ಶಂಕರ


ಕೆಲವು ಚಾನೆಲ್ಗಳು ತುಂಬಾ ಫೈಟಿಂಗ್ mood ್ಲಿ ಇರುತ್ತೆ ಹರೆಯದ ಹುಡುಗರ ರೀತಿ. ಆದರೆ ಒಂದಷ್ಟು ಚಾನೆಲ್ಗಳು ತಮ್ಮ ಪಾಡಿಗೆ ತಾವು ಶಾಂತ ರೀತಿಯಲ್ಲಿ ಕೆಲಸ ಮುಂದು ವರೆಸುತ್ತಾ  ಇರುತ್ತದೆ ಮಧ್ಯಮ ವರ್ಗದ ಗೃಹಿಣಿಯಂತೆ !
ಮಾಡುವ ಕೆಲಸ ಒಪ್ಪವಾಗಿ, ಶಾಂತವಾಗಿ ,ತನ್ನ ಪಾಡಿಗೆ ತಾನು ಯಾರ ಸಹಾಯ ಬಯಸದೆ ... ಲಿಸ್ಟ್ ದೊಡ್ಡದು ಆಕೆಯ  ಕೆಲಸಗಳದ್ದು ...

ಅಂತಹ ಮನೋಭಾವ ಕಾಣೋದು ಸಂಸ್ಕಾರ್  ಮತ್ತು ಶಂಕರ  ವಾಹಿನಿಗಳಲ್ಲಿ.ದೇವರ ಬಗ್ಗೆ ನಂಬಿಕೆ ಇರದವರು ಇಲ್ಲ ನಾನು ಸಂಸ್ಕಾರ್ ಲೈಕ್ ಮಾಡಲ್ಲ ಅನ್ನ ಬಹುದು,ಆದರೆ ಶಂಕರ ಚಾನೆಲ್ ಎಲ್ಲ ಇಂತಹ ವಾಹಿನಿಗಳಿ ಗಿಂತ ಭಿನ್ನ. ಇಲ್ಲಿ ದೇವರು, ಆಚರಣೆ, ಸಂಸ್ಕಾರ, ಭವಿಷ್ಯ ಹೀಗೆ ಎಲ್ಲದರ ಜೊತೆಗೆ ಎಲ್ಲ ವರ್ಗದವರು ಆಸಕ್ತಿಯಿಂದ ವೀಕ್ಷಿಸುವ ಕಾರ್ಯಕ್ರಮಗಳನ್ನು ಪ್ರಸಾರಿಸುತ್ತೆ. ಕನ್ನಡದ ಜೊತೆಗೆ ತಮಿಳು ತಿಳಿದಿದ್ರೆ ಈ ಚಾನೆಲ್ ಇನ್ನು ಹೆಚ್ಚು ಇಷ್ಟ ಆಗುತ್ತೆ 

ಭಾಷೆಗಳ ಬಗ್ಗೆ ಹೇಳುವುದಕ್ಕಿಂತ ವೆರೈಟಿ ಬಗ್ಗೆ ಹೇಳೋದಾದ್ರೆ ತುಂಬಾ ಚೆನ್ನಾಗಿರುತ್ತೆ. ಅಂದ್ರೆ ದೈವ ಭಕ್ತರಿಗೆ ಹೆಚ್ಚು ಖುಷಿ 
ಕೊಡುವ ಪಕ್ಕಾ  ದೇವರ ಚಾನೆಲ್.ಮತ್ತೊಂದು ಸಂಗತಿ ಅಂದ್ರೆ ಇಲ್ಲಿ ಮುದ್ದಾದ ನಿರೂಪಕಿಯರು ಇದ್ದಾರೆ.
ನಿರೂಪಕಿಯರ ಬಗ್ಗೆ ಅಂದ್ರೆ ಮತ್ತಷ್ಟು ಉತ್ತಮ ನಿರೂಪಕಿಯರು ಎಲ್ಲ ವಿಧದಲ್ಲೂ ಪರ್ಫೆಕ್ಟ್ ಆಗಿರುವವರ ಬಗ್ಗೆ ಗಮನ ಕೊಟ್ರೆ .. ಇನ್ನು ಹೆಚ್ಚು ಜನಕ್ಕೆ ಇಷ್ಟ ಆಗುತ್ತೆ. 
ಮುಖ್ಯವಾಗಿ ಇಲ್ಲಿ ದೇವರ ಬಗ್ಗೆ ಭಯ ಹುತ್ತಿಸಲ್ಲ.. ಪ್ರೀತಿ ಉಂಟಾಗುತ್ತೆ.

ಇಲ್ಲಿ ತನಕ ಈ ಚಾನೆಲ್ ವಿಷಯದಲ್ಲಿ ಅಪಾರ ಸಂಖ್ಯೆ ವೀಕ್ಷಕರು ಬಿದ್ದಿದ್ದು ನಾನು ಕಂಡಿಲ್ಲ.. ಸೊ  ಜೈ ಮಾತಾ ದಿ..ಹರಿ ಓಂ..ಶಿವಾಯ ನಮಃ  ಕೇಪ್ ಇಟ್  ಅಪ್ !

ಉಲ್ಲಾಸ



ಕೆಲವು ಹಾಸ್ಯ ಧಾರಾವಾಹಿಗಳಲ್ಲಿ ಡೈಲಾಗ್ ಗಳು ಮುಖ್ಯವಾದ ಪಾತ್ರ ನಿರ್ವಹಿಸುತ್ತೇ. ಯಾಕೆಂದ್ರೆ ಅನೇಕ ಸಂದರ್ಭಗಳಲ್ಲಿ ಮಾತಿಗಿಂತ ಆಂಗಿಕ ಅಭಿನಯ ಉಲ್ಲಾಸ ನೀಡುತ್ತೆ. ಸಿನಿಮಾಗಳಲ್ಲಿ ಜಗ್ಗೇಶ್ ಡೈಲಾಗ್ -ಮ್ಯಾನರಿಸಂ ವಾವ್ ಅನ್ನೋ ಹಾಗೆ ಇರುತ್ತೆ. ನಾನು ಲೈಕ್ ಲೈಕ್ ಮಾಡೋ ಕಲಾವಿದರು ಅವ್ ಜಗ್ಗೇಶ್ :-) 

ಸೀರಿಯಲ್ ಗಳಲ್ಲಿ ಅದರಲ್ಲೂ ಹಾಸ್ಯ ಧಾರಾವಾಹಿಗಳಲ್ಲಿ ಪಂಚಿಂಗ್ ಡೈಲಾಗ್ ಸಕತ್ ಪ್ರಾಮುಖ್ಯತೆ ಪಡೆಯುತ್ತದೆ.ಒಮ್ಮೆ ಹಿರಿಯ ಹಾಸ್ಯ ಸಾಹಿತಿ-ಸಂಭಾಷಣೆಕಾರ ನರಸಿಂಹ ಮೂರ್ತಿ ಅವರು ಒಂದು ಮಾತು ಹೇಳಿದ್ರು, ಸಾಮಾನ್ಯವಾಗಿ  ಧಾರಾವಾಹಿಗಳಲ್ಲಿ ಪಾತ್ರ  ವೀಕ್ಷಕರ ಮನದಲ್ಲಿ ಉಳಿಯೋದು, ಮಾಡಿದ ವ್ಯಕ್ತಿ ಅಲ್ಲ . 
ಯಾಕೆ ಹೀಗೆ ಹೇಳಿದ್ರು ಅಂದ್ರೆ ಪಾಪ ಪಾಂಡು ವಿಷಯಕ್ಕೆ ಸಂಬಂಧಿಸಿದಂತೆ  ಮಾತನಾಡುತ್ತಿದ್ದಾಗ ಬದಲಾದ ಕಲಾವಿದನ ಬಗ್ಗೆ ಮಾತು ಬಂತು, ಆಗ ನಿಮಗೆ ಗಾಬರಿ-ತೊಂದರೆ ಆಗಲಿಲ್ವ ಅನ್ನುವ  ಪ್ರಶ್ನೆ ಕೇಳಿದ್ದಕ್ಕೆ ಎಂ ಎಸ್ ಎನ್  ಉತ್ತರಿಸಿದ್ದು ಮೇಲೆ ತಿಳಿಸಿದಂತೆ!ಅದು ಸರಿನೆ ಅನ್ನಿ ಆ ಚಿದಾನಂದ ಎಲ್ಲಿ ಹೋದರೋ ಗೊತ್ತಿಲ್ಲ , ಆದರೆ ಪಾಂಡು -ಪಾಂಡುರಂಗ ಆಗಿ ಗೆಲ್ತಾನೆ ಇದ್ದಾರೆ ಜನಗಳ ಮನವನ್ನು ಜಹಂಗೀರ್.

ಪಂಚಿಂಗ್ ಡೈಲಾಗ್  ವಿಷಯಕ್ಕೆ ಬಂದಾಗ ಹೇಳ ಬೇಕಾದ ಮತ್ತೊಂದು ಧಾರವಾಹಿ ಕಸ್ತೂರಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ವಾರ್   ವಾರ್ ಗಿತ್ತಿರು ಧಾರವಾಹಿ ಬಗ್ಗೆ. ಅಲ್ಲಿ ಹಿರಿಯ ಕಲಾವಿದೆ ಗಾಯಿತ್ರಿ ಪ್ರಭಾಕರ್ ಇದ್ದಾರೆ, ಹಾಸ್ಯ ಕಲಾವಿದ ಪ್ರತಿಭಾವಂತ ನಟ ವಿಶ್ವ ಸಹ ಇದಾರೆ. ವಿಶ್ವ  ಕನ್ನಡ ವೀಕ್ಷಕರಿಗೆ ಎಂದಿಗೂ ಬೋರ್ ಹೊಡಿಸದ ನಟ. ಡೈಲಾಗ್ ಗಳಿಗೆ  ಜೀವ ತುಂಬೋ ಪ್ರತಿಭೆ.
ಇತ್ತೀಚಿಗೆ ನಾನು ವೀಕ್ಷಿಸಿದ ಒಂದು ಎಪಿಸೋಡ್ ನಲ್ಲಿ  ಗಾಯಿತ್ರಿ ಪ್ರಭಾಕರ್  ವಿಶ್ವ ಅವರಿಗೆ ಚಿರಂಜೀವಿ ಆಗು ಅಂತ ಹಾರೈಸುತ್ತಾರೆ, ತಕ್ಷಣ ವಿಶ್ವ ರಜನಿಕಾಂತ್ ಆಗೋದು ಯಾವ ಅಂತ ಪ್ರಶ್ನಿಸುತ್ತಾರೆ. ಕಚಗುಳಿ ಇಡುವ ಸಂಭಾಷಣೆಗಳು.. ಕೀಪ್ ಇಟ್ ಅಪ್ ಬರೆದವರೆ -ನಟಿಸಿದವರೆ  :-) 

ಉದಯ ವಾಹಿನಿಯಲ್ಲಿ ಮತ್ತೊಮ್ಮೆ ಕುರಿ ಎಂಟ್ರಿ ಆಗಿದೆ.ಈಗ ಅದರ ಹೆಸರು ಕುರಿ ಬಾಂಡ್ . ಮೊದಲು ಈ ಕಾರ್ಯಕ್ರಮ ಉದಯ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇತ್ತು. ಬಳಿಕ ಕಸ್ತೂರಿ ,ಈಗ  ಮತ್ತೆ ಉದಯ :-) .ಅದೇ ಕಣ್ರೀ ಸಾಮಾನ್ಯರನ್ನು ಯಾಮಾರಿಸೋದು,ಕುರಿ ಮಾಡೋದು ಬಳಿಕ ಬಹುಮಾನ ನೀಡೋದು .ಸ್ಮೈಲ್ ಸಾಗರ್ ಗ್ರೂಪ್ ಕಥೆ.ಈ ರೀತಿ ಯಾಮಾರೋ ಆಟ ಪೋಗೋ ಚಾನೆಲ್ ನಲ್ಲಿ ಪ್ರಸಾರ ಆಗುತ್ತೆ. ಅದೇ ಇಂಗ್ಲಿಶ್ ಆಟವನ್ನು ಕನ್ನಡದಲ್ಲಿ ಅಂದ್ರೆ ರಂಗಣ್ಣನ ಪಬ್ಲಿಕ್ ಟೀವಿ ಯಲ್ಲಿ ಚುರುಮುರಿ ಅನ್ನೋ ಹೆಸರಲ್ಲಿ ಪ್ರಸಾರಿಸುತ್ತಾರೆ.ಯಾವ ಟೆನ್ಶನ್ ಇಲ್ಲದೆ ಮನೆಮಂದಿಯಲ್ಲ ನಿರ್ಭಯವಾಗಿ ವೀಕ್ಷಿಸ ಬಲ್ಲ ಕಾರ್ಯಕ್ರಮ ಇದು :-)

ಎರಡು

ಬಹಳಷ್ಟು  ಜನಕ್ಕೆ ಕೆಲವು  ಸತ್ಯಗಳ ಅರಿವು ಇರೋದೇ ಇಲ್ಲ ಅಂತ ಕಾಣುತ್ತೆ. ಯಾಕೆಂದ್ರೆ ಬೇರೊಬ್ಬರ ಯಶಸ್ಸು ನಮ್ಮಿಂದ ಅನ್ನುವ ಹುಂಬ ನಿರ್ಧಾರಕ್ಕೆ ಬಂದು ಬಿಡ್ತಾರೆ ಅದರಲ್ಲೂ ಟೀವಿ ಪರದೆ ಮೇಲೆ ಕಾಣೋ ಅನೇಕ ಮಂದಿ ತಾವು ವಿಶೇಷ ವ್ಯಕ್ತಿತ್ವ, ತಮ್ಮನ್ನು ಕಂಡ್ರೆ ಜನ ಪ್ರಾಣ ಬಿಡ್ತಾರೆ ಅನ್ನುವ ಒಂದು ಬಗೆಯ ಸುಳ್ಳು ಲೋಕದಲ್ಲಿ ವಿಹರಿಸ್ತಾ ಇರ್ತಾರೆ. ಅಂತಹವರನ್ನು ಕಂಡ್ರೆ ನನಗೆ ಆಗುವ ಆಶ್ಚರ್ಯ ಅಷ್ಟಿಷ್ಟಲ್ಲ.

ನಾನು ಈ ಬ್ಲಾಗ್ ಬರೆಯಲು ಆರಂಭಿಸಿದ ಎರಡೆನೇ ವರ್ಷದಲ್ಲಿ ನನಗೊಂದು ಕಾಮೆಂಟ್ ಬಂದಿತ್ತು. ಅದರಲ್ಲಿ ಇದ್ದಿದ್ದು, ನನ್ನ ಈ ಬ್ಲಾಗ್ ಯಾರೂ ಓದಲ್ಲ ,ಸೊ ಅದನ್ನು ಬೆಳೆಸುವುದಕ್ಕಿಂತ, ಈಗಲೇ ಡಿಲೀಟ್  ಮಾಡಿ ಅಂತ. ಗೊತ್ತಿಲ್ಲ ಯಾರು ಆ ಮಹನೀಯರು ಈ ಮಾತು ಹೇಳಿದ್ದೋ, ಈ ಬ್ಲಾಗ್ ಓದಲ್ಲ ಎಂದು ಹೇಳಿದ ವ್ಯಕ್ತಿಯೇ ಕಾಮೆಂಟ್ ಹಾಕಿದ್ದಾರೆ ಅಂದ್ರೆ ನಿನ್ನ ಬರಹ  ತಪ್ಪದೆ ಓದುತ್ತಾರೆ ಬರಿ ಅಂತ ಹುರುದುಂಬಿಸಿದ್ದು ಅಮ್ಮ-ಅಣ್ಣ ಮತ್ತು ನನ್ನ ಕಲೀಗ್ಸ್ .

ಈ ಬ್ಲಾಗ್ ಕೇವಲ ನನ್ನ ಖುಷಿಗೆ ಬರಿತಾ ಇಲ್ಲ, ಮುಖ್ಯವಾಗಿ ನಾನು ನನ್ನ ವಯುಕ್ತಿಕ ಸಂಗತಿಗಳ ಬಗ್ಗೆ  ನಾನು  ಇಲ್ಲ. ಮಾಧ್ಯಮದ ಕಾರ್ಯಕ್ರಮಗಳ  ನಾನು ವೀಕ್ಷಿಸಿದ್ದು, ನನಗೆ ಇಷ್ಟವಾದ ಸಂಗತಿ ಇವೆಲ್ಲ ಬರೀತಾ ಹೋದಂತೆ ನನಗೆ ನನ್ನದೇ ಆದ ಓದುಗ ಬಳಗ ಬೆಳೆಯಿತು. ವಿಶೇಷ ಅಂದ್ರೆ ಸಾಕಷ್ಟು ಜನ ನಾನು ಬರೆಯಲೇ ಬೇಕೆಂಬ ಒಂದು ಬಗೆ ವಾತಾವರಣ ಕಲ್ಪಿಸಿದರು. ಓದುಗರಿಗಾಗಿ ಬರೆದೆ, ಇಲ್ಲಿ ನಾನು ತಿಳಿಸುವ  ಕಾರ್ಯಕ್ರಮಗಳು , ನಿರೂಪಕರು, ವಾಹಿನಿಗಳನ್ನು ಆಸಕ್ತಿಯಿಂದ ವೀಕ್ಷಿಸುವ ಮಂದಿಯ ಪ್ರಮಾಣ ಬೆಳೆಯಿತು.ಇದಕ್ಕಾಗಿ ನಾನು ಪಟ್ಟ ಶ್ರಮ, ನನ್ನ ವೇಳೆ, ನನ್ನ ಡೆಡಿಕೇಶನ್  ನಮ್ಮ ಮನೆಯವರು ಮತ್ತು ನನ್ನ ಒಂದಷ್ಟು ಆಪ್ತ ಬಳಗಕ್ಕೆ ಮಾತ್ರ ಗೊತ್ತು.

 ಪರಮಾಪ್ತರು ಅನ್ನಿಸಿಕೊಂಡವರು ತಮ್ಮ ಗೆಳೆಯರು ಉದ್ದಾರ ಆದರೆ ಒಳ್ಳೆಯ ಮಾತು ಹೇಳುವುದಿಲ್ಲ, ಆದರೆ ನಾನು ಹೇಳಿದ್ದೀನಿ, ಇದನ್ನು ನಾನು ಅಹಂಕಾರದಿಂದ ನಿಮಗೆ ತಿಳಿಸ್ತಾ ಇಲ್ಲ ವಿನಮ್ರವಾಗಿ ಹೇಳ್ತಾ ಇದ್ದೀನಿ.

ನನ್ನ ಬಳಗ ಅದೆಷ್ಟು ದೊಡ್ಡದಾಗಿದೆ ಅಂದ್ರೆ ಬಿಡಿ..! ಆದರೂ ಅನೇಕರು, ಅದೇ ಬರೆಸಿಕೊಂಡವರು  ನಾನು ಬರದೆ ಇಲ್ಲ, ನಾನು ಗೊತ್ತೇ ಇಲ್ಲ ಅನ್ನುವಂತೆ ಪ್ರಿಟೆಂಡ್  ಮಾಡ್ತಾರೆ, ಅದು ನನಗೆ ಬೇಜಾರು ಉಂಟು ಮಾಡಿಲ್ಲ, ಮನುಷ್ಯ ಬೇರೆಯ ಪ್ರಾಣಿಗಳಿಗಿಂತ ಭಿನ್ನ ಅಲ್ವ..! 

ಯಾಕೆ ಈ ಮಾತು ಹೇಳೋಕೆ ಹೊರಟೆ ಅಂದ್ರೆ  ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಲ್ಮಾನ್  Boy ವಿಚಿತ್ರ ವ್ಯಕ್ತಿತ್ವದ ಸ್ಪರ್ಧಿ ಇಮಾಂ ಸಿದ್ದಿಕಿ ಅವರಿಗೆ ಹೇಳಿದ ಮಾತು ಸತ್ಯ ನೂರಕ್ಕೆ ಕೋಟಿಯಷ್ಟು.
ನಾನೇ ಶಾರೂಕ್ ಖಾನ್, ಪ್ರ್ರಿತಿ ಜಿಂಟಾ ಗೆ  ಮಾಡಿದ್ದು, ಅಂತ ಹೇಳುವುದರ ಮೂಲಕ ನಾನೇ ಅವರನ್ನು ಉದ್ದಾರ ಮಾಡಿದ್ದು ಎನ್ನುವ ಅರ್ಥ ಬರುವಂತ ಮಾತನಾಡಿದರು  ಇಮಾಂ. ಆತನ  ಮಾತಿಗೆ  ಹಾಗೂ ಸಲ್ಮಾನ್ ಗೆ ಟೈಮ್  ಔಟ್ ಅಂದ ರೀತಿಗೆ ಸಿಟ್ಟಾದ ಸಲ್ಮಾನ್ , ಶಾರೂಕ್ ರನ್ನು ಸೃಷ್ಟಿಸಿದ್ದು ದೇವರು, ಬೆಳೆಸಿದ್ದು ಆತನ ಫ್ಯಾನ್ ಗಳು, ಆತ  ಯಶಸ್ವಿ ಆಗಿದ್ದು ತನ್ನ ಶ್ರಮ ಮತ್ತು ಡೆಡಿಕೇಶನ್  ನಿಂದ ಅಂತ ಹೇಳಿದ್ರು. ನನಗೆ ಆ ಮಾತು ತುಂಬಾ ಇಷ್ಟ ಆಯ್ತು, ಬುಡು ಸಲ್ಮಾನು ನಾನು ಅಂತ ಹೇಳುವ ಮಂದಿ ಹೆಚ್ಚು ಈ ಪರಪಂಚದಾಗೆ ..!

ಫೇಮಸ್  ಕಲಾವಿದರು ಉತ್ತಮ ನಿರೂಪಕರಾಗಿರ್ತಾರೆ ಅಂತ ಹೇಳೋಕೆ ಆಗಲ್ಲ, ಆದರೆ ನಮ್ಮ ಕನ್ನಡದ ಶಿವಣ್ಣ, ಪುನೀತ್, ಜಗ್ಗೇಶ್, ಸುದೀಪು ಎಲ್ರು ವಾವ್  ಅನ್ನುವಂತೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿ ದ್ರು .ಅದೇ ರೀತಿ ಹಿಂದಿಯಲ್ಲಿ ಸಲ್ಮಾನ್ ವಾವ್  ಅನ್ನುವಂತೆ  ಕಾರ್ಯಕ್ರಮ ನಡೆಸಿಕೊಡ್ತಾ ಇದ್ದಾರೆ ಸಲ್ಮಾನ್ ಸಿನಿಮಾಗಳಲ್ಲಿ ಸಲ್ಮಾನ್ Boy  ಮೃದುವಾದ  ಮಾತಿನ ಶೈಲಿ ನನಗೆ ತುಂಬಾ ಇಷ್ಟ.ಆದ್ರೆ ಅಂತಹ ಕೋಪದಿಂದ ಬೆಂಕಿ..! ಏನೇ ಹೇಳಿಸಲ್ Man  ಅವರು ಕೋಪ ನಿಯಂತ್ರಿಸಿದ್ದು ,ಕಾರ್ಯಕ್ರಮ ಕೂಲಾಗಿ ಮುನ್ನಡೆಸಿದ್ದು .... !ಎಲ್ರೂ ಸಾಮಾನ್ಯವಾಗಿ ಒಂದು ಕಣ್ಣನ್ನು ಮಿಟುಕಿಸೋದು ,ಆದರೆ ಸಲ್ಮಾನ್ ಎರಡು ಕಣ್ಣು ಬಳಸ್ತಾರೆ .. ಓಕೆ ಸಲ್  ಹಿಂಗೆ ಆಗುತ್ತಾ 
 ಓಯ್  ಓಯ್  ಸಲ್ಮಾನ್  Boy  ಕ್  ಲೈಕ್  ಇಟ್ 





ಲಿಸ್ಟ್


ಹೊಸವರ್ಷದ ಹಾರ್ದಿಕ ಶುಭಾಶಯಗಳು..ನಿಮ್ಮ ಬದುಕಲ್ಲಿ ಸದಾ ಹರುಷ ಜೊತೆಗಿರಲಿ.. ಕಷ್ಟಗಳನ್ನು ಎದುರಿಸುವ ಛಲ ನಿಮ್ಮದಾಗಿರಲಿ ..



ಆದಷ್ಟು ಒಳ್ಳೆಯ ನ್ಯೂಸ್ ಗಳಿಗೆ ಆದ್ಯತೆ ನೀಡಿ ಪಾ .. ಮಾಧ್ಯಮಗಳು ಅಂದ್ರೆ  ವೀಕ್ಷಕರು ಧೈರ್ಯದಿಂದ ಸಮಸ್ಯೆ ಹೇಳಿಕೊಳ್ಳುವಂತೆ ನಿಮ್ಮ ವರ್ತನೆ  ಇರಲಿ.. ಟಿ ಆರ್ ಪಿ ಮುಖ್ಯ .. ಹಾಗಂತ ಇಲ್ಲದ್ದು ಸಲ್ಲದ್ದು ಹೇಳಿ ಮನಸ್ಸಿನ ಸ್ವಾಸ್ಥ್ಯ ಕೆಡಿಸಿದರೆ ಸಾಮಾನ್ಯ ಮುಗ್ಧ ವೀಕ್ಷಕರು ಮುಂದೆ ನಿಮ್ಮ ಚಾನೆಲ್ ಗಳ ಕಡೆ ನಿಗಾ ಇದಲ್ಲ ಗೊತ್ತಿರಲಿ..
ವೀಕ್ಷಕರಲ್ಲಿ ಯೂತ್ ಗ್ರೂಪ್ ಹೆಚ್ಚು ನೋಡೋದು ಹಾಡುಗಳು, ಸಿನಿಮಾ, ಸ್ಪೋರ್ಟ್ಸ್ ...! ಆದರೆ ಜೊತೆಗೆ ಹೆಣ್ಣುಮಕ್ಕಳು ಆಂಕರ್ ಹೆಣ್ಣುಮಕ್ಕಳ ಕಡೆಗೂ ಗಮನ ಕೊಡ್ತಾರೆ.. ಅದರಲ್ಲೂ ಸ್ಟೈಲಿಶ್, ಸ್ಮೈಲಿಶ್, ಹೀಗೆ ಹಲವಾರು ಕಾರಣಗಳಿಗೆ ಅವರ ಮತ.



ನಾನು ಸುವರ್ಣ ನ್ಯೂಸ್  ಸಹನಾ ಭಟ್ ಬಗ್ಗೆ ಹೇಳಿದಾಗ ಆಕೆಯ ಬಗ್ಗೆ ಓಕೆ ಅಂದ ಹೆಣ್ಣುಮಕ್ಕಳು ಭಾವನಗೂ ಮಾರ್ಕ್ಸ್ ಕೊಟ್ಟಿದ್ದಾರೆ.  ಕ್ಯೂಟ್ ಕ್ಯೂಟ್  :-) ಶ್ವೇತ ನಗು ಅವರಿಗೆ ಇಷ್ಟ ಆಗಿದೆ,ಸೊ ಜಾಸ್ತಿ ನಗ  ಬ್ಯಾಡಮ್ಮ  ಇದೆ ವಿಷಯಕ್ಕೆ ಮುನಿದು ಬಿಟ್ಟಾರು ;-)
ಜನಶ್ರಿ ಸೌಮ್ಯ ಕಂಡ್ರೆ ತುಂಬಾ ಇಷ್ಟವಂತೆ, ವೀಣಾಗೂ  ಮಾರ್ಕ್ಸ್ ಬಿದ್ದಿದೆ.ಟೀವಿ ನೈನ್ ಶೀತಲ್ ,ಉಷಾ, ಹೇಮಾ..ಗುಳಿ ಗಲ್ಲದ ಚಲುವೆ (ಸಾರಿ ಹೆಸರು ಗೊತ್ತಿಲ್ಲ ) ,ಪಬ್ಲಿಕ್ ಟೀವಿಯಲ್ಲಿ ದಿವ್ಯ..ಇನ್ನು ಲಿಸ್ಟ್ ಇದೆ.. ಮುಂದೆ ಹೇಳ್ತೀನಿ ಅಲ್ಲಿವರೆಗೂ ಎಲ್ಲರಿಗೂ ಹ್ಯಾಪಿ ನ್ಯೂ ಇಯರ್ :-)   

ಮಿಸ್ಸಿಂಗ್..

ಕನ್ನಡ ಕಿರುತೆರೆ ಲೋಕದಲ್ಲಿ ಅತ್ಯಂತ ಜನಪ್ರಿಯ ವಾಹಿನಿಗಳು  ಯಾವುದು ಅಂತ ಈಗ ಕೇಳಿದ್ರೆ ಎಲ್ಲವೂ ಅನ್ನೋ ಉತ್ರ ಸಿಗುತ್ತೆ. ಯಾಕೆ ಅಂದ್ರೆ ಎಲ್ಲರೂ ಎಲ್ಲವನ್ನೂ  ವೀಕ್ಷಿಸುತ್ತಾರೆ.
ಆದರೆ ಹೆಣ್ಣುಮಕ್ಕಳು ತಪ್ಪದೆ ವೀಕ್ಷಿಸುವ ವಾಹಿನಿಗಳು ಎಲ್ಲವೂ ಆದರೂ ಸಹ ಅವರ  ಮೆಚ್ಚಿನ ಧಾರಾವಾಹಿಗಳು ಪ್ರಸಾರ ಆಗೋದು ಉದಯ, ಈ ಟೀವಿ ಕನ್ನಡ, ಸುವರ್ಣ, ಜೀ ಕನ್ನಡ, ಕಸ್ತೂರಿ,ಚಂದನ ವಾಹಿನಿಗಳಲ್ಲಿ .

ಉದಯ ವಾಹಿನಿಯು  ಏಕಾಂಗಿಯಾಗಿ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ಅದಕ್ಕೆ ಎದುರಾಳಿ ಆಗಿ ಬಂದ  ವಾಹಿನಿ ಈ ಟೀವಿ ಕನ್ನಡ.ಅದನ್ನು  ಬಲಶಾಲಿ ಮಾಡಿದ್ದು ಅದರಲ್ಲಿ ಪ್ರಸಾರ ಆಗುತ್ತಿದ್ದ ಕಾರ್ಯಕ್ರಮಗಳು.ಅಂತಹ ಕಾರ್ಯಕ್ರಮಗಳನ್ನು ವೀಕ್ಷಕರ ಮನಸ್ಸಿಗೆ ತಲಪುವಂತೆ ಮಾಡಿದ್ದು ಅನೇಕ ಮಂದಿ.
 ಈ ಟೀವಿ -ಮುಖ್ಯವಾಗಿ ಎಸ್ .ಪಿ. ಬಾಲ ಸುಬ್ರಮಣ್ಯಮ್ ,ಟಿ.ಎನ್ . ಸೀತಾರಾಮ್, ಬಾಲ ಕೃಷ್ಣ ಕಾಕತ್ಕರ್, ಸಿಹಿಕಹಿ ಚಂದ್ರು,ರವಿ ಬೆಳಗೆರೆ...!ಮತ್ತೆ ಆ ಕಂಪನಿಯಲ್ಲಿ ಇದ್ದ ಅನೇಕಾನೇಕ ಮಂದಿ.
ಹಾಡಿನ ರಿಯಾಲಿಟಿ ಷೋಗೆ ಹೊಸ ಆಯಾಮ ದೊರಕಿಸಿ ಕೊಟ್ಟ ಎಸ್ಪಿಬಿ  ಈ ಕಾರ್ಯಕ್ರಮದಲ್ಲಿ ತಾವು ಭಾಗಿ ಆಗ ಬೇಕು ಎಂದು ನಾನು ಕಂಡಂತೆ ಅನೇಕಾನೇಕ ಉದಯೋನ್ಮುಖ  ಕಲಾವಿದರು ಕಾಯುತ್ತಿದ್ದರು .ಚಂದನ ವಾಹಿನಿಯ ಥಟ್ ಅಂತ ಹೇಳಿ ಮತ್ತು, ಮಧುರ ಮಧುರ ವೀ.. ಕಾರ್ಯಕ್ರಮದ ರೀತಿ ಎಸ್  ಪಿ ಬಿ ಅವರ ಎದೆ ತುಂಬಿ ಹಾಡಿದೆನು ಹೆಚ್ಚು ಕಾಲ ಉಳಿದ,ಜನರ ಮೆಚ್ಚಿನ ಕಾರ್ಯಕ್ರಮ. ಆದ್ರೆ ಈಗ ಅದು ಮಿಸ್ಸಿಂಗ್..

ಕ್ರೈಮ್  ಡೈರಿ ಕಾಕತ್ಕರ್ ಉದಯಕ್ಕೆ ಹೊರಟ  ಬಳಿಕ  ಮಾತಿನ ಮೂಲಕ ಮೋಡಿ  ಮಾಡಿದ ರವಿ ಬೆಳಗೆರೆ ಹತ್ತುಗಂಟೆಗಾಗಿ ವೀಕ್ಷಕರು ಕಾಯುವಂತೆ  ಮಾಡಿದ ಸಾಹಸಿ!ಅವರ ಹಾಡಿನ ಷೋ ಸಹ ಅಷ್ಟೇ ಖುಷಿ ಕೊಟ್ಟ ಕಾರ್ಯಕ್ರಮ 
ಅದೇ ರೀತಿ ಸಿಹಿ ಕಹಿ ಚಂದ್ರು ಗ್ರೂಪ್ ಸಹ ಹಾಸ್ಯದ ಸವಿ ರುಚಿ ನೀಡಿದ್ದು  ಹಳೆಯ ಕಥೆ. 
ಟಿ.ಎನ್ .ಸೀತಾರಾಮ್ ಹೆಣ್ಣುಮಕ್ಕಳ ನಾಡಿಮಿಡಿತ ಬಲ್ಲ ನಿರ್ದೇಶಕ. ಯಾವುದೇ ಧಾರವಾಹಿ  ಆರಂಭಿಸಲಿ ಅದು ವೀಕ್ಷಕರಿಗೆ ತಲಪುವಂತೆ ಸಿದ್ಧ ಮಾಡಿರುತ್ತಾರೆ. ಒಂದರ್ಥದಲ್ಲಿ ಹೇಳುವುದಾದರೆ ಟಿ .ಎನ್ .ಎಸ್  ಧಾರವಾಹಿ ನೋಡೋದೇ  ಪ್ರತಿಷ್ಠೆಯ ಸಂಖೇತ ಅನ್ನುವಷ್ಟರ ಮಟ್ಟಿಗೆ ಜನರನ್ನು ತಲುಪಿರುವ ಸೀತಾರಾಮ್ ಅವರ ಬಾಂಧವ್ಯ  ಈ ಟೀವಿ ಜೊತೆ ಹೀಗೆ ಮುಂದುವರೆಯುತ್ತಾ..? ಕಾಯೋಣ.. ಸಧ್ಯಕ್ಕೆ ಅದರ ಫಲಿತಾಂಶ ದೊರಕಲಿದೆ.

ಹಿಂದಿ ಧಾರವಾಹಿಗಳನ್ನು ರೀಮೇಕ್ ಮಾಡುವ ಕೆಲಸ ಈಗ ಈಟೀವಿಯಲ್ಲಿ  ಆರಂಭ ಆಗಿದೆ. ಫೈನ್ ..ಆದರೆ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಇದ್ಯಾ ... !!!