ವಾಸಂತಿ ನಲಿದಾಗ

 Open photo

ಸರಳ ಸದಭಿರುಚಿಯ ಹಾಸ್ಯಭರಿತ ವಾಸಂತಿ ನಲಿದಾಗ  ಚಿತ್ರವನ್ನು ನಿರ್ದೇಶನ ಮಾಡಿರುವವರು ನನ್ನ ಎಫ್ಬಿ ಮಿತ್ರ ರವೀಂದ್ರ ವೆಂಶಿ..ಆಗಾಗಲೇ ಅವರು  ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ . ಜೊತೆಗೆ ಉತ್ತಮ  ಸಿನಿ ವಿಮರ್ಶಕ.ಹೊಸ ಹುಡುಗ ರೋಹಿತ್ ಶ್ರೀಧರ್  ಮಾತ್ರವಲ್ಲದೆ ಮಾಗಿದ ಕಲಾವಿದರಾದ   ಸುಧಾರಾಣಿ  ಸಾಯಿ ಕುಮಾರ್ ಸಾಧು ಕೋಕಿಲ , ಸಂಭಾಷಣಕಾರ್ತಿ   ಶ್ರೀದೇವಿ ಅವರ ಶ್ರಮದ ಫಲ ಈಗ ಉತ್ತಮ ಫಲಿತಾಂಶ ನೀಡಿದೆ. ಸಾಮಾನ್ಯವಾಗಿ ನಿರ್ಮಾಪಕರ    ಮಕ್ಕಳು ಹೀರೊ ಆಗುವುದು  ವಿಶೇಷವಲ್ಲ ಆದರೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿಮಾಡುವಂತಹ ಡೆಡಿಕೇಷನ್ ಕೆಲವರಲ್ಲಿ ಕಂಡು ಬರುತ್ತದೆ . ಇದಕ್ಕೆ ರೋಹಿತ್ ಹೊರತಲ್ಲ    (ನಾವು ಬೇರೆಬೇರೆ ಭಾಷೆಯ  ನಿರ್ಮಾಪಕರ ಮಕ್ಕಳ ಸಿನಿಮಾಗಳನ್ನು ಬಹಳಷ್ಟು ನೋಡಿದ್ದೇವೆ . ಅವು ಬಂದಂಗೆ  ಹೋಗಿದ್ದು ಇದೆ .. ಯಶಸ್ಸು  ಉಹುಂ  ) . ನಾನು ಯಾಕೆ ಇವೆಲ್ಲ ಹೇಳಿದೆ ಅಂದ್ರೆ ರವೀಂದ್ರ ವೆಂಶಿ ಅವರ ಪತ್ನಿ ಸಹನಾ ಟಿವಿ ಕಲಾವಿದೆ . ಸುವರ್ಣ  (ಸ್ಟಾರ್  ಸುವರ್ಣ ) ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಹಾಸ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದರು . ಅದಾದ ನಂತ್ರ ರವಿ ಗರಣಿ ಅವರ ಧಾರಾವಾಹಿಯಲ್ಲಿ ನಟಿಸುವಾಗ  ನಾನು ಅವರನ್ನು ಸಂದರ್ಶಿಸಿದ್ದೆ . ಈಗ ಬಹಳಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ/ ಸುತ್ತಿದ್ದಾರೆ.ತುಂಬಾ ಸರಳ ಮನದ ಹೆಣ್ಣುಮಗಳು ಈಕೆ .ಸಹನಾ ಮೂಲಕ ನನಗೆ ರವಿ ಪರಿಚಯ ಆಯ್ತು .ನಾನು ಅಂತರ್ಜಾಲ   ಪತ್ರಿಕೆ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ಸಿನಿಮಾಗಳ ಬಗ್ಗೆ ವಿಮರ್ಶೆಯನ್ನು ಬರೆಯುತ್ತಿದ್ದರು...
ಸಿನಿ ಕ್ಷೇತ್ರದಲ್ಲಿ   ಹೆಚ್ಚು ಯಶಸ್ವಿ  ಆಗಲಿ ರವೀಂದ್ರ ಮತ್ತು  ಟೀಮ್.

No comments: