ಸತ್ಯಾವತಾರ...


PC: Prakash Hegde
ಇಂದು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತ ದೊಡ್ದೊರೆಲ್ಲ ಹೇಳ್ತಾ ಇದ್ದಾರೆ. ಅದರ ಭಾಗವಾಗಿ ವಿಶ್ವದಲ್ಲಿ ಹೆಚ್ಚಾದ ಅಸಹಿಷ್ಣುತೆಯ ಫಲ ಮುಂಬೈ ದಾಳಿ ಆಗಿ ಇಂದಿಗೆ  26 / 11 ..ಏಳು ವರ್ಷ. ಈ ಅಸಹಿಷ್ಣುತೆ ಬಗ್ಗೆ ವಾಪಸಿ ಜನರು  ಏನು ಹೇಳ್ತಾರೋ ...  ಗೊತ್ತಿಲ್ಲ. ಆದರೆ ದೇಶಕ್ಕಾಗಿ , ದೇಶದ ಜನತೆಗಾಗಿ ಪ್ರಾಣ ತೆತ್ತ ಜೀವಾತ್ಮಗಳಿಗೆ ನಮನ...
ಈ ಟೀವಿ ನ್ಯೂಸ್ ನಲ್ಲಿ ಇದರ ಬಗ್ಗೆ ಸಂಜೆ ಪ್ರಸಾರವಾದ ಕಾರ್ಯಕ್ರಮ ಗಮನ ಸೆಳೆಯಿತು. ಅದನ್ನು ಸಿದ್ಧ ಮಾಡಿದ ರೀತಿ, ಅದನ್ನು ಜನರ ಮುಂದೆ ಇಟ್ಟ ಬಗೆ, ಅದಕ್ಕೆ ವಾಯ್ಸ್ ಓವರ್ ಮಾಡಿದವರು , ಆ ಸ್ಪಷ್ಟತೆ, ಕಾರ್ಯಕ್ರಮದಲ್ಲಿ ಪೂರಕ ದೃಶ್ಯ ಜೋಡಣೆ ಎಲ್ಲವೂ ಮನ ಸೆಳೆಯಿತು.
@ ಬಿಗ್ ಬಾಸ್ ಮನೆಯಿಂದ ಗಾಯಕ ರವಿ ಮೂರೂರ್ ಹೊರ ಬಂದ ಬಳಿಕ ಅತ್ಯಂತ ಆಹ್ಲಾದ ಉಂಟಾಗುವಂತೆ ಇತ್ತು.. ಅವರು ಹೊರ ಬಂದಿದ್ದಕ್ಕೆ ಅಲ್ಲ ಅವರನ್ನು ಸಂದರ್ಶಿಸಿದ ವಾಹಿನಿಗಳು ಆ ಕಲಾವಿದರ ಕೈಲಿ ಹಾಡು ಹಾಡಿಸಿ ಮಾನಸೋಲ್ಲಾಸ  ಹೆಚ್ಚಿಸಿದರು.
ಸುವರ್ಣ ನ್ಯೂಸ್ ನಿರೂಪಕ, ಪತ್ರಕರ್ತ  ರಾಘವೇಂದ್ರ ಅವರ ಸಂದರ್ಶನ ನೋಡುವ ಅವಕಾಶ ಸಿಕ್ತು. ಅತ್ಯುತ್ತಮ ರೀತಿಯಲ್ಲಿ ಸಂದರ್ಶಿಸುವ  ನಿರೂಪಕರಲ್ಲಿ ರಾಘವೇಂದ್ರ ಸಹ ಒಬ್ಬರು..ಚಂದದ ಕಾರ್ಯಕ್ರಮ.. ಚಂದದ ಹಾಡುಗಾರ ರವಿ ...
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ... ಆಹಾ ಥ್ಯಾಂಕ್ಸ್ ರವಿ  ಅವರೇ ಖುಷಿ ಕೊಡ್ತು..
 ಹಾಡಿನಿಂದ   ಮಾತ್ರವಲ್ಲ ರವಿ   ಬಿಗ್ ಬಾಸ್ ಮನೆಯಲ್ಲಿ   ಮಾಡಿದ ಮಿಮಿಕ್ರಿ  , ಆ ಡ್ಯಾನ್ಸ್ ಸಕತ್ ಖುಷಿ ಕೊಡ್ತು.. ಸಿನಿಮಾದವರಿಗೆ ಈ ಪ್ರತಿಭೆ ಕಣ್ಣಿಗೆ ಬಿದ್ರೆ ಕನ್ನಡಕ್ಕೆ ಮತ್ತೋರ್ವ ಉತ್ತಮ ಕಲಾವಿದನ ಸೇರ್ಪಡೆ ಆಗುತ್ತದೆ ಚಿತ್ರರಂಗದಲ್ಲಿ..      Image result for red flowers images
@ಸ್ಟಾರ್ ಪ್ಲಸ್ ನಲ್ಲಿ ರಾಮಾಯಣ ಪ್ರಾರಂಭವಾಗಿದೆ. ಅದ್ರ ಬಗ್ಗೆ ನಾನು ಈ ಮೊದಲು ಒಂದು ಬಾರಿ ಹೇಳಿದ್ದೆ. ರಾಮಾಯಣದ ಬಗ್ಗೆ ಆಗಿರಲಿ, ಮಹಾಭಾರತದ ಬಗ್ಗೆಯೇ ಆಗಿರಲಿ ನನಗೆ ಬಹಳಷ್ಟು ಕುತೂಹಲ ಮತ್ತು ಇಷ್ಟ ಇದ್ದೆ ಇದೆ. ವಾಹಿನಿ, ಭಾಷೆ ಯಾವುದೇ ಆಗಿರಲಿ ನೋಡೋಕೆ ಇಷ್ಟ ಪಡ್ತೀನಿ. ಕೆಲವೊಂದು ಅಷ್ಟೊಂದು ಮನ ಸೆಳೆಯೋಲ್ಲ.. ಆದರೆ ಈ ಬಾರಿ ನನಗೆ ಮಾತ್ರ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರ ಆಗ್ತಾ ಇರುವ  ರಾಮಾಯಣ ತುಂಬಾ ಇಷ್ಟ ಆಗ್ತಾ ಇದೆ. ಹೊಸ ಕಾನ್ಸೆಪ್ಟ್, ಮುಖ್ಯವಾಗಿ ಅ ಕಾಲದಲ್ಲಿ ಇರಬಹುದಾದ ಕೆಲವು ಅಂಶಗಳು, ಕಾಲ್ಪನಿಕ ಅಂಶಗಳಿಗೆ ನೈಜತೆ ಜೊತೆಗೂಡಿಸಿ ಅದ್ಭುತ ರೀತಿಯಲ್ಲಿ ಕಥೆಯನ್ನು ವಿಸ್ತರಿಸಿದ್ದಾರೆ. ಆ ಅರಮನೆ, ರಾಜ ಎಂದರೆ ಇರುವ ಒಂದು ಅಡ್ಡಿ, ರಾಣಿವಾಸದೊಳಗೆ ಇರುವ  ಅಸಹನೆ, ಅಸಂತೋಷ , ಹೀಗೆ ಹತ್ತಾರು ಅಂಶಗಳನ್ನು ಒಳಗೊಂಡಿದೆ.ಬಳಸಿರುವ ಉಡುಗೆ ತೊಡುಗೆ , ಸೀತೆ, ಊರ್ಮಿಳ, ಮಾಂಡವಿ, ಶ್ರುತಕೀರ್ತಿ  ಪುಟ್ಟ ಬಾಲೆಯರು, ಅತ್ಯಂತ ಆಕರ್ಷಕ ರಾಮ, ನಮ್ಮ ಕಲ್ಪನೆಯಲ್ಲಿ ಇರುವಂತಹ ಪಾತ್ರಧಾರಿ,  ಲಕ್ಷ್ಮಣ, ಭರತ, ಶತ್ರುಘ್ನ ಎಲ್ಲದರ ಜೊತೆ ಜನಕ, ಆತನ ತಮ್ಮ ಪ್ರತಿಯೊಂದು ಪಾತ್ರವು ತುಂಬಾ ವಿಶೇಷವಾಗಿ ತೋರಿಸಿದ್ದಾರೆ..
@ ಕಲರ್ ವಾಹಿನಿಯಲ್ಲಿ ಎರಡು ಸುಂದರ ಹಾಸ್ಯ ಕಾರ್ಯಕ್ರಮಗಳು ಪ್ರಸಾರ ಆಗ್ತಾ ಇದೆ, ಒಂದು ಬಚಾವ್, ಮತ್ತೊಂದು ಕಾಮಿಡಿ ವಿತ್ ಕಪಿಲ್..
ಕಪಿಲ್  ಕಾರ್ಯಕ್ರಮದಲ್ಲಿ ಗುತ್ತಿ, ಪಲಕ್, ದಾದಿ, ಅಡುಗೆಯವ,ಸಿದ್ದುಜಿ ಎಲ್ಲರೂ ಇಷ್ಟ ಆಗ್ತಾರೆ. ಅದೇರೀತಿ ಬಚಾವ್ ನಲ್ಲಿ ಭಾರತಿ, ಕೃಷ್ಣ, ಕರಣ್, ಶ್ರುತಿ, ಅನಿತಾ, ಅಲ್ಲದೆ ಎಲ್ಲ ಕಲಾವಿದರು ಅದ್ಭುತವಾಗಿ ನಡೆಸಿಕೊಡ್ತಾರೆ. ಸಮರ್ಥವಾಗಿ ನಗಿಸುವ ಕೆಲಸ ಮಾಡುತ್ತಾ ವೀಕೆಂಡ್  ನಗುತ್ತಾ  ಕಳೆಯುವಂತೆ  ಮಾಡ್ತಾರೆ..

ಡೌಟ್.....


PC: Prakash Hegde
ಕಳೆದ ಭಾನುವಾರ ಬಹುದಿನಗಳ ಬಳಿಕ ಜೇಮ್ಸ್  ಬಾಂಡ್  OO7 -‎ಸ್ಪೆಕ್ಟ್ರೆ ‬ ‪ಗೆ ಹೋಗಿದ್ದೆ. ಬಾಂಡ್ ಸಿನಿಮಾಗಳಲ್ಲಿ ಬರಿ ಕತ್ತಲು, ಇಲ್ಲದೆ ಹೋದರೆ ಇದ್ದಬದ್ದ  ಮನೆ , ಕಾರು, ವಿಮಾನ, ಹೆಲಿಕಾಪ್ಟರ್ ಎಲ್ಲವನ್ನು ಒಡೆದು ಹಾಕುವ ತಂತ್ರಗಾರಿಕೆ. ಶಬ್ದಮಯ. ಆದರು ಮಜಾ ಸಿಗುತ್ತೆ ಅಂತಹ ಸಿನಿಮಾಗಳಿಂದ. ಎಂತಹ ವಿಶೇಷ ಕ್ರೌರ್ಯ ಇರುತ್ತೆ . ಡಡಾಂಟ...ಡಾ...ಅ...ಅ... ಡಿಶ್ಕುಲ್ .. ಇಂತಹದ್ದೇ ಶಬ್ದ....

ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ಗಲಾಟೆ  ಈಗ ಶ್ರುತಿಕಡೆ ತಿರುಗಿರುವುದು ಮಾತ್ರ ನಿರೀಕ್ಷಿತ ಸಂಗತಿ. ಶ್ರುತಿ ಬಗ್ಗೆ ಹೆಚ್ಚು ಇಷ್ಟ ಆಗಿದ್ದು ಬಿಗ್ ಬಾಸ್ ಕಾರ್ಯಕ್ರಮದಿಂದ.. ಆಕೆಯ ಬದುಕಲ್ಲಿ  ಏನೆಲ್ಲಾ  ನಡೆಯಿತು.. ಆಕೆಯನ್ನು ಮತ್ತಷ್ಟು ಗಟ್ಟಿ ಗೊಳಿಸುವ ರಿಯಾಲಿಟಿ ಷೋ ಇದು.. ಬೇರೆಯವರ  ಅಸೂಯೆ ಶ್ರುತಿಯ ಒಳ್ಳೆಯ ವ್ಯಕ್ತಿತ್ವದ ಮೇಲೆ ಹೇಗೆ  ಪ್ರಭಾವ ತೋರುತ್ತೆ ಅನ್ನುವ ಅಂಶದ ಬಗ್ಗೆ ಕುತೂಹಲವಿದೆ.  ಈ ಕಾರ್ಯಕ್ರಮದಲ್ಲಿ ಅಯ್ಯಪ್ಪ ನಿಜಕ್ಕೂ ಸರಿಯಾಗಿ ಗೇಂ ಆಡ್ತಾ ಬಂದಿದ್ದಾರೆ. ಎಲ್ಲರನ್ನು ಡಿವೈಡ್ ಅಂಡ್ ರೂಲ್.
ನಿಜ ಹೇಳ ಬೇಕೆಂದರೆ ಆತ ಕ್ರಿಕೆಟ್ ಟೀಮ್ ನಲ್ಲೂ ಇದೆ ಸ್ಟ್ರಾಟಜಿ ಬಳಸಿ ಹೆಚ್ಚು ಬೆಳೆದರಾ ಅಂತ ಅನ್ನಿಸುತ್ತೆ. ಏನೇ ಇರಲಿ ಈ ಬಾರಿ ಅಲಂಕಾರದ  ಕಾನ್ಸೆಪ್ಟ್ ಖುಷಿ- ಮಜಾ ಕೊಡ್ತು. ಇನ್ನು ಹಾಗೆ ನೋಡೋಕೆ ಹೋದ್ರೆ ಹುಚ್ಚಾಸ್ಪತ್ರದು ಅಷ್ಟೊಂದು  ಖುಷಿ ನೀಡಲಿಲ್ಲ ಬಿಡಿ.
 ನಾಮಿನೇಷನ್ ಸಮಯದಲ್ಲಿ  ಭಾವನ ಬೆಳಗೆರೆ ತನ್ನ ಹೆಸರು ಬರುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ ಅಂತ ಕಾಣುತ್ತೆ.. ಆಕೆ ಸ್ವಲ್ಪ ಬದಲಾಗಿದ್ದು ಸ್ಪಷ್ಟವಾಗಿ ಕಾಣ್ತಾ ಇತ್ತು. ಏನೇ ಹೇಳಿ ಸುನಾಮಿ ಪೂza  ಅವರು ಅಂತ ಹೇಳ್ತಾ ತಮ್ಮ ವಿಶ್ವಾಸ ಪೂಜಾಗಾಂಧಿ ಎನ್ನುವ ಬದಲಾದ ವ್ಯಕ್ತಿತ್ವದ ಬಗ್ಗೆ ತೋರಿಸ್ತಾ ಇರ್ತಾರೆ.
ಸಿಸ್ಟರ್ ನೇಹಾ ಮಾತ್ರ ತುಂಬಾ ರೆಬಲ್ ಆಗಿ ಬ್ರದರ್ ಜೊತೆ ಇದ್ದು ತಾವು ಒಳ್ಳೆವರು ಅನ್ನುವ ಪ್ರಯತ್ನ ಮಾಡ್ತಾ ಇದ್ರೂ. ಬಿಡಿ ಆಕೆ ಬಗ್ಗೆ ಹೇಳೊಂಗಿಲ್ಲ  . ಯಾಕೆಂದ್ರೆ ಮಾಡೆಲ್ ಜಯಶ್ರೀ ಹೇಳಿದಂತೆ ತಿಕ್ಕಿ ತಿಕ್ಕಿ ತಿಕ್ತಾ ಇದ್ದೀನಿ ನಾನು ಮನೇಲೂ ತಿಕ್ಕಲಿಲ್ಲ  ಪಾತ್ರೆನ್ನ  ಅಂತ ಜೊತೆ ಅಸಹನೆಯನ್ನು ತಿಕ್ಕಿ ತಿಕ್ಕಿ ಕಕ್ಕುತಾ ಇದ್ರಲ್ಲ ಪುಣ್ಯಾತಗಿತ್ತಿ..
ಆನಂದ್ ನಿಜಕ್ಕೂ ಅತ್ಯುತ್ತಮ ಕಲಾವಿದ ಅಂತ  ಮತ್ತೆ ಮತ್ತೆ ತಮಗೆ ನೀಡಿರುವ ಟಾಸ್ಕ್, ಆ ಮಿಮಿಕ್ರಿ ಮೂಲಕ ತೋರಿಸಿದ್ದಾರೆ. ಆನಂದ್ ಯಾವರೀತಿ ಮನೋರಂಜನೆ ನೀಡ್ತಾರೆ ಅಂತ ಕಾಯುತ್ತಾ ಇರ್ತೀನಿ ನಾನು.
ಸುದೀಪ್ ಸಣ್ಣ ಡೌಟ್

ಹಿಂದಿ ಬಿಗ್ ಬಾಸ್ ನಲ್ಲಿ  ಸಲ್ಮಾನ್ ಬಂದಾಗ ಎಲ್ಲರು ಮುದ್ದಾಗಿ ಅದರಲ್ಲೂ ಹೆಣ್ಣುಮಕ್ಕಳು ಸಲ್ಮಾನ್ ಅಂತ ಮುದ್ದಾಗಿ ಕರೀತಾರೆ.. ನಿಮ್ಮನ್ನು ದೀಪು ಅಂತ ಕಿಚ್ಚ ಅಂತ ಯಾಕೆ ಕರೆಯೋಲ್ಲ.. ನೀವು ಸಾಕಷ್ಟು ಮಿಸ್ ಮಾಡ್ಕೋತಾ ಇದ್ದೀರಿ ಅಂತ ಅನ್ನಿಸ್ತಾ ಇಲ್ವಾ  ;-)
ರವಿ ಮೂರೂರ್ ಅವರು ಭಾವನ ಬೆಳಗೆರೆಯನ್ನು ನನ್ನ ತಂಗಿ ಅಂತ ಪಾಪ ಪ್ರೀತಿಯಿಂದ ಹೇಳಿದ್ರು.. ಆಕೆ ರವಿ ಮಾಮ ರವಿ ಮಾಮ ಅಂತ ಸಂಬೋಧನೆ ಮಾಡ್ತಾ ಇದ್ರು... :-)
ನೀವು ನಿಮ್ಮ ಕೂದಲನ್ನು ಫಳಫಳ ನೆ ಹೊಳೆಯುವಂತೆ ಮಾಡಿರೋದು ಶಾಂಪೂ, ಕ್ಯಾಮರ  ಅದರ ಜೊತೆಗಿನ ಬೆಳಕು ಅಥವಾ ..   ;-)

ಗಣತಂತ್ರ


PC: Prakash hegde
ಭಾರತದಲ್ಲಿ ಈಗ ಎಲ್ಲ ಭಾಷೆಗಳ ಮಾಧ್ಯಮಗಳು ಅಸಹಿಷ್ಣುತೆಯ ಬಿಸಿಯಲ್ಲಿ ಇದ್ದಾರೆ. ಕೆಲವರ ಪ್ರಕಾರ  ಇದು ಬೌದ್ಧಿಕ ದಾರಿದ್ಯ ಆಗಿದ್ದರೆ, ಒಂದಷ್ಟು ಜನರಿಗೆ ನೋವಿನ ಸಂಗತಿ. ಕಾರಣ ಇಷ್ಟೇ ಎಲ್ಲರು ಅವರದ್ದೇ ಅದ ರೀತಿಯಲ್ಲಿ ಅದನ್ನು ಅರ್ಥೈಸಿಕೊಂಡು ತಮ್ಮ ಮನದ ಭಾವ ಹೊರ ಹಾಕುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಾಗೆ ಜೀ ಹಿಂದಿ ನ್ಯೂಸ್ ಕಡೆಗೆ ಹೊರಟಾಗ ಅಲ್ಲಿ ರೋಹಿತ್ ಅವರು ಮಾತು ಕಥೆ ನಡೆಸಿದ್ದರು. ಅಲ್ಲಿನ ಸಂಗತಿ ಸಹಿತ ಸಹಿಷ್ಣುತೆ ಆಗಿತ್ತು. ಆದರ್ ನನಗೆ ಹೆಚ್ಚು ನೋವು ಕೊಡುವ ಸಂಗತಿಗಳಲ್ಲಿ ಒಂದಾದ  ಕಾಶ್ಮೀರ್ ಪಂಡಿತರ ಬದುಕು. ಜೀ ಯಲ್ಲಿ ಅಲ್ಲಿ ಉಳಿದಪಂಡಿತರ ಬಗ್ಗ ಹೇಳ್ತಾ ಅಂಕಿಅಂಶಗಳನ್ನು ತೋರಿಸ್ತಿದ್ದರು, ಅದರಲ್ಲಿ 1947  ರ ಸಮಯದಲ್ಲಿ  ಅಲ್ಲಿ ಶೇ. 15 ರಷ್ಟು  ಪಂಡಿತರು ಇದ್ದರಂತೆ, ಅದೇರೀತಿ 1981ರಷ್ಟರಲ್ಲಿ ಆ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು, ಅಂದರೆ ಶೇ. 5 ರಷ್ಟು ಮಾತ್ರ ಅಲ್ಲಿದ್ದರು. ಈಗಿನ ಪರಿಸ್ಥಿತಿ  ಕೆಟ್ಟದಾಗಿದೆ ಎನ್ನುವುದನ್ನು ಹೇಳ ಬೇಕಿಲ್ಲ.
ಆದರೆ ಈ ಅಂಶವನ್ನು ಮತ್ತು ಆಮೀರ್ ಖಾನ್ ಅಸಹಿಷ್ಣುತೆಯ   ವಿಷಯವನ್ನು ಜೊತೆ ಮಾಡಿಸಿ ಡಿಬೇಟ್ ಮಾಡ್ತಾ ಇದ್ರೂ ರೋಹಿತ್.  ಈ ಪತ್ರಕರ್ತ - ನಿರೂಪಕರ   ಬಗ್ಗೆ ಹೇಳುವಷ್ಟಿಲ್ಲ, ನನ್ನ ಕಡೆಯಿಂದ ಒಂದು ಥಂಬ್ಸ್ ಅಪ್ . ಆಮೀರ್ ಹೇಳಿರುವುದನ್ನು ತಪ್ಪಾಗಿ ಅರ್ಥೈಸಿರ ಬಹುದು, ಅಥ್ವಾ  ಏನೇ  ಸಂಗತಿ ಆಗಿರ ಬಹುದು ಆದರೆ ಪಾರ್ಟಿಗಳ ಮುಖಂಡರು ತಮ್ಮ ಬೆನ್ನು ತಾವು ತಟ್ಟಿ ಕೊಳ್ಳುವ ಸಂಗತಿ ಅತ್ಯಂತ ಖೇದ  ಅನ್ನಿಸಿತು.
ಅದೇ ಸಮಯದಲ್ಲಿ ಹಾಗೆ ಆಂಗ್ಲ ಚಾನೆಲ್ ಗಳ ಕಡೆಗೆ ಹೋದಾಗ ಚಾನೆಲ್ ನ್ಯೂಸ್ ಏಷ್ಯ ವಾಹಿನಿಯ ಬಾಗಿಲು ತೆಗೆದಾಗ ಅಲ್ಲಿ ಮ್ಯಾನ್ಮಾರ್  ಚುನಾವಣೆಯ ಬಗ್ಗೆ ಅಲ್ಲಿ ಆ ಕ್ಷಣದಲ್ಲಿ ಜನರು ಎದುರಿಸಿದ ಒಂದು ಭಾವನೆಗಳು, ಆ ಖುಷಿ, ಆ ಆತಂಕ ಎಲ್ಲವನ್ನು ರೋಡ್ ಟು ಡೆಮಾಕ್ರಸಿ ಎನ್ನುವ ಕಾರ್ಯಕ್ರಮದಲ್ಲಿ ತೋರಿಸಲಾಗುತ್ತಿತ್ತು.  ಸಂಜೆ ಐದೋವರೆಯಲ್ಲಿ ನಾನು ನೋಡಿದ್ದು, ಕಾಫಿಪ್ರಿಯಳಾದ ನನಗೆ ಕಾಫಿ ಕಡೆ ಸಹ ಗಮನ ಹೋಗದೆ ಇರುವಷ್ಟು ಇಷ್ಟವಾಯಿತು ಆ ಕಾರ್ಯಕ್ರಮ. ಅಕಸ್ಮಾತ್ ಆ ಚಾನೆಲ್ ನಿಮ್ಮ ಚಾನೆಲ್ಗಳ ಗುಚ್ಚದಲ್ಲಿ ಇದ್ರೆ , ಅದರಲ್ಲಿ ಮತ್ತೆ ಆ ಕಾರ್ಯಕ್ರಮ ಪ್ರಸಾರ  ಆಗೇ ಆಗುತ್ತೆ, ನೋಡಿ ತುಂಬಾ ಭಿನ್ನವಾಗಿದೆ.  ಅನೇಕ ಅಂಶಗಳನ್ನು  ಸಹಿಸಿಕೊಂಡಿರುವ ಭಾರತೀಯರು, ವಿಶ್ವದ ದೊಡ್ಡ ಗಣತಂತ್ರ ದೇಶವಾದ ಭಾರತದಲ್ಲಿ  ಸಹಿಷ್ಣುತೆ- ಅಸಹಿಷ್ಣುತೆಯ ಹಾಕ್ಯಾಟ. ಆದರೆ  ಸ್ವಾತಂತ್ರಕ್ಕಾಗಿ, ಗಣತಂತ್ರಕ್ಕಾಗಿ ಒದ್ದಾಡಿದ  ಆಂಗ್ ಸ್ಯಾನ್ ಸು ಕಿ ..ಆಕೆಯ  ಶ್ರಮದ ಸಾರ್ಥಕ ಕ್ಷಣಗಳು...ಹೊಟ್ಟೆ ತುಂಬಿದಾಗ ಹಿಂಗೆ ಆಗೋದು...
PC: Raghupathi Sringeri 
ಇದರ ನಡುವೆ ರಾಹುಲ್ ಗಾಂಧಿ ಅವರು ನಮ್ಮ ಮೌಂಟ್ ಕಾರ್ಮಲ್ ಹೆಣ್ಣುಮಕ್ಕಳ  ಜೊತೆ ಮಾತಾಡಿ ಅವರ ಅಭಿಪ್ರಾಯ ತಿಳಿದು ಸಣ್ಣಗೆ ಪೆಚ್ಚಾದ ಕಥೆ  ವಾಹಿನಿಗಳಲ್ಲಿ   ಹೇಗೆ ಪ್ರತಿಕ್ರಿಯಿಸಬೇಕು ಅಂತ ಗೊತ್ತಾಗದೆ ಹೋಯ್ತು .. ಬಿಡಿ ದೊಡ್ಡವರ ವಿಷ್ಯ.. ಆದರೆ ನಮ್ಮ ಹೆಣ್ಣುಮಕ್ಕಳೇ ಹೀಗೆ ನೇರ ದಿಟ್ಟ