ಕಷ್ಟ ಆಯ್ತದೆ


ನ್ಯಾಷನಲ್  ಜಿಯೋಗ್ರಫಿ ಚಾನೆಲ್ ನಲ್ಲಿ ಒಂದು ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು. ಅದರಲ್ಲಿ ಪ್ರಾಣಿಗಳು ಹೇಗೆ ಬೇಟೆ ಆಡುತ್ತದೆ ಎನ್ನುವುದನ್ನು ತೋರಿಸುತ್ತಿದ್ದರು. ಕೆಲವು ಪ್ರಾಣಿಗಳು   ಯಾವರೀತಿ ಗುರಿ ಹೊಂದಿರ್ತಾ ಇತ್ತು ಅಂದ್ರೆ ಅದರ  ಪಕ್ಕದಲ್ಲೆ  ಮತ್ತೊಂದು, ಅಂದರೆ  ಉದಾಹರಣೆಗೆ .. ಮೊಲ ಮತ್ತು ಅದನ್ನು ತಿನ್ನುವ ಪ್ರಾಣಿ ಎಂದು ತೆಗೆದುಕೊಳ್ಳುವುದಾದರೆ  ಪಕ್ಕದಲ್ಲಿ ಇನ್ನೊಂದು ಮೊಲ ಇದ್ರೂ ಅದರ ಗಮನ ತಾನು ಬೇಟೆ ಆಡುವ ಮೊಲದ ಕಡೆಗೆ ಇರುತ್ತೆ, ಹಾಗೆ ವೀಕ್ಷಿಸುವಾಗ  ಬೇಟೆ ಆಡುವ ಪ್ರಾಣಿ  ಅದೆಷ್ಟು ದಡ್ಡ ಮೊದ್ದು   ಎಂದು ಅನ್ನಿಸುತ್ತದೆಯಾದರೂ ಸೂಕ್ಷ್ಮವಾಗಿ ಗಮನಿಸಿದರೆ ಅದು ಮನುಷ್ಯನಷ್ಟು ಆಸೆಪುರಕ ಅಲ್ಲ. ತನಗೆ ಬೇಕಾಗಿರುವಷ್ಟು ಮಾತ್ರ ಶೇಖರಿಸಿಕೊಳ್ಳುತ್ತದೆ. ಆದರೂ ಕಾಡಿನ ಪ್ರಾಣಿಗಳ ಜೀವನ ಶೈಲಿ ಸೆರೆ ಹಿಡಿದ ಮಂದಿ ಬಗ್ಗೆ ನಮೋನ್ನಮಃ ! ಆ ಛಾಯಾಗ್ರಾಹಕರು , ಆ ತಂಡ ಆಹಾ !! 
ನಮ್ಮ ಮನೆಯ ಹತ್ರ ರಾಶಿ ರಾಶಿ ಪಾರಿವಾಳಗಳಿವೆ. ನನ್ನ ಸಿಸ್ಟಂ ಇರುವ ರೂಂನಲ್ಲಿರುವ ಕಿಟಕಿ ಬಳಿ ಅಳಿಲು, ಪಾರಿವಾಳ, ಕಾಗೆ ಮತ್ತು ಇನ್ನು ಬೇರೆ ಬೇರೆ ಪಕ್ಷಿಗಳು ಬರುತ್ತವೆ. ಅಲ್ಲಿ ನಾವು  ಇತ್ತ ಆಹಾರ ಸೇವಿಸಿ ತಮ್ಮ ಪಾಡಿಗೆ ತಾವು ಹೊರತು ಹೋಗುತ್ತದೆ. ಪಾರಿವಾಳ, ಗುಬ್ಬಿ, ಕಾಗೆ , ಅಳಿಲು ಮನುಷ್ಯರ ಜೊತೆ ಬಾಳುವಂತಹದ್ದು ಸೊ ನಾವು ಅದಕ್ಕೆ ಆಹಾರದ ಅಭ್ಯಾಸ ಕೊಟ್ಟು ಸೋಮಾರಿತನ ಬೆಳೆಸ ಬಹುದು. 

ಇಂದು ಸಹ ರವಿ ಅವರದ್ದೇ  ಗುಣಗಾನ. ಅಂತಹ ಮಗನನ್ನು ಕಳೆದು ಕೊಂದ ತಂದೆ ತಾಯಿ- ಅಣ್ಣತಮ್ಮ  ಹೆಂಡತಿ ಮಕ್ಕಳಿಗೆ ಮಾತ್ರವಲ್ಲ ತಾಯ್ನೆಲಕ್ಕೂ ತುಂಬಲಾಗದ ನಷ್ಟ. ಅದ್ಯಾಕೋ ಈ ಸಾವು ಅತ್ಯಂತ ಬೇಸರ- ನೋವು ಮತ್ತು ಅಕ್ರೋಶ ಉಂಟು ಮಾಡಿದೆ ನನಗೆ. ನಿರ್ಭಯ ಸಾವು, ಆಕೆಗೆ ಆದ ಅನ್ಯಾಯ, ಆಕೆಯ ತಾಯಿತಂದೆ  ಅಸಹಾಯಕತೆ ಅಲ್ಲದೆ ಇತ್ತೀಚಿಗೆ ಸತ್ತ ಪ್ರಭ   ಇದೆ ರೀತಿಯ ಖೇದ ನನಗೆ ಆಗಿತ್ತು. 
ಈಗ ರವಿ ಅವರು. ಅವರ ಸಾವಿನ ಬಗ್ಗೆ ಚರ್ಚೆಗೆ ಕರಿಸಿ ಮಾತಾಡುವ ಕೆಲಸ ಮಂದಿ ಮಾಡ್ತಾ ಇದ್ದಾರೆ. ಆದರೆ ಪಬ್ಲಿಕ್ ಟೀವಿಯಲ್ಲಿ ನಿರೂಪಕ ಮಹಾಂತೇಶ್ ಅವರು ಕೋಲಾರದ  ನಗರ ಸಭೆ ಅಧ್ಯಕ್ಷರಾದ ಮುಬಾರಕ್    ಜೊತೆ ನಡೆಸಿದ  ಮಾತುಕತೆ  ಒಂದು ಬಗೆಯಲ್ಲಿ ಇಂಪ್ರೆಸ್ಸಿವ್ ಆಗಿತ್ತು. ಮುಬಾರಕ್ ಮಾತುಗಳಲ್ಲಿ  ಎಲ್ಲಿಯೂ ಅತಿರೇಕದ ಅಂಶಗಳು ಇರಲಿಲ್ಲ. ಅದೇರೀತಿ ನಿರೂಪಕ ಮಹಾಂತೇಶ್ ಅವರು ಸಹ! ಬಹಳ ದಿನದಿಂದ  ಮಹಾಂತೇಶ್ ಅವರನ್ನು ಗಮನಿಸಿದ್ದೇನೆ. ಸಂವೇದನಾತ್ಮಕ  ನಿರೂಪಕ. ಆ ಜಾಗದಲ್ಲಿ ಬೇರೆಯವರನ್ನು ಕುಳ್ಳರಿಸಿರಲಿಲ್ಲ  ಪಬ್ಲಿಕ್ ಟೀವಿಯವರು. ಏಕೆಂದರೆ ಯಾಕೆ ಯಾಕೆ ಸತ್ರು, ಯಾಕೆ ಹೀಗೆ ಮಾಡಿದ್ರು ಅಂತ ರೇಗೋ ಮಂದಿ ಪಬ್ಲಿಕ್ ಟೀವಿಯಲ್ಲಿ ಇದ್ದಾರೆ. ರಂಗಣ್ಣ .. ರಂಗಣ್ಣ.....!    ಅಂತವರ ಮಾತು ಕೇಳೋಕೆ ಕಷ್ಟ ಆಯ್ತದೆ ಸಾರ್ !!    

ವಿಶೇಷ ಶೈಲಿ



ವಾಹಿನಿಗಳೆಲ್ಲವೂ  ಶೋಕ ಆಚರಿಸಿತು.. ಸದನದಲ್ಲಿಯೂ ಒಂದೇ ಸಂಗತಿ ರವಿ ರವಿ.. ಆದರೆ ನಿಜವಾಗಿ ನ್ಯಾಯ ದೊರಕುತ್ತದೆಯೇ ? ಈ ಪ್ರಶ್ನೆ ಸದಾ ನನ್ನಂತಹ ಸಾಮಾನ್ಯರನ್ನು ಕಾಡುತ್ತಲೇ ಇರುತ್ತದೆ.ಯಾಕೋ ಮನದಲ್ಲಿ ಸೂತಕದ ಕಳೆ !!
ನನ್ನ ಕಿರಿಯ ಮಿತ್ರ ಒಂದು ಮಾತು ಹೇಳ್ತಾ ಇದ್ದ ಮತ್ತು ಹೇಳುತ್ತಲೇ ಇರುತ್ತಾನೆ. ನೋಡ್ರಿ ಯಾರಿಗೆ ನ್ಯಾಯಾಂಗದಲ್ಲಿ ನಂಬಿಕೆ ಇರುತ್ತೋ ಅವರು ಹೆಚ್ಚಾಗಿ ಬ್ಲಾಕ್ ಮನಿ ಹೊಂದಿರುವವರು, ಯಾರು ಸಾಮಾನ್ಯರೋ ಅವರಿಗೆ ಅಂತಹ ಯಾವ ನಂಬಿಕೆ ಇರಲ್ಲ. ಅವನು ಹೇಳಿದ್ದನ್ನು ನಾನು ಪರೀಕ್ಷಿಸಿದ್ದೇನೆ, ಸಾಕ್ಷಿ ಸಮೇತ ಸಿಕ್ಕಿ ಹಾಕಿಕೊಂಡು ಆ ಕೆಲಸ ಮಾಡಿದ್ದು ಆ ಸಂಬಂಧಿತ ವ್ಯಕ್ತಿ ಆಗಿದ್ದರು ಸಹಿತ ಆತ ಮಾಧ್ಯಮಗಳ ಮುಂದೆ ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ ಎಂದು ಹೇಳುತ್ತಿರುತ್ತಾರೆ! 
ಇಂತಹ ನಂಬಿಕಸ್ತರು ಬಹಳಷ್ಟು ಜನರು ಈಗೀಗ ಮಾಧ್ಯಮಗಳ ಮುಂದೆ  ತಮ್ಮ ಪರಿಚಯ ಭಿನ್ನ   ರೀತಿಯಲ್ಲಿ ಮಾಡಿಕೊಳ್ಳುತ್ತಿರುತ್ತಾರೆ. ಅದೇರೀತಿ ಮಾಧ್ಯಮದವರು ಇದಕ್ಕೆ ಹೊರತಲ್ಲ ಬಿಡಿ ! ಪಕ್ಕಕ್ಕೆ ಇಡಿ ಆ ಸಂಗತಿ . ವೈಯಕ್ತಿಕವಾಗಿ ನನಗೆ ಸಿಕ್ಕಾಪಟ್ಟೆ ಭ್ರಮನಿರಸನ ಆಗಿದೆ. ಆದರೂ ಬದುಕನ್ನು ಬಂದಂಗೆ ಸ್ವೀಕರಿಸ ಬೇಕು.. ಅದು ಕಲಿಸಿಕೊಟ್ಟಿದೆ !!

@@
ಐ ಎ ಎಸ್ ಅಧಿಕಾರಿ  ರವಿ ಅವರ ಸಾವಿನ ಬಗ್ಗೆ ಕಾರ್ಯಕ್ರಮ ನಡೆಸುತ್ತಾ  ಸುವರ್ಣ  ನ್ಯೂಸ್ ನಿರೂಪಕ ರಾಘವೇಂದ್ರ ಕಾಂಚನ್ ನಡೆಸಿಕೊಟ್ಟ ವಿಶೇಷ ಕಾರ್ಯಕ್ರಮ ಇಂದು ಮುಂಜಾನೆ ಹತ್ತುಗಂಟೆ ಸುಮಾರಿಗೆ ಪ್ರಸಾರ ಆಯ್ತು. ಯಾವರೀತಿ ಹಿರಿಯ ಸರ್ಕಾರಿ ಅಧಿಕಾರಿಗಳು ಹತ್ಯೆಗೆ ಒಳಗಾಗಿದ್ದಾರೆ ಮತ್ತು ಹೇಗೆ  ಹಿರಿಯ ಅಧಿಕಾರಿಗಳು ಹಲ್ಲೆಗೆ  ಒಳಗಾಗಿದ್ದಾರೆ ಎನ್ನುವ  ಸಂಗತಿ ತೋರಿಸಿದರು. ನನಗೆ   ಗೊತ್ತಿಲ್ಲ ಇದೇ ವಿಷಯ ಬೇರೆ ವಾಹಿನಿಯವರು ಪ್ರಸಾರ ಮಾಡಿದರೇನೋ ಆದರೆ ನಾನು ವೀಕ್ಷಿಸಿದ್ದು ರಾಘವೇಂದ್ರ ಅವರ ಕಾರ್ಯಕ್ರಮ. ಜನಶ್ರೀಯಿಂದ ಸುವರ್ಣ ನ್ಯೂಸ್ ಗೆ ಬಂದಿರುವ ಈ ಪ್ರತಿಭಾವಂತ  ಕನ್ನಡದ ಉತ್ತಮ ನಿರೂಪಕರಲ್ಲಿ ಒಬ್ಬರು. ಸಾವಿನಂತಹ ಸೂಕ್ಷ್ಮ ಸಂಗತಿಗಳನ್ನು ಮಾತಾಡುವ ರೀತಿ,ಇದೆಯಲ್ಲ ಅದಕ್ಕೆ ವಿಶೇಷ ಶೈಲಿ ಬೇಕು. ಅದು ರಘು ಅವರಿಗಿದೆ.   

@ಈ ಟೀವಿ ತೆಲುಗು ವಾಹಿನಿಯಲ್ಲಿ ಪ್ರತಿದಿನ 9 . 30ಗೆ ಪ್ರತಿದಿನ ಒಂದೊಂದು   ರಿಯಾಲಿಟಿ ಷೋ ಪ್ರಸಾರ ಮಾಡುತ್ತಿರುತ್ತದೆ. ಆದರೆ ಎಸ್ ಪಿ ಬಾಲ ಸುಬ್ರಮಣ್ಯಮ್ ಅವರ  ನೇತೃತ್ವದ ಪಾಡುತಾ ತೀಯಗ ಸಕತ್ತಾಗಿದೆ. ಅದೆಷ್ಟು ವರ್ಷಗಳಿಂದ ಬರ್ತಾ ಇದ್ರೂ, ಅವರ ಭಾಷೆಯಲ್ಲೇ ಹೇಳುವುದಾದರೆ ಆ ಗಾಯನಿಗಳ ಹಾಡುಗಳು ಆಹಾ! ಅದೇರೀತಿ  ಎಸ್ ಪಿ ಬಿ ಅವರ ಮಾಧುರ್ಯ ಎವರ್ ಗ್ರೀನ್. ಎದೆ ತುಂಬಿ ಹಾಡಿದೆನು  ಕಾರ್ಯಕ್ರಮದಂತೆ ಇದು ಇಷ್ಟ ಆಗುವ ಕಾರ್ಯಕ್ರಮ. ಕನ್ನಡದಲ್ಲಿ ಮತ್ತೆ ಎಸ್ಪಿಬಿ ಯಾವ  ಪ್ರಚ್ಚನ್ನ ಸಮಯದಲ್ಲಿ  ಬಂದು ಕಾರ್ಯಕ್ರಮ ನಡೆಸಿಕೊಡ್ತಾರೋ  ಎಂದು ನಾವು ಪ್ರಕ್ಷಾಳನ ಮನದಿಂದ ಕಾಯುತ್ತಿದ್ದೇವೆ. 

ಛೆ!! ನೋವಾಗಲ್ವ

Image result for red flowers
ದಕ್ಷ ಅಧಿಕಾರಿ ರವಿ ಅವರ ಸಾವು ಬುದ್ಧಿಯನ್ನು ತಣ್ಣಗೆ ಮಾಡಿ ಬಿಟ್ಟಿದೆ...!

ಅಂದು ಟೀವಿ ನೈನ್ ವಾಹಿನಿಯಲ್ಲಿ ಒಂದು ಧ್ವನಿ ಕೇಳಿ  ಬರುತ್ತಿತ್ತು, ಆಸಕ್ತಿಯಿಂದ ಆಲಿಸಿದೆ  ಚಂದ ಅಂತ ಅನ್ನಿಸಿತು. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಸಾಮಾನ್ಯವಾಗಿ ಟೀವಿ ನೈನ್ ಮಾತ್ರವಲ್ಲ ಯಾವುದೇ ಕನ್ನಡ ಸುದ್ದಿ ವಾಹಿನಿ ಆಗಿರಲಿ ಅದರಲ್ಲಿ  ವಾಯ್ಸ್ ಓವರ್ ಎಷ್ಟು ಖರಾಬ್ ಆಗಿರುತ್ತೆ ಅಂದ್ರೆ ಅದರಲ್ಲೂ ಹೆಣ್ಣುಮಕ್ಕಳು ಚ್ಯೂಯಿಂಗ್ ಗಂ ಅಗಿಯುತ್ತಾ  ಮಾತಾಡ್ತಾ ಇರ್ತಾರೆ ಎಂದು ಅನ್ನಿಸುತ್ತೆ. ಸಾಮಾನ್ಯವಾಗಿ ಪದಗಳನ್ನು ನುಂಗಿ ಅಥವಾ, ಎಲ್ಲೋ ಪಾಸ್, ಎಲ್ಲೋ ಫುಲ್ ಸ್ಟಾಪ್ , ಛೆ ನ್ಯೂಸ್ ನೋಡೋಕೆ ಭಯ ಆಗಿರುತ್ತೆ ಅಂತಹುದರಲ್ಲಿ ಆ ಧ್ವನಿಗಳು ಕೇಳೋಕೂ ಹೆದರಿಕೆ ಉಂಟು ಮಾಡಿ ಬಿಡುತ್ತದೆ. ಆದರೆ ಅಂದು ಆ ಧ್ವನಿ ಇಷ್ಟ ಆಯ್ತು, ಕಾದೆ ಯಾರು ಸುದ್ದಿ ಓದ್ತಾ ಇರೋದು ಅಂತ. ಅದು ಸುಕನ್ಯ. ಚಂದದ ಹೆಣ್ಣುಮಗಳು ಆಕೆ. ಅದೇರೀತಿ ಚಂದದ ಧ್ವನಿ . ಮನಸ್ಸು, ಕಣ್ಣು, ತಲೆ, ಬುದ್ಧಿ ತಂಪಾಗುತ್ತೆ ಇಂತಹವರ ಧ್ವನಿ ಆಲಿಸಿದಾಗ. ಅದೇರೀತಿ ಆ ವಾಹಿನಿಯಲ್ಲಿ ಉಷಾ ಸಹ ಇಷ್ಟ ಆಗ್ತಾರೆ.

Image result for purple flowers

ಜೀ ಹಿಂದಿ  ವಾಹಿನಿಯಲ್ಲಿ  ಸರೆಗಮಪ ಲಿಲ್ ಚಾಂಪ್ಸ್  ಕಾರ್ಯಕ್ರಮ ಅಂತಿಮ ಸುತ್ತು. ಹಿಂದಿ ವಾಹಿನಿಯ ಪ್ರಖ್ಯಾತಿ  ಹಾಗೆನ್ನುವುದಕ್ಕಿಂತ ಇದು ಅತ್ಯಂತ ಪ್ರತಿಷ್ಠಾತ್ಮಕ   ಕಾರ್ಯಕ್ರಮ ಆಗಿದೆ ಎಂದೇ ಹೇಳ ಬಹುದಾಗಿದೆ.  ಮುಖ್ಯವಾಗಿ ಅತ್ಯಂತ ಖುಷಿ ಕೊಡುವ ಕಾರ್ಯಕ್ರಮ.ಶನಿವಾರ ಮತ್ತು  ಭಾನುವಾರದ ಖುಷಿಯನ್ನು ಹೆಚ್ಚು ಮಾಡುವ ಕಾರ್ಯಕ್ರಮ. ಅದರ ನಿರೂಪಕ ಆದಿತ್ಯ ನಾರಾಯಣ್ . ಎಷ್ಟು ಬೆಳೆದು ಬಿಟ್ಟಿದೆ ಈ ಮಗು.. !! ತು ಮೇರ ದಿಲ್ ತು ಮೇರಿ ಜಾನ್  ಓ ಐ ಲವ್ ಯೂ ಪಾಪ ಹುಡುಗ . ಚಂದದ ನಿರೂಪಣೆ. ಅದರಂತೆ ಶಾನ್  ಹಾಗೂ   ಮನೋಲಿ ಮತ್ತು ಮಹಾಗುರು ಅಲಕಾ  ಅವರ ಬಗ್ಗೆ ಹೇಳುವಷ್ಟಿಲ್ಲ . ಬೇಜಾರಿನ ಸಂಗತಿ ಅಂದ್ರೆ ಅದು ಆಗಲೇ ಈ ಸೀಸನ್ ಮುಗಿಸಿ ಬಿಡ್ತಾ ಇರೋದು. ಗಗನ್ ಗಾವ್ಕರ್  ವಾರೆವ್ವ ನಮ್ಮ ಗುಲ್ಬರ್ಗದ ಮೂಲದ ಹುಡುಗ.. ಆತನಿಗೆ ಛಾಯ್ ವಾಲ   ವಿಶ್ ಮಾಡಿದ್ದು ಅದರಲ್ಲೂ ಕನ್ನಡದಲ್ಲಿ ಹಾರೈಸಿದ್ದು  ಹೆಚ್ಚು ಖುಷಿ ಕೊಡ್ತು. ಈ ವಾರ ಅಂತಿಮ ಸುತ್ತು. ಗಗನ್ ಮಾತ್ರವಲ್ಲ ಆದಿತ್ಯ :-) ಸೇರಿದಂತೆ ಕೇಶವ್, ಐಶು ಎಲ್ಲರು ತುಂಬಾ ಚೆನ್ನಾಗಿ ಹಾಡಿ ಖುಷಿ ಕೊಟ್ಟಿದ್ದಾರೆ.  
ಆದರೆ ಒಂದು ಖುಷಿಯ ಸಂಗತಿ ಅಂದ್ರೆ  ಇದೆ ವಾಹಿನಿಯಲ್ಲಿ ಗೀತ, ಟೆರೆನ್ಸ್ ಮತ್ತು ಗೋವಿಂದ ಡ್ಯಾನ್ಸ್ ಅಮ್ಮಂದಿರ ಕಾರ್ಯಕ್ರಮ ಆರಂಭ ಆಗೋ ಖುಷಿ ಇದೆ. ಗೋವಿಂದ ನನ್ನ ಮೆಚ್ಚಿನ ನಟರಲ್ಲಿ ಒಬ್ಬರು. ಅವರ ಡ್ಯಾನ್ಸಿಂಗ್ ಸ್ಟೈಲ್ಸ್ ವಾವ್ ಸೋನಿ  ವಾಹಿನಿಯಲ್ಲಿ  ಬೂಗಿ ವೂಗಿ ಕಾರ್ಯಕ್ರಮದಲ್ಲಿ ಅವರು ಸ್ಪರ್ಧಿ ಒಬ್ಬನ (ಳ) ಜೊತೆ ಕನ್ನಡದಲ್ಲಿ ಮಾತಾಡಿದ್ದರು... !!
@ಕಲರ್ ವಾಹಿನಿಯ ಅತ್ಯಂತ ಸುಂದರ ಹಾಗೂ ಸದಾ ಖುಷಿ ಕೊಡುವ ಕಾರ್ಯಕ್ರಮ ಕಾಮಿಡಿ ವಿತ್ ಕಪಿಲ್. ಅದರಲ್ಲೂ ಗುತ್ತಿ ವಿವಿಧ ರೂಪಗಳು, ಪಲಕ್ ಭಿನ್ನ ರೂಪ ಮತ್ತು ದಾದಿಯದ್ದು ಆಲ್ ಟೈಮ್ ಫೇವರೆಟ್. ಮಸ್ತ್ ಖುಷಿ ನೀಡುವ ಆ ಕಲಾವಿದರು ಅದೆಷ್ಟು ಪ್ರತಿಭಾವಂತರು ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಕಪಿಲ್ ಶರ್ಮ , ಸಿದ್ದುಜೀ ಅವರನ್ನು ನೋಡಲು ಸಹ ಕಾಯುವಂತಾಗುತ್ತೆ :-)


Image result for blue and black flowers

ತುಂಬಾ ಇಷ್ಟ ಪಟ್ಟು ವೀಕ್ಷಿಸುವ ಹಾಗೂ ಅತಿಯಾದ ಆಪ್ತವಾದ ಕಾರ್ಯಕ್ರಮ ಮಾಸ್ಟರ್ ಶಫ್. ಸಾಮಾನ್ಯವಾಗಿ ಅಡುಗೆ ಬಗ್ಗೆ ಇರುವ ಕಾರ್ಯಕ್ರಮ ಅಂದ್ರೆ ನಗು ಬರೋದು  ಬಹಳಷ್ಟು ಮಂದಿಗೆ. ಆದರೆ ತಮಾಷೆ ಅಂದ್ರೆ ನಕ್ಕವರಿಗೆ ಮಾತ್ರ ಮನೆ , ಹೋಟೆಲ್ ಎಲ್ಲೇ ಆಗಲಿ ಒಳ್ಳೆ ಊಟ ಬೇಕು. ಬಿಡಿ.. 

ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ  ಮಾಸ್ಟರ್ ಶಫ್.  ಮಾಸ್ಟರ್  ಗಳಾದ ಸಂಜೀವ್ ಜೀ, ವಿಕಾಸ್, ರಣವೀರ್ ಅವರುಗಳನ್ನು ಕಂಡಾಗ  ಸ್ಮಾರ್ಟ್ ಫೆಲ್ಲಾಸ್ !! ಅಂತ ಅನ್ನಿಸುತ್ತೆ. ಸಂಜೀವ್ ಕಪೂರ್ , ವಿಕಾಸ್ ಮತ್ತು ರಣವೀರ್ ಅವರು ಫುಡ್ ಫುಡ್ , ಖಾನ ಖಜಾನ ಅಲ್ಲದೆ ಫೇಸ್ಬುಕ್ ಲೋಕದಲ್ಲೂ ಓಡಾಡುತ್ತಿರುತ್ತಾರೆ. ಸ್ಟೈಲಿಶ್ ರಣವೀರ್ ಮೆಂತ್ಯ ಸೊಪ್ಪು  ಮೇಲೆ ಎಸೆದು ತೆಗೆಸಿಕೊಂಡ ಫೋಟೋ ಅವರ ಕವರ್ ಪೇಜ್ ಆಗಿದೆ. ಅದೆಷ್ಟು ಹುಡುಗೀರು ಅದನ್ನು ಕೊಳ್ಳಲು ಒದ್ದಾಡಿದ್ದಾರೆ ಗೊತ್ತೇ ;-) ಕ್ಯಾ ಮೇಥಿ ಹೈ :-). 

ನಾನು ಕನ್ನಡ ಪೋರ್ಟಲ್ ಒಂದರಲ್ಲಿ ಸಿನಿಮಾ ಬಗ್ಗೆ ಬರೀತೀನಿ. ಆದರೆ ಮ್ಯಾಗಜೈನ್ ನಲ್ಲಿ ನಾನು ಆರೋಗ್ಯ, ಊಟ, ಒಟ್ಟಾರೆ ಒಂದು ಕುಟುಂಬಕ್ಕೆ ಸಂಬಂಧಪಟ್ಟ ಎಲ್ಲ ರೀತಿಯ ಸಂಗತಿಗಳನ್ನು ಕವರ್ ಮಾಡ್ತಾ ಇರ್ತೀನಿ. ಆರೋಗ್ಯ ಅನ್ನುವಾಗ ನೀರಿನ ಬಗ್ಗೆ ಬರಿತಾನೆ ಇರ್ತೀನಿ. ಈವರೆಗೂ ನಾನು ನೀರಿನ ಉಪಯೋಗದ ಬಗ್ಗೆ ಎಷ್ಟೇ ಹೇಳಿದ್ರು ಕಿವಿಗೆ ಹಾಕಿಕೊಳ್ಳದವರು ವಿಕಾಸ್ ಫುಡ್ ಫುಡ್  ವಾಹಿನಿಯಲ್ಲಿ ನೀರು ಕುಡಿದರೆ ಆಗುವ ಪ್ರಯೋಜನಗಳ ಬಗ್ಗೆ ಹೇಳಿದ ಬಳಿಕ ಅದನ್ನು ಅನುಸರಿಸುತ್ತಿದ್ದಾರೆ ಅಕ್ಕ ಮತ್ತು ಅಣ್ಣನ ಮಕ್ಕಳು :-) ಛೆ!! ನೋವಾಗಲ್ವ ನನಗೆ.