ಚಿರಋಣಿ



ನಾನು ಮಾಧ್ಯಮ ಲೋಕದಲ್ಲಿ ಅದರಲ್ಲೂ ಕಿರುತೆರೆಯ ಬಗ್ಗೆ ಬರೆಯಲು ಆರಂಭ ಮಾಡಿದಾಗ ಬಹಳಷ್ಟು ಜನರಿಗೆ ನಗು ಬಂದಿತ್ತು. ನಾನು ನನ್ನ ಖುಷಿಗೆ ಬರೆಯೋದಕ್ಕೆ ಆರಂಭಿಸಿದೆ ವಿನಃ ಮತ್ಯಾವುದೇ ಅಂಶಕ್ಕೂ ಅಲ್ಲವೇ ಅಲ್ಲ. ಆದರೆ ಇಲ್ಲಿ ಬರೆಯೋಕೆ ಆರಂಭ ಮಾಡಿದ ಬಳಿಕ ಅನೇಕರ ಪರಿಚಯ ಆಯ್ತು.. ಅನೇಕರ ಬಗ್ಗೆ ಗೊತ್ತಾಯ್ತು ಹಾಗೂ ಅನೇಕರಿಗೆ ನಾನು ಗೊತ್ತಾದೆ.
ಸುವರ್ಣ ನ್ಯೂಸ್ ನಲ್ಲಿ ಕ್ಯಾಮರ ಹಿಂದೆ ಕೆಲಸ ಮಾಡುವ ನನ್ನ ಪ್ರತಿಭಾವಂತ ಗೆಳೆಯ ಪಲವಲ್ಲಿ ಬದರಿನಾಥ್. ಸಾಮಾನ್ಯವಾಗಿ ನನ್ನ ಬರಹ ಅದು ಹೆಂಗೆ ಇರಲಿ ಮೆಚ್ಚಿ ಬರೆಯುವ ಹಾಗೂ ತಾನು ಓದಿದ್ದೇನೆ   ಎಂದು ಹೇಳುವಂತಹ  ಉತ್ತಮ ಮನದ ಗೆಳೆಯ.. ಬರೀತಾ ಇರಿ ನಮಗೆ  ನಿಮ್ಮ ಬ್ಲಾಗ್ ಜೊತೆಗೆ ಹಳೆಯ  ನೆಂಟಸ್ತನ ಇದೆ ಎಂದಿದ್ದಾರೆ..ಥ್ಯಾಂಕ್ಸ್ ಬದ್ರಿ  ನಿಮ್ಮ ವಿಶ್ವಾಸಕ್ಕೆ .. ಚಿರಋಣಿ ನಾನು. 
ಕನ್ನಡದಲ್ಲಿ ಹೆಚ್ಚು   ವಾರ್ತಾ ವಾಹಿನಿಗಳು, ಅದರಲ್ಲಿ ಕೆಲವೊಮ್ಮೆ ಅರ್ಥ ಆಗುವ , ಕೆಲವು ಬಾರಿ ಅರ್ಥವೇ ಆಗದ ಚರ್ಚೆಗಳನ್ನು ನೋಡುತ್ತಿರುತ್ತೇನೆ. ಅದನ್ನು ಹೊರೆತು ಪಡಿಸಿದರೆ ರಿಯಾಲಿಟಿ ಶೋಗಳಿಗೆ ಹೆಚ್ಚು ಗಮನ ನೀಡುವುದು. ಏಕೆಂದರೆ ಅತ್ತೆ ಸೊಸೆ ಜಗಳ, ದ್ವೇಷ, ಅಂತಹದ್ದೇನು ಇರಲ್ಲ.
ಆದರೆ ನನ್ನನ್ನು ಅತಿ ಹೆಚ್ಚು ಸೆಳೆದ-ಸೆಳೆಯುವ  ಕಾರ್ಯಕ್ರಮ  ಚಂದನ ವಾಹಿನಿಯ ಥಟ್ ಅಂತ ಹೇಳಿ. ಕಳೆದ ಕೆಲವು ಎಪಿಸೋಡ್ ಗಳು ಸಂಪೂರ್ಣವಾಗಿ ಶಾಲಾ ಮಕ್ಕಳಿಗೆಂದೇ ತಯಾರಿಸಲಾಗಿತ್ತು. ಅದರಲ್ಲಿ ಹೈಸ್ಕೂಲ್ ಮಕ್ಕಳು ಭಾಗವಸಿದ್ದರು. ಅತ್ಯಂತ ಸುಂದರ ಹಾಗೂ ಮನಕ್ಕೆ ಆಪ್ತವಾದ ಕಾರ್ಯಕ್ರಮ. ನಾನು  ಹೈ ಸ್ಕೂಲ್ ಓದುವಾಗ ನನ್ನ ಶಾಲೆಯಿಂದ ನಾ. ಸೋಮೇಶ್ವರ್ ಸರ್ ಅವರು ನಡೆಸಿಕೊಟ್ಟಿದ್ದ ಇಂತಹದ್ದೇ ಕ್ವಿಜ್ ಕಾರ್ಯಕ್ರಮಕ್ಕೆ ನನ್ನ  ಸೀನಿಯರ್ಸ್ ಹೋಗಿದ್ದರು. ಅಲ್ಲಿ ತಪ್ಪು ಉತ್ತರ ಹೇಳಿ ಸೋತು ಬಂದಿದ್ದರು ಸಹ ಅವರಿಗೆ ಸಕತ್ ಜಂಬ ಇತ್ತು (ಇದು ಬಹಳ ಹಳೆ ಕಥೆ ಬಿಡಿ ). ಆದರೆ ಅಂದಿನಿಂದ ಈ ಮೇಸ್ಟ್ರ ಜೊತೆ ಅವಿನಾಭಾವ ಬಾಂಧವ್ಯ. 
ಇತ್ತೀಚಿಗೆ ಫೇಸ್ ಬುಕ್ ನಲ್ಲಿ ನನ್ನ  ಕಿರಿಯ ಮಿತ್ರ  ರಾಜೇಶ್ ಒಂದು ಹಣ್ಣು ಚಿತ್ರ  ಹಾಕಿದ್ದರು . ಅದ್ಯಾವುದು ಗುರುತಿಸಿ ಅಂತ ಆತ ಎಲ್ಲರನ್ನು ಕೇಳಿದ್ದರು. ನಮ್ಮ ಮೇಸ್ಟ್ರು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದರು. ಯಪ್ಪಾ ಎಷ್ಟು ಜಾಣರು ಸರ್ ನೀವು !!

@@ ಶಂಕರ ವಾಹಿನಿಯಲ್ಲಿ ಸಂಗೀತ ಪ್ರಿಯರಿಗೆ ಅದರಲ್ಲೂ ಶಾಸ್ತ್ರೀಯ ಸಂಗೀತ ಪ್ರಿಯರಿಗೆ  ಪುಟ್ಟ ಮಕ್ಕಳ ಸಂಗೀತ ಸ್ಪರ್ಧೆಯ ಕಾರ್ಯಕ್ರಮ ನಡೀತಾ ಇದೆ. ತುಂಬಾ ವಿಶೇಷವಾಗಿದೆ ಆ  ಕಾರ್ಯಕ್ರಮ. ಯಾಕೇಂದ್ರೆ ಶಾಸ್ತ್ರಿಯ ಸಂಗೀತ ಸ್ಪರ್ಧೆ ಹೇಗಿರುತ್ತದೆ ಎನ್ನುವುದು ಇದರಿಂದ ತಿಳಿಯುತ್ತದೆ. ಪಕ್ಕ ಶಾಸ್ತ್ರೀಯ   ಸಂಗೀತ ಪ್ರಿಯರಿಗೆ ಇಷ್ಟ ಆಗುವ ಕಾರ್ಯಕ್ರಮ. ಆ ಕಾರ್ಯಕ್ರಮ ನೋಡಿ ನಾನು ಒಂದೆರಡು ಕೀರ್ತನೆಗಳನ್ನು ಡೌನ್ ಮಾಡಿಕೊಂಡು ಕೇಳ್ತಾ ಇದ್ದೀನಿ..ಆದರೆ ಶಾಸ್ತ್ರೀಯ ಸಂಗೀತ ಇಷ್ಟ ಪಡದವರಿಗೆ ಲೈಕ್ ಆಗಲ್ಲ.. ! 

ವೆಜಿಟೇರಿಯನ್



ಕೆಲವು ಬಾರಿ  ಕೆಲವು ಕೆಲಸಗಳನ್ನು ಮಾಡುವಾ.. ಮಾಡುವಾ ಅಂತ ಮುಂದೂಡುತ್ತಲೇ ಇರುತ್ತೇವೆ. ಪ್ರಾಯಶಃ ಆ ಕೆಲಸ ನಿಧಾನವಾದರೂ ಚಿಂತೆ ಇಲ್ಲ ಎನ್ನುವಂತೆ ಇರುತ್ತದೆ. ಆ ವಿಷಯದಲ್ಲಿ   ಬ್ಲಾಗಿಂಗ್ ಸೇರಿದೆ. ಅತಿ ಪ್ರೀತಿಯ ಕೆಲಸ ನನಗಿದು. ನನ್ನ ಅನೇಕ ಮಾನಸಿಕ ಒತ್ತಡಗಳನ್ನು ದೂರ ಮಾಡಿದೆ. ಅನೇಕ ಸೋಲುಗಳಿಗೆ ಮತ್ತೆ ಪ್ರೇರಕ ಶಕ್ತಿಯಾಗಿ ನಿಂತಿದೆ.. ನಾನು ಕೆಲಸ ಇಲ್ಲದೆ ಕೈ ಚಲ್ಲಿ ಕೂತಾಗ   ಬರೆಯಲು ದಾರಿ ಮಾಡಿಕೊಟ್ಟಿದೆ. ಇವೆಲ್ಲದರ ನಡುವೆ ಇದಕ್ಕೆ ನಾನು ನನ್ನ   ತಂದೆಯ ಹೆಸರು ನೀಡಿರುವುದರಿಂದ ಸ್ವಲ್ಪ ಜಾಸ್ತಿನೇ ಪ್ರೀತಿ ನನಗೆ ಇದರ ಬಗ್ಗೆ.
Image result for holi
ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಬಣ್ಣಗಳು ಬದುಕಲ್ಲಿ ಇದ್ದಾಗ ಮಾತ್ರ ಅದು ಬದುಕಾಗುತ್ತದೆ  . ಬಣ್ಣಗಳು ಖುಷಿ, ವಿಷಾದ , ಮೌನ, ಸಂದೇಹ, ಅನುಕಂಪ, ಆಹ್ಲಾದ ಹೀಗೆ ಎಲ್ಲ ರೀತಿಯ ಭಾವನೆಗಳನ್ನು ಸಹಿತ ನೀಡುತ್ತದೆ. ಬದುಕು ಬಣ್ಣ ರಹಿತವಾಗಿದ್ದರೆ  ಏನು ಪ್ರಯೋಜನವಿಲ್ಲ.. ಎಲ್ಲವು ಇದ್ದಾಗಲಷ್ಟೇ ಚಂದ..

@ ಸ್ಟಾರ್ ವಾಹಿನಿಯಲ್ಲಿ ನಾನು ಅತ್ಯಂತ ಇಷ್ಟ ಪಟ್ಟು ವೀಕ್ಷಿಸುತ್ತಿದ್ದ ಧಾರವಾಹಿ ಎವರೆಸ್ಟ್. ಅದು ಸಂಪೂರ್ಣವಾಗಿ ಅಪೂರ್ಣತೆಯಿಂದ ಮುಗೀತು. ಅದರ ಕಥೆ ಆ ಪಾತ್ರಗಳು ಎಲ್ಲವು ಇಷ್ಟ ಆಗಿತ್ತು. ಚಾಂದ್  ಅನ್ನೋ ಪಾತ್ರ ಅಭಯಂಕರ್  , ಖನ್ನ, ಆಕಾಶ್, ಅಂಜಲಿ, ಅರ್ಜುನ್  ಎಲ್ಲವು ಆಹಾ ! ಆದರೆ ಅದು ಮುಗೀತು, ಆ ಜಾಗದಲ್ಲಿ ಮೂರು ಹೆಣ್ಣು ಮಕ್ಕಳ ಕಥೆ ಆರಂಭವಾಗಿದೆ.. ಪರವಾಗಿಲ್ಲ  ನೋಡುವಂತೆ ಇದೆ. ಆದರೆ ಆ ಕಥೆಗಳು ಬೇರೆ ದಾರಿಗೆ ನಡೆಯುವ ತನಕ ನೋಡ ಬಹುದು.
---
Image result for holi
ಇದೆ ವಾಹಿನಿಯ ದಿ ಬೆಸ್ಟ್ ಕಾರ್ಯಕ್ರಮ ಮಾಸ್ಟರ್ ಶೆಫ್  4  ಅವತರಣಿಕೆ. ಯಾವ ಸುಂದರ ನಿರೂಪಕಿ- ನಿರೂಪಕರು ಇಲ್ಲದೆ ಎಲ್ಲರ ಗಮನ ಸೆಳೆಯುತ್ತಿರುವ ಕಾರ್ಯಕ್ರಮ. ಶೆಫ್ ಗಳ ಯೂನಿವರ್ಸಿಟಿ ಸಂಜೀವ್ ಕಪೂರ್, ವಿಕಾಸ್ ಖನ್ನ  , ರಣವೀರ್ ಎಲ್ಲರು ಇಷ್ಟ ಆಗುತ್ತಿದ್ದಾರೆ. ಆದರೆ ಈ ಬಾರಿ ನನಗೆ ಅತಿ ಇಷ್ಟ ಆಗಿರೋದು  ಶಾಕಾಹಾರದ ವಿಶೇಷತೆ ಇರುವುದು. ಯಾಕೆ ಅಂದ್ರೆ ಈ ಬಾರಿ  ಮಾಂಸದ ಸೋಂಕಿಲ್ಲದೇ   ನನ್ನಂತಹ ವೆಜಿಟೇರಿಯನ್ ಗಳಿಗೆ ಇಷ್ಟ ಆಗುವ ಸೀಸನ್ ಆಗಿದೆ. ಆಡಿಶನ್ ನಿಂದ ಹಿಡಿದು ಪ್ರತಿ ಎಪಿಸೋಡ್ ನೋಡೇ ನೋಡ್ತಾ ಇದ್ದೀನಿ.
ನನ್ನ ಅಕ್ಕನ ಮಗಳು ಕಲ್ಪ, ನನ್ನ ಅಮ್ಮ ಸಕತ್ ಫ್ಯಾನ್ಗಳು. ಅದರಲ್ಲೂ ಕಲ್ಪ ಗೆ  ಸಂಜೀವ್ ಕಪೂರ್ ಅಂದ್ರೆ ಪಂಚ ಪ್ರಾಣ, ಇಂಜಿನೀರಿಂಗ್ ಮಾಡಿಕೊಂಡು ಈಗ ಶೆಫ್ ಆಗೋ ಕನಸು :-) .. ಆದರೆ ನನ್ನ  ಅಮ್ಮನಿಗೆ ರಣವೀರ್ ನನ್ನ ಅಕ್ಕನ ಇನ್ನೊಬ್ಬ ಮಗಳು ಶಿಲ್ಪಾ ಗೆ   ವಿಕಾಸ್ ಅಂದ್ರೆ ಸಕತ್ ಇಷ್ಟ..  ಒಟ್ಟಾರೆ ಈ ಕಾರ್ಯಕ್ರಮ ಅತ್ಯಂತ ಖುಷಿ ಕೊಡ್ತಾ ಇದೆ.ಈ ಕಾರ್ಯಕ್ರಮದ  ಲೈಕ್  ಪೇಜ್ ಫೇಸ್ಬುಕ್ ನಲ್ಲಿದೆ ಅದಕ್ಕೆ ನಾನು ಲೈಕ್ ಮಾಡಿದ್ದೇನೆ ಕಲ್ಪ ಹೇಳಿದ್ದಕ್ಕೆ :-).   ಕೇರಳದ ವಿಶೇಷ ಅಡುಗೆ ಮಾಡಲು  ಮಾಸ್ಟರ್ ಶೆಫ್ 4   ಗುಂಪು ಅಲ್ಲಿಗೆ ಹೋಗಿದ್ದು, ಅಲ್ಲಿನ ಅಡುಗೆ ತಯಾರಿ  ವಾಹ್.. ಆದರೆ ಕರ್ನಾಟಕದಲ್ಲೂ, ಅದರಲ್ಲೂ ಬ್ರಾಹ್ಮಣ-ಲಿಂಗಾಯತ  ಅಡುಗೆಗಳಲ್ಲಿ  ವಿಪರೀತ ಭಿನ್ನತೆ ಇದೆ. ಯಾವ ಶೆಫ್ ಮಾಡದಷ್ಟು  ವಿಶೇಷತೆ ಇದೆ. ನನಗೆ ಸಾಮಾನ್ಯವಾಗಿ ಮೆಂತ್ಯ ಫ್ಲೇವರ್ ಇರಬೇಕು. ನಾನು ಮಾಡುವ ಅಡುಗೆ ಅಂದ್ರೆ ಪಲ್ಯ , ಮತ್ತಿತರ ಕಾರದ ಖಾದ್ಯಗಳಿಗೆ  ಮೆಂತ್ಯ ಬಳಸುತ್ತೇನೆ. ಆಗಾಗ ಹದ ತಪ್ಪುತ್ತೆ..ಆದರೂ ಕೇರ್ ಮಾಡದೆ ತಯಾರು ಮಾಡ್ತೀನಿ :-).