ಮತ್ತೊಂದಷ್ಟು ಕಾರ್ಟೂನ್ಸ್

ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಆಗಿರುವ ಬದಲಾವಣೆ.. ಪಾರ್ಟಿಗಳಿಗೆ ಬಡಿದಿರುವ ಗಾಳಿ.. ಅದನ್ನು ನಮ್ಮ  ಕಾರ್ಟೂನಿಸ್ಟ್  ಗಳು  ತಮ್ಮ ಗೆರೆಗಳ ಮೂಲಕ ತುಂಬಾ ನವಿರಾಗಿ ತಿಳಿಸಿದ್ದಾರೆ.. ಥ್ಯಾಂಕ್ಸ್ ಟು ಸತೀಶ್ ಆಚಾರ್ಯ,ರಘುಪತಿ ಶೃಂಗೇರಿ , ಮುಹಮ್ಮದ್, ಶ್ರೀಧರ್.. 









ಅಲಗ್ ಛಿ !


 ಯಾವ ಯಾವ ಪೋಸ್ಟ್ಗೆ ಹೆಚ್ಚು ಗಮನ ಕೊಡ್ತಾರೆ ಅನ್ನುವುದನ್ನು ನಾನು ಪ್ರತಿಬಾರಿ ವೀಕ್ಷಿಸ್ತಾ ಇರ್ತೀನಿ ನನ್ನ ಬ್ಲಾಗ್ ನಲ್ಲಿ ..ಕೆಲವರ ಬಗ್ಗೆ ಬರೆದರೆ ಸಕತ್ ಹಿಟ್ಸ್ ಸಿಗುತ್ತೆ.. ಇರ್ಲಿ ಒಮ್ಮೆ ಹೇಳ್ತೀನಿ ಅವರುಗಳ ಬಗ್ಗೆ.. ಕೆಲವರು ಕೆಲವರ ವಿಷ್ಯ ಇಷ್ಟ ಪಟ್ಟು ಓದುತ್ತಾರೋ, ಕೊಪದಿಂದಾನೋ ಗೊತ್ತಿಲ್ಲ ಆದ್ರೆ ಓದ್  ತೀರ್ತಾರೆ :-) 

ಇತ್ತೀಚಿಗೆ ನಾನು ಕಸ್ತೂರಿ ನ್ಯೂಸ್ನಲ್ಲಿ ಒಂದು ಕಾರ್ಯಕ್ರಮ ವೀಕ್ಷಿಸಿದೆ.. ಮೃತ್ಯುಂಜಯ ಅಂತ ಅದರ ಹೆಸರು. ಚೆನ್ನಾಗಿತ್ತು.. ಮೂವರು ಆಪ್ತ ಮಿತ್ರರು ಮೀನು ಹಿಡಿಯೋಕೆ ಹೋಗಿ ದಾರಿ ತಪ್ಪಿ ಸುಮಾರು ಹದಿಮೂರು ದಿನಗಳ ಕಾಲ ಏನೂ ಇಲ್ಲದೆ ಜೀವಕ್ಕಾಗಿ ಹೋರಾಡಿದ ಸಾಕ್ಷಾಚಿತ್ರ..ಆಂಗ್ಲ ಸಾಕ್ಷಚಿತ್ರ ಕನ್ನಡಕ್ಕೆ ಡಬ್ ಆಗಿತ್ತು. ನಿರೂಪಕ  ವಸಂತ್ ಕುಮಾರ್ ..
ಚೆನ್ನಾಗಿತ್ತು .ಜೀವ ಉಳಿಸಿಕೊಳ್ಳಲು ನಾವು ಅದೆಷ್ಟು ಹೋರಾಟ ನಡೆಸ್ತೀವಿ ಅದ್ಭುತವಾಗಿತ್ತು..ಮತ್ತೊಮ್ಮೆ ಪ್ರಸಾರ ಮಾಡಿದ್ರೆ ನೋಡಿ..ಹಿನ್ನಲೆ ಧ್ವನಿ ಸಹ ಚನ್ನಾಗಿತ್ತು.

ಜನಶ್ರೀ ವಾಹಿನಿಯಲ್ಲಿ ಪ್ರಸಾರ ಆಗುವ ಅಚ್ಚರಿ ಕಾರ್ಯಕ್ರಮ ಸದಾ ಸರ್ವದಾ ಇಷ್ಟಪಟ್ಟು ವೀಕ್ಷಿಸುವ ಕಾರ್ಯಕ್ರಮ. ಪ್ರತಿಬಾರಿ ಒಂದೊ೦ದು ಸಂಗತಿ. ಇತ್ತೀಚಿಗೆ ಮರುಭೂಮಿ ಹೂ ಅನ್ನೋ ಸಾಕ್ಷಚಿತ್ರ,ಆಸ್ಟ್ರೇಲಿಯ ದೇಶದಲ್ಲಿ ಇರುವ ಜೀವ ಸಂಕುಲದ ಅಸಮತೋಲನ ಸಂಗತಿ ತುಂಬಾ ಇಷ್ಟ ಆಯ್ತು.ಸಿಕ್ಕಿದ್ದೇ ಸಾಕು ಅಂತ ಪ್ರಾಣಿ ಪಕ್ಷಿಗಳನ್ನು ಕೊಂಡರೆ ಅಸಮತೋಲನ  ಆಗುತ್ತೆ..ಆದರೆ ಆಸ್ಟ್ರೇಲಿಯದಲ್ಲಿ ಪ್ರಕೃತಿಯ ಸೃಷ್ಟಿಯಲ್ಲೇ ವಿಚಿತ್ರ ಇದೆ.. ಅಪಾರ ಸಂಖ್ಯೆಯಲ್ಲಿ ಇಲಿಗಳು, ಅವುಗಳ ನಿಯಂತ್ರಣಕ್ಕಾಗಿ ಪರದಾಟ .. ಒಂದೊಂದು ಸಂಗತಿಯು ಆಸಕ್ತಿಕರ .


ಕಲರ್ ವಾಹಿನಿ ಬಿಗ್ ಬಾಸ್ ಕಾರ್ಯಕ್ರಮ ನಿಜವಾಗಿ ಅಲಗ್  ಛೆ ..! ಆ  ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಡೆಲ್ನಾಜ್  ಪೌಲ್ ಅನ್ನುವ ಸಂಯಮದ ಹೆಣ್ಣು ಮಗಳಿದ್ದಾಳೆ.ಆಕೆಯ ಮೇಲೆ ನೋಡಿ ಎಲ್ರು ಉರಿದು ಬೀಳೋದು.ಆಕೆ ವಿಚ್ಚೇದನ ನೀಡಿರುವ  ರಾಜೀವ್ ಅನ್ನೋಸ್ಪರ್ಧಿ  ಈಗ ಆಕೆಯ ಮೇಲೆ ಪ್ಯಾರ್ ತೋರಿಸುವ --ನಿಜವಾಗಿಯೂ ಇದೆಯೇನೋ  ಆದರೂ ಆತ  ಒಳ್ಳೆ ನಾಟಕಕಾರ . ಆಕೆ ಈಗ ಎಲಿಮಿನೆಟ್  ಆಗುವ ಹಾದಿಯಲ್ಲಿ ಇದ್ದಾಳೆ.. ಪಾಪ ಹಾಗಾಗ ಬಾರದು. ಹಾಗಾದ್ರೆ ಬಿಗ್ ಬಾಸ್ ಸ್ಟ್ಯಾಂಡರ್ಡ್  ಗೇಂ ಅಲ್ಲ  ಇನ್ನೊಂದು ರೀತಿ ಗೇಂ ಆಡ್ತಾ ಇದೆ ಅನ್ನುವುದು ಸಾಬೀತಾಗುತ್ತೆ.ಆಗ ಇದು ಅಲಗ್  ಛೆ ಅಲ್ಲ ಅಲಗ್ ಛಿ  ! 
ವೆಲ್ ಪ್ರತಿ ಸೀಸನ್ ನಲ್ಲೂ  ಪ್ರಸೆಂಟರ್  ಸಲ್ಮಾನ್  ಖಾನ್ ಸ್ಮಾರ್ಟ್ ಸ್ಮಾರ್ಟ್ ಆಗಿ ಕಾಣ್ತಾನೆ ಇರ್ತಾರೆ..ಅವರ ಆ ವಿಶೇಷತೆ ಇಷ್ಟ ಆಗುತ್ತೆ.. ಸಲ್ಮಾನ್ ಆಲ್ವೇಸ್ boy ಆಗಿರೋದು ಇದೆ ಕಾರಣದಿಂದ ಅಂತ ಕಾಣುತ್ತೆ
ಕಳೆದ ಎಪಿಸೋಡ್ ನಲ್ಲಿ ಸಲ್ಮಾನ್ boy  ಐ ಲವ್ ಯು ಅಂತ ವೀಕ್ಷಕರಿಗೆ ಹೇಳಿದ್ರು.. ಹೆಣ್ಣುಮಕ್ಕಳಿಗೆ ಸಕತ್ ಖುಷಿ ಆಗಿರುತ್ತೆ.. ವಾಟ್ ಯಾ ಸಲ್ಮಾನ್.. ಐ  ಲೈಕ್ ಇಟ್ ಐ ಲೈಕ್ ಇಟ್  




  • Manjunatha KP likes this.
  • Manjunatha KP ನಾನೂ ದಿನಲೂ ಈ ಅಚ್ಚರಿ ಕಾರ್ಯಕ್ರಮ ನೋಡಿತ್ತೇನೆ.. ಕಿರುತೆರೆಯಲ್ಲಿ ಇದೊಂದು ವಿಭಿನ್ನ ಪ್ರಯತ್ನ..ಜನಶ್ರೀಯವರಿಗೆ ಧನ್ಯವಾದಗಳು.




ನಾಳೆ

ಯಾರಿಗೆ ಏನಾಗಿದೆಯೋ ಗೊತ್ತಿಲ್ಲ ಆದರೆ ನಾಳೆ 12-12-12   ದಿನಾಂಕ ಹೆಚ್ಚು ಒದ್ದಾಡುವಂತೆ ಮಾಡಿರೋದು ನಮ್ಮ ವಾಹಿನಿಗಳಿಗೆ. ಏನಾಗುತ್ತೆ ಏನಾಗ ಬಹುದು, ಹೀಗಾಗ ಬಹುದು.. ಅಯ್ಯೋ ನಾಳೆ ತನಕ ಕಾಯ್ರಿ ಅಂತ ವೀಕ್ಷಕರು ಹೇಳ್ತಾ ಇಲ್ಲ, ಯಾಕೆಂದ್ರೆ ಇದು ಇಂದಿನ ಕಾರ್ಯಕ್ರಮ ಸೊ ವಾಚ್ ಮಾಡುವ  ಸಿಂಪ್ಲಿ..ವರಿ ಯಾಕೆ ಮಾಡಬೇಕು.
ಸುವರ್ಣ ನ್ಯೂಸ್ ನಲ್ಲಿ ನಿರೂಪಕ ಅರವಿಂದ್  ಹನ್ನೆರಡರ  ಚಿಂತೆಯಲ್ಲಿ  ಇದ್ರೂ. ಸಹಜವಾಗಿ ತಮ್ಮ ಗಾಬರಿ ಹೋಗಲಾಡಿಸಲು ಅವರು ಇಬ್ಬರು ಜ್ಯೋತಿಷಿಗಳ ಮತ್ತು ಒಬ್ಬರು ಸಂಖ್ಯಾ ಶಾಸ್ತ್ರದವರ ಮೊರೆ ಹೋಗಿದ್ರು. ಇಂದು ಬೆಳಗಿನ ಈ ಕಾರ್ಯಕ್ರಮದಲ್ಲಿ ನಾಳೆ ಹುಟ್ಟುವ  ಮಕ್ಕಳು, ಅವರ ಗ್ರಹಚಾರ, ಒಳ್ಳೆಯ ಅಂಶಗಳು ಅದೂ ಇದು ಎಲ್ಲದರ ಬಗ್ಗೆ ಹೇಳ್ತಾ ಇದ್ರೂ.. ಕೆಲವು ಸಂಗತಿಗಳು ನಗು ಬರೆಸಿದರೂ ಒಂದಷ್ಟು ಅಂಶಗಳು ವೆರಿ ಇ೦ಟ್ರೆ ಸ್ಟಿಂಗ್ . ಯಾಕೆ ಅಂದ್ರೆ ಗ್ರಹಚಾರ ಫಲ ಹೇಳುತ್ತಿದ್ದ ನಾಳೆ ಒಳ್ಳೆಯ ದಿನ ಎಂದು ಒಮ್ಮೆ ಹೇಳಿದರೆ (ಹುಟ್ಟುವ ಮಗುವಿಗೆ ).. ಆದರೆ ಸ್ವಲ್ಪ ಕಾಲದ ಬಳಿಕ ಅದಕ್ಕೆ ಗುರು ಬಲ ಇರಲ್ಲ ಅನ್ನುವ ಮಾತು ಹೇಳಿದರು.. ಒಳ್ಳೆಯದು-ಕೆಟ್ಟದ್ದು ಸೃಷ್ಟಿಸಿದ ದೇವನ ಕೈಲಿದೆ ಎಂದು ನಂಬುವ ಜನರಿಗೆ ಯಾವುದನ್ನು ಸ್ವೀಕರಿಸ ಬೇಕು ಎಂದು ತಿಳಿಯದ ಗೊಂದಲ :-)
ಇವರ ಮಾತಿನ ನಡುವೆ ನಿರೂಪಕ ಅರವಿಂದ್ ಖಗೋಳದ ಕೆಲವು ಮಾಹಿತಿಗಳನ್ನು ನೀಡಿದರು ಅವುಗಳು ತುಂಬಾ ಆಸಕ್ತಿಕರವಾಗಿತ್ತು.ಹಾಗೆ ಬಂದ ಅತಿಥಿಗಳ ಎಲ್ಲ ಮಾತುಗಳು ತಿಳಿಸಿದ ಕೆಲವು ಸಂಗತಿಗಳು ಇಷ್ಟ ಆಯ್ತು.. ವಿವೇಕಾನಂದರು ಹುಟ್ಟಿದ್ದು 12.. ಹಾಗೆ ವಿಶ್ವ ವಿಖ್ಯಾತರು ಜನ್ಮಿಸಿದ್ದು ಈ ದಿನಾಂಕದಲ್ಲಿ ಆದ್ದರಿಂದ ಒಳ್ಳೆಯದಾಗುತ್ತದೆ ಎನ್ನುವ ಆಶಯ ಹೊಂದಿ ಎನ್ನುವ ಅಂಶವನ್ನು ಬಂದ ಅತಿಥಿಗಳು ತಿಳಿಸಿದರು.. 
ಸುವರ್ಣ ನೂಸ್ ನಲ್ಲಿ ಅರವಿಂದ್  ಸಹ ಉತ್ತಮ ನಿರೂಪಕ, ಅದೇ ರೀತಿ ಹೆಚ್ಚು ಸ್ಪಷ್ಟವಾಗಿ ಅತಿಯಾದ ಸ್ಪೀಡ್ ಇಲ್ಲದೆ ಮಾತಾಡುವವರು ಹಮೀದ್, ಗೌರೀಶ್..ಅದೇ ರೀತಿ ಟೀವಿ ನೈನ್  ನಲ್ಲಿ ರೆಹಮಾನ್, ಪಬ್ಲಿಕ್ನಲ್ಲಿ ರಂಗಣ್ಣ,ಜನಶ್ರಿ ರಮಾಕಾಂತ್,ವಸಂತ್,ರಾಘವೇಂದ್ರ, ಅನಂತ್ ಚಿನಿವಾರ್ ,..........!

ಒಟ್ಟಾರೆ ನಾಳೆ ನಮ್ಮನ್ನು ತುಂಬಾ ಸತಾಯಿಸ್ತಾ ಇದೆ.. ನಾಳೆ ತನಕ ಕಾದರೆ ಏನಾಗುತ್ತೆ ಅಂತ ಗೊತ್ತಾಗುತ್ತದೆ..

ಸೋನಿ ವಾಹಿನಿಯಲ್ಲಿ ಅನಾಮಿಕ ಅನ್ನೋ ಒಂದು ಧಾರವಾಹಿ ಬರ್ತಾ ಇದೆ. ಸಕತ್ ಆಸಕ್ತಿಯಿಂದ ನೋಡುವಂತಿದೆ ಆ ಸೀರಿಯಲ್ ಯಾಕೆ ಗೊತ್ತ ಅದರಲ್ಲಿ ದೆವ್ವ ಇದೆ ಹಾಗೂ ದೆವ್ವ ಇದೆ ಮತ್ತು ದೆವ್ವ ಇದೆ.
ಅದಕ್ಕಿಂತ ಇಷ್ಟ ಆಗೋ ಸಂಗತಿ ಅಂದ್ರೆ ಆ ಧಾರಾವಾಹಿಯಲ್ಲಿ ಪಂಜಾಬಿ ಫ್ಯಾಮಿಲಿ ಕಥೆ, ಪಂಜಾಬಿ ಭಾಷಿಗರು, ನಾಡಿನವರ ಒಂದು ಗುಣ ಇಷ್ಟ ಆಗುತ್ತೆ, ಇದು ನನ್ನ ಅನುಭವ ಅವರು ಕರ್ನಾಟಕದಲ್ಲಿ ಸೆಟಲ್ ಆದರೆ ಕನ್ನಡ ಕಲೀತಾರೆ.. ಬೇರೆಯವರಂತೆ ಕರ್ನಾಟಕದಲ್ಲಿ ಇದ್ದು ತಮಿಳು, ತೆಲುಗು ಕಲಿಯಲ್ಲ. ಅವರು ಒಂದು ಸಂಗತಿಗೆ ಆದ್ಯತೆ ನೀಡ್ತಾರೆ ನಾವಿರುವ ಜಾಗ, ನಾವುಣ್ಣುವ ನೆಲದ ಗೌರವಿಸುವುದು.
ಈ ವಾಹಿನಿಯಲ್ಲಿ ಶನಿವಾರ ಭಾನುವಾರ ಕ್ರೈಂ ಪ್ರಿಯರಿಗೆ ಮಜಾ ಬೇಜಾನ್ ಮಜಾ ಸಿಗುತ್ತೆ.ಕಕಾರಣ ಇಷ್ಟೇ ಒಂದು ಸೀರಿಯಲ್ ಲಾಯರ್, ಇನ್ನೊಂದು ಸಿ ಐ ಡಿ , ಮತ್ತೊಂದು .. ಒಟ್ಟಲ್ಲಿ ವೀಕ್ಷಕರು ಬೇಜಾರಾಗಲೇ ಬಾರದು ..ಸಿ ಐ ಡಿ  ಸಕತ್ .. ಯಾಕೆ ಗೊತ್ತಾ ನಿಜವಾದ ಕಥೆನೇ ಅಂದ್ರೆ ನಿಜವಾಗಿ ಅಷ್ಟೆಲ್ಲ ಇನ್ವೆಸ್ಟಿ ಗೇಶನ್  ಮಾಡ್ತಾ ಇದ್ದಾರೇನೋ ಅಂತ ಅನ್ನಿಸುತ್ತೆ ..!

ಸ್ಟಾರ್ ವಾಹಿನಿಯಲ್ಲಿ ಒಂದು ಧಾರವಾಹಿ ವೀರ ಅಂತ ಪ್ರಸಾರ ಆಗ್ತಾ ಇದೆ ಅದು ಸಹ ಪಂಜಾಬಿಗಳದು. ಒಂದು ಮಗು ಅದರ ಹೀರೋ .ರಣವೀರ ಏನ್ ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾನೆ ಗೊತ್ತ.. ಪುಟ್ಟ ಬಾಲಕ ದೈತ್ಯ ಪ್ರತಿಭೆ.

Comment....

Shivaprasad Shagrithaya I think media should have been more careful in choosing contents ,they should not only look at TRP ratings which will be of shorter gain for the long run it will kill channel for feeding more such nonsense issues ,those they them selves don't believe it.


kannadiga
23:09 (20 hours ago)
to me
kannadiga has left a new comment on your post "ನಾಳೆ":

'ಸ್ವಾಮಿ ವಿವೇಕಾನಂದ ಅವರು ಹುಟ್ಟಿದ್ದು ಜನವರಿ 12' 


ನನ್ನ ಪ್ರತಿಕ್ರಿಯೆ..
ಹೌದು  12 ದಿನಾಂಕದ ಬಗ್ಗೆ ಅವರು ಹೇಳಿದ್ದು ತಿಂಗಳ ಬಗ್ಗೆ ಅಲ್ಲ..

???!!!

ಸಮಸ್ಯೆಗೆ ಕಾರಣ ಏನು ಅನ್ನುವುದು ಗೊತ್ತಿದ್ರು ಅ ಸಮಸ್ಯೆ ಹೆಚ್ಚು ಬೆಳೆಯುವಂತೆ ಮಾಡುವವರು ನಾವು. ಚುದಾಯಿಸಿದರೆ ತಪ್ಪು ಅನ್ನುವುದು ಗೊತ್ತು, ಆದರೂ ಚುಡಾಯಿಸದೆ  ಬಿಡರು  ಹುಡುಗರು. ಇನ್ನು ಮುಂದೆ ಚುಡಾಯಿಸಿದರೆ  ಮಾರಿ ಹಬ್ಬ ಕಾದಿದೆ ಅನ್ನುವ ಕಾನೂನು ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ cnn ibn  ವಾಹಿನಿಯಲ್ಲಿ ವಾರ್ತೆ ಪ್ರಸಾರ ಮಾಡ್ತಾ ಇತ್ತು. ಆ ವಿಷಯವನ್ನು ನೋಡ್ತಾ ಇದ್ದಂಗೆ ದುಃಖ ಆಯ್ತು ಯಾಕೆ ಗೊತ್ತಾ. ಅಲ್ಲಿ ಎರಡು ಪ್ರಸಂಗಗಳನ್ನೂ ಪ್ರಸಾರ ಮಾಡ್ತಾ ಇದ್ರೂ..ಚಂಡೀಗರ್  ಮತ್ತು ಮುಂಬೈ ಅಂದಿನ ಹೈಲೈಟು .. ಚಂಡೀಗರ್ ನಲ್ಲಿ ಹೀಗೆ ರೇಗಿಸಿದ ಮಗಳ ರಕ್ಷಣೆಗೆ ಹೋದ ಅಪ್ಪ ಜೀವ ತೆತ್ತ ಕಥೆ.. ಆತನನ್ನು ಸಾಯಿಸಿದ್ದು ರಾಜಕೀಯ ಹಿನ್ನೆಲೆಯ ಹುಡುಗ..
ಮುಂಬೈ ನಲ್ಲಿ ತನ್ನ ಸೋದರಿಯನ್ನು ರಕ್ಷಿಸಲು ಹೋದ ಹುಡುಗನನ್ನು ಪೊರ್ಕಿ ಗಳು ಕೊಂದು ಹಾಕಿ ಬಿಟ್ರಂತೆ . ಎಂತಹ ದುಃಖದ ವಿಷ್ಯ ಅಲ್ವೇ..ಯಾವುದೇ ಕಾನೂನು ಬರಲಿ ಅಂತಹವರಿಗೆ ಬುದ್ಧಿ ಕಲಿಸ ಬೇಕಾದರೆ ಜನರು ಜಾಗೃತರಾಗ ಬೇಕು.. 
 ಇದೆ ವಾಹಿನಿಯ ಪಾಸಿಟಿವ್ ಇಂಡಿಯ ಕಾರ್ಯಕ್ರಮ ಸಕತ್ ಇಷ್ಟ ಆಯ್ತು ನನಗೆ.. ದೊಡ್ಡ ಫ್ಯಾನ್ ಆಗ್ ಬಿಟ್ಟಿದ್ದೀನಿ ಆ ಕಾರ್ಯಕ್ರಮಕ್ಕೆ..

ರೇಗಿಸಿ  ಚುಡಾಯಿಸಿ  ಮಜಾ ತೆಗೆದು ಕೊಳ್ಳುವವರೇ ನಿಮಗೆ ಕಾದಿದೆ ಕಾನೂನಿನ ಸಲಾಕೆ ಬರೆ ಇಡೋಕೆ ಅಂತ ತಿಳಿಸುವ ಪಬ್ಲಿಕ್ ವಾಹಿನಿ ಕಾರ್ಯಕ್ರಮ ಪೂರಕ ವಾಗಿತ್ತು.. ಕೇವಲ ಒಂದು ಗಂಟೆಯ ಷೋ ಮಾಡಿ ಬಿಡುವುದಕ್ಕಿಂತ ಈ ವಿಷಯ ಎಲ್ಲ ಸಾಮಾನ್ಯರಿಗೆ ತಿಳಿಯುವಂತೆ ವಾತಾವರಣ ಕಲ್ಪಿಸ ಬೇಕು ಹಾಗೆ ಆದೀತಾ?
ಇಷ್ಟು ದಿನಗಳ ಕಾಲ ಪಬ್ಲಿಕ್ ವಾಹಿನಿ ಪ್ರಳಯ ಫಿಕ್ಸ್ ಅಂತ ಒದ್ದಾಡ್ತಾ ಇತ್ತು, ಈಗ ಪ್ರಳಯ ಮಿಸ್ .. ಮುಂದೆ ಪ್ರಳಯ ನೆಕ್ಟ್ ಅಂತಾ ಪ್ರಸಾರ ಆಗುತ್ತಾ ರಂಗ ಸರ್ ?? ನಿವ್ಯಾಕೆ ಹಿಂಗಾದ್ರೀ...???!!!!  

ರಾಜಕೀಯ-ಯಡ್ಡಿ-ಕಾವೇರಿ

ನಮ್ಮ ಹೆಮ್ಮೆಯ ಕಾರ್ಟೂನಿಸ್ಟ್ ಗಳಾದ  ಸತೀಶ್ ಆಚಾರ್ಯ, ರಘುಪತಿ ಶೃಂಗೇರಿ  ಹಾಗೂ ಶ್ರೀಧರ್  ಅವರು ರಾಜ್ಯ ರಾಜಕಾರಣ, ಯಡಿಯೂರಪ್ಪ ಹೊಸ ಪಕ್ಷ ಮತ್ತು ಕಾವೇರಿ ಸಮಸ್ಯೆಯನ್ನು ಈ ರೀತಿ ತಮ್ಮ ಗೆರೆಯಲ್ಲಿ ಎಳೆದಿದ್ದಾರೆ.. ನೋಡಿ.. ಎಂಜಾಯ್ ಮಾಡಿ .. ...