ಉಲ್ಲಾಸ

Image result for orange flower

ಪಿ ಮಹಮ್ಮದ್ ಕಿಚ್ಚ ಮತ್ತು ಹುಚ್ಚ ಒಟ್ಟಿಗೆ ಸಿಕ್ಕರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದರು 'ಬಿಬಾ'ಭಿಮಾನಿಗಳು:-)

ಹೀಗೆಂದು ಪ್ರಸಿದ್ಧ ಕಾರ್ಟೂನಿಸ್ಟ್ ಮಹಮದ್ ಸರ್ ಹೇಳಿದ್ದಾರೆ. ಇಂತಹ ರಿಯಾಲಿಟಿ ಶೋಗಳ ಬಗ್ಗೆ ಬೇಸರ ಹೊಂದಿರುವವರು ಈ ಬಗ್ಗೆ ಏನು ಹೇಳ್ತಾರೋ ಗೊತ್ತಿಲ್ಲ, ಆದರೆ  ಹುಚ್ಚ ವೆಂಕಟ್ ರಂತಹ ಅತಿರೇಕದ  ವ್ಯಕ್ತಿತ್ವಗಳ  ನಡುವೆ ದಿನ ಕಳೆಯೋದು ಇದ್ಯಲ್ಲ, ಅದು ಬದುಕಿನ ಅತಿ ದೊಡ್ಡ ಸವಾಲ್. 
ಇಂತಹ  ಸವಾಲ್ ಹಿಂದಿ ಬಿಗ್ ಬಾಸ್ ನಲ್ಲಿ ಸಹ  ಇಮಾಂ ಸಿದ್ಧಿಕಿಯಿಂದ ಆಗ ಇದ್ದ ಸ್ಪರ್ಧಿಗಳು ಎದುರಿಸಿದ್ದರು. ಆತನ ಅತಿರೇಕದ ವರ್ತನೆ ಮತ್ತು ಆ ವಿಚಿತ್ರವಾದ ರೀತಿ ! ಅದೆಲ್ಲಾದಕ್ಕಿಂತ ಖೇದ ಒಂದು ರೀತಿ ಹೇವರಿಕೆ ಎನ್ನಿಸಿದ್ದು ಸಿದ್ಧಿಕಿ ಫೋಟೋಗೆ ಶೋ ನಿಂದ ಹೊಡೆಸಿದ್ದು. ಆಗ ಸ್ಪರ್ಧಿಗಳಿಗೆ ಆತನ ಮೇಲೆ ಇದ್ದ ಆಕ್ರೋಶ, ಅಸಹ್ಯ, ಬೇಸರ ಪ್ರಕಟ ಮಾಡಲು, ಬಿಗ್ ಬಾಸ್ ಮನೆಯರು ಕಂಡುಕೊಂಡ ಮಾರ್ಗ ಅದು. ಹುಚ್ಚ ವೆಂಕಟ್  ವರ್ತನೆ ನೋಡಿದ್ರೆ ಆತನ ಚಿತ್ರಕ್ಕೂ ಅದೇ ಕಥೆ ಆಗುತ್ತಾ ?

Image result for orange flower
ಹಿಂದಿ ಬಿಗ್ ಬಾಸ್  ಕಲರ್ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ. ಈಗಾಗಾಗಲೇ ಇಬ್ಬರು ಮಾಜಿ ಪ್ರೇಮಿಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ರುಪಾಲ್ ಜೊತೆಗಾತಿ ವೀರ ಪಾತ್ರಧಾರಿ ಹುಡುಗಿ ಉಳಿದದ್ದು ಆಶ್ಚರ್ಯ. ಮತ್ತೊಂದು ಸಂಗತಿ ನನಗೆ  ಆಕೆ ಕೂದಲು ಸಕತ್ ಇಷ್ಟ ಆಯ್ತು. ಅಷ್ಟು ಉದ್ದ.. ವಾವ್ 
ಈಗ ಮತ್ತೆ ಉದ್ದ ಕೂದಲು, ಉದ್ದ ಜಡೆ ಫ್ಯಾಶನ್ ಆರಂಭವಾಗಿದೆಯೇನೋ.. ಬಿಡಿ ಅವೆಲ್ಲ ಸಣ್ಣಪುಟ್ಟ ಸಂಗತಿಗಳು.
ಆದರೆ ಬಿಗ್ ಬಾಸ್ ಮನೆಯ ವಾರ್ ನ್ನು  ಒಂದು ಕಡೆ ನಿಲ್ಲಿಸುವ ನಿರೂಪಕ ಸಲ್ಮಾನ್ ಖಾನ್ ಈ ಬಾರಿ ಅದ್ಯಾಕೋ ಹೆಚ್ಚು ಖುಷಿ ಖುಷಿಯಾಗಿ  ಜನರ ಮುಂದೆ ಬಂದಿಲ್ಲ.
ಜನರನ್ನು ರಂಜಿಸುವಾಗ ನಮ್ಮ ವೈಯಕ್ತಿಕ ಸಮಸ್ಯೆಗಳು, ಬೇಸರಗು ಎಷ್ಟೇ ಇದ್ದರೂ ಸಹಿತ ಅದರಿಂದ  ಹೊರಬಂದು ಸಾರ್ವಜನಿಕವಾಗಿ ಮುಖವಾದ ತೊಡಬೇಕು. ಸಲ್ಮಾನ್ ಅದ್ಯಾಕೋ ಈ ಬಾರಿ ! ಮುಂದಿನ ಎಪಿಸೋಡ್ ಗಳಲ್ಲಿ  ಸಲ್ಮಾನ್ Boy  ಹೆಚ್ಚು ಉಲ್ಲಾಸವಾಗಿ ಬರಲಿ.
ಮುಖ್ಯವಾಗಿ ಮತ್ತೊಂದು ವಿಷ್ಯ  ಕನ್ನಡ -ಹಿಂದಿ ಎರಡು ಬಿಗ್ ಬಾಸ್ ಒಟ್ಟಿಗೆ ಆರಂಭವಾಗಿ ಸ್ವಲ್ಪ ಕಷ್ಟ ಆಗಿದೆ. ಎರಡರ ನಡುವೆ ಕನಿಷ್ಠ ಎರಡು ತಿಂಗಳು ಅಥವಾ ಮೂರು ತಿಂಗಳು  ಅಂತರ ಇದ್ರೆ ಕಾರ್ಯಕ್ರಮ  ಗಮನ ಕೊಟ್ಟು ನೋಡ ಬಹುದು. 


@ ಟೀವಿ ನೈನ್ ವಾಹಿನಿಯಲ್ಲಿ ಹುಚ್ಚ ವೆಂಕಟ್ ಬಗ್ಗೆ  ಕಾರ್ಯಕ್ರಮ ಪ್ರಸಾರ ಮಾಡಿತು. ಅವರ ತಾಯಿ ಮರಣಿಸಿದ ಬಳಿಕ ಆತನಿಗೆ  ಮಾನಸಿಕ ಸಮಸ್ಯೆ ಉಂಟಾಯಿತಂತೆ. ಹಾಗಂತ ಅವರ ಅಣ್ಣ , ಟೀವಿ ಧಾರವಾಹಿ ಕಲಾವಿದ  ಕುಶಾಲ್ ಅವರು ಹೇಳಿದರು. ಸಮಸ್ಯೆ ಇದೆ ಎಂದಾಗ ಪರಿಹಾರದತ್ತ ಕೈ ಚಾಚುವುದು ಒಳ್ಳೇದಲ್ವ. ಈಗ ಎಲ್ಲರು ಹುಚ್ಚ ವೆಂಕಟ್ ಕಡೆಗೆ  ಕರುಣೆ ತೋರಿಸೋದೇನು, ಬೈಯ್ಯೋದೇನು, ಹೊಗಳೋದೇನು, ಫ್ಯಾನ್ ಆಗೋದೇನು ??
ಆದರು ನಿನ್ನೆ ಆತ ಕಲಾವಿದ ಆನಂದ್ ಅವರ ಮಿಮಿಕ್ರಿ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ರೀತಿ  ಬಹಳ ಅಸಹ್ಯ. ಹೆಣ್ಣುಮಕ್ಕಳು ಬಗ್ಗೆ ಗೌರವ, ಅವರು ಇಂತಹದ್ದೇ ಬಟ್ಟೆ ಧರಿಸ ಬೇಕು, ಅದೂ ಇದೂ ಅಂತ ಡೈಲಾಗ್ ಹೊಡೆಯೋರ   ಬಗ್ಗೆ ಸದಾ ಅನುಮಾನದ ದೃಷ್ಟಿ ನನಗೆ. ಪಾಪ ಅಲ್ಲಿರುವ ಹೆಣ್ಣುಮಕ್ಕಳನ್ನು ಬಿಗ್ ಬಾಸ್ ರಕ್ಷಿಸ ಬೇಕು !
Image result for orange flower


@ ಎಲ್ಲ ಗಲಿಬಿಲಿ ಕಾರ್ಯಕ್ರಮಗಳ ನಡುವೆ ಮನಸೋಲ್ಲಾಸ ಹೆಚ್ಚಿಸುವ ಹಾಸ್ಯ ಧಾರವಾಹಿ ಸ್ಟಾರ್ ವಾಹಿನಿಯ ಸುಮಿತ್ ಸಂಭಾಲೆಗಾ ದಲ್ಲಿನ ಎಲ್ಲ ಪಾತ್ರಗಳು ಅದ್ಭುತ . ಸುಮಿತ್, ಮಾಯಾ,ಮಮ್ಮಿಜಿ, ಪಾಪಾಜಿ, ಸುಮಿತ್ ಅಣ್ಣನ ಪಾತ್ರಧಾರಿ ಪ್ರತಿಯೊಬ್ಬರೂ...ಹಾಗು ಅಂಡ್ ಟೀವಿಯ ಭಾಭಿಜಿ ಘರ್ ಪೆ ಹೈ ಧಾರವಾಹಿ  ನಿಜಕ್ಕೂ ಚೆನ್ನಾಗಿದೆ. ಫುಲ್ ಮನೋರಂಜನೆ. ಪಾತ್ರಗಳು ಅಷ್ಟೇ ಉಲ್ಲಾಸ ಉತ್ಸಾಹ ನೀಡುವಂತಹದ್ದು. 

ಓ ಮೈ ಗಾಡ್ ಬಂದೆ ಬಿಡ್ತು..ಹೌದು ಸ್ವಾಮಿ !


Image result for orange blue flowersಮತ್ತೊಂದು ಕನ್ನಡ  ಬಿಗ್ ಬಾಸ್ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳು, ವಾಹಿನಿಗಳು, ವಾಟ್ಸಪ್ಗಳು, ಅದರ ಗ್ರೂಪ್ ಗಳು, ಮಂದಿಗಳು- ಅವರ ಮಾತುಗಳು, ಎಲ್ಲ ಕಡೆ ಬಿಗ್ ಬಿಗ್ ಬಿಗ್ ಬಾಸ್ ಹೌದು ಸ್ವಾಮಿ !
ಕನ್ನಡ ಬಿಗ್ ಬಾಸ್ ಆರಂಭ ಆಗುತ್ತೋ ಇಲ್ಲವೋ ಎಂದು ಬಿಗ್ ಬಾಸ್ ಅಭಿಮಾನಿಗಳು ಕಾದಿದ್ದೆ ಬಂತು.. ಓ ಮೈ ಗಾಡ್ ಬಂದೆ ಬಿಡ್ತು..ಹೌದು ಸ್ವಾಮಿ !

ಕಿಚ್ಚ ಸುದೀಪ್ ಆ ಕಾರ್ಯಕ್ರಮದ ಅತಿ ಮುಖ್ಯ ಆಕರ್ಷಣೆ ಎನ್ನುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಯಾಕೇಂದ್ರೆ ಅವರಿಗಾಗಿ ಸಾಕಷ್ಟು ಜನರು ಕಾದಿರುತ್ತಾರೆ. ಅವರ ಮಾತು, ಬಾಡಿ ಲಾಂಗ್ವೇಜ್ , ಕೌನ್ಸಿಲಿಂಗ್  ಮಾಡುವ ಪರಿ, ಆ ಭಾಷೆ ಎಲ್ಲರಿಗೂ ಇಷ್ಟವಾಗುತ್ತದೆ. ಇಷ್ಟ ಆಗುವಂತೆ ಮಾತಾಡುತ್ತಾರೆ.. ಹೌದು ಸ್ವಾಮಿ..!
ಅವರು ಒಳ್ಳೆಯ ನಟ, ಕಲಾವಿದ, ಕ್ರಿಕೆಟ್ ಆಟಗಾರ, ಹಾಡುಗಾರ, ನಿರೂಪಕ  , ಪಕ್ಕ ಮಜಾ ತೆಗೆದುಕೊಳ್ಳುವ ಆಸಾಮಿ . ಸಾಮಾನ್ಯವಾಗಿ ಒಂದು ಕಾರ್ಯಕ್ರಮ ಯಶಸ್ಸು ಪಡೆಯ ಬೇಕಾದರೆ ಅನೇಕ ಕಾರಣಗಳು ಇರುತ್ತವೆ, ಅದರಲ್ಲಿ ನಿರೂಪಕನ ಶೈಲಿಯು ಹೆಚ್ಚಿನ ಪ್ರಾಧಾನ್ಯತೆ ಪಡೆದಿರುತ್ತದೆ. ಕಿಚ್ಚ ಮಾತ್ರ ಈ ಕಾರ್ಯಕ್ರಮಕ್ಕೆ ಸೂಟಬಲ್ ಅನ್ನುವುದು ಪದೇಪದೇ ನಿರೂಪಿತವಾಗಿದೆ. ಕಿಚ್ಚ ಅಂದ್ರೆ ಸುಮ್ಮನೆ ಅಲ್ಲ ಹೌದು ಸ್ವಾಮಿ !


ಬಿಗ್ ಬಾಸ್ ನಲ್ಲಿ ಬಾಸ್ಗೆ ಬಾಸ್ ಆಗಿರೋದು ಅಂದ್ರೆ ಹುಚ್ಚ ವೆಂಕಟ್. ಏಕಾಏಕಿ ಆತ ತನ್ನ ಇಮೇಜ್ ಬದಲಾಯಿಸಿಕೊಂಡ ಸ್ಪರ್ಧಿ. ಅವರ ಬಗ್ಗೆ ಎಲ್ಲ ಕಡೆ ಮಾತು ಕಥೆ . ನನ್ನ ಸೋದರಳಿಯಂದಿರಾದ ವಿಶ್ವಾಸ್, ವಿಜೇತ್ ಪೃಥ್ವಿ , ಪವನ್ ,ಸೋದರ ಸೊಸೆಗಳಾದ  ಸಿಂಧು, ಶ್ರಾವಣಿ, ಅಕ್ಕಂದಿರ ಮಕ್ಕಳಾದ ಕಲ್ಪ, ಶರತ್ ಎಲ್ಲರು ಹುಚ್ಚ ವೆಂಕಟ್ ಫ್ಯಾನ್ ಗಳು. ದಿನಕ್ಕೆ ಅದೆಷ್ಟು ಪೋಸ್ಟ್ ಮಾಡ್ತಾರೆ ಹುಚ್ಚ  ಬಗ್ಗೆ ಅಂದ್ರೆ ಅದನ್ನು ಓದುವುದೇ ಒಂದು ಕೆಲಸ. ವಾಟ್ಸಪ್   ಗೆ ಈಗಂತೂ ಸಕತ್ ಜೀವ ಬಂದಿದೆ. ನಮ್ಮ ವಿಜ್ಜು ಅಂತೂ ಅತ್ತೆ ಹುಚ್ಚ ವೆಂಕಟ್ ಅಂತ ದಿನಕ್ಕೆ ಅದೆಷ್ಟು ಬಾರಿ ಜಪಿಸಿ ಹುಚ್ಚು ಹಿಡಿಸಿಕೊಂಡಿದ್ದಾನೆಂದರೆ ಲೆಕ್ಕವೇ ಸಿಗುತ್ತಿಲ್ಲ :-)
courtesy :  Pavan Ghatt

ಕಿಚ್ಚ  ನೋಡಿದರಲ್ಲ ನಿಮ್ಮ ಹುಚ್ಚಿಗೂ ಈ ಹುಚ್ಚಿಗೂ ಇರುವ ಅಲೆ ;-)
ಏನೇ ಹೇಳಿ ಈ ಬಿಗ್ ಬಾಸ್ ನಲ್ಲಿ ಇನ್ನು ಏನೇನು ಹುಚ್ಚ ಮಾಡ್ತಾರೋ ಅನ್ನೋಕುತೂಹಲ ನಮಗೆ.. ಹೌದು ಸ್ವಾಮಿ !
ಇದರ ಮತ್ತೊಂದು ಆಕರ್ಷಣೆ ಅಂದ್ರೆ  ಶ್ರುತಿ ಮತ್ತು ಪೂಜಾ. ಒಂದರ್ಥದಲ್ಲಿ ಇವರಿಬ್ಬರು ತ್ರಿಭುಜದಂತೆ ಒಂದು ಅಂಶದಲ್ಲಿ ಭೇಟಿ ಆಗ್ತಾರೆ.ಶ್ರುತಿಗೆ ಆದಂತೆ ಪೂಜಾ ಬದುಕಲ್ಲಿ ಆಗಬಾರದು. ಅದೇ ನಮ್ಮ ಹಾರೈಕೆ.
ಇದರಲ್ಲಿ ಶ್ರುತಿಯ ವ್ಯಕ್ತಿತ್ವ ತುಂಬಾ ಆಕರ್ಷಣೆ ಉಂಟು ಮಾಡಿದೆ. ಆಕೆಯ ಗಾಂಭೀರ್ಯ ಸಹ.. ಹೌದು ಸ್ವಾಮಿ !