ರಿಕ್ವೆಸ್ಟ್


ಕಳೆದ ಕೆಲವು ದಿನಗಳೇನು ವಾರಗಳಿಂದಲೇ ಅನಾರೋಗ್ಯ.ಜೊತೆಗೆ ಕೆಲಸ ಕೆಲಸ. ಹಾಗಂತ ಕೆಲಸದ ಬಗ್ಗೆ ನಾನು ಎಂದಿಗೂ ಬೇಜಾರಾಗಲ್ಲ. ಆದ್ರೆ ಹಲ್ಲು ನೋವೂ :-) ಅದರ ಜೊತೆ ಡಾಕ್ಟರ್ ಬೇರೆ ಹೆದರಿಸಿದ್ದಾರೆ   ಗಮ್ ಸರ್ಜರಿ ಆಗಬೇಕು ಅಂತ. ಇಲ್ಲದೆ ಇದ್ರೆ ಕಷ್ಟ ಅಂತ .. ಇಷ್ಟೆಲ್ಲಾ ಕಷ್ಟ ನನಗೆ ಬರಬೇಕಾ ಹಾಯ್ ಹಾಯ್ ;-)

@ ಸ್ಟಾರ್ ವಾಹಿನಿಯಲ್ಲಿ ಪ್ರತಿದಿನ ಹತ್ತು ಗಂಟೆಗೆ ಒಂದು ಧಾರಾವಾಹಿ ಬರುತ್ತದೆ. ಅದರ ಹೆಸರು ಎವರೆಸ್ಟ್ . ಆ ಧಾರಾವಾಹಿಯಲ್ಲಿ ಮಾಡಿರುವ ಕಲಾವಿದರು ಚಿತ್ರವಿಚಿತ್ರವಾದ ಅಲಂಕಾರ ಮಾಡಿಕೊಂಡಿರುವ ಕಲಾವಿದರು ಥರ ಇಲ್ಲ. ಹಳೆಯ ಚಿತ್ರಗಳು ಅಂದ್ರೆ ಎಂಬತ್ತರ ದಶಕದ  ಪ್ರಶಸ್ತಿ ಸಿನಿಮಾಗಳಂತೆ. ಆದರೆ ಆ ಧಾರವಾಹಿ ತುಂಬಾ ಭಿನ್ನವಾಗಿದೆ. ತಪ್ಪದೆ ನೋಡುವಂತೆ ಇದೆ. ಆಕಾಶ್, ಅರ್ಜುನ್, ಅಂಜಲಿ ಪಾತ್ರಗಳು ಸಕತ್ತಾಗಿದೆ. ನೋಡ್ರಿ ಸಚ್ಚಿಮುಚ್ಚಿ ಚಂದ ಇದೆ. 

@ ಕಳೆದವಾರ ಒಂದು ವಿಷಯದಲ್ಲಿ ಅತ್ಯಂತ ಖೇದ ಆಯ್ತು, ಮತ್ತೊಂದು ಸಂಗತಿ ಬಗ್ಗೆ ಖುಷಿ ಆಯ್ತು. ಪಾಪದ ಹೆಣ್ಣುಮಗಳು ಗೌಹರ್ ಗೆ  ಕೆನ್ನೆಗೆ ಹೊಡೆ ದದ್ದು ಕಂಡಾಗ ಸಕತ್ ಬೇಜಾರಾಯ್ತು.ಈಟೀವಿ ಕನ್ನಡದಲ್ಲಿ ಬಂದ ನ್ಯೂಸ್  ನೋಡಿದ ತಕ್ಷಣ ಹಿಂದಿ ವಾಹಿನಿಗಳತ್ತ ಹೋಗಿ ನೋಡಿದಾಗ ಮತ್ತಷ್ಟು ವಿವರ ಬರ್ತಾ ಇತ್ತು. ಛೆ ಎಂತಹ ಅನ್ಯಾಯ ! ಆಕೆಯನ್ನು ಫ್ಯಾನ್ಸ್ ನೋಡೋದು ಧರ್ಮದ ಕಾರಣದಿಂದ ಅಲ್ಲವೇ ಅಲ್ಲ , ಆಕೆಯ ಮ್ಯೂಸಿಕ್ ಚಾನೆಲ್ ನಲ್ಲಿ  ಇದ್ದಾಗಿನಿಂದ ಕಂಡ ವೀಕ್ಷಕರಿಗೆ ಆಕೆ ಪ್ರತಿಭೆ ಇಷ್ಟ ಆಗಿದೆಯೇ ವಿನಃ ...ಆಕೆ ಎಷ್ಟು ಬಟ್ಟೆ ಧರಿಸುತ್ತಾಳೆ, ಅವಳ ವಯಕ್ತಿಕವಲ್ಲ.  ಏನೇ ಹೇಳಿ ಇದಂತೂ ಅತ್ಯಂತ ಖೇದಕರ ಸಂಗತಿ.
ಆದರೆ ಅದೇ ದಿನ ಬಸ್ ನಲ್ಲಿ ಉತ್ತರ ಭಾರತದ ಹುಡುಗಿಯರು, ಇಲ್ಲಿ  ನಮ್ಮ ಮಂಗಳೂರಿನ   ಬಾಲೆಯರು ರಸ್ತೆಯಲ್ಲಿ  ಪುಂಡು ಪೋಕರಿಗಳಿಗೆ  ಸರಿಯಾಗಿ ಬುದ್ಧಿ ಕಲಿಸಿದ್ದು ... ಆಹಾಹಾ !

@ಕಲರ್ ವಾಹಿನಿಯಲ್ಲಿ ಕಾಮಿಡಿ ವಿತ್ ಕಪಿಲ್ , ಅದರಲ್ಲಿ ಕಪಿಲ್, ದಾದಿ, ಸಿದ್ದು, ಗುತ್ತಿ,ಪಲಕ್, ಅಡುಗೆಯಾತ ಜೊತೆಗೆ   ಜೊತೆ ಸಂಗೀತದ  ಎಲ್ಲ ಎಪಿಸೋಡ್ಗಳು  ಇಷ್ಟ ಆಯ್ತು. ಪ್ರತಿವಾರ  ಕಪಿಲ್ ಯಾರನ್ನು  ಕರಿಸ್ತಾರೆ  ಅನ್ನೋ  ಕುತೂಹಲ  ನನಗೆ. ಆದ್ರೆ ಕಪಿಲ್ ಒಂದು ಎಪಿಸೋಡಲ್ಲು   ಸಿದ್ದು ಅವರ  ವೈಫಿ, ಲೈಫಿಯನ್ನು ಕರಿಸೇ ಇಲ್ಲ ಯಾಕೆ?  ವೈ ದಿಸ್ ಕೊಲವರಿ ಸಿದ್ದು ಜೀ ;-)

@@ ಸಲ್ಮಾನ್ boy ಸಲ್ಮಾನ್ boy  ;-) ಪ್ರತಿವಾರ ಶನಿವಾರ ಬಂದಗಾ ನಮ್ಮ ಅಮ್ಮ ಅಂತೂ ಇವತ್ತು ನಮ್ಮ ಸಲ್ಮಾನ್ ಬರೋ ದಿನ ಅಲ್ವ ಇಷ್ಟ ಪಟ್ಟು ಟೀವಿ ನೋಡ್ತಾರೆ. ಅಮ್ಮಂದಿರೆ ಹಾಗೆ.. ಅವರು ಇಷ್ಟ ಮನದಿಂದ ಇರುತ್ತದೆ.
ನನಗೆ   ಬಿಗ್ ಬಾಸ್ ಪ್ರತಿದಿನದ  ಎಪಿಸೋಡ್  ಗಳನ್ನು ನೋಡೋಕೆ ಸಮಯ ಇಲ್ಲದೆ ಇದ್ರೂ ಶನಿವಾರ- ಭಾನುವಾರ ತಪ್ಪದೆ ನೋಡ್ತೀನಿ. 
ಸಲ್ಮಾನ್ ತಂಗಿ ಅರ್ಪಿತ ಮದುವೆ ಫಿಕ್ಸ್ ಆದ ದಿನದಿಂದ, ಅವರು ಹೈದರಾಬಾದ್ ನಲ್ಲಿ  ಫಲಕ್ ನುಮ ದಲ್ಲಿ ಆಗುವ ಬಗ್ಗೆ ಹೀಗೆ ಸಾಕಷ್ಟು ಸಂಗತಿಗಳನ್ನು ಬರೀತಾನೆ ಇದ್ದೆ ನನ್ನ ಕನ್ನಡ ಪೋರ್ಟಲ್ ನಲ್ಲಿ. ಆ ಮದುವೆ   ಇನ್ನೇನು ಮುಂದಿನವಾರ ಇದೆ ಅನ್ನುವಾಗ ಕನ್ನಡದ ಚಾನೆಲ್ ಸುವರ್ಣ ನ್ಯೂಸ್ ನಲ್ಲಿ ಈ ಮದುವೆ ಬಗ್ಗೆ ಹೇಳುತ್ತಾ.. ಸಲ್ಮಾನ್ ಖಾನ್ ಮದುವೆ ಬಗ್ಗೆ ಸಹ ನಿರೂಪಕಿ ವಿವರಣೆ ಮಾಡ್ತಾ ಇದ್ರೂ.  ನಿರೂಪಣೆಯಲ್ಲಿ   ಸಲ್ಮಾನ್ ಖಾನ್ ಹಿಂದೆ ಸಾವಿರಾರು ಫ್ಯಾನ್ಸ್ ;)  ಇದ್ದಾರೆ  ಮದುವೆ ಆಗೋಕೆ ಎಂದು ಹೇಳಿದ್ರು. ಆ ಫ್ಯಾನ್ಸ್ ಇರುವ ಬಗ್ಗೆ ವಿವರಿಸ್ತಾ ಇದ್ರೂ.. ಸಲ್ಮಾನ್ ಒಂದು ರಿಕ್ವೆಸ್ಟ್ ಆ ಸಾವಿರಾರು ಹುಡುಗೀರ   ಜೊತೆ ಇರುವ ಸೆಲ್ಫಿ ಯನ್ನು ಬಿಗ್ ಬಾಸ್ ನಲ್ಲಿ ತೋರಿಸಪ್ಪ... ನಾವು ನೋಡ್ತೀವಿ ;-)

ರಂಗಣ್ಣ ಅಂದ್ರೆ !!


ಕೆಲವು ಸಂಗತಿಗಳು ಮನದಲ್ಲಿ ಒಂಥರಾ ಭಾವನೆಗಳನ್ನು ಹೊರ ಹೊಮ್ಮಿಸ್ತಾ ಇರುತ್ತದೆ. ಅದನ್ನು ಯಾವ ರೀತಿ ವ್ಯಕ್ತ ಮಾಡ ಬೇಕೋ ಗೊತ್ತೇ ಆಗಲ್ಲ. ಆದರು ಎಲ್ಲ ಭಾವನೆಗಳನ್ನು ಹುದುಗಿಸಿಕೊಂಡು ಬದುಕ್ತೀವಿ.. ಲೈಫ್ ಅಂದ್ರೆ ಇಷ್ಟೇ ಅನ್ನಿಸುತ್ತೆ.
ಕಿರುತೆರೆಯಲ್ಲಿ ತಮ್ಮ ಧ್ವನಿ ಮೂಲಕ ಬಾಲಕೃಷ್ಣ ಕಾಕತ್ಕರ್ ಎಲ್ಲರ ಗಮನ ಸೆಳೆದಿದ್ದರು. ವಯಕ್ತಿವಾಗಿ ಏನೇ ಇರಲಿ ಆದರೆ ಬದುಕಲ್ಲಿ ಅವರು ಪಟ್ಟ ಪಾಡು ಕೇಳಿ, ಓದಿ ತುಂಬಾ ಒಂಥರಾ  ಆಯ್ತು. ಹೀಗೆ ಅವರು ಸಾಯುವ ದಿನ ನನ್ನ ಪಾಡಿಗೆ ನಾನು ಆಫೀಸಲ್ಲಿ ಬರೀತಾ ಇದ್ದೆ. ಮೆಸೇಜ್ ಬಂತು ಹಿರಿಯ ಜರ್ನಲಿಸ್ಟ್ ಒಬ್ಬರಿಂದ. ಕಾಕತ್ಕರ್ ಸತ್ತು ಹೋದನಂತೆ...! ಒಂದು ಕ್ಷಣ ಯಾವ ರೀತಿ ರಿಸೀವ್ ಮಾಡಿಕೊಳ್ಳ ಬೇಕೋ ಗೊತ್ತೇ ಆಗಲಿಲ್ಲ. 
ಆಗ ನಾನು ಛೆ ಅಯ್ಯೋ ಪಾಪ ಅಂತ ಮೆಸೇಜ್ ಮಾಡಿದೆ. ತಕ್ಷಣ ನೀ ನೋಬ್ಬಳೆ ಪಾಪ ಅಂತಾ ಇರೋದು ಬೇರೆಯವರೆಲ್ಲ ನಿನ್ನ ರೀತಿ ಅನ್ನಲಿಲ್ಲ, ಬಿಡು ಅದು ನಿನ್ನ ಒಳ್ಳೆ ಗುಣ ಅಂದ್ರು.  ಅದು ಸಹ ಮನದಲ್ಲಿ ಕೊರಿತಾ ಇತ್ತು. ಸತ್ತ ಬಳಿಕವು ಆ ವ್ಯಕ್ತಿಯನ್ನು ದ್ವೇಷಿಸುವುದಾದರೆ ಆ ವ್ಯಕ್ತಿ ನಿಜಕ್ಕೂ ಎಂತಹ ಗುಣ ಅಥವಾ ವರ್ತನೆ ಹೊಂದಿರ ಬಹುದು ಅಂತ ಅನ್ನಿಸಿತ್ತು. ಆದರೆ ಆ ಸತ್ತ ಜೀವದ ಬಗ್ಗೆ ಪತ್ರಕರ್ತ ಮಿತ್ರರು ತುಂಬಾ ಚಂದ ಬರೆದಿದ್ದರು. ಅವರ ಮೆಚ್ಚಿನ ಕಾಕಗೆ ಸರಿಯಾದ ರೀತಿಯಲ್ಲಿ ನಮನ ಸಲ್ಲಿಸಿದ್ದರು. 
ಸಾವಿನ ಮುಂಚೆ ಏನೇ ಇರಲಿ ಸತ್ತ ಬಳಿಕ ಕನಿಷ್ಠ ಒಂದು ಒಳ್ಳೆ ಮಾತು ಹೇಳಿದರೆ ಸಾಕು ಎನ್ನುವ ಮಂದಿ ಬದುಕಿರುವಾಗ ಒಂದಷ್ಟು ಒಳ್ಳೆ ಮಾತು ಹೇಳಿದರೆ  ? ಅದೇ ನಾವು ಮಾಡಲ್ಲ. 
@ ಲೈಫ್ ಸೂಪರ್ ಗುರು ರಿಯಾಲಿಟಿ ಷೋ ಪ್ರಸಾರ ಆಗ್ತಾ ಇದೆ ಜೀ ಕನ್ನಡ ವಾಹಿನಿಯಲ್ಲಿ ಗುರು ಮತ್ತು ಲೂಸ್ ಮಾದ ಜೋಡಿ ಜೊತೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಸಿಟಿಜನ್ ಇಂಡಿಯಾ ಆಟಗಳು ಹೆಚ್ಚು ಗಮನ ಸೆಳೆಯದೆ ಇದ್ರೂ ಕಳೆದ ವಾರದ  ಎಪಿಸೋಡ್ ಸ್ವಲ್ಪ  ಖುಷಿ ಕೊಡ್ತು. ಸ್ಪರ್ಧಿಗಳಾಗಿರುವ ಹಿರಿಯ ನಾಗರೀಕರು ಈಗಿನವರಂತೆ ಡೈನಮಿಕ್ ಆಗಿ ಡ್ರಸ್ ಧರಿಸಿ.. ತುಂಟತನದ ಮಾತುಗಳನ್ನು ಆಡುತ್ತ.. :-) 
ಈ ಕಾರ್ಯಕ್ರಮವನ್ನು ಕೇವಲ ಎಂಜಾಯ್ ಮಾಡುವ ದೃಷ್ಟಿಯಿಂದ ವೀಕ್ಷಿಸಿದರೆ ಒಳಿತು. ಇತ್ತೀಚಿಗೆ ಪ್ರಸಾರವಾದ ಷೋ ನಲ್ಲಿ ಒಂದು ಜೋಕ್ ಸೆಳೆಯಿತು. ಮೇಸ್ಟ್ರು ಕೇಳ್ತಾರೆ ಕೈ ಕೆಸರಾದರೆ  ಬಾಯಿ ಮೊಸರು ಎಂದು ಹೇಳ್ತಾರೆ ಆಗ ತಕ್ಷಣ ಉತ್ತರ ನೀಡಿದ ಹಿರಿಯ ನಾಗರೀಕ ಸ್ಟೂಡೆಂಟ್  ಕೈ ಕೆಸರಾದರೆ ತೊಳೋಕೋ ಬೇಕು  ಕೈ  ಕೊಳೆಯಾಗಿರುತ್ತೆ ಎಂದು ಉತ್ರ ನೀಡಿದರು!
ಇಂತಹ ಬಿಂದಾಸ್ ಉತ್ರಗಳು ಕನ್ನಡದಲ್ಲಿ ಸಾಧು ಕೋಕಿಲ, ತೆಲುಗಲ್ಲಿ ಬ್ರಹ್ಮಾನಂದಂ  ಮತ್ತು ಅಲಿ ನೀಡೋದು.. ಖುಷಿ ಆಯ್ತು.  ಇನ್ನು ನನಗೆ ಆ ಕಾರ್ಯಕ್ರಮ ಅರ್ಥ ಆಗಿಲ್ಲ, ಆದರು ಸಹಿತ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದೇನೆ..
@@ ಥಟ್ ಅಂತ ಹೇಳಿ ಕನ್ನಡದ ಕಿರುತೆರೆಯಲ್ಲಿ ಅತ್ಯದ್ಭುತವಾದ ಕಾರ್ಯಕ್ರಮ. ಪುಸ್ತಕಗಳು, ಮಾಹಿತಿಗಳು ಮತ್ತು ನಾ . ಸೋಮೇಶ್ವರ ಮೇಸ್ಟ್ರು ಎಲ್ಲವು ಚಂದನ ವಾಹಿನಿಯ ಆ ಸಮಯವನ್ನು ಸುಂದರವಾಗಿಡುತ್ತದೆ. ನನಗೆ ಇನ್ನು ವಿಸ್ಮಯ ಆಗಿರುವ ಸಂಗತಿ ಎಂದರೆ ಗೃಹಿಣಿಯರು ಅಂದ್ರೆ ಕೇವಲ ಕೆಲವೇ ಬಗೆಯ ಧಾರಾವಾಹಿಗಳಿಗೆ ಆದ್ಯತೆ ನೀಡುತ್ತಾರೆ ಎನ್ನುವ ಕೆಟ್ಟ ಹೆಸರನ್ನು ಹೊಂದಿದ್ದಾರೆ. ಆದರೆ ಬಹುತೇಕರು ಇಷ್ಟ ಪಡುವ ಕಾರ್ಯಕ್ರಮ ಥಟ್ ಅಂತ ಹೇಳಿ. 
ಮುಖ್ಯವಾಗಿ ಕೆಲವು ಬಾರಿ ಬರುವ ಸ್ಪರ್ಧಿಗಳನ್ನು ಕಂಡಾಗ ಮೇಸ್ಟ್ರ ಸ್ಥಿತಿಗೆ ಅಯ್ಯೋ ಅಂತ ಅನ್ನಿಸಿಬಿಡುತ್ತದೆ. :-)

ಸಾಮಾನ್ಯವಾಗಿ ನಾನು ಮುಖ್ಯವಾಗಿ ನಮ್ಮ ಅಮ್ಮ ಶುಕ್ರವಾರ ಥಟ್ ಅಂತ ಹೇಳಿ ಕಾರ್ಯಕ್ರಮ ವೀಕ್ಷಿಸುತ್ತಾರೆ. ಅಂದು ವಿಶೇಷ ಅತಿಥಿಗಳು   ಯಾರು ಎನ್ನುವ ಕುತೂಹಲ ಅವರಿಗೆ.  ನಿಜವಾಗಿ ಎಷ್ಟೊಂದು ಒಳ್ಳೊಳ್ಳೆ ಪ್ರತಿಭೆಗಳು ಕಂಡು ಬರ್ತಾರೆ. ಈ ವಿಷಯದಲ್ಲಿ ಖಂಡಿತ ಚಂದನ ವಾಹಿನಿಗೆ ಧನ್ಯವಾದ. 
@ ದುನಿಯಾ ವಿಜಯ್ ದಾಂಪತ್ಯ ಮುರಿಯದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆದಾಗ ಹೆಚ್ಚು ಖುಷಿ ಅನ್ನಿಸಿತ್ತು. ಯಾಕೇಂದ್ರೆ ಆ ಹೆಣ್ಣುಮಗಳ ಅತಂತ್ರತೆ, ಆ ಸುದ್ದಿ ಬರೆಯುವಾಗ ಪ್ರತಿಬಾರಿ ನನಗೆ ಬೇಸರ ಆಗ್ತಾ ಇತ್ತು. ವಿಜಯ್ ಸಂಸಾರ ಉಳಿಸುವಲ್ಲಿ ಪಬ್ಲಿಕ್ ಟೀವಿ ರಂಗಣ್ಣ ನ ಪಾತ್ರ ಜಾಸ್ತಿ ಇತ್ತು ಅನ್ನೋ ಸುದ್ದಿ ಕೇಳಿದಾಗ ಸಕತ್ ಖುಷಿ ಆಯ್ತು.. ರಂಗಣ್ಣ  ಅಂದ್ರೆ ಸೂಪರ್ ರಂಗ :-)