ಗಣತಂತ್ರ


PC: Prakash hegde
ಭಾರತದಲ್ಲಿ ಈಗ ಎಲ್ಲ ಭಾಷೆಗಳ ಮಾಧ್ಯಮಗಳು ಅಸಹಿಷ್ಣುತೆಯ ಬಿಸಿಯಲ್ಲಿ ಇದ್ದಾರೆ. ಕೆಲವರ ಪ್ರಕಾರ  ಇದು ಬೌದ್ಧಿಕ ದಾರಿದ್ಯ ಆಗಿದ್ದರೆ, ಒಂದಷ್ಟು ಜನರಿಗೆ ನೋವಿನ ಸಂಗತಿ. ಕಾರಣ ಇಷ್ಟೇ ಎಲ್ಲರು ಅವರದ್ದೇ ಅದ ರೀತಿಯಲ್ಲಿ ಅದನ್ನು ಅರ್ಥೈಸಿಕೊಂಡು ತಮ್ಮ ಮನದ ಭಾವ ಹೊರ ಹಾಕುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಾಗೆ ಜೀ ಹಿಂದಿ ನ್ಯೂಸ್ ಕಡೆಗೆ ಹೊರಟಾಗ ಅಲ್ಲಿ ರೋಹಿತ್ ಅವರು ಮಾತು ಕಥೆ ನಡೆಸಿದ್ದರು. ಅಲ್ಲಿನ ಸಂಗತಿ ಸಹಿತ ಸಹಿಷ್ಣುತೆ ಆಗಿತ್ತು. ಆದರ್ ನನಗೆ ಹೆಚ್ಚು ನೋವು ಕೊಡುವ ಸಂಗತಿಗಳಲ್ಲಿ ಒಂದಾದ  ಕಾಶ್ಮೀರ್ ಪಂಡಿತರ ಬದುಕು. ಜೀ ಯಲ್ಲಿ ಅಲ್ಲಿ ಉಳಿದಪಂಡಿತರ ಬಗ್ಗ ಹೇಳ್ತಾ ಅಂಕಿಅಂಶಗಳನ್ನು ತೋರಿಸ್ತಿದ್ದರು, ಅದರಲ್ಲಿ 1947  ರ ಸಮಯದಲ್ಲಿ  ಅಲ್ಲಿ ಶೇ. 15 ರಷ್ಟು  ಪಂಡಿತರು ಇದ್ದರಂತೆ, ಅದೇರೀತಿ 1981ರಷ್ಟರಲ್ಲಿ ಆ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು, ಅಂದರೆ ಶೇ. 5 ರಷ್ಟು ಮಾತ್ರ ಅಲ್ಲಿದ್ದರು. ಈಗಿನ ಪರಿಸ್ಥಿತಿ  ಕೆಟ್ಟದಾಗಿದೆ ಎನ್ನುವುದನ್ನು ಹೇಳ ಬೇಕಿಲ್ಲ.
ಆದರೆ ಈ ಅಂಶವನ್ನು ಮತ್ತು ಆಮೀರ್ ಖಾನ್ ಅಸಹಿಷ್ಣುತೆಯ   ವಿಷಯವನ್ನು ಜೊತೆ ಮಾಡಿಸಿ ಡಿಬೇಟ್ ಮಾಡ್ತಾ ಇದ್ರೂ ರೋಹಿತ್.  ಈ ಪತ್ರಕರ್ತ - ನಿರೂಪಕರ   ಬಗ್ಗೆ ಹೇಳುವಷ್ಟಿಲ್ಲ, ನನ್ನ ಕಡೆಯಿಂದ ಒಂದು ಥಂಬ್ಸ್ ಅಪ್ . ಆಮೀರ್ ಹೇಳಿರುವುದನ್ನು ತಪ್ಪಾಗಿ ಅರ್ಥೈಸಿರ ಬಹುದು, ಅಥ್ವಾ  ಏನೇ  ಸಂಗತಿ ಆಗಿರ ಬಹುದು ಆದರೆ ಪಾರ್ಟಿಗಳ ಮುಖಂಡರು ತಮ್ಮ ಬೆನ್ನು ತಾವು ತಟ್ಟಿ ಕೊಳ್ಳುವ ಸಂಗತಿ ಅತ್ಯಂತ ಖೇದ  ಅನ್ನಿಸಿತು.
ಅದೇ ಸಮಯದಲ್ಲಿ ಹಾಗೆ ಆಂಗ್ಲ ಚಾನೆಲ್ ಗಳ ಕಡೆಗೆ ಹೋದಾಗ ಚಾನೆಲ್ ನ್ಯೂಸ್ ಏಷ್ಯ ವಾಹಿನಿಯ ಬಾಗಿಲು ತೆಗೆದಾಗ ಅಲ್ಲಿ ಮ್ಯಾನ್ಮಾರ್  ಚುನಾವಣೆಯ ಬಗ್ಗೆ ಅಲ್ಲಿ ಆ ಕ್ಷಣದಲ್ಲಿ ಜನರು ಎದುರಿಸಿದ ಒಂದು ಭಾವನೆಗಳು, ಆ ಖುಷಿ, ಆ ಆತಂಕ ಎಲ್ಲವನ್ನು ರೋಡ್ ಟು ಡೆಮಾಕ್ರಸಿ ಎನ್ನುವ ಕಾರ್ಯಕ್ರಮದಲ್ಲಿ ತೋರಿಸಲಾಗುತ್ತಿತ್ತು.  ಸಂಜೆ ಐದೋವರೆಯಲ್ಲಿ ನಾನು ನೋಡಿದ್ದು, ಕಾಫಿಪ್ರಿಯಳಾದ ನನಗೆ ಕಾಫಿ ಕಡೆ ಸಹ ಗಮನ ಹೋಗದೆ ಇರುವಷ್ಟು ಇಷ್ಟವಾಯಿತು ಆ ಕಾರ್ಯಕ್ರಮ. ಅಕಸ್ಮಾತ್ ಆ ಚಾನೆಲ್ ನಿಮ್ಮ ಚಾನೆಲ್ಗಳ ಗುಚ್ಚದಲ್ಲಿ ಇದ್ರೆ , ಅದರಲ್ಲಿ ಮತ್ತೆ ಆ ಕಾರ್ಯಕ್ರಮ ಪ್ರಸಾರ  ಆಗೇ ಆಗುತ್ತೆ, ನೋಡಿ ತುಂಬಾ ಭಿನ್ನವಾಗಿದೆ.  ಅನೇಕ ಅಂಶಗಳನ್ನು  ಸಹಿಸಿಕೊಂಡಿರುವ ಭಾರತೀಯರು, ವಿಶ್ವದ ದೊಡ್ಡ ಗಣತಂತ್ರ ದೇಶವಾದ ಭಾರತದಲ್ಲಿ  ಸಹಿಷ್ಣುತೆ- ಅಸಹಿಷ್ಣುತೆಯ ಹಾಕ್ಯಾಟ. ಆದರೆ  ಸ್ವಾತಂತ್ರಕ್ಕಾಗಿ, ಗಣತಂತ್ರಕ್ಕಾಗಿ ಒದ್ದಾಡಿದ  ಆಂಗ್ ಸ್ಯಾನ್ ಸು ಕಿ ..ಆಕೆಯ  ಶ್ರಮದ ಸಾರ್ಥಕ ಕ್ಷಣಗಳು...ಹೊಟ್ಟೆ ತುಂಬಿದಾಗ ಹಿಂಗೆ ಆಗೋದು...
PC: Raghupathi Sringeri 
ಇದರ ನಡುವೆ ರಾಹುಲ್ ಗಾಂಧಿ ಅವರು ನಮ್ಮ ಮೌಂಟ್ ಕಾರ್ಮಲ್ ಹೆಣ್ಣುಮಕ್ಕಳ  ಜೊತೆ ಮಾತಾಡಿ ಅವರ ಅಭಿಪ್ರಾಯ ತಿಳಿದು ಸಣ್ಣಗೆ ಪೆಚ್ಚಾದ ಕಥೆ  ವಾಹಿನಿಗಳಲ್ಲಿ   ಹೇಗೆ ಪ್ರತಿಕ್ರಿಯಿಸಬೇಕು ಅಂತ ಗೊತ್ತಾಗದೆ ಹೋಯ್ತು .. ಬಿಡಿ ದೊಡ್ಡವರ ವಿಷ್ಯ.. ಆದರೆ ನಮ್ಮ ಹೆಣ್ಣುಮಕ್ಕಳೇ ಹೀಗೆ ನೇರ ದಿಟ್ಟ 

No comments: