ಶೀರ್ಷಿಕೆ


ಟಿ .ಎನ್.ಸೀತಾರಾಮ್  ಅವರ  ಬರೆದಾಗ   ಅವರ   ಬಗ್ಗೆ ಅನೇಕ ಬಗೆಯ ಅಭಿಪ್ರಾಯಗಳು ಹೊರ ಹೊಮ್ಮಿತು. ಏನೇ ಹೇಳಿ ಅವರ ತಾಕತ್ತು, ಆ ಕೆಲಸದ ಪರಿ ನನಗೆ ಬಹಳ ಇಷ್ಟ..
ಸಾಮಾನ್ಯವಾಗಿ ಹೆಚ್ಚು ಜನರು ವೀಕ್ಷಿಸುವ ಕಾರ್ಯಕ್ರಮಗಳಲ್ಲಿ ಕ್ರೈಮ್ ಸಹ ಒಂದಾಗಿದೆ. ಕೆಲವೊಂದು ಅದೆಷ್ಟರಮಟ್ಟಿಗೆ ಭೀಭತ್ಸವಾಗಿರುತ್ತದೆ ವಾಗಿರುತ್ತೆ ಅಂದ್ರೆ  ಟೀಆರ್ಪಿ ಗಾಗಿ ಏನೆಲ್ಲಾ ಮಾಡ್ತಾರೆ . ಹಾಗಂತ ಹೆಚ್ಚು ಅದರ ಬಗ್ಗೆ ಹೇಳೋಕೆ ಆಗಲ್ಲ. ಯಾಕೆಂದರೆ ಬದುಕು ಮುಖ್ಯ! ಜನಪ್ರಿಯತೆ ಇದ್ದರೆ ಒಂದು ಚಾನೆಲ್ ಉಳಿಯುತ್ತೆ...ಹೀಗೆ ಅನೇಕ ಲಿಂಕ್ ಗಳಿವೆ.
ಆದರೂ ಈ ಕ್ರೈಮ್ ಕಾರ್ಯಕ್ರಮವನ್ನು ವೈಭವೀ ಕರಿಸುವ ಕ್ರಿಯೆ ಇದೆಯಲ್ಲ ಅದರಷ್ಟು ಕಿರಿಕಿರಿ ಮತ್ತೊಂದಿಲ್ಲ. ನೋಡ ಬೇಡ ಅನ್ನ ಬಹುದು ನೀವು, ನಿಜ ನಾನು ನೋಡುವ ಅಗತ್ಯ ಇಲ್ಲ , ವಸ್ತು ಸ್ಥಿತಿ ಬಗ್ಗೆ ಹೇಳಿದ್ದು.
ಇತ್ತಿಚೆಗೆ ಫೇಸ್ಬುಕ್ ಪ್ರೀತಿಯಿಂದ ಸತ್ತ ವೃದ್ಧನ ಮತ್ತು ಆತನ ಕುಟುಂಬ ಮತ್ತು ಆ ಹುಡುಗಿ ಕಾರ್ಯಕ್ರಮ ಅದೆಷ್ಟು ವೈಭವೀಕರಿಸಿದ್ರು ಅಂದ್ರೆ, ಎಲ್ಲವೂ ತಪ್ಪು ಅನ್ನಿಸುವಂತೆ ಇತ್ತು. ನಿಜ ಹೇಳ ಬೇಕು ಅಂತ ಅಂದ್ರೆ  ವಾರ್ತಾವಾಹಿನಿಗಳು ಪ್ರಸಾರ ಮಾಡುವ ಅನೇಕ ವರದಿಗಳು ವೀಕ್ಷಿಸುವಾಗ, ಕೊಡುವ ಶೀರ್ಷಿಕೆಗಳು ರಾಮ ರಾಮ ! 

No comments: