ಮೊದಲು ನಾನು ಸುವರ್ಣ ( ಈಗ ಸ್ಟಾರ್ ಸುವರ್ಣ) ಚಾನೆಲ್ ನ್ನು ಅತಿ ಹೆಚ್ಚು ವೀಕ್ಷಿಸುತ್ತಾ ಇದ್ದೆ. ಕಾಲ ಬದಲಾಯಿತು, ಹೆಚ್ಚು ಹೆಚ್ಚು ವಾಹಿನಿಗಳು ಬಂತು, ನನ್ನ ಗಮನವು ಸಹಿತ ಬೇರೆ ಕಡೆ ಕೇಂದ್ರೀಕೃತವಾಯಿತು :-). ಹಾಗೆಂದು ಈ ವಾಹಿನಿಯನ್ನು ನಿರ್ಲಕ್ಷ ಮಾಡಿಲ್ಲ, ನನ್ನ ಗಮನ ಸೆಳೆದ ಅನೇಕ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದೇನೆ. ಆದರೆ ಇತ್ತೀಚೆಗೆ ಹೆಚ್ಚು ಇಷ್ಟ ಆಗಿದ್ದು ಭರ್ಜರಿ ಕಾಮಿಡಿ ಎನ್ನುವ ಹಾಸ್ಯಭರಿತ ರಿಯಾಲಿಟಿ ಷೋ. ಮಿತ್ರ, ಶಾಲಿನಿ ಸೇರಿದಂತೆ ಅನೇಕಾನೇಕ ಪ್ರತಿಭೆಗಳು ವೀಕ್ಷಕರ ಮನರಂಜಿಸುತ್ತಿದ್ದಾರೆ. ತೀರ್ಪುಗಾರಾಗಿ ಬುದ್ಧಿವಂತ ಮಠಾಧಿಪತಿ ಗುರು :-), ಹೆಸರಿಗೆ ತಕ್ಕಂತೆ ದೊಡ್ಡಣ್ಣ ಮತ್ತು ರಾಗಿಣಿ ದ್ವಿವೇದಿ. ಆರೋಗ್ಯಕರ ಹಾಸ್ಯ ಇದರ ಮುಖ್ಯ ಅಂಶ. ಮಿತ್ರ ಅವರ ಮಾತಿನ ಶೈಲಿ , ಪಂಚಿಂಗ್ ಡೈಲಾಗ್ ಗಳು ಇದರ ಅತಿ ಮುಖ್ಯ ಆಕರ್ಷಣೆ. ವೀಕೆಂಡ್ ಉಲ್ಲಾಸ ಹೆಚ್ಚಿಸುತ್ತದೆ ಈ ಕಾರ್ಯಕ್ರಮ. ಅಷ್ಟೇ ಅಲ್ಲದೆ ಒಮ್ಮೆ ನೋಡಿದ ಬಳಿಕ ಮತ್ತೊಮ್ಮೆ ನೋಡುವ ಆಸಕ್ತಿಯನ್ನು ಸಹಿತ ಉಳಿಸಿಕೊಳ್ಳುವಲ್ಲಿ ಇದು ಸಫಲವಾಗಿದೆ.
ಭರ್ಜರಿ
ಮೊದಲು ನಾನು ಸುವರ್ಣ ( ಈಗ ಸ್ಟಾರ್ ಸುವರ್ಣ) ಚಾನೆಲ್ ನ್ನು ಅತಿ ಹೆಚ್ಚು ವೀಕ್ಷಿಸುತ್ತಾ ಇದ್ದೆ. ಕಾಲ ಬದಲಾಯಿತು, ಹೆಚ್ಚು ಹೆಚ್ಚು ವಾಹಿನಿಗಳು ಬಂತು, ನನ್ನ ಗಮನವು ಸಹಿತ ಬೇರೆ ಕಡೆ ಕೇಂದ್ರೀಕೃತವಾಯಿತು :-). ಹಾಗೆಂದು ಈ ವಾಹಿನಿಯನ್ನು ನಿರ್ಲಕ್ಷ ಮಾಡಿಲ್ಲ, ನನ್ನ ಗಮನ ಸೆಳೆದ ಅನೇಕ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದೇನೆ. ಆದರೆ ಇತ್ತೀಚೆಗೆ ಹೆಚ್ಚು ಇಷ್ಟ ಆಗಿದ್ದು ಭರ್ಜರಿ ಕಾಮಿಡಿ ಎನ್ನುವ ಹಾಸ್ಯಭರಿತ ರಿಯಾಲಿಟಿ ಷೋ. ಮಿತ್ರ, ಶಾಲಿನಿ ಸೇರಿದಂತೆ ಅನೇಕಾನೇಕ ಪ್ರತಿಭೆಗಳು ವೀಕ್ಷಕರ ಮನರಂಜಿಸುತ್ತಿದ್ದಾರೆ. ತೀರ್ಪುಗಾರಾಗಿ ಬುದ್ಧಿವಂತ ಮಠಾಧಿಪತಿ ಗುರು :-), ಹೆಸರಿಗೆ ತಕ್ಕಂತೆ ದೊಡ್ಡಣ್ಣ ಮತ್ತು ರಾಗಿಣಿ ದ್ವಿವೇದಿ. ಆರೋಗ್ಯಕರ ಹಾಸ್ಯ ಇದರ ಮುಖ್ಯ ಅಂಶ. ಮಿತ್ರ ಅವರ ಮಾತಿನ ಶೈಲಿ , ಪಂಚಿಂಗ್ ಡೈಲಾಗ್ ಗಳು ಇದರ ಅತಿ ಮುಖ್ಯ ಆಕರ್ಷಣೆ. ವೀಕೆಂಡ್ ಉಲ್ಲಾಸ ಹೆಚ್ಚಿಸುತ್ತದೆ ಈ ಕಾರ್ಯಕ್ರಮ. ಅಷ್ಟೇ ಅಲ್ಲದೆ ಒಮ್ಮೆ ನೋಡಿದ ಬಳಿಕ ಮತ್ತೊಮ್ಮೆ ನೋಡುವ ಆಸಕ್ತಿಯನ್ನು ಸಹಿತ ಉಳಿಸಿಕೊಳ್ಳುವಲ್ಲಿ ಇದು ಸಫಲವಾಗಿದೆ.
Subscribe to:
Post Comments (Atom)
-
ಈಗಷ್ಟೇ ಒಂದು ತಮಾಷೆ ಪ್ರಶ್ನೆ ಓದಿದೆ ತೆಲುಗು ಗ್ರೂಪ್ ಒಂದರಲ್ಲಿ , ಹೀಗೆ ಒಂದು ಸರ್ತಿ ಒಬ್ಬ ಹುಡುಗನ ಹೆಸರು ಕೇಳಿದಾಗ ಅವನು 6ಜೂನ್ ಎಂದು ಉತ್ರ ಕೊಟ್ಟನಂತೆ , ಹಾಗಾ...
-
ಗೆದ್ದವರ ಬದುಕನ್ನು ಕೂಲಂಕಷವಾಗಿ ನೋಡಿದಾಗ ಬಹುತೇಕರು ಅಪಮಾನದ ಮೂಸೆಯಲ್ಲಿ ಕರಗಿ ಸುಂದರ ಆಕೃತಿ ಪಡೆದಿರುತ್ತಾರೆ. ವಿಷಾದ , ವಿಡಂಬನೆ, ತಮಾಷೆ ಅಂದ್ರೆ ಆ ರೀತಿ ಅಪಮಾನ...
-
ಸ ರಿ ಗ ಮ ಪ - ಸೀಜನ್ ನಲ್ಲಿ ಹೊಸಹೊಸ ಅಂಶಗಳು ಮನ ಸೆಳೆಯುತ್ತಿವೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ಹೇಳುತ್ತಿದ್ದ ರಾಕ್ಷಸ ಪ್ರತಿಭೆಗಳು ಎನ್ನುವ ಪದ ಇಲ್ಲಿ ಸೂಕ್ತ. ...
No comments:
Post a Comment