ಕಿಲಕಿಲ

 
ಕಲರ್ ಹಿಂದಿ ವಾಹಿನಿಯಲ್ಲಿ ಪ್ರತಿ ಶನಿವಾರ ರಾತ್ರಿ ಒಂದು  ಕಾಮಿಡಿ ಕಾರ್ಯಕ್ರಮ ಪ್ರಸಾರವಾಗುತ್ತದೆ. ಬಚಾವ್ .. ಬಚಾವ್.. ಎಂದು ಓಡುವಂತೆ ಮಾಡಲ್ಲ ಕಾರ್ಯಕ್ರಮ, ಆದರೆ ಆ ಬಚಾವ್ ನಿಂದ ತಪ್ಪಿಸಿಕೊಳ್ಳ ಬೇಕೆಂದರೆ  ಸಾಕಷ್ಟು ಪರದಾಡಬೇಕು. ಅಂತಹ ಬಚಾವ್ ಕಾರ್ಯಕ್ರಮ   ಹಾಸ್ಯಭರಿತವಾಗಿರುವಂತಹದ್ದು, ಸೆಲೆಬ್ರಿಟಿಗಳ ಕಾಲನ್ನು ಸರಿಯಾಗಿ ಎಳೆದಾಡುವಂತಹ ವಿಭಿನ್ನ ಕಾರ್ಯಕ್ರಮ ಬಚಾವ್. ಒಂದು ಹಿಡಿ ಕಲಾವಿದರು ಆ ಕಾರ್ಯಕ್ರಮಕ್ಕೆ ಬರುವ ಸೆಲೆಬ್ರಿಟಿಗಳನ್ನು ತಮ್ಮದೇ ಆದ ಶೈಲಿಯಲ್ಲಿ  ತಮಾಷೆ ಮಾಡುತ್ತಾರೆ  . ಇದು ಭಿನ್ನವಾದ ಕಾರ್ಯಕ್ರಮ, ಕೃಷ್ಣ, ಭಾರತಿ ಸೇರಿದಂತೆ ಹಲವಾರು ಕಲಾವಿದರು ಅದರಲ್ಲಿ ಇದ್ದಾರೆ. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಮಾಡುವ ಮಂದಿಗೆ ಬಹಳ ಎಚ್ಚರಿಕೆ ಇರಬೇಕು ಏಕೆಂದರೆ ಸೆಲೆಬ್ರಿಟಿಗಳಿಗೆ ಯಾವಾಗ ಕೋಪ ಬರುತ್ತೋ ಗೊತ್ತಿಲ್ಲ.. ಅಂತಹ ಕೋಪ ಬರೋದು ಕರ್ನಾಟಕದಲ್ಲಿ ಮಾತ್ರ ಎಂದು ಕಾಣುತ್ತದೆ. ಯಾಕೆ ಈ ಮಾತು   ಹೇಳ್ತಾ ಇದ್ದೀನಿ ಎಂದರೆ ಬಹಳ ಹಿಂದೆ ನನ್ನ ಬ್ಲಾಗ್ ನಲ್ಲಿ ರೇಡಿಯೋ ಜಾಕಿಗಳ ಬಗ್ಗೆಯೂ ಬರೆಯುತ್ತಿದ್ದೆ. ಆ ಸಮಯದಲ್ಲಿ ರೇಡಿಯೋ ಜಾಕಿ ರೋಹಿತ್ ಸ್ಯಾಂಡಲ್ ವುಡ್ ನ ಕಲಾವಿದರ ಬಗ್ಗೆ ಒಂದು ಕಾರ್ಯಕ್ರಮ ನಿರೂಪಿಸುತ್ತಿದ್ದರು. ಆತನ ಮಾತಿನ ಶೈಲಿ , ಆ ತುಂಟತನಕ್ಕೆ ಸಿಟ್ಟಿಗೆದ್ದ ಸಿನಿಮಂಡಿ ಪಾಪದ ಜಾಕಿ ಮೇಲೆ ಕೆಂಗಣ್ಣು ಬಿಟ್ಟು ಆತನ  ಕೆಲಸಕ್ಕೆ ಕುತ್ತು ಬಂದಿತ್ತು. ಆ  ಸಮಯದಲ್ಲಿ ನನ್ನ ಬ್ಲಾಗ್ ಅವಧಿಯಲ್ಲಿ ಸಹಿತ ಪ್ರಕಟ ಆಗ್ತಾ ಇತ್ತು. ಆನಂತರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ  ಬಿಟ್ಟಿದ್ದು ತಪ್ಪು ಎಂದು ಅವರು ಸಿಟ್ಟಿನಿಂದ ಹೊರ ಬಂದು ಮತ್ತೆ ರೋಹಿತ್ ಗೆ ಅವಕಾಶ ನೀಡಿದ್ದರು. ರೋಹಿತ್ ಬಗ್ಗೆ ಬರೆದ ಆ ಲೇಖನದ ಸಾಕಷ್ಟು ಜನರನ್ನು ಸೆಳೆದಿತ್ತು. ಇವೆಲ್ಲ ಹಳೆಯ ಕಥೆ. ಬಚಾವ್ ಹೆಸರಿನ ಕಾರ್ಯಕ್ರಮ ವೀಕ್ಷಿಸಿದಾಗ ನೆನಪಿಗೆ ಬಂತು.
@ ಮೊನ್ನೆ ಈ ಟೀವಿ  ಕನ್ನಡ ನ್ಯೂಸ್ ವೀಕ್ಷಿಸುತ್ತಿದೆ. ಅದರಲ್ಲಿ ಇನ್ನು ಸ್ವಲ್ಪ ಹೊತ್ತಿಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಯಶ್ರೀ ಅವರ ಜೊತೆ ಮಾತುಕತೆ ಎನ್ನುವ ಅರ್ಥದಲ್ಲಿ ಒಂದು ಸಾಲು ಕೆಳಗೆ ಹರಿದು ಬರುತ್ತಿತ್ತು. ಸರಿ ಆ ಹೆಣ್ಣುಮಗಳು ಏನು ಮಾತಾಡುತ್ತಾರೋ ಎಂದು ನೋಡುವ ಅಂತ ಕಾಯ್ತಾ ಇದ್ದೆ. ಆ ಕಾರ್ಯಕ್ರಮ ಆರಂಭವಾಯ್ತು. ಅದನ್ನು ಕಿಲಕಿಲನೆ ಮಾತನಾಡುವ ಆಂಕರ್ ಮೀನ ಅವರು ನಡೆಸಿಕೊಟ್ಟರು. ಈ ಹೆಣ್ಣುಮಗಳು ವಾಟ್ಸಪ್ ಗ್ರೂಪ್ ಒಂದರಲ್ಲಿ ನನಗೆ ಅಲ್ಪಕಾಲ ಮಿತ್ರೆ ಆಗಿದ್ದರು. ಅಲ್ಲಿ ಸಹ ಕಿಲಕಿಲ ಅಂತ ಇರುತ್ತಿದ್ದರು. ಒಮ್ಮೆ ನಾನು ಪುದೀನ ಜೂಸ್ ಚಿತ್ರ ಹಾಕಿದ್ದೆ, ನನಗೆ ಎಂದು ಕೇಳಿದ್ದರು, ಮನೆಗೆ ಬನ್ನಿ ಕೊಡುವೆ ಎಂದಿದ್ದೆ. ಪ್ರತಿಬಾರಿ ಮೀನ ಆ ಗುಂಪಿಗೆ ಬಂದಾಗಲು ಕಿಲಕಿಲ ಅಂತಾ ಇರ್ತಾ ಇತ್ತು. ಅಷ್ಟೊಂದು ಜೀವಂತಿಕೆ ಇರುವ ಈ ಆಂಕರ್ ಕಾರ್ಯಕ್ರಮವು  ಸಹ ಕಿಲಕಿಲ .. ಆದರೆ ಆಕೆಯ ಮಾತು ಹೆಚ್ಚು ಕೇಳೋಕೆ ಆಗಲಿಲ್ಲ , ಯಾಕೇಂದ್ರೆ ಅಂದು  ಕಿಲಕಿಲನೆ ಮಳೆ ಸುರಿಯಲು ಆರಂಭಗೊಂಡು ನಮ್ಮ ಟೀವಿ ಪರದೆ ಕರ್ ಅಂತ ಅನ್ನೋಕೆ ಶುರು ಆಯ್ತು.. :-)
 

ಲೈಕ್ ಇಟ್ಟಾ


 
ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು...
ಸಮಸ್ತರಿಗೂ ದೀವಳಿಗೆಯ ಹಾರ್ದಿಕ ಶುಭಾಶಯಗಳು..
ಸಕತ್ ಮಳೆ, ಸಕತ್ ಹಬ್ಬಗಳು,ಸಕತ್ ಸ್ವೀಟ್ಸ್ ಆದರೆ ನಮಗೆ ಮಾತ್ರ ರಜೆ ಇಲ್ಲ  ಛೇ! ಎಷ್ಟು ಬೇಸರದ ಸಂಗತಿ.. :-).. ತಿಂಗಳ ಪೂರ್ತಿ ದೀಪ ಮನೆ ಮುಂದೆ ಇದುವ ಖುಷಿ. ನನ್ನ ಬ್ಲಾಗ್ ನಲ್ಲೂ ತಿಂಗಳ ಪೂರ್ತಿ ದೀಪ ಇರುತ್ತೆ.. ಖುಷಿಯಾಗಿ  ನಗುನಗುತ್ತಾ..

ಕನ್ನಡದ ಮಂದಿ ಬಿಗ್ ಬಾಸ್ ನೋಡೋದು ಕಡಿಮೆ ಮಾಡಿಲ್ಲ ಆದರೆ ನೋಡಿದವರು ಪ್ರತಿಬಾರಿ ತಮ್ಮ ಅಭಿಪ್ರಾಯಗಳನ್ನು ಸಹಿತ ಹೇಳುವುದನ್ನು ಬಿಟ್ಟಿಲ್ಲ. ಅದನ್ನು ನಾನು ಕೊನೆಯಲ್ಲಿ ಹಾಕುತ್ತೇನೆ..
ಸಾಮಾನ್ಯವಾಗಿ ವಾರದ ಕೊನೆಯಲ್ಲಿ   ಕಲರ್ ಕನ್ನಡ- ಹಿಂದಿ ಬಿಗ್ ಬಾಸ್ ಕಿಚ್ಚ ಸುದೀಪ್ , ಸಲ್ಮಾನ್   boy ಕಾರ್ಯಕ್ರಮ ನೋಡುವ ಒಂದು ಅಭ್ಯಾಸ ಬಿಗ್ ಬಾಸ್  ಸೀಸನ್ ಇರುವ ತನಕ ಇದ್ದೆ ಇರುತ್ತದೆ.
ಕಳೆದವಾರ ಇಬ್ಬರೂ ಪ್ರಸೆಂಟರ್ಸ್  ಸ್ಪರ್ಧಿಗಳಿಗೆ ಮಾಡಿದ ಕೌನ್ಸಿಲಿಂಗ್ ಅದ್ಭುತವಾಗಿತ್ತು..
 ಸಲ್ಮಾನ್ ಖಾನ್ ಅವರು ನಾಮಿನೇಟ್ ಆಗಿದ್ದ  ಮಂದನಾಗೆ ಬುದ್ಧಿ ಹೇಳುತ್ತಾ ಜನರು ಸ್ಪರ್ಧಿಯನ್ನು ಉಳಿಸ  ಬೇಕಾದರೆ ಅವರಿಗೆ ಇಷ್ಟವಾಗಿದ್ದಾಗ ಮಾತ್ರ ಇವೆಲ್ಲ ಸಾಧ್ಯ, ಅಲ್ಲದೆ ಮತ್ತೊಬ್ಬ ಸ್ಪರ್ಧಿ  ರಿಮಿ ಸೇನ್ ಗೆ  ಸರಿಯಾಗಿ ಕೌನ್ಸಿಲಿಂಗ್ ಮಾಡಿದ್ರು ಇನ್ ಡೈರೆಕ್ಟ್  ಆಗಿ , ಇನ್ನು  ಸ್ಪಷ್ಟ ಕನ್ನಡದಲ್ಲಿ ಹೇಳುವುದಾದರೆ ಮುಖಕ್ಕೆ ಮಂಗಳಾರತಿ ಎತ್ತುವುದು ಅಂತಾರಲ್ಲ ಹಾಗೆ. ಯಾವುದೇ ಸ್ಪರ್ಧಿ ಬಿಗ್ ಬಾಸ್ ಗೆ ಬರುವ ಮುನ್ನ ಅವರ ಇಚ್ಚೆಯಂತೆ  ಬಂದಿರುತ್ತಾರೆ ವಿನಃ  ಬಿಗ್ ಬಾಸ್ ಹಟಕ್ಕೆ ಬಿದ್ದು ಅವರನ್ನು ಕರೆಸಿಕೊಳ್ಳುವುದಿಲ್ಲ. ಇದು ಪ್ರತಿಯೊಬ್ಬ   ಸ್ಪರ್ಧಿಗೂ ಗೊತ್ತಿರುತ್ತದೆ.  ಈ ಮಾತನ್ನು ಮಂದನಾ ಬಳಿ ಸಲ್ಮಾನ್ ಹೇಳಿದರು. ಅದು ಸತ್ಯ ಅಲ್ವೇ !ಆದರೆ ಯಾವುದೇ ಸೀಸನ್ ಆಗಿರಲಿ ಹೋಗ್ತೀನಿ,ನಾನು ಹೋಗ್ತೀನಿ ಅಂತ ಅಳ್ತಾರೆ ಬಂದವರು....  ಅಂತಹವರ ಬಳಿ ಒಳ್ಳೆಯ ಆಪ್ತ  ಸಮಾಲೋಚಕ  ಹೇಗೆ ಮಾತಾಡ್ತಾರೆ, ದಾರಿಗೆ ತರುತ್ತಾರೆ ಅನ್ನೋದು ಮುಖ್ಯ. ಆ ವಿಷಯದಲ್ಲಿ ...ಹೇಯ್ ಸಲ್ಮಾನ್ ಲೈಕ್ ಇಟ್ಟಾ ...

@ಇತ್ತೀಚೆಗೆ ನಾನು ಅದೇ ಬಿಹಾರದ ಎಲೆಕ್ಷನ್ ಮುಗಿದ ಬಳಿಕ ಬರುತ್ತಿದ್ದ ಅನಾಲಿಸಿಸ್  ಕನ್ನಡದ ಜೊತೆಗೆ ಬೇರೆ ಭಾಷೆಯ ನ್ಯೂಸ್ ಚಾನೆಲ್ ಗಳನ್ನೂ ನೋಡ್ತಾ ಇದ್ದೆ.  ರಾತ್ರಿ ಒಂಬತ್ತೂವರೆ  ಸುಮಾರಿಗೆ ಜೀ ಹಿಂದಿ ವಾಹಿನಿಯ ಸುಧೀರ್ ಚೌಧರಿ ಅವರು ವಾರ್ತೆ ಓದುವುದನ್ನು  ಕೇಳಿ ಖುಷಿ ಅನ್ನಿಸಿತು. ಅನಾಲಿಸಿಸ್ ರೂಪದಲ್ಲಿ ಭಿನ್ನವಾಗಿ ವಿಷಯ ಮಂಡನೆ ಮಾಡುತ್ತಿದ್ದರು. . ತುಂಬಾ ವಿಶೇಷ ಅನ್ನಿಸಿತು. ಅವರೇ ಅದನ್ನು ಬರೆದದ್ದು ಅಂದ್ರೆ ವಾವ್ ! ಬರೆದವರು  ಬೇರೆಯವರಾಗಿದ್ದರೆ, ವಾವ್ ವಾವ್..! ಆದರೆ  ಓದಿದ ಶೈಲಿಗೆ ವಾರೆವ್ವಾ !  ಮುಖ್ಯವಾಗಿ ಅವರು ಓದುವ ರೀತಿ ಅಥ್ವಾ ಹೇಳುವ ರೀತಿ ಇಷ್ಟ ಆಯ್ತು.. ವಾರ್ತೆಯನ್ನು ನೋಡುವ  ಆಸಕ್ತಿ ಇಂತಹ ಪತ್ರಕರ್ತರಿಂದ ಉಂಟಾಗುತ್ತೆ ವೀಕ್ಷಕರಿಗೆ..

@ ಕನ್ನಡ ಬಿಗ್ ಬಾಸ್ ನಲ್ಲಿ ಕಿಚ್ಚ  ಸುದೀಪ್ ಮಾತುಗಾರಿಕೆ ಬಗ್ಗೆ, ಅವರು  ಸ್ಪರ್ಧಿಗಳಿಗೆ ಕೌನ್ಸಿಲಿಂಗ್ ಮಾಡುವ ಬಗ್ಗೆ ವಿಶೇಷವಾಗಿ ಹೇಳುವಷ್ಟಿಲ್ಲಾ. ಹುಚ್ಚ ವೆಂಕಟ್ ಅವರ ಬಳಿ ತಮ್ಮ ವೃತ್ತಿ ಬದುಕಿನ ಆರಂಭಿಕ ಕ್ಷಣವನ್ನು ಯಾವರೀತಿ ಸ್ವೀಕರಿಸಿದರು ಎನ್ನುವ ಸಂಗತಿ ಹೇಳಿದಾಗ ಸುದೀಪ್ ಅವರು ತಮ್ಮ ವೃತ್ತಿ ಬದುಕಿನ ಆರಂಭಿಕ ಹಂತದ ಬಗ್ಗೆ ತಿಳಿಸುತ್ತಾ ತಮಗಾದ ಅನುಭವವನ್ನು ಅಪಮಾನ ಎಂದು ತಿಳಿಯದೆ ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡ ರೀತಿ  ಅದ್ಭುತ..
ಬದುಕಲ್ಲಿ ಇಂತಹ ಅಂಶ ಎದುರಾಗುತ್ತಲೇ ಇರುತ್ತದೆ, ಅದರಿಂದ ನಾವು  ಹೇಗೆ ಹೊರ ಬಂದು ಗೆಲ್ಲುತ್ತೇವೆ ಎನ್ನುವುದು ಬಹಳ ಮುಖ್ಯ..  ಕಿಚ್ಚ  ಅಂದ್ರೆ ಸುಮ್ಮನೆ ಅಲ್ಲ.. ಸುದೀಪ್ ಲೈಕ್ ಇಟ್.ನಾನು ಟ್ವಿಟ್ಟರ್ ನಲ್ಲಿ ಇದ್ದರು ಹೆಚ್ಚು ಫಾಲೋ ಮಾಡೋದು ನ್ಯೂಸ್ ಗುಂಪನ್ನ..ಆದರೆ ಫೇಸ್ ಬುಕ್ ನಲ್ಲಿ ಆಗಾಗ ಬರೀತೀನಿ..
 ಮೊನ್ನೆಯಿಂದ ಒಂದು ಟಾಸ್ಕ್ ಪ್ರಸಾರ ಆಗ್ತಾ ಇದೆ. ಅದರಲ್ಲಿ ನ ಅಂಶಗಳು ಕನ್ನಡಿಗರಿಗೆ ಅಷ್ಟೊಂದು ಇಷ್ಟವಾಗಿಲ್ಲ.  ಯಾವರೀತಿ ಬೇಸರ ಉಂಟು ಮಾಡಿದೆ ಎನ್ನುವುದನ್ನು ನನ್ನ ಮಿತ್ರ ಶಿವ ಪ್ರಸಾದ್ ತಮ್ಮ ಎಫ್ ಬಿ ವಾಲ್ ನಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ..
"ಬಿಗ್ ಬಾಸ್ ಅಸಹ್ಯ ಮತ್ತು ಹಳೆ ಚಪ್ಪಲಿ "
******************************************
ಇಂದಿನ ಬಿಗ್ಗ್ ಬಾಸ್ ಮನೆಯ ಟಾಸ್ಕ್ ನಲ್ಲಿ ಜಮೀನದಾರ ಮತ್ತು ಗುಲಾಮ ಟಾಸ್ಕ್ ಕೊಟ್ಟು ಮನುಷ್ಯತ್ವ ಮತ್ತು ಮಾನವೀಯತೆಯನ್ನ ಕೊಲೆ ಮಾಡಿದ್ದಾರೆ ಶೃತಿ ಯಂತ ಹಿರಿಯ ಕಲಾವಿದೆ ಯಾರೊ ಹಾಕಿರುವ ಹಳೆ ಚಪ್ಪಲಿಯನ್ನ ಸೆರಗಿನಿಂದ ಹೊರಸುತ್ತಿದ್ದರೆ ಬಹಳ ಹಿಂಸೆ ಯಾಗುತ್ತಿತ್ತು . ಹುಚ್ಚ ವೆಂಕಟ್ ರೆಹಮಾನ್ ಕೈಯಲ್ಲಿ ಚಪ್ಪಲಿ ಹಳತೆ ನೋಡಿಸಿದರೆ ,ಸುನಾಮಿ ಕಿಟ್ಟಿ ಕೃತಿಕಾ ಎಂಬ ಹೆಣ್ಣು ಮಗಳ ಕೈಯಲ್ಲಿ ತಲೆಗೆ ಮಸಾಜ್ ಮಾಡಿಸಿ ಊಟ ಮಾಡಿಸಿ ಕೊಳ್ಳುವ ನೆಪದಲ್ಲಿ ಕೈ ಕಚ್ಚಿ ಅಸಹ್ಯ ಮಾಡಿದ . ದಿನ ಪೂರ್ತಿ ` ಇಂತಹುದೆ . ಈ ರೀತಿ ಗುಲಾಮ ಮನಸ್ಥಿತಿಗೆ ಧಿಕ್ಕಾರವಿರಲಿ . 
Poornima Hegde ನಿಜ ಶೃತಿಯಂತಹ ಹಿರಿಯ ಕಲಾವಿದೆ, ರೆಹಮಾನಂತಹ ಒಳ್ಳೆಯ ವ್ಯಕ್ತಿ ಜೊತೆ ಟಾಸ್ಕ್ ನೆಪದಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಅಸಹ್ಯ ಮೂಢಿಸಿತು. ಪರಿಕಲ್ಪನೆಗಳು ಜನಮೆಚ್ಚುವಂತಿರಬೇಕು.
LikeReply621 hrs
Shiva Shivaprasd ನಿಜ ಮನಸ್ಸಿಗೆ ಈಗಲು ಬಹಳ ಹಿಂಸೆ ಅನ್ನಿಸುತ್ತಿದೆ .
LikeReply21 hrs
GV Jayashree Ghatt

Write a reply...
Jaya S Jaya B B ಸದಾಭಿರುಚಿಯ show ಖಂಡಿತಾ ಅಲ್ಲ.......
LikeReply321 hrs
LikeReply121 hrs
GV Jayashree Ghatt

Write a reply...
Hemavathi Venkat ಹುಚ್ಚಾಸ್ಪತ್ರೆ ನೋಡಿದಂತಾಯಿತು. ಕಿಟ್ಟಿಗೆ ಮಾಧ್ಯಮ ನೀಡುತ್ತಿರುವ ಅವಕಾಶ ಹೆಚ್ಚಾಯಿತು. ಇದು ನಾಲ್ಕನೇ ರಿಯಾಲಿಟಿ ಶೋ. ಅವನ ನಡತೆಯಲ್ಲಿ ಬದಲಾವಣೆಯಿಲ್ಲ. ಕನಿಷ್ಠ ಬೇರೆ ಬೇರೆ ಕ್ಷೇತ್ರದಲ್ಲಿ ಆತನಿಗಿಂತಲೂ ಹೆಚ್ಚು ಹೆಸರು ಮಾಡಿದವರಿದ್ದಾರೆ,ಅವರನ್ನು ಬಹುವಚನದಲ್ಲಿ ಕರೆಯಬೇಕೆಂಬ ಜ್ಞಾನ ಇಲ್ಲ. ಕಚಡಾ ಭಾಷೆ, ದುರಹಂಕಾರಿ.
LikeReply1021 hrs
Shiva Shivaprasd ನಿಮ್ಮ ಮಾತು ಸತ್ಯ
LikeReply121 hrs
GV Jayashree Ghatt

Write a reply...
Dinakar Rao ಹೌದು... ಇದನ್ನೆಲ್ಲಾ ಗಮನಿಸಿ ಬೇರೆ ಚಾನೆಲ್ ನೋಡಿದ್ದಾಯ್ತು.... ಇವತ್ತಂತೂ ದರಿದ್ರ ಟಾಸ್ಕ್..
LikeReply221 hrs
Shiva Shivaprasd ನಿಜ ಸಾರ್
LikeReply121 hrs
GV Jayashree Ghatt
Write a reply...
Ravindra Kalagangotri ಎಲ್ಲಾ ದುಡ್ಢಿಗಾಗಿ
LikeReply115 hrs
Bheemappa Hunasikatti ಇದ್ದುದರಲ್ಲಿ ರೆಹಮಾನ್ ರ ಮೌನ ಬಂಡಾಯ ಮೆಚ್ಚತಕ್ಕದ್ದು...! ಸುನಾಮಿಗೆ ಅಹಂಕಾರದ ಸುನಾಮಿ !
LikeReply312 hrs
Shiva Shivaprasd yes sir
LikeReply12 hrs
GV Jayashree Ghatt

Write a reply...
Prakash Kumar boig boss annu conceptge dikkara
LikeReply112 hrs
Chinnaswamy Tp ಗುಲಾಮಗಿರಿಯನ್ನ ಪೋಷಿಸುವ ಬಿಗ್ ಬಾಸ್ಗೆ ದಿಕ್ಕಾರ
LikeReply210 hrs
Ramachandra Rao I always detest this BIG BOSS
LikeReply110 hrs
Gururaja Gururaj Avn yavano task design madddu avnge saaastanga namaskara. ..Ugiri makke
LikeReply110 hrs
Vasudev Nadig Rahman n shruti ge ivella bekitta!! Nonsense
LikeReply17 hrs
Vasudev Nadig Hucchara mane venkat boss
LikeReply17 hrs