ಏನೇ ನೇ ನೇ ನೇ ನೇ ನೇ ನು

Image result for red flower
ಮೈ ಚಾಯ್ಸ್ ಮೈ ಚಾಯ್ಸ್ ಅಂತ ಹೆಣ್ಣುಮಕ್ಕಳು ವೀಡಿಯೋದಲ್ಲಿ ಮಾತಾಡಿದ್ದಕ್ಕೆ ಸಿಕ್ಕಾಪಟ್ಟೆ  ಕೋಪಗೊಂಡರು . ಆದರೆ ಮೈ ಚಾಯ್ಸ್ ಅನ್ನುವ ಅನೇಕ ಸಂಗತಿಗಳು ಮಹಿಳಾ ಪ್ರಗತಿ ಪರರರಲ್ಲಿ ಮಾತ್ರವಲ್ಲ ಸಾಧಾರಣ ಮತ್ತು ಸಾಮಾನ್ಯ ಮಹಿಳೆಯರಲ್ಲೂ ಅಡಗಿರುತ್ತದೆ. ಆದರೆ ಅದನ್ನು ವ್ಯಕ್ತ ಪಡಿಸಲು ಹೋಗುವುದಿಲ್ಲ ಅಷ್ಟೇ.ಯಾರೇ ಆಗಲಿ ನಾವು ಮೊದಲು ನಮ್ಮ ಬಗ್ಗೆ ಅರಿತಾಗ ಮಾತ್ರ ಬೇರೆ ವಿಷಯದಲ್ಲಿ ಗೆಲ್ಲೋದು.

ಪಾಪ ದೀಪಿಕ ಪಡುಕೋಣೆ ಹೇಳಿದ ಮಾತುಗಳಿಗೆ  ಆ ಪರಿ ಸಿಟ್ಟಾಗಿ , ಏನೇ ನೇ ನೇ ನೇ ನೇ ನೇ ನು   ಬೈಗಳನ್ನು ಬೈದರು.  ಅವರವರ ಅಭಿಪ್ರಾಯ ಅವರವರದ್ದು. ಅದನ್ನು ವ್ಯಕ್ತ ಪಡಿಸುವ ಹಕ್ಕು ಎಲ್ಲರಿಗೂ ಇರುತ್ತದೆ..

ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಹೇಳುವ ಮಾತುಗಳು ನೀವು ಕೇಳಬೇಕು, ಐ ಮೀನ್ ಓದಬೇಕು. ಮಖ ಮಖಕ್ಕೆ  ನೀರು ಇಳಿಸಿರ್ತಾಳೆ. ಆಕೆ ಹೇಳೋದು ಅಲ್ಲರೀ ಕದ್ದು   ಮುಚ್ಚಿ ಅಂತ ಸಿನಿಮಾ ನೋಡ್ತಿರಿ.. ಸ್ವಲ್ಪ ಹಾಸ್ಯ, ಸ್ವಲ್ಪ ಪ್ರೇಮ ಜೊತೆಗೆ  ಅದೂ ಇದ್ದಾಗ ಕುಟುಂಬದ ಜೊತೆ ನೋಡೋಕೆ ಏನ್ರಿ ಸಿಗ್ಗು ಅಂತಾಳೆ ಆ ಮಹಾ ತಾಯಿ!ಸಾಮಾನ್ಯವಾಗಿ ಆ ಭಾರತ ಮೂಲದ ನಟಿ  ಮಾತಿನ ಮುಂದೆ ಮೈ ಚಾಯ್ಸ್   ಏನೇ ನೇ ನೇ ನೇ ನೇ ನೇ ನು   ಇಲ್ಲ. ;)
ನನಗೆ ಗೊತ್ತಿರುವ ಹಾಗೆ ಭಾರತ  ಎಂತಹ ಸಂಸ್ಕೃತಿ ಹಾಗೂ  ಆಚರಣೆ ಹೊಂದಿದೆ ಅಂದ್ರೆ ಪ್ರಗತಿಪರ   ಮಾತುಗಳನ್ನು ಆಡುತ್ತಿರುವ ಬಹುತೇಕ ಗೆಳೆಯರು ಅಪ್ಪ   ನೋಡಿದ  ತನ್ನ ಜಾತಿಯ ಹುಡುಗಿಯನ್ನು  ಮದುವೆ ಆಗಿ ಅಪ್ಪ ಅಮ್ಮನಿಗೆ ಬೇಜಾರು ಮಾಡಿಲ್ಲ.. ಅಂತಹ ವಿದ್ಯಾವಂತ ಪ್ರಗತಿಪರರ ಮುಂದೆ ಈ ಮೈ ಚಾಯ್ಸ್ ಏನೇ ನೇ ನೇ ನೇ ನೇ ನೇ ನು .. ಬಿಡಿ ಜಾಸ್ತಿ ಹೇಳೋಕೆ !

ತನ್ನ ದೇಹವನ್ನು ಅದರಲ್ಲೂ ಮುಂಭಾಗ  , ಅದರಲ್ಲೂ ಮೇಲ್ಭಾಗವನ್ನೇ ಹೆಚ್ಚು ಹೈ ಲೈಟ್ ಮಾಡಿದ್ದಾರೆ ಪತ್ರಿಕೆಯವರು ಎಂದು ದೀಪಿಕಾ ಒಮ್ಮೆ ಕೂಗಾಡಿದ್ದಳು. ಆದರೆ ಆಕೆಯ ಪಟಗಳನ್ನು ಮೊದಲಿನಿಂದ  ನೋಡುತ್ತಿದ್ದವರಿಗೆ ಆಕೆ ಮಾತು ಆಶ್ಚರ್ಯ ಆಗಿತ್ತು.ಅರಬೆತ್ತಲೆಯ  ಆ ಪಟಗಳ ಮುಂದೆ ಈ ಮೈ ಚಾಯ್ಸ್  ಏನೇ ನೇ ನೇ ನೇ ನೇ ನೇ ನು  ಇಲ್ಲ ಬಿಡಿ.
 ಮೊನ್ನೆ ಟೀವಿ ನೈನ್ ನಲ್ಲಿ ಹರಿ ಪ್ರಸಾದ್  ಬಹಳ ಸೀರಿಯಸ್ ಆಗಿ ಮಾತಾಡ್ತಾ  ಮೈ ಚಾಯ್ಸ್ ಬಗ್ಗೆ ಇದ್ರೂ.. ಅನೇಕ ಸಂಗತಿಗಳ ಮುಂದೆ ಇದು ಏನೇ ನೇ ನೇ ನೇ ನೇ ನೇ ನು  ಅಲ್ಲ ಬಿಡಿ ಹರಿಪ್ರಸಾದ್ :-)
ಆದರೂ ಮಾಧ್ಯಮಗಳಲ್ಲಿ ಮಾತ್ರ ಎಲ್ಲವು ಹೈ  ಲೈಟ್  ಆಗುತ್ತೆ ಏನೇ ನೇ ನೇ ನೇ ನೇ ನೇ ನು   ಅಲ್ಲದೆ ಇದ್ರೂ :-)

ಶುಕ್ರ 'ಹುಚ್ಚ'


ಸಾಮಾನ್ಯವಾಗಿ ಭವಿಷ್ಯ ಹೇಳುವವರ ಅಬ್ಬರ ಟೀವಿಗಳಲ್ಲಿ ಇದ್ದೆ ಇದೆ. ಸಾಕಷ್ಟು ಜನ ಎಷ್ಟೇ ಕಷ್ಟ ಪಟ್ಟರು ಸಹಿತ ಆ ರೀತಿಯ ಕಾರ್ಯಕ್ರಮಗಳ ಬಗ್ಗೆ ಇರುವ ಮೋಹ ಕಡಿಮೆ ಆಗಿಲ್ಲ ಜನರಿಗೆ.
ಅದರಲ್ಲೂ   ಬ್ರಹ್ಮಾಂಡದ ನರೇಂದ್ರ ಶರ್ಮ ಅವರು ಪಬ್ಲಿಕ್  ಟೀವಿಯಲ್ಲಿ ಕುಳಿತು  ಪಬ್ಲಿಕ್ ಗೆ ಬುದ್ಧಿ ಹೇಳ್ತಾ ಹೇಳ್ತಾ ಮತ್ತು ಹೇಳ್ತಾ ಸೆನ್ಸಾರ್   ಇಲ್ಲದೆ ಮಾತಾಡುತ್ತಿದ್ದಾರೆ. ಅವರ ಮಾತಿನ ಭರದಲ್ಲಿ ಸರ್ವಾಂಗವು ಅವರ ಬಾಯಿಯ ಮೂಲಕ ಹೊರ ಬಂದು ವೀಕ್ಷಕ ಪ್ರಭುಗಳ ಕಿವಿಯನ್ನು ರಾಚ್ತಾ ಇದೆ. ಬಿಡಿ ಅವರ ಬಗ್ಗೆ ಜನರಿಗೆ ಒಳ್ಳೆ ಅಭಿಪ್ರಾಯ ಇದೆ. ಮುಖ್ಯವಾಗಿ ಅವರು ಒಂದು, ಜೊತೆಗೊಂದು , ಮತ್ತೊಂದರ ಸಂಗ ಸಾಂಗತ್ಯ ಇಲ್ಲದ ಗುರು.. ಬಾಯಿ ಸ್ವಲ್ಪ ಹೊಲಸು ಅಷ್ಟೇ. ಅದನ್ನು ಕೇಳಿಸಿ ಕೊಳ್ಳದೆ ಇದ್ದರಾಯ್ತು. ಅವರು ಈಗ ಇರುವ ಸ್ಥಳದ ಬಗ್ಗೆ ಹೀಗೆ ಒಬ್ಬರು ಹೇಳ್ತಾ ಇದ್ರೂ ವಿಶೇಷವಾದ ದೇಗುಲಗಳನ್ನು ನಿರ್ಮಾಣ ಮಾಡ್ತಾ ಇದ್ದಾರೆ. ಅವರು ಇರುವ ಕಡೆ ಕಾಳಿಂಗ ಸರ್ಪ ಇದೆ. ಮುಖ್ಯವಾಗಿ ಆ ಜಾಗ ಅವರ ಆ ದೇವಸ್ಥಾನದಿಂದ  ಪ್ರಖ್ಯಾತಿ  ಹೊಂದುತ್ತದೆ ಅಂತ. ಶ್ರದ್ಧಾವಂತಿಕೆ ಇರುವ ಸ್ಥಳಗಳು ಜನರಿಗೆ ಇಷ್ಟ ಆಗುತ್ತೆ ಬಿಡಿ! ಒಳ್ಳೆಯ ಕೆಲಸದ ಬಗ್ಗೆ ಹೇಳುವುದರಲ್ಲಿ- ಮಾಡುವುದರಲ್ಲಿ ತಪ್ಪಿಲ್ಲ ಬಿಡಿ ! 
@ ಜೀ ಕನ್ನಡದಲ್ಲಿ ಸ್ಥಾನ ಕಳೆದು ಕೊಂಡರು  ತೆಲುಗು ಜೀ ಕನ್ನಡದಲ್ಲಿ ಸ್ಥಾನ ಪಡೆದ  ಜ್ಯೋತಿಷಿ ದೇವಿಶ್ರೀ. ಈಗ ಕಷ್ಟ ಪಟ್ಟು ತೆಲುಗು ಭವಿಷ್ಯ ನುಡಿತಾ ಇದ್ದಾರೆ.ಅವರ ತೆಲುಗು ಕೇಳಲು ಆಗಾಗ ತೆಲುಗು ಜೀ ಕಡೆಗೆ ಹೋಗ್ತಾ ಇರ್ತೀನಿ.. ಅರ್ಥಾತ್ ಚಾನಲ್ ಬದಲಾವಣೆ !
 ನನ್ನ ಎಫ್ಭಿ ಮಿತ್ರರಾದ ವೆಂಕಟೇಶ ಮೂರ್ತಿ ..ಜ್ಯೋತಿಷಿಗಳ ಬಗ್ಗೆ ಹೀಗೆ ಹೇಳಿದ್ದಾರೆ.. ಪ್ಲೀಸ್ .. ಪ್ಲೀಸ್ ಓದಿಕೊಳ್ಳಿ ....
 ಕನ್ನಡ ವಾಹಿನಿಗಳಲ್ಲಿ ಜ್ಯೋತಿಷಿಗಳು ಬಂದು ಮನಬಂದಂತೆ ಬಡಬಡಾಯಿಸುತ್ತಿರುವುದರಿಂದ ಸಧ್ಯಕ್ಕೆ ಶುಕ್ರ 'ಹುಚ್ಚ' ಸ್ತಾನದಲ್ಲಿ ಇದ್ದಾನೆ.. 
ಇದನ್ನು ನೀವೆ ಅರ್ಥ ಮಾಡಿಕೊಳ್ಳ ಬೇಕು.. ಯಾಕೇಂದ್ರೆ ಜ್ಯೋತಿಷಿಗಳ ಮಾತಿನ ಶೈಲಿ ಬಗ್ಗೆ ವೆಂಕಟೇಶ್ ಮೂರ್ತಿ ಹೇಳಿರೋದನ್ನು ನಾನು ಆಗೇ ಎಲಿದ್ದೀನಿ.. ಉಚ್ಚರಾಗ್ತಿರೋ.. ಗ್ರಹಗಳನ್ನು ಹುಚ್ಚರನ್ನಾಗಿ ಮಾಡ್ತಿರೋ ನಿಮಗೆ ಬಿಟ್ಟಿದ್ದು  ! 

@  ಜೀ ಹಿಂದಿ ವಾಹಿನಿಯಲ್ಲಿ ಅಮ್ಮಂದಿರ ಡಿಐಡಿ ಆರಂಭವಾಗಿದೆ. ಅದರ ಆಡಿಶನ್ ನೋಡಿದೆ. ಮುಖ್ಯವಾಗಿ ನನಗೆ ಗೋವಿಂದಾ, ಗೀತ, ಟೆರೆನ್ಸ್ ಅವರ ತೀರ್ಪು, ಅದರೊಂದಿಗೆ ಟೆರೆನ್ಸ್ ವಿಶೇಷ ಡ್ರೆಸ್ ಗಳು ನೋಡುವ ಖುಷಿ. ಸಾಕಷ್ಟು ಕಡೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಗಳಲ್ಲಿ ಮಾತ್ರ ಕಾಣುವ ಉಡುಗೆಗಳು ಟೆರೆನ್ಸ್ ಮೈಮೇಲೆ ಕಾಣುತ್ತೆ.. ವೆರಿ ಇಂಟರೆಸ್ಟಿಂಗ್  ಫೆಲ್ಲ :-)

ಅಪ್ರಸ್ತುತ

Image result for mallige flower
ಕಳೆದ ವಾರ ಸಂಪೂರ್ಣವಾಗಿ ಬಸವನಗುಡಿಯ  ಕಾರಂಜಿ ಆಂಜನೇಯ ಸ್ವಾಮಿ ದೇಗುಲದಲ್ಲಿ ರಾಮನ ದೇವಸ್ಥಾನದಲ್ಲಿ ಸೆಟಲ್ ಆಗಿ ಬಿಟ್ಟಿದ್ದೆ. ಸಕತ್ ಖುಷಿ ಕೊಟ್ಟ ಸಂಗತಿ ನನಗೆ. ಸಾಮಾನ್ಯವಾಗಿ ನಾನು ಕಂಡಂಗೆ   ರಾಮನವಮಿ ವಿಷಸ್ ಹೇಳೋಕೆ ಹೆದರ್ತಾರೆ ಮಂದಿ ! ಬೇರೆಯವರು ತಪ್ಪು ತಿಳಿದರೆ ಅಂತ ...  ಬಿಡಿ ಆ ಸಂಗತಿ. ಪ್ರತಿವರ್ಷ  ಅಲ್ಲಿರುವ ರಾಮ ಸೇವಾ ಸಮಿತಿ ವತಿಯಿಂದ ನಡೆಯುವ ಕಾರ್ಯಕ್ರಮಗಳು ವಾವ್!  ಪ್ರತಿಯೊಂದು ಕಡೆ ರಾಮನವಮಿಯಿಂದ ಕಾರ್ಯಕ್ರಮಗಳು ಆರಂಭವಾದರೆ, ಇಲ್ಲಿ ಮಾತ್ರ ಯುಗಾದಿಯಿಂದ ಆರಂಭವಾಗಿ  ರಾಮನವಮಿ ಆಗಿ ಎರಡು ದಿನಗಳ ನಂತರ ಮುಕ್ತಾಯ ಆಗುತ್ತದೆ. ಎಷ್ಟು ಚಂದದ ಕಲಾವಿದರು, ವಿದ್ವಾಂಸರು ಬರ್ತಾರೆ ! ತಮಾಷೆ ಅಂದ್ರೆ ಇದು ಒಂದಷ್ಟು ಮಂದಿಗೆ ಹೊರೆತು ಪಡಿಸಿ  ಮಾಧ್ಯಮ ಲೋಕಕ್ಕೆ  ಗೊತ್ತಿಲ್ಲ .. !  
Image result for mallige flower
ವಿವಾದಕ್ಕೆ ಕಾರಣಗಳೇ ಬೇಕಿಲ್ಲ. ಕಳೆದ ಕೆಲವು ದಿನಗಳಿಂದ ರಾಮ ವಿವಾದದ ಕೇಂದ್ರ ಬಿಂದು. ಸಮಸ್ಯೆ ಇರೋದೇ ಇಲ್ಲಿ. ಪ್ರತಿಯೊಂದು ಸಂಗತಿಯು ಅದರದ್ದೇ ಆದ ನಂಬಿಕೆ ಅಪನಂಬಿಕೆಯ ಮೇಲೆ ನಿಂತಿದೆ. ರಾಮ ದೇವರು ಹೌದೋ ಅಲ್ಲವೋ ಅದು  ಅಪ್ರಸ್ತುತ. ಆದರೆ ನನಗೆ ಇಷ್ಟವಾದ ದೇವರು. ಕಾರಣ ಇಷ್ಟೇ ರಾಮನವಮಿ ಬೇಸಿಗೆ ಕಾಲದಲ್ಲಿ ಬರುತ್ತದೆ.  ಗಿಡ ಮರಗಳು ಹಳೆಯದನ್ನು ನಿರ್ಲಿಪ್ತವಾಗಿ ಕೊಡವಿ  ಮತ್ತೆ ಹಸಿರು ಹಸಿರಾಗಿ ಜೀವನ್ಮುಖಿ ಆಗುತ್ತದೆ. ನನಗೆ ಹಸಿರು ಇಷ್ಟ.. ಬೇಸಿಗೆಯ ಬೆವರು ಬೇಸರ ಆದರೆ  ಬೇಸಿಗೆಯ ತಂಗಾಳಿ ಇಷ್ಟ, ನನಗೆ ಈ ಕಾಲದಲ್ಲಿ ವಿಶೇಷವಾಗಿ ಹೊರ ಹೊಮ್ಮುವ ಬೇವಿನ ಹೂಗಳ ಘಮ, ರಾತ್ರಿ ರಾಣಿಯ ಅಹಂ , ಪಾರಿಜಾತದ  ಘಮಲು, ಮಲ್ಲಿಗೆಯ ಸೊಬಗು ಸಕತ್ ಲೈಕು! 
 ರಾಮ ಹೀಗೆ ನನ್ನೊಳಗೆ ಬೆರೆತಿರೋದು. ಇಲ್ಲಿ ನನಗೆ ಆತ ಮಾಂಸಾಹಾರಿ ಸಸ್ಯಾಹಾರಿ ಎನ್ನುವುದುದು ಅಪ್ರಸ್ತುತ.. ಆದರೆ ರಾಮನ ಹೆಸರಲ್ಲಿ   ನಡೆಯುವ ಸಂಗೀತೋತ್ಸವ ಆಹಾ! 
ರಾಮನ ಬಗ್ಗೆ ಎದ್ದ ವಿವಾದದ ಬಗ್ಗೆ ಮಿತ್ರ ರಾಘವೇಂದ್ರ ಕಾಂಚನ್ ಅವರು ಸುವರ್ಣ ನ್ಯೂಸ್ ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಅತಿ ಇಷ್ಟ ಆಗಿದ್ದು ಅವರು ಆ ಸಂಗತಿಯನ್ನು ಕರೆದೊಯ್ದ ಬಗೆ. ಎಲ್ಲಿಯೂ ಅವರ ಮಾತಲ್ಲಿ ಅಡ್ಡ ದಾರಿ ಹಿಡಿಸುವ ಹುಂಬತನ ಇರಲಿಲ್ಲ. ರಾಮನವಮಿಯ ಪಾನಕ, ಹೆಸರು ಬೆಳೆಯಷ್ಟೇ ಆಪ್ತವಾಗಿತ್ತು. 
ನನಗೆ ನಗು ಬಂದಿದ್ದು, ಆ ಸಂಗತಿ ಹೇಗೆ ಇರಲಿ ಆ ಕಾರ್ಯಕ್ರಮದ ಅಂತ್ಯದಲ್ಲಿ ವಿವಾದ ಸೃಷ್ಟಿ ಮಾಡಿದ ವ್ಯಕ್ತಿಯ  ವೈಯಕ್ತಿಕ ಬದುಕಿನ ಕಥೆ.... ! 

@@ ಕಳೆದ  ಒಂದೆರಡು ವಾರದಿಂದ ಫೇಸ್ ಬುಕ್ ಪ್ರಪಂಚದಲ್ಲಿ ಅತಿ ಹೆಚ್ಚು ಚರ್ಚೆಗೆ ಬಂದವರು ಟೈಮ್ಸ್ ನೌವ್  ಆರ್ನಬ್  ಗೋಸ್ವಾಮಿ . ಆತನ ಮಾತು , ಶೈಲಿ ಅದು ಇದು.. ಒಂದರ್ಥದಲ್ಲಿ  ಸೋಶಿಯಲ್ ನೆಟ್ ವರ್ಕ್  ಸ್ಟೇಟಸ್ ಗಳ  ಟೀಆರ್ಪಿ  ಆರ್ನಬ್ ಆಗಿದ್ದರು. ಯಾರೇ ಆರ್ನಬ್ ಹೆಸರು  ಸಂಗತಿ ಬರೆದರೂ ಲೈಕು, ಕಮೆಂಟೂ :).ಆದರೆ  ಫೇಸ್ ಬುಕ್ ಮಿತ್ರರಲ್ಲಿ ಒಬ್ಬರಾದ ಸಂತೋಷ್ ಎನ್ನುವವರು ಹಾಕಿದ್ದ ಈ ಸ್ಟೇಟಸ್ ಸಕತ್ ಇಷ್ಟ ಆಯ್ತು ನನಗೆ. ನಿಜ ಅಂದ್ರೆ ಲೈವ್ಲಿ ಆಗಿರುವ ಎಲ್ಲ ಅಂಶಗಳು ನನಗಿಷ್ಟ..ನೀವು ಓದಿ ಕೊಳ್ಳಿ.. 

Breaking news
ICC has disqualified Australia for ball tampering in yesterday's world cup semifinal match. Bowlers starc and Johnson have been named the culprits. Videos show clearly they tampered it in between the overs.
So this makes India automatically qualify to the finals against New Zealand. We still have a chance to win the cup.
Thanks to Arnab Goswami and times now channel for submitting the video to ICC.
Now we can cheer back saying we won't give it back.
.
.
.
April fool in advance.
Image result for red flowers images
@@ ಈ ಬಾರಿ ಮತ್ತೆ ಮತ್ತೆ ನನ್ನ ಗಮನ ಸೆಳೆಯುತ್ತಿರುವ  ಕಾರ್ಯಕ್ರಮ  ಸ್ಟಾರ್ ವಾಹಿನಿಯ ಮಾಸ್ಟರ್ ಶಫ್. ಸಂಜೀವ್, ರಣವೀರ್, ವಿಕಾಸ್ ಎಲ್ಲರೂ ಖಾಸ್ ಖಾಸ್.. 
ನಿನ್ನೆ ಗಿಡಮೂಲಿಕೆ ಬಳಸಿ ಆಹಾರ ತಯಾರಿಕೆಯ   ಸ್ಪರ್ಧೆ. ಈ ಕಾರ್ಯಕ್ರಮದಲ್ಲಿ ಅತಿ ಖುಷಿ ಕೊಡುವ ಸಂಗತಿ  ಶೆಫ್ ಗಳು ಎಷ್ಟು ಸ್ಟೈಲೀಶ್   ಅಂತ :-) ಯಾಕೇಂದ್ರೆ ನಮಗೆ  ಟಿಪಿಕಲ್ ಶಫ್ ಗಳನ್ನೂ ನೋಡಿ ಅಭ್ಯಾಸ. ಆದರೆ ಅಲ್ಲಿ ಸೆಲೆಬಿ ಶಫ್ ಗಳು. 
ನನಗೆ ಅಡುಗೆ ವಿಷಯದಲ್ಲಿ ಆಸಕ್ತಿ ಇದೆ..ಆದರೆ ಅದರ ಜೊತೆ ಹೆಚ್ಚು ಇಷ್ಟ ಅಂದ್ರೆ ಬ್ಯೂಟಿಗೆ ಸಂಬಂಧಪಟ್ಟ ಸಂಗತಿಗಳ ಬಗ್ಗೆ! ಅದರಲ್ಲೂ ಹರ್ಬಲ್ ಪ್ರಾಡಕ್ಟ್ ಗಳ ಬಗ್ಗೆ. ಅದನ್ನು ಬ್ಲೆಂಟ್ ಮಾಡಿದರೆ ಯಾವ ಫಲಿತಾಂಶ ಸಿಗುತ್ತೆ ಎಂದು ಯೋಚನೆ ಮಾಡ್ತಾ ಇರ್ತೀನಿ.. ನಿಜ ಹೇಳ ಬೇಕು ಅಂದ್ರೆ ತುಂಬಾ ಸೀರಿಯಸ್ ವಿಷಯದ ಬಗ್ಗೆ ಹೆಚ್ಚು ಯೋಚಿಸಲ್ಲ ನಾನು ಯಾಕೆ ಅಂದ್ರೆ ಅತಿಯಾದ ಯೋಚನೆ ನನ್ನ ಸ್ಕಿನ್ ಮೇಲೆ ಪ್ರಭಾವ ಬೀರುತ್ತೆ :-)