ಶುಭಾಷಯ ಅಂತಲೇ ಬರೆದು ತಮ್ಮ ಜ್ಞಾನವನ್ನು ತೋರುತ್ತಾರೆ. ಬೇರೆ ದಿನ ಹೇಗೋ ಸಹಿಸ ಬಹುದು ಆದರೆ ಕನ್ನಡ - ಕರ್ನಾಟಕ ರಾಜ್ಯೋತ್ಸವದ ದಿನವೂ ಹೀಗೆ ಬರೆದರೆ ?ಅದೂ ಜನಪ್ರಿಯ ವಾಹಿನಿ  ಉದಯದಲ್ಲೂ (ಉದಯ ಕಾಮಿಡಿಯಲ್ಲೂ ಕಂಡು ಬಂದಿತ್ತು ) ಕನ್ನಡ ರಾಜ್ಯೋತ್ಸವದ ಶುಭಾಷಯಗಳು ಅಂತ ಕಣ್ಣಿಗೆ ರಾಚ್ತಾ ಇದ್ರೆ ಏನ್ ಹೇಳೋಣ ??

ಬಾಲಿಶ


Image result for red flowers

ಸಾಕಷ್ಟು ಕಾರಣಗಳಿಂದ ಬ್ಲಾಗ್ ಕಡೆ ಬರೋದಿಕ್ಕೆ ಆಗ್ತಾ ಇಲ್ಲ ಅದು ಒಂದು ಸಂಗತಿ. ಬ್ಲಾಗ್ ಬರೆಯೋದೇ ಬೇಡ ಅಂತ ನಿರ್ಧಾರ ಮಾಡಿದ್ದು ಸಹ ಮತ್ತೊಂದು ಸಂಗತಿ.  ಕೆಲವು ಬಾರಿ ನಮ್ಮ ನಿರ್ಧಾರ ನಿಶ್ಚಲವಾಗಿರಲ್ಲ  ಅಲ್ವೇ . ನನ್ನ  ಫೇಸ್ ಬುಕ್ ಮಿತ್ರರು  ಮತ್ತು ಸಹೋದರ ಸಮಾನರಾದ ಅಲ್ಲದೆ ಜೊತೆಗೆ ಬ್ಲಾಗ್ ಬರಹವನ್ನು ತಪ್ಪದೆ ಓದುತ್ತಿರುವ ಗುರುಮೂರ್ತಿ (ಗುರು ಮಲ್ನಾಡ್ ) ಅವರು ಯಾಕೆ ನೀವು ಬ್ಲಾಗ್ ಕಡೆ ಬಂದಿಲ್ಲ ಅಂತ ಹಠಕ್ಕೆ ಕುಳಿತ  ಕಾರಣ ಬರೆಯುವ ನಿರ್ಧಾರ ಮಾಡಿದ್ದೇನೆ. ಸ್ವಲ್ಪ ಆದರೂ ಸ್ವಲ್ಪ ದಿನಗಳು ಪೂರ್ಣವಾದ ಬಳಿಕ ನಾನು ಬ್ಲಾಗ್ ಬರಹ ಮತ್ತೆ ಮುಂದುವರೆಸುತ್ತೇನೆ.  ಆದರೆ ಈ ಎರಡು ದಿನಗಳು ತಪ್ಪದೆ ಬರೆಯುವೆ. ಅದಾದ ಬಳಿಕ ಸ್ವಲ್ಪ ದಿನಗಳು ಬ್ರೇಕ್... ಮತ್ತೊಂದು ಸಂಗತಿ ಅಂದ್ರೆ ಬ್ಲಾಗ್  ಬರೆಯದೆ  ಇದ್ದರು ಸಹಿತ ಟಿವಿ ನೋಡುವುದು ಬಿಟ್ಟಿಲ್ಲ ಬಿಟ್ಟಿಲ್ಲ. .
Image result for red flowers

 ಮತ್ತೊಂದು ಬಿಗ್ ಬಾಸ್ ಆರಂಭವಾಗಿದೆ. . ಅತ್ಯಂತ ನಿರಾಸಕ್ತಿಯ ನಿರಾಸಕ್ತಿಯಿಂದ ಕೂಡಿದ  ಸೀಸನ್ ಅಂತ ಅನಿಸಿದೆ. ಆದರೆ ಆ  ಆಕರ್ಷಣೆ ಕಿಚ್ಚ ಸುದೀಪ್  ಅವರ ಮಾತಿನ ಶೈಲಿ, ಆ ಸ್ಟೈಲು  ಆ ಪಂಚಾಯಿತಿ.. ಆ ನಾರದ ಕೆಲಸ ;- )
ಈ  ಬಾರಿ  ರಾಜ್ಯಆಡಳಿತದ  ಅದರಲ್ಲೂ ಸರ್ವಾಧಿಕಾರದ ಕಾನ್ಸೆಪ್ಟ್ ಅಷ್ಟು ಕೆಟ್ಟದಾಗಿ ಮಾಡ್ತಾರೆ ಎನ್ನುವ  ಅಂಶವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ . ಸಾಕಷ್ಟು.. ಬಹಳಷ್ಟು  ಉತ್ತಮ ನಟಿ, ಬರಹಗಾರ್ತಿ..ಬರಹಗಾರ, ನಟ ಹೀಗೆ ಹಲವಾರು +, + ಗಳನ್ನೂ ಹೊಂದಿರುವ ಮೋಹನ್, ಮಾಳವಿಕಾ ಅವರು ಇಷ್ಟೊಂದು ಖರಾಬಾಗಿ..   ನಿರೀಕ್ಷೆ ಮಾಡಿರಲಿಲ್ಲ ಬಿಡಿ :-)
ಪ್ರಾಯಶಃ  ಅತಿಯಾಗಿತ್ತು ಅಂತ ಕಾಣುತ್ತೆ.. ಅದಕ್ಕೆ   ಅತೀವ ನಿರಾಸೆ ಆಗಿದೆ.
 ಅಧಿಕಾರ,ಪ್ರಚಾರ  ಮಾಳವಿಕಾ  ಅವರಿಗೆ ಹೊಸದಲ್ಲ. ಆದರೆ  ಕ್ಯಾಪ್ಟನ್   ಆದ ಬಳಿಕ ಅವರ ವರ್ತನೆ  ಕಂಡಾಗ    ಮಾಳವಿಕಾ ಇಷ್ಟೊಂದು  ಬಾಲಿಶವಾಗಿ ಆಡ್ತಾರಲ್ಲ ಅಂತ ಅನ್ನಿಸಿತ್ತು.
 ಸರ್ವಾಧಿಕಾರಿ ಕಾನ್ಸೆಪ್ಟ್ ನಲ್ಲಿ ಆಕೆ ಸಿಂಹಾಸನವನ್ನು ರೆಸ್ಟ್ ಸೀಟ್ ರೀತಿ ಬಳಸಿಕೊಂಡರು. ಸಂಜನಾ ಜೊತೆ  ,ಅವರ  ಸೇವಕರು, ಪ್ರಜೆಗಳ ಜೊತೆ ತುಂಬಾ ಸಾಫ್ಟ್ ಆಗಿ ವರ್ತಿಸಿ ನಾಟಕದ ಹದ ಕೆಡಿಸಿ ಅವರು ಕೇವಲ ನಿರ್ದೇಶಕರು ಹೇಳಿದ್ದು ಮಾಡುವ ಮತ್ತು  ಸ್ವಂತಿಕೆ ಇಲ್ಲದ ಜಾಣೆ ಅಂತ ಅನ್ನಿಸಿದ್ದು ಸತ್ಯ.
ಸಾಕಷ್ಟು ದೊಡ್ಡವರಿಂದ ಹೊಗಳಿಸಿಕೊಂಡ ಪ್ರತಿಭಾವಂತೆ ಈಕೇನೇನಾ ಅಂತ ಅನ್ನಿಸಿದ್ದು ಸತ್ಯ...ಈ ಸೀಸನ್  ನಲ್ಲಿ ಸ್ಪರ್ಶ ರೇಖ ಇಷ್ಟ ಆಗ್ತಾ ಇದ್ದಾರೆ..
ಬಿಗ್ ಬಾಸ್  -3 ರಲ್ಲಿ ಶ್ರುತಿ, ಆನಂದ್, ಪೂಜಾ, ಕೋಟ್ಲೆ ಯಾರೇ ಆಗಲಿ ಸಿಕ್ಕ ಅವಕಾಶ ಸಮರ್ಥವಾಗಿ  ಬಳಸಿಕೊಂಡು ಆ ರೀತಿ ಓಪನ್ ಅಪ್ ಆಗಿದ್ದರು. ಆದರೆ ಈ ಬಾರಿ  ಹೀಗೆ ಉಂಟಲ್ಲ.... ಹೀಗಾಯ್ತಲ್ಲ  ಸ್ವಾಮಿ !