ನಾರದ..

Displaying IMG-20151126-WA0020.jpg
PC: Yagnapala  V. Ghatt


ಬಿಗ್ ಬಾಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದರೆ ಅನೇಕ ಅಂಶಗಳು ಗೋಚರವಾಗುತ್ತಾ ಸಾಗುತ್ತದೆ. ಮನುಷ್ಯನ ಸಂಬಂಧಗಳು ಎಷ್ಟು ನಿಗೂಢ ಮತ್ತು, ಅದೆಷ್ಟು  ಜಾಳು ಜಾಳು ಅಂತ ಸಹಿತ ಅನ್ನಿಸುತ್ತದೆ. ಆದರೂ ಈ ನಾಗರಿಕ ಸಮಾಜದಲ್ಲಿ ಒಂದು ಬಗೆಯ ಮುಖವಾಡ  ಧರಿಸಿ ಬದುಕುವ ಪ್ರಯತ್ನ ಮಾಡುತ್ತಲೇ ಸಾಗುತ್ತಾರೆ  ಮಂದಿ .


Displaying IMG-20151126-WA0020.jpg
ನನಗೆ ಎಫ್ ಬಿ  ಸೇರಿದಂತೆ ಸಾಮಾಜಿಕ ಜಾಲತಾಣಗಳು, ನನ್ನ ಬ್ಲಾಗ್  ನಿಂದ ಅನೇಕ ಫ್ರೆಂಡ್ಸ್ ಆಗಿದ್ದಾರೆ. ಒಂದಷ್ಟು ಜನರು ಬೈ  ಅಂತ ದೂರ ಹೋಗಿದ್ದಾರೆ, ಒಂದಷ್ಟು ಮಂದಿ ಆಪ್ತರಾಗಿ ಹಾಗೆ ಉಳಿ ದಿದ್ದಾರೆ. ಕೆಲವರು ನನ್ನ ಜೊತೆ  ಮಾತುಕತೆಯನ್ನು ಆಡಿ  ತಮ್ಮ ವಿಶ್ವಾಸ  ತೋರಿದರೆ, ಒಂದಷ್ಟು ಜನ ಮನದಲ್ಲಿ ಗೌರವ ಉಳಿಸಿಕೊಂಡು ತಮ್ಮ ರಂಗದಲ್ಲಿ ಬೆಳೆಯುವ ವಿಷಯದಲ್ಲಿ ಮಗ್ನರಾಗಿದ್ದಾರೆ. ಗೌರವ ಉಳಿಸಿಕೊಂಡವರ ಬಗ್ಗೆ ನನಗೆ ಸ್ಪಷ್ಟವಾದ ನಂಬಿಕೆ ಇದೆ . ಯಾಕೆಂದ್ರೆ ಅವರ ಸೋಲಿನ ಸಮಯದಿಂದ  ಪ್ರತಿ ಗೆಲುವಿನ ಹೆಜ್ಜೆ ಕಂಡಿದ್ದೇನೆ . ಅವರಲ್ಲಿ ಬಿಗ್ ಬಾಸ್ ನಲ್ಲಿ ವಾಯ್ಸ್ ಓ ವರ್ ಮಾಡುತ್ತಿರುವ  ಪ್ರದೀಪ್  ಬಡಕ್ಕಿಲ , ಶ್ರೀ ಮುರಳಿ ಸಿನಿಮಾ ರಥಾವರದ  ಎಡಿಟರ್ ಶಿವಶಂಕರ್  ಗೌಡ.
ಆರಂಭಿಕ ಹಂತದಲ್ಲಿ ಪ್ರದೀಪ್ ಧ್ವನಿ ಮೂಲಕ ಜನರ ಮನಕ್ಕೆ ತಲುಪಿದ್ದರೂ ಸಹಿತ ಅದು ಅವರೇ ಎಂದು ಜನಕ್ಕೆ ಗೊತ್ತಿರಲಿಲ್ಲ. ಆದರೆ ಸಾಧನೆ - ಪ್ರಯತ್ನ, ಅದೃಷ್ಟ ಎಲ್ಲವೂ ಈಗ ಈ ಟೀವಿ ಕನ್ನಡದ  ಎಲ್ಲ ಕಾರ್ಯಕ್ರಮಗಳ ಪ್ರೊಮೊ ಗಳಿಗೆ, ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಿಗೆ ಧ್ವನಿ  ಕೊಡುವ ಒಂದು ಅವಕಾಶ ದೊರೆತು.. ಅವರು ಎದುರು ಸಿಕ್ಕಾಗ ಜನಕ್ಕೆ ತಿಳಿದೇ ಇದ್ರೂ ಅವರ ಧ್ವನಿ ಕೇಳಿದಾಗ ಪ್ರದೀಪ್ ಅನ್ನುವಷ್ಟು ಬೆಳೆ ದಿದ್ದಾರೆ. (ಸಿನಿಮಾ - ಸೀರಿಯಲ್ಲು ಎಲ್ಲಾ ಕಡೆ ಅಭಿನಯ ಚಾತುರ್ಯ ತೋರಿಸಿದ್ದಾರೆ ಪ್ರದೀಪ್ )
ಶಿವು ಅಂತಾನೆ ಕರೆಯೋದು ಇವನನ್ನು .  ರಥಾವರ ಆತನ ಬದುಕಲ್ಲಿ ತಿರುವು ನೀಡಿದೆ . ಚಿತ್ರರಂಗದ ಪ್ರಸಿದ್ಧ  ಸಂಕಲಕಾರರಲ್ಲಿ ಒಬ್ಬರಾದ ಶ್ರೀಕಾಂತ್ ಅವರ ತಮ್ಮ ನಮ್ಮ ಶಿವು. ಒಂದರ್ಥದಲ್ಲಿ ಆತ  ನನಗೆ  ಪ್ರೀತಿಯ ತಮ್ಮ. ನಮ್ಮದು ಜಾತಿ, ಧರ್ಮ, ನೆಂಟಸ್ತಿಕೆಯ ಬಾಂಧವ್ಯವಲ್ಲ, ಆದರೆ ಇಬ್ಬರದ್ದು  ಆಪ್ತತೆ, ಮನದ ಬಾಂಧವ್ಯ . ತುಂಬಾ ವರ್ಷಗಳಿಂದ ನಮ್ಮ ಸ್ನೇಹ ಇದೆ. ಈ ತಮ್ಮ   ಶಿವು  ಈಗ ರಥಾವರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾನೆ . ಅದು ಇದೇ  ತಿಂಗಳ 4 ನೇ  ತಾರೀಖು ಜನರ ಮುಂದೆ ಬರ್ತಾ  ಇದೆ. ಅವನ ಕೆಲಸಕ್ಕೆ ಇಷ್ಟಪಟ್ಟ ಕ್ರಿಯೇಟಿವ್ ನಿರ್ದೇಶಕರು ಕೆಲಸ ಮಾಡಲು ಅವಕಾಶ ನೀಡಿದ್ದಾರೆ ತಮ್ಮ ಮುಂದಿನ ಚಿತ್ರಗಳಲ್ಲಿ ಅದಕ್ಕಿಂತ ಸಂತೋಷದ ಸಂಗತಿ ಏನಿದೆ ? ಒಳ್ಳೆದಾಗಲಿ .. ಹೆಚ್ಚು ಹೆಚ್ಚು ಬೆಳೆಯಲಿ  ನಮ್ ಶಿವು.

Image result for doubt pics
ಬಿಗ್ ಬಿಗ್ ಬಿಗ್ ಬಾಸ್ ಹೌದು ಸ್ವಾಮಿ ...ಹೀಗೆ ನಿಮಗೊಂದು ಸುಂದರವಾದ ಹೆಸರು ಪ್ರಶಸ್ತಿ ಸಿಗುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ ಕಿಚ್ಚ.. ನಮ್ ಆನಂದ್ ಹಾಕಿದ ಜನಿವಾರವ  ಹಾಡಿನ ಮೂಲಕ ನಿಮ್ಮನ್ನು ನಾರದನನ್ನಾಗಿ ಮಾಡಿಬಿಟ್ಟರೆ ;-)
 ನಮ್ಮನ್ನು  ಕಾಡುವ ಕಟ್ಟಕಡೆಯ ಪ್ರಶ್ನೆ ಹೀಗೂ ಉಂಟೆ  ಉಂಟೇ  ...
ಸ್ನೇಹ ಪ್ರೀತಿ, ಬಾಂಧವ್ಯ, ನಂಬಿಕೆ ಎಲ್ಲದರ  ಮಧ್ಯೆ  ಒಂದು ಅನುಮಾನದ ಸಣ್ಣ  ಗೆರೆ ಇರುತ್ತೆ.  . ಅದು ಅಗೋಚರವಾಗಿರುತ್ತದೆ. ಆ ಗೆರೆ ದಾಟಿದರೆ ನೋವು, ಅಪಮಾನ, ಎಲ್ಲವು ಎದುರಾಗುತ್ತದೆ. ಪೂಜಾ ವಿಷಯದಲ್ಲಿ ಹೀಗಾಗಿದ್ದು  ನಮಗೆ ನಿರೀಕ್ಷಿತ ಆಗಿದ್ದರು ಸಹ ಪಾಪ ಹೀಗಾಗ ಬಾರದಿತ್ತು ಅಂತ ಅನ್ನಿಸಿದ್ದು ಸತ್ಯ. ಅಯ್ಯಪ್ಪ ಎಂತಹ ಆಟಗಾರ!. ಲಾಲಿಪಪ್ ರೌಂಡ್ ನಲ್ಲಿ ಮುತ್ತು ಕೊಟ್ಟವರ ಚಿತ್ರಗಳನ್ನು ಮುಂದೆ ಇಟ್ಟರೆ ಮತ್ತೆ ಆಕೆ ಏನ್ ಮಾಡ್ತಾರೆ ಅನ್ನುವುದು ವೀಕ್ಷಕರಿಗೆ ಗೊತ್ತೇ ಇದೆ..
ಆದರೆ  ಬ್ರದರ್ ಮತ್ತು ಸಿಸ್ಟರ್ ಬಗ್ಗೆ ನಾವು ಮಾತ್ರವಲ್ಲ ಅನೇಕ ಸ್ನೇಹಿತರು ತಮ್ಮ ಅಭಿಪ್ರಾಯ ಸಹ ಪ್ರಶ್ನಾರ್ಥಕವಾಗಿದೆ ಸುದೀಪ್ ..
ನಾನು ಹತ್ತು ವರ್ಷದಿಂದ ಮಾಧ್ಯಮದಲ್ಲಿ ಇದ್ದೇನೆ ನನಗೆ ಗೊತ್ತು ಬಾಯ್ ಬಿಡಿಸೋದು.. ಆದರೆ ನಾನು ಹಾಗೆ ಮಾಡಲಿಲ್ಲ  ಎನ್ನುವ ಮಾತು ತಮ್ಮ ಜೊತೆ ಮಾತಾಡಿದ  ಕಾಲರ್ ಬಗ್ಗೆ ಮಾತಾಡುತ್ತಾ  ತಮ್ಮ ಜೊತೆಗಾರರ ಜೊತೆ ಹೇಳಿದ್ರು ಬ್ರದರ್..! ನಿಜ ಹೇಳಿ ಜನರ ಮುಂದೆ ಮಾಧ್ಯಮದ ಶಕ್ತಿ ಎಷ್ಟಿದೆ ? ನಮಗೆ ಒಂದು ಸಂಸ್ಥೆಯಿಂದ ಮಾತ್ರ  ಬೆಲೆ ಸಿಕ್ಕೋದು ಅಲ್ವೇ !!

ಆ ವಿಷ್ಯದ ಚರ್ಚೆ ಯಾಕೆ.. ಸುದೀಪ್   ? ನನ್ನ ಪ್ರಿಯ ಮಿತ್ರ -ಓದುಗ  ರಂಜಿತ್ ಅಡಿಗ ಅಕಸ್ಮಾತ್ .. ಹೀಗೆ ಆದ್ರೆ ಎನ್ನುವುದನ್ನು ಬ್ರದರ್ ಬಗ್ಗೆ  ಬರೆದಿದ್ದಾರೆ . ಅದನ್ನು  ರಂಜಿತ್ ಮಾಣಿ  ಅನುಮತಿ ಮೇರೆಗೆ ಇಲ್ಲಿ ಅಂಟಿಸಿದ್ದೇನೆ ...
 ರೆಹಮಾನ್ ಬಿಗ್ ಬಾಸ್ ನಿಂದ ಹೊರಬಂದಾಗ.
ಸುದೀಪ್: ನಿಮ್ಮ ಪ್ರಕಾರ ಬಿಗ್ ಬಾಸ್ ಮನೆ ಒಳಗೆ ಇರೋರಲ್ಲಿ ಹೆಚ್ಚು ಪ್ರಾಮಾಣಿಕ ಯಾರು?
ರೆಹಮಾನ್: ನೇಹ. ಯಾಕಂದ್ರೆ ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ ಅವಳು ಪ್ರಾಮಾಣಿಕ ಅಂತ ಹೇಳೋಕೆ ಇಷ್ಟ ಪಡ್ತೀನಿ ಸುದೀಪ್ ಸರ್.

ಸುದೀಪ್: ನಿಮ್ಮ ಪ್ರಕಾರ ಬಿಗ್ ಬಾಸ್ ಮನೆ ಒಳಗೆ ಇರೋರಲ್ಲಿ ಕ್ಲೀನ್ ಇರೋರು ಯಾರು?
ರೆಹಮಾನ್: ನೇಹ. ಯಾಕಂದ್ರೆ ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ ಅಲ್ಲದೇ ನಾನು ನೋಡಿರೋ ಹಾಗೆ ಅವಳ ಮನಸ್ಸು ಮತ್ತೆ ಅವಳು ಇರೋದು ತುಂಬಾನೆ ಕ್ಲೀನ್ ಅಂತ ಹೇಳೋಕೆ ಇಷ್ಟ ಪಡ್ತೀನಿ ಸುದೀಪ್ ಸರ್.
ಸುದೀಪ್: ಬಿಗ್ ಬಾಸ್ ಮನೆ ಹೇಗನ್ನಿಸ್ತು?
ರೆಹಮಾನ್: ಬಿಗ್ ಬಾಸ್ ಬಗ್ಗೆ ಅಷ್ಟೋಂದ್ ಗೊತ್ತಿಲ್ಲ. ಆದ್ರೆ ನೇಹ ತುಂಬಾ ಒಳ್ಳೇ ಹುಡುಗಿ. ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ...
ಸುದೀಪ್: ಬಿಗ್ ಬಾಸ್ ಮನೆ ಒಳಗೆ ಊಟ ತಿಂಡಿ ಹೇಗಿತ್ತು?
ರೆಹಮಾನ್: ನೇಹ. ಯಾಕಂದ್ರೆ ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ ನಾವಿಬ್ರೂ ಊಟ ತಿಂಡಿ ನ ಶೇರ್ ಮಾಡ್ಕೋತಿದ್ವಿ.
ಸುದೀಪ್: ರೆಹಮಾನ್ ನನ್ನ ಪ್ರಶ್ನೆ ಅದಲ್ಲ.. ಹೋಗ್ಲಿ ಬಿಡಿ
.




ಕನ್ನಡ ನಾಡಲಿ

PC: Prakash Hegde

ಸಾಕಷ್ಟು ಸರ್ತಿ ಟೀವಿ ಕಾರ್ಯಕ್ರಮಗಳ ಬಗ್ಗೆ ಬರಿಯ ಬೇಕು ಎಂದುಕೊಂಡರೂ ಅದು ಸಾಧ್ಯವಾಗುವುದೇ ಇಲ್ಲ. ಕೆಲವು ಬಾರಿ ಟೀವಿ ಕಾರ್ಯಕ್ರಮಗಳು ಅಂದರೆ ವಿಶೇಷವಾದ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಿರುವುದಿಲ್ಲ. ಅಂತಹ ಸಮಯದಲ್ಲಿ ಏನನ್ನು ಬರೆಯಲಾಗದೆ ಹಾಗೆ ಸುಮ್ಮನೆ ಇದ್ದು ಬಿಡುತ್ತೇನೆ. ಅದಷ್ಟೇ ಉತ್ತರ ಸರಿಯಾಗಿರುವುದು ಅಂತ ಹೇಳೋಕೆ ಇಷ್ಟ ಪಡ್ತೀನಿ :)
ಆದರೆ ಕೆಲವೊಂದು ಕಾರ್ಯಕ್ರಮಗಳು ನಾಲ್ಕೈದು   ದಿನಗಳ ಹಿಂದೆ ವೀಕ್ಷಿಸಿದ್ದರು ಸಹಿತ, ಅಥವಾ ಒಂದು ವಾರದ ಹಿಂದೆ ನೋಡಿದ್ದರು ಅದರ ಬಗ್ಗೆ ಹೇಳಲೇ ಬೇಕು ಅನ್ನುವ ತುಡಿತ ಇರುತ್ತದೆ.. ಅದರಲ್ಲಿ ಒಂದೆರಡು ಅಂದ್ರೆ ಟೀವಿ ನೈನ್ ವಾಹಿನಿಗೆ ಸಂಬಂಧ ಪಟ್ಟಿದ್ದು. ಕಳೆದ ಶನಿವಾರ  ಈ ವಾಹಿನಿಯಲ್ಲಿ ನಿರೂಪಕ ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ವಿಷಯ ತೆಗೆದುಕೊಂಡಿದ್ದರು. ಪ್ರಸ್ತುತ  ಭವಿಷ್ಯದ ಹಾಗೂ ಭೂತಕಾಲದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟಗಳಲ್ಲಿ ರಸ್ತೆಗುಂಡಿ, ತೊಂದರೆ, ಸಮಸ್ಯೆ ಇತ್ಯಾದಿ ಇತ್ಯಾದಿ.  ಆದರೆ ಪರಿಸ್ಥಿತಿಯಲ್ಲಿ ಬದಲಾವಣೆ ಊಹುಂ ಏನೂ ಆಗಿಲ್ಲ.
ಮುಖ್ಯವಾಗಿ ಇಂತಹ ವಿಷಯ ಚರ್ಚೆ ಮಾತ್ರ ಆಗದೆ ಸರ್ಕಾರದ ಗಮನಕ್ಕೆ ತರುವಂತೆ ಪ್ರಯತ್ನ ಮಾಡ ಬೇಕು.. ಇಲ್ಲದೆ ಹೋದರೆ ಅದು ಬರಿ ಚರ್ಚೆ ಆಗಿ ಉಳಿದು ಬಿಡುತ್ತದೆ..
Image result for blue flowers
@ ಇದೇ ವಾಹಿನಿಯಲ್ಲಿ ಭಾನುವಾರ ಮತ್ತೊಂದು ಕಾರ್ಯಕ್ರಮ ನೋಡಿದೆ.. ಊಲಾಲ ಅಂತ ಅದರ ಶೀರ್ಷಿಕೆ ಇತ್ತು. ತುಂಬಾ ಇಷ್ಟವಾದ ಕಾರ್ಯಕ್ರಮಗಳಲ್ಲಿ ಅದು ಒಂದು. ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಮಾತ್ರ ಕನ್ನಡ ಮಾತನಾಡುವ ಇಲ್ಲವೇ ಚಂದದ  ಕನ್ನಡದ ಹೆಣ್ಣು ಮಕ್ಕಳು ಕಂಡಾಗ  ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ  ಎಂದು ಉಲಿಯುವವವರು ಬೇಕಾದಷ್ಟು ಮಂದಿ ಇದ್ದಾರೆ..
ಆ ವಿಷ್ಯ ಬಿಡಿ ಈ ಊಲಾಲ ಕಾರ್ಯಕ್ರಮದ ವಿಶೇಷ ಅಂದ್ರೆ ಕ್ಯಾಮರೋನ್  ಗೆ ಸೇರಿದ ವ್ಯಕ್ತಿ  ಕೇಮ್ ಬ್ರೇವ್ ಕನ್ನಡ ಹಾಡು ಹಾಡುತ್ತಾ ರಂಜಿಸುತ್ತಿದ್ದರು. ಅವರು ವೈ ಡಿಸ್ ಕೊಲವರಿ ಡಿ ಎಂದು ಹಾಡಿ ವೀಕ್ಷಕರ ಖುಷಿ ಹೆಚ್ಚಿಸುತ್ತಿದ್ದರು. ಅದಾದ ಬಳಿಕ ನೈಜೀರಿಯಾದ ವ್ಯಕ್ತಿ  -- ಹುಟ್ಟಿದರೆ ಕನ್ನಡ ನಾಡಲಿ ಹುಟ್ಟ ಬೇಕು ಹಾಡು ಹಾಡಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಲು ಬಂದಿದ್ದ ಈ ವಿದೇಶಿ ವಿದ್ಯಾರ್ಥಿಗಳು ಹಾಡಿದ  ಅಪ್ಪಟ ಶುದ್ಧ ಕನ್ನಡದ ಹಾಡನ್ನು ಕೇಳಿ  ಆಹಾ ಖುಷಿ ಆಯ್ತು. ಯಾಕೆಂದ್ರೆ ಸಂಪೂರ್ಣವಾಗಿ  ಭಿನ್ನವಾದ ಭಾಷೆಯ ಹಾಡನ್ನು, ಅದರಲ್ಲೂ ಕಸ್ತೂರಿ ಕನ್ನಡದ ಹಾಡು  ಸ್ಪಷ್ಟವಾಗಿ ಹಾಡಿದರು ಅಂದ್ರೆ  ನನಗಂತೂ ಸಕತ್ ಇಷ್ಟ ಆಯ್ತು.. ನಮ್ ಕೃಷ್ಣೆ  ಗೌಡ್ರಂತೆ ಹೇಳಿಕೊಟ್ಟಿದ್ದು ಕನ್ನಡವಾ.. ನಿಮಗೊಂದು  ನಮುಸ್ಕಾರ ಸರ್ .. ಮತ್ತೆ ಪ್ರಸಾರ ಆದ್ರೆ ನೋಡಿ ಚೆನ್ನಾಗಿದೆ ಕಾರ್ಯಕ್ರಮ..