ಕಾಪಿಕ್ಯಾಟ್ ?


ಕನ್ನಡ ಬಿಗ್ ಬಾಸ್ ಕಲರ್ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ.. ಸಾಮಾನ್ಯವಾಗಿ ನಾವು  ಯಾವುದೇ ಲೇಖನ ಬರೆಯುವಾಗ ಇಂತಹ ಸಾರ ಇಲ್ಲದ ವಾಕ್ಯಗಳ ಮೂಲಕ ಆರಂಭ ಮಾಡ್ತೀವಿ. ಈಗ ಅದು ಅಂತಿಮ ಘಟ್ಟ ತಲುಪುತ್ತಿದೆ, ಇಂತಹ ಸಮಯದಲ್ಲಿ ಸಹ ಈ ರೀತಿಯ ವಾಕ್ಯ ಬರೆದರೆ ಛೇ ;-)
ಸಾಮಾನ್ಯವಾಗಿ ಬದುಕಲ್ಲಿ ಹೀಗೆ ಆಗೋದು....
ನಾವು ಏನನ್ನೋ   ಹೇಳಬೇಕು ಅಂತ ಅಂದುಕೊಂಡಿರ್ತೀವೋ ಅದನ್ನು ಆ ಸಮಯದಲ್ಲಿ  ಹೇಳುವುದಿಲ್ಲ.. ಆದರೆ ಯಾವುದು ಬೇಡವಾಗಿರುತ್ತದೆಯೋ ಅದನ್ನು ಬೇಡದ ಸಮಯದಲ್ಲಿ ವ್ಯಕ್ತ ಮಾಡಿರುತ್ತೇವೆ.. ಬಿಗ್ ಬಾಸ್ ಮನೆಗೆ ಬಂದ ನೇಹಾ ಅವರನ್ನು ಕಂಡಾಗ ಅನ್ನಿಸಿದ್ದು ಈ ಅಂಶ. ಹೊರಗಿನ ಪ್ರಪಂಚದಲ್ಲಿ ನೋಡುವ ದೃಷ್ಟಿಕೋನ ಭಿನ್ನವಾಗಿರುತ್ತೆ ಅನ್ನುವ ಅಂಶ ಆಕೆಗೆ ಹೊರ ಬಂದ ಬಳಿಕ   ಹೆಚ್ಚಾಗಿ ಅರ್ಥ ಆಗಿರುತ್ತದೆ.. ಒಂದೊಳ್ಳೆ ಸ್ನೇಹಕ್ಕೆ, ಒಂದೊಳ್ಳೆ ಬಾಂಧವ್ಯ ಆಕೆ ಬೆಲೆ  ಕೊಟ್ಟಿದ್ದರೂ ಕೆಲವು ಬಾರಿ ಅದನ್ನು ವ್ಯಕ್ತ ಪಡಿಸುವ ರೀತಿ ಇದೆಯಲ್ಲ ಅದು ತುಂಬಾ ಜನರಿಗೆ ಅರ್ಥ ಆಗಿರಲ್ಲ.. ಅದು ಅವರ ತಪ್ಪಲ್ಲ..
ಎರಡನೆಯದಕ್ಕಿಂತ ಮೊದಲನೇ ಹಾಗೂ ಮೂರನೇ ಅವತರಣಿಕೆ ಬಿಗ್ ಬಾಸ್  ಮನೆಯನ್ನು ಹೆಚ್ಚು ಮಂದಿ ನೋಡುವಂತೆ ಮಾಡಿದ್ದು ಸತ್ಯ. ಮುಖ್ಯವಾಗಿ ಬಿಗ್ ಬಾಸ್ ನಂತಹ ರಿಯಾಲಿಟಿ ಷೋ ನಿಂದ ಪ್ರಚಾರ, ಹಣ ಏನೇ ಇರಲಿ ಅವೆಲ್ಲ  ಸಿಗುವುದು ವೀಕ್ಷಕರಿಗೆ ಅಲ್ಲದೆ ಇದ್ದರು ಅದರಿಂದ ಸಿಗುವ ಮನೋರಂಜನೆ, ಜಗತ್ತಿನಲ್ಲಿ ಒಂದಷ್ಟು ಜನ ಒಟ್ಟಿಗೆ ಒಂದಷ್ಟು ಕಾಲ ಇದ್ದರೆ ಎಂತಹ ಪರಿಸ್ಥಿತಿ ಎದುರಿಸಬಹುದು ಈ ಎಲ್ಲಾ ಸಂಗತಿಗಳು ಅರ್ಥ ಆಗುತ್ತಾ ಸಾಗುತ್ತದೆ.
Image result for blue color flowers
ಒಂದಂತೂ ಸತ್ಯ ಈ ಮೂರು ಸೀಜನ್ ನಿಂದ ಕನ್ನಡದ ಜನತೆ ಒಂದಷ್ಟು ಅತ್ಯುತ್ತಮ ಕಲಾವಿದರನ್ನು , ಅವರ ಪ್ರತಿಭೆಯನ್ನು ಹೆಚ್ಚು ಹತ್ತಿರದಿಂದ ಕಾಣುವಂತೆ ಮಾಡಿತು. ಮೊದಲ ಸೀಸನ್ ನಲ್ಲಿ ಅರುಣ್ ಸಾಗರ್, ಎರಡನೆಯದರಲ್ಲಿ ಸೃಜನ್ ಲೋಕೇಶ್ , ಮೂರನೆಯ ಅವತರಣಿಕೆಯಲ್ಲಿ ಆನಂದ್.
ಆದರೆ ಮೊದಲು ಮತ್ತು ಎರಡನೆಯ ಸೀಸನ್ ನಲ್ಲಿ ದೊರೆತ ಅವಕಾಶಗಳನ್ನು ಅದ್ಭುತವಾಗಿ ಅರುಣ್ ಮತ್ತು ಆನಂದ್ ಬಳಸಿಕೊಂಡರು.
ಮೊದಲ ಸೀಸನ್ ನಲ್ಲಿ ಅಪರ್ಣ, ಎರಡನೆಯದರಲ್ಲಿ ಶ್ವೇತ ಮೂರನೆಯದರಲ್ಲಿ ಶ್ರುತಿ ಈ ಮೂರು ಹೆಣ್ಣುಮಕ್ಕಳು ನನಗೆ ಹೆಚ್ಚು ಇಷ್ಟವಾದವರು.  ಕನ್ನಡದ ಭರವಸೆಯ ನಟ ಚಂದನ್.. ಹುಡುಗು ಬುದ್ಧಿಯ ಈ ಕಲಾವಿದ ಕೋಪವನ್ನು ಬಿಡಲು, ವೃತ್ತಿಗೆ ಬೇಕಾದ ತಾಲೀಮು ಮಾಡಲು ಒಂದಷ್ಟು ಗಮನ ಕೊಟ್ರೆ ಕನ್ನಡ ಚಿತ್ರರಂಗ ಉತ್ತಮ ಕಲಾವಿದನನ್ನು ಪಡೆಯುತ್ತದೆ.
ಕಿಚ್ಚ ಸುದೀಪ್ ಅವರ ನಿರೂಪಣೆ ಕನ್ನಡದಲ್ಲಿ ಇಷ್ಟವಾದ ಸಂಗತಿ.. ನಾನು ಹಿಂದಿ ಬಿಗ್ ಬಾಸ್ ಸಹ ತಪ್ಪದೆ ನೋಡುವ ವೀಕ್ಷಕಿ ಆದರೆ ಈ ಬಾರಿ ಅದನ್ನು ಹೆಚ್ಚು ನೋಡಲು ಸಾಧ್ಯವಾಗಲಿಲ್ಲ. ಆದರೆ ಕನ್ನಡದಲ್ಲಿ ಸುದೀಪ್ ತಮ್ಮ ವಿಶೇಷ ಶೈಲಿ, ಡ್ರೆಸ್ ಅದೂ ಇದೂ ಎಲ್ಲಾ ಅಂಶಗಳ ಮೂಲಕ ಜನಮನ ಗೆದ್ದರು, ಇದು ಒಂದು ಅಂಶ, ಆದರೆ ಒಂದಷ್ಟು ಜನ ಅವರನ್ನು ಹಿಂದಿ ಕಾರ್ಯಕ್ರಮದ ಕಾಪಿಕ್ಯಾಟ್ ಅಂದಿದ್ದಾರೆ . ದೀಪ್ ಅದು ನಿಮಗೆ ಗೊತ್ತಿರಲಿ :)
ಕಳೆದವಾರ  ನವರಸ ನಾಯಕ ಜಗ್ಗೇಶ್  ಅವರ ಜೊತೆಯ ಮಾತುಕತೆ ಸಕತ್ತಾಗಿತ್ತು. ನನಗೆ ಜಗ್ಗೇಶ್ ಎನಿಟೈಮ್  ಫೇವರಿಟ್. ತುಂಬಾ ಉಲ್ಲಸವಾಗಿ  ವೀಕೆಂಡ್ ಕಳೆಯುವಂತೆ ಇತ್ತು ಅವರ ಮಾತಿನ ಶೈಲಿ.. ಇಷ್ಟ ಆಯ್ತು.
ಪ್ರತಿದಿನ ಸ್ವಲ್ಪ ಸಮಯ ಬಿಗ್ ಬಾಸ್ ಗೆ ಮೀಸಲಿಡುವ ಸಂಭ್ರಮ ಇತ್ತು.. ಮುಂದಿನವಾರದಿಂದ ಅಷ್ಟೊಂದು ಟೆನ್ಶನ್ ಇಲ್ಲ ಬಿಡಿ ;-)

ತಣಿಸುತ್ತಿದ್ದಾರೆ

Image result for orange color flowers
ಮಾಧ್ಯಮಲೋಕದಲ್ಲಿ ಬೇಕಾಗಿರುವ ಸಂಗತಿಗಳಿಗಿಂತ ಬೇಡದ ಸಂಗತಿಗಳೇ ಹೆಚ್ಚು ಕಿವಿಗೆ ರಾಚುವುದು. ಅಂತಹ ವಿಷಯಗಳು ಜನರಿಗೆ ಬೇಕು.. ಆ ರೀತಿಯ ವಿಷಯಗಳನ್ನು ಬರೆದರೆ ಓದುಗರ ಸಂಖ್ಯೆ ಹೆಚ್ಚಾಗುತ್ತದೆ.. ಆದರೆ ನಾನು ಬ್ಲಾಗ್ ಬರೆಯೋದು ಅದರ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಅಲ್ಲ.. ಏಳುವರ್ಷಗಳ  ಹಿಂದೆ ಆರಂಭ ಮಾಡಿದಾಗ ಇದ್ದಂತಹ ಉತ್ಸಾಹ ಈಗಲೂ ಇದೆ. ಆರೀತಿ ಇರೋದಕ್ಕೆ ಮುಖ್ಯ ಕಾರಣ ನಾನು ಹೆಚ್ಚು  ಸೆನ್ಸೇಷನಲ್  ಸಂಗತಿಗಳನ್ನು ಬರೆಯೋಲ್ಲ.. ಯಾಕೇಂದ್ರೆ ಅಂತಹ ಸಂಗತಿಗಳ ಬಗ್ಗೆ ಬರೆದಾಗ ನಾವು ನಾವಾಗಿ ಉಳಿಯೋಲ್ಲ.. ಅಂತಹ ಸೆನ್ಸೇಷನಲ್ ಹುಡುಕಾಟದಲ್ಲಿ ಬೇಡದ್ದು ಬರಿಯ ಬೇಕಾಗುವ ಸಾಧ್ಯತೆ ಹೆಚ್ಚು.
 ಮುಖ್ಯವಾಗಿ ನಾನು ಬರೆಯುವ ಪೋಸ್ಟ್ ಗಳನ್ನು ಒಂದಷ್ಟು ಮಿತ್ರರು ತಪ್ಪದೆ ಓದುತ್ತಾರೆ. ಸ್ವಲ್ಪ ತಡ ಮಾಡಿದರೂ ತಕ್ಷಣ ತಮ್ಮ ಮನದ ಭಾವ ವ್ಯಕ್ತಪಡಿಸುತ್ತಾರೆ. ನೀವ್ ಯಾಕೆ ಬ್ಲಾಗ್ ಬರೀತಾ ಇಲ್ಲ. ಆ ಕಾರ್ಯಕ್ರಮ ಚನ್ನಾಗಿತ್ತು, ಅಥವಾ ನೀವು ಈ ಮೊದಲು ತಿಳಿಸಿದ ಕಾರ್ಯಕ್ರಮ ನಾನು ನೋಡಿರಲಿಲ್ಲ ಆದರೆ ಬ್ಲಾಗ್ ಓದಿದ ಬಳಿಕ ಅದನ್ನು ವೀಕ್ಷಿಸಲು ಆರಂಭ ಮಾಡಿದೆ ಹೀಗೆ.. ಅಂತಹ ಕಳಕಳಿಗೆ ತಲೆ ಬಾಗುವೆ.
 ಜಾಸ್ತಿ ಹೊಗಳಿ ಕೊಳ್ತಾ  ಇದ್ದೀನಿ ಅಂತ ತಿಳಿಯ ಬೇಡಿ ಪ್ಲೀಸ್..
Image result for orange color flowers

 ಜೀಕನ್ನಡ ವಾಹಿನಿ ರಿಯಾಲಿಟಿ ಶೋಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅದರಲ್ಲಿ ನಾನು ಧಾರಾವಾಹಿಗಳನ್ನು ವೀಕ್ಷಿಸದೆ ಹೋದರು ಸಹ ರಿಯಾಲಿಟಿ ಶೂಗಳನ್ನು ವೀಕ್ಷಿಸಲು ಇಷ್ಟ ಪಡ್ತೀನಿ.. ಸ ರೆ ಗ ಮ ಪ   ಅದರಲ್ಲಿ ಒಂದಾಗಿದೆ.ಈಗ ಈ  ಕಾರ್ಯಕ್ರಮದಲ್ಲಿ ಹಿರಿ ಕಿರಿಯರ ಸಮ್ಮಿಲನ ಆಗಿದೆ. ಅತ್ಯದ್ಭುತವಾದ ಈ ಕಾರ್ಯಕ್ರಮ ವೀಕೆಂಡ್ ನಲ್ಲಿ  ಅತಿ ಮೋದ ಕೊಡುತ್ತದೆ . ಒಂದೊಮ್ಮೆ  ಎಸ್ಪಿ ಬಿ ಅವರ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದ ಮುಂದೆ ಮತ್ತಿನ್ಯಾವ ಹಾಡಿನ ಸ್ಪರ್ಧೆ ಇರಲಿಲ್ಲ. ಆದರೆ ರಾಜೇಶ್ ಕೃಷ್ಣನ್ , ವಿಜಯ್ ಪ್ರಕಾಶ್, ಸ್ವಲ್ಪದಿನ, ಹಂಸಲೇಖ, ಬಿ ಆರ್ ಛಾಯ, ಈಗ ಅರ್ಜುನ್ ಜನ್ಯ ಅವರ  ಸನ್ನಿಧಿಯಲ್ಲಿ  ಅಂತ ಹೇಳಿದ್ರೆ ಸೂಕ್ತ.  ಅಪಾರ ಸಂಖ್ಯೆಯ  ಪ್ರತಿಭೆಗಳು  ಕಲಾಸಕ್ತರ ಮನಸ್ಸು ತಣಿಸುತ್ತಿದ್ದಾರೆ .
 ಅದರಲ್ಲೂ ಈಗ ಪ್ರಸಾರ ಆಗುತ್ತಿರುವ ಎಪಿಸೋಡ್ಗಳು, ಅದರಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಗಳು ಆಸಂ ...
ಜೊತೆಗೆ ಅನುಶ್ರೀ ಸಹ ಅತ್ಯುತ್ತಮ ನಿರೂಪಕಿ.. ಉಲ್ಲಾಸದ ಚಿಲುಮೆಯ ಪ್ರತಿರೂಪ..ಕನ್ನಡದಲ್ಲಿ ಒಟ್ಟೊಟ್ಟಿಗೆ ಅಧಿಕ ಪ್ರಮಾಣದಲ್ಲಿ ನಿರೂಪಣೆಯ ಅವಕಾಶಗಳು ಪಡೆದ ಕೆಲವೇ ಕೆಲವು ನಿರೂಪಕಿಯರಲ್ಲಿ ಅನುಶ್ರೀ ಸಹ ಒಬ್ಬರು.
@ ವೀಕೆಂಡ್ ವಿತ್ ರಮೇಶ್  ಕಾರ್ಯಕ್ರಮದ ಮೊದಲ ಅವತರಣಿಕೆ ಸಹಿತ ತುಂಬಾ ಇಷ್ಟ ಆಗಿತ್ತು.. ಈ ಬಾರಿಯೂ ಸಹ ಅದೇ ತಾಜಾತನ ಉಳಿಸಿಕೊಂಡಿದೆ. ರಮೇಶ್ ಯಾವುದೇ ಕಾರ್ಯಕ್ರಮದ ರೂವಾರಿಯಾಗಲಿ ತುಂಬಾ ಖುಷಿ ಕೊಡುತ್ತದೆ. ಕಳೆದ ಬಾರಿ  ದೇವರಾಜ್  ಅವರ ಬಗ್ಗೆ ಆಗಿರಲಿ ಅಂಬಿ ಮಾಮ ಅವರನ್ನು ಕುರಿತ ಕಾರ್ಯಕ್ರಮ ಆಗಿರಲಿ ಸಕತ್ತಾಗಿತ್ತು. ಜೀನ ಇಸಿ ಕ ನಾಮ್ ಹೈ ಎಂಬ ಕಾರ್ಯಕ್ರಮ ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇತ್ತು. ಫಾರೂಕ್ ಶೇಖ್ ಮತ್ತು ಸುರೇಶ್ ಒಬೆರಾಯ್ ಅವರು ಈ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು..(ಕೆಲವು ಎಪಿಸೋಡ್ ಗೆ  ಫಾರೂಕ್ , ಕೆಲವಕ್ಕೆ ಸುರೇಶ್). ಐಶ್ವರ್ಯ ರೈ ಅವರಿಗೂ ಹೀಗೆ ಚೇರ್ ಮೇಲೆ ಕುಳ್ಳರಿಸಿ ಮಾತನಾಡಿಸಿದ್ದರು.ಆಕೆಯು ಉತ್ತಮ ಗಾಯಕಿ ಎನ್ನುವುದು ಆ ಕಾರ್ಯಕ್ರಮದ ಮೂಲಕ ಜನರಿಗೆ ಗೊತ್ತಾಗಿತ್ತು.ಅದರ ಕನ್ನಡ ರೂಪಾಂತರ  ಅಂತಲೇ ಹೇಳಬಹುದು.ಇಂತಹ ಕಾನ್ಸೆಪ್ಟ್ ಇರುವ ಪ್ರೋಗ್ರಾಮ್ ಆನೇಕ ವಾಹಿನಿಯಲ್ಲಿ ಪ್ರಸಾರ ಆಗಿದೆ.   ಒಟ್ಟಾರೆ ಅತ್ಯುತ್ತಮ ಕಾರ್ಯಕ್ರಮ ಇದು. ಅಂಬಿಮಾಮ ಅವರ ಬಗ್ಗೆ ಪ್ರಸಾರವಾದ ಕಾರ್ಯಕ್ರಮ ಜಾಸ್ತಿ ಗಮನ ಸೆಳೆದದ್ದಕ್ಕೆ   ಮುಖ್ಯ ಕಾರಣ ಅವರ ಜೀವನ ಚರಿತ್ರೆಗೆ ಸಂಬಂಧಪಟ್ಟ ಪುಸ್ತಕ ಕಳೆದ ವರ್ಷ ಬಿಡುಗಡೆ ಆಯ್ತು ನಾನು ಕೆಲಸ ಮಾಡುವ ಸಂಸ್ಥೆಯಿಂದ . ಆ ಪುಸ್ತಕದಲ್ಲಿ ನನ್ನದು ಅಳಿಲು ಸೇವೆ ಇದೆ.. ಅದಾದ ಬಳಿಕ ಸುಮಲತಾ ಅವರು ಆಂಧ್ರದ ಪ್ರಸಿದ್ಧ ದಿನಪತ್ರಿಕೆ ಸಾಕ್ಷಿಗೆ ನೀಡಿದ ಸಂದರ್ಶನವನ್ನು ಕನ್ನಡಕ್ಕೆ ಅನುವಾದ ಮಾಡಿದ್ದೆ.. ನಮ್ಮ ಪತ್ರಿಕೆಯಲ್ಲೂ ಪ್ರಕಟ ಆಗಿತ್ತು.ಅವೆಲ್ಲ ನೆನಪಿಗೆ ಬಂತು . ಅಂಬಿ ಅವರು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ನಾನು ಆನ್ಲೈನ್ ಪತ್ರಿಕೆಯಲ್ಲಿ ಫ್ರೀ ಲ್ಯಾನ್ಸರ್ ಆಗಿದ್ದೆ. ಅಲ್ಲಿ ಕೇವಲ  ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೆ.. ನಾನು ಅಂಬಿಯವರು ಬೇಗ ಹುಶಾರಾಗಲಿ ಎನ್ನುವ ಸುದ್ದಿಗೆ ಹೆಚ್ಚು ಆದ್ಯತೆ ಕೊಡ್ತಾ ಇದ್ದೆ..ಆ ಸಮಯದಲ್ಲಿ ಸಕತ್ ಟೆನ್ಶನ್ ಆಗಿತ್ತು ನನಗೆ..

ಥ್ಯಾಂಕ್ಸ್ ರಮೇಶ್ ಉತ್ತಮ ಕಾರ್ಯಕ್ರಮ ನೀಡಿದ್ದಕ್ಕೆ :-)

ಚೊಕ್ಕ..

Image result for ganarajyotsava images
ಗಣರಾಜ್ಯೋತ್ಸವ ... ಅತಿ ಹೆಚ್ಚು ಖುಷಿ ನೀಡುವ ರಾಷ್ಟ್ರೀಯ ಹಬ್ಬ ಇದು. ದೂರ ದರ್ಶನದಲ್ಲಿ ನೇರ ಪ್ರಸಾರದ ಕಾರ್ಯಕ್ರಮ ವೀಕ್ಷಿಸುವಾಗ ಬಾಲ್ಯದ ನೆನಪು ಕಾಡಿದ್ದು ಸತ್ಯ. ಶಾಲೆಯಲ್ಲಿ  ಗ್ರೂಪ್ ಸಾಂಗ್ ಹೇಳುವ ವಿದ್ಯಾರ್ಥಿನಿಗಳಲ್ಲಿ ನನ್ನ ಹೆಸರು ಖಾಯಂ . ಸೈಡ್ ಆಕ್ಟರ್ ಥರ ನಾನು  ಇರಲೇ ಬೇಕು.. ಅದರಲ್ಲೂ ಇಂತಹ  ರಾಷ್ಟ್ರೀಯ  ಹಬ್ಬದ ಸಮಯದಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಿಕೆ ಇರುತ್ತಿತ್ತು.

ದೂರದರ್ಶನದಲ್ಲಿ ಇಂದು ತುಂಬಾ ಖುಷಿಯಿಂದ  ಗಣತಂತ್ರ ದಿನದ ಕಾರ್ಯಕ್ರಮ ವೀಕ್ಷಿಸಿದೆ. ಸಾಕಷ್ಟು ಸರ್ತಿ ಇಂತಹ ಖುಷಿಗಳಿಂದ ದೂರಾಗಿರುತ್ತೇವೆ,  ಆ ಸ್ಥಿರ ಚಿತ್ರಗಳು, ರಾಜ್ಯಗಳ ಪ್ರತಿನಿಧಿಸುವ ಆ ವಿಷಯಗಳು ಎಲ್ಲವು ಚಂದ. ಎ ಆರ್ ರೆಹಮಾನ್ ಅವರ ವಂದೇ ಮಾತರಂ ಅತ್ಯಂತ ಮುದ ನೀಡಿದ ಅಂಶ.. ಭಾರತದ ಬಗ್ಗೆ ಹೆಚ್ಚು ಹೆಚ್ಚು ಹೆಮ್ಮೆ ಆಗುತ್ತದೆ.
ಟೀವಿ ಹಾಕಿದರೆ ಸಾಕು ಬರೀ ಚರ್ಚೆ.. ಆಪ್ತ ಅನ್ನಿಸುವ ಕಾರ್ಯಕ್ರಮಗಳೇ ಇಲ್ಲವೇನೋ ಎಂದು ಅನ್ನಿಸುವಂತೆ ಮಾಡುತ್ತದೆ. ಆದರೆ ಚಂದನ ವಾಹಿನಿ ಮಾತ್ರ ಅಂತಹ  ಅಂಶಗಳಿಂದ   ಕಿರಿಕಿರಿ ಉಂಟು ಮಾಡದು.. ವೀಕ್ಷಕರಿಗೆ ನೀಡುವ ಕಾರ್ಯಕ್ರಮಗಳು ತುಂಬಾ ಚೆನ್ನಾಗಿರುತ್ತದೆ. ಥಟ್ ಅಂತ ಹೇಳಿ, ಮಧುರ ಮಧುರವೀ  ಮಂಜುಳ ಗಾನ, ಸವಿರುಚಿ, ಬೆಳಗಿನ ಸಂದರ್ಶನ  ಚೊಕ್ಕ.. ಸುಂದರ.. :-)