ಗಂಡನಾ ?

Image result for purple flowers
ತುಂಬಾ ಪರಿಚಿತರು, ಮನೆಯವರು, ಸ್ನೇಹಿತರು ಹೀಗೆ ಸ್ವಲ್ಪ ಗೊತ್ತಿರುವವರು , ಅವರ ಸಾಧನೆ ಬಗ್ಗೆ, ಅವರನ್ನು ಹುಡುಕಿಕೊಂಡು ಬರುವಂತಹ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ತಿಳಿದಾಗ ಹೆಚ್ಚು ಸಂತೋಷ ಆಗುತ್ತೆ. ಎಫ್ ಬಿ , ಟ್ವಿಟರ್, ವಾಟ್ಸ್ ಅಪ್ , ಹೈಕ್  ಹೀಗೆ ಹಲವಾರು ಸೋಶಿಯಲ್ ನೆಟ್ ವರ್ಕ್ ಮೂಲಕ ಪರಿಚಿತರಾದವರು , ಒಳ್ಳೆಯ ಸ್ನೇಹಿತ ರಾದವರ ಯಶಸ್ಸಿನಿಂದಲೂ  ಖುಷಿ ಆಗುತ್ತೆ ನನಗೆ, ಸೋತವರ ಬಗ್ಗೆ ಸಹ ಗೌರವ , ಪ್ರಯತ್ನ ಮುಖ್ಯ ಬದುಕಲ್ಲಿ. ಅಂತಹುದರಲ್ಲಿ ನಮಗೆ ಸಂಬಂಧಪಟ್ಟವರು ಯಶಸ್ವಿ ಆದಾಗ ಖುಷಿ ಆಗದೆ ಇರುತ್ತಾ ?
ರಂಗಿತರಂಗ ಚಿತ್ರ ಈಗ ಆಸ್ಕರ್ ಬಾಗಿಲು ತಟ್ಟಿದೆ. ಅದು ಕನ್ನಡ ಚಿತ್ರ, ಒಂದೊಳ್ಳೆಯ ಚಿತ್ರ, ವಿಶೇಷವಾದ ಹೆಸರು ಪಡೆದ ಚಿತ್ರ.. ಇವೆಲ್ಲವನ್ನೂ ಮೀರಿದಂತೆ ನನಗೆ ಆ ಚಿತ್ರದ ಜೊತೆ ಒಂದು ಅವಿನಾಭಾವ ಸಂಬಂಧವಿದೆ. ಅದರಲ್ಲಿ ನನ್ನ ಅಕ್ಕನ ಅಳಿಯ ಗೋಕುಲ್ ಅಭಿಷೇಕ್ ಬೇಸಿಕಲಿ ಸೌಂಡ್ ಇಂಜಿನಿಯರ್. ಅವರು ರಂಗಿತರಂಗ ಚಿತ್ರಕ್ಕೆ ಮ್ಯುಸಿಕ್  ಅರೆನ್ಜ್ಮೆಂಟ್ ಮಾಡಿದ್ದಾರೆ. ಆ ಮೂಲಕ ಆಸ್ಕರ್ ಬಾಗಿಲು ತಟ್ಟಿದ ಚಿತ್ರದ ಯಶಸ್ಸಿನ ಹಿಂದೆ ಗೋಕುಲ್  ಪಾತ್ರ ಸಹ ಇದೆ  ಸೊ ನೈಸ್. ಗೋಕುಲ್  ಅನೇಕ ಕನ್ಸರ್ಟ್  ಗಳಲ್ಲಿ  ತಮ್ಮ ಪ್ರತಿಭೆ ತೋರಿದ್ದಾರೆ  .... ನಮ್ಮ ಮನೆಯಲ್ಲಿ ಕಸಿನ್ ಗಳಲ್ಲಿ ಕೊನೆಯ ಕೊನೆಯ ಹೆಣ್ಣುಮಕ್ಕಳಲ್ಲಿ  ನಾನು ಒಬ್ಬಳು, ಅಕ್ಕಂದಿರ ಅಳಿಯಂದಿರು, ಮಕ್ಕಳು ನನಗೆ ತಮ್ಮ, ತಂಗಿ ಆಗುವಷ್ಟೇ ವಯಸ್ಸು, ಸೊ ಈ ಕಾರಣದಿಂದ ಅವರೆಲ್ಲಾ  ನನ್ನನ್ನು ಜಯಕ್ಕ ಅಂತ ಕರೆಯೋದು . ಆ ವಿಷ್ಯ ಬಿಡಿ ಆದರೆ ಇಷ್ಟೆಲ್ಲಾ ಸಾಧನೆ ಮಾಡಿರುವ ಟೀಮ್ಗೆ ನನ್ನ ಕಡೆಯಿಂದ ಕಂಗ್ರಾಟ್ಸ್.. ಈಗಾಗಲೇ ವಾಟ್ಸ್ ಅಪ್ ನಲ್ಲಿರುವ ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಗ್ರೂಪ್ ನಲ್ಲಿ ಗೋಕುಲ್ ಹಾಗೂ ಅಕ್ಕನ ಮಗಳು ರಂಜನಿಗೆ  ವಿಶ್ ಮಾಡಿ  ಖುಷಿ ಪಟ್ಟೆವು ಎಲ್ಲರು.. ನನ್ನ ಬ್ಲಾಗ್ ಮೂಲಕವೂ ರಂಗಿತರಂಗ  ತಂಡವನ್ನು ಅಭಿನಂದಿಸುತ್ತಾ ... :-)

                                                    ####

Image result for purple flowers
ಬಿಗ್ ಬಾಸ್ ಬಿಗ್ ಬಾಸ್ ಎಸ್ ಬಾಸ್... ಈ ವಾರದಲ್ಲಿ  ಇದ್ದ -ನೀಡಿದ ಟಾಸ್ಕ್ ಗಳು ಖುಷಿಕೊಡ್ತು. ಆದರೆ ಚೇರ್ ಟಾಸ್ಕ್ ಬಿಟ್ಟು. ತುಂಬಾ ಮುಜುಗರ ತರ್ತಾ ಇತ್ತು ನೋಡುವಾಗ.. ಬಿಗ್ ಬಾಸ್ ಕಾರ್ಯಕ್ರಮವನ್ನು ಹಿರಿಯರು, ಕಿರಿಯರು ಅನ್ನದೆ ಎಲ್ಲರೂ ನೋಡುತ್ತಿರುತ್ತಾರೆ. ಈ ರೀತಿಯ ಟಾಸ್ಕ್ ಗಳು ಮಾಡುವಾಗ ಎಲ್ಲ ಅಂಶಗಳ ಬಗ್ಗೆ ಅದ್ಯಾಕೆ ಚಾನೆಲ್ ಮಂದಿ ಗಮನದಲ್ಲಿ ಇಟ್ಟು ಕೊಳ್ತಾ ಇಲ್ಲವೋ ನಾ ಕಾಣೆ.. ಟಾಸ್ಕ್ ನಲ್ಲಿ ಭಾಗವಹಿಸದೆ ಇರುವವರನ್ನು ಡೈರೆಕ್ಟ್ ನಾಮಿನೇಟ್ ಮಾಡ ಬಹುದು ಮತ್ತು ಹೊರಗೆ ಗೌರವಪೂರ್ವಕವಾಗಿ ಕಳುಹಿಸ ಬಹುದು.. ಈ ರೀತಿಯ ಅಂಶಗಳು ಈಗಾಗಲೇ ಹಿಂದಿ  ಬಿಗ್ ಬಾಸ್ ಮಂದಿ ಮಾಡಿದ್ದಾರೆ. ಸುಮ್ಮನೆ ಬಾ, ಕೂರು , ಸಾಧ್ಯವಾದರೆ ಅಲ್ಲಿಂದು ಇಲ್ಲಿಗೆ ಇಲ್ಲಿನದು ಅಲ್ಲಿಗೆ ಹೇಳುವುದರಲ್ಲಿ ಏನಿದೆ ವಿಶೇಷ ? ಕಷ್ಟಪಟ್ಟು ಟಾಸ್ಕ್ ಮಾಡುವವರನ್ನು ಕಳಿಸಿ  ಮಾಡದೇ ಇರುವವರನ್ನು ಇಟ್ಟು ಕೊಳ್ಳುವುದು ಅನ್ಫೇರ್ !

ಆ ವಿಷಯ ಬಿಡಿ, ಆದರೆ ಟಾಸ್ಕ್ ಗಳಲ್ಲಿ ಟೀವಿ ಧಾರವಾಹಿ ಮತ್ತು ಸಿನಿಮಾ ಕಥೆಯ ಟಾಸ್ಕ್ ಗಳಲ್ಲಿ ಮತ್ತೆ ಮೊದಲ ಸ್ಥಾನದಲ್ಲಿ ನಿಂತವರು ಶ್ರುತಿ, ಮಿತ್ರ , ಆನಂದ್, ನಂತರದ ಸ್ಥಾನ ರೆಹಮಾನ್, ಚಂದನ್..ಖುಷಿ ಕೊಟ್ಟ ಕಲಾವಿದರು ಅವರು. ರೆಹಮಾನ್ ಅವರ ಪ್ರತಿಭೆಗೆ ಅಂತೂ ಇಂತೂ ಈಗ ಅವಕಾಶ ಸಿಗ್ತಾ  ಇದೆ. ಅದೇ  ಸಂತೋಷದ ಸಂಗತಿ. ಅತ್ಯುತ್ತಮ ನಿರೂಪಕ ರೆಹಮಾನ್ ಅವರು ಹೊಸ ರೂಪದಲ್ಲಿ ಮನೆಯಿಂದ ಹೊರಗೆ ಬರ್ತಾರೆ ಅನ್ನೋದು  ಸಹ ಅತ್ಯಂತ ಖುಷಿಯ ಸಂಗತಿ.ಆನಂದ್, ಶ್ರುತಿ, ಮಿತ್ರ ಎಷ್ಟು ಅದ್ಭುತವಾದ ಕಲಾವಿದರು.. ವಾಹ್ ವಾಹ್ !
ಅಬ್ಬ ಸುಷ್ಮಾ ! ಏನೇ ಆದರು ಮನೆ ವಾತಾವರಣ  ಸುಷ್ಮಾ ಯಿಂದ ಕೆಡುತ್ತೆ ಬಿಡಿ .. ಇತ್ತೀಚಿಗೆ ಅಯ್ಯಪ್ಪ ಜೊತೆ ಮಾತಾಡುವಾಗ ಆಕೆ ,  ನನಗೇನು ಗಂಡನಾ - ಪಿಂಡನಾ ಅಂತ ಹೇಳ್ತಾ ಶ್ರುತಿ ಬಗ್ಗೆ ಅಸೂಯೆ ತೋರಿಸಿದ್ದು.. ಬೇಸರ ಅನ್ನಿಸಿದರು ಆ ಪಿಂಡದಂತಹ  ಮಾತಿಗೆ ನಗು ಬಂದೇ  ಬಂತು..
ಶ್ರುತಿ ಬಗ್ಗೆ ಸಾಕಷ್ಟು ಜನರಿಗೆ ಸಾಫ್ಟ್ ಕಾರ್ನರ್ ಇದೆ.. ಅದು  ಬಹಳ ಮುಖ್ಯ. ನಮ್ಮ ಭಾವ ಒಬ್ರು ಸದಾ ವಿದೇಶದಲ್ಲಿರುವ ಇಂಜಿನಿಯರ್ ವಿದ್ಯಾರ್ಥಿಗಳಿಗೆ, ಟೀಮ್ ಗಳಿಗೆ ಪಾಠ ಹೇಳೋ ಮೇಷ್ಟ್ರು.. ಅವರಿಗೆ ಬಿಗ್ ಬಾಸ್, ಶ್ರುತಿ, ಕಿಚ್ಚ, ಆನಂದ್ ಜಾಸ್ತಿ ಲೈಕ್..
Image result for purple flowers
ಪ್ರಿಯ ಸುದೀಪ್ ಸಾಮಾನ್ಯವಾಗಿ ನಾನು ನಿಮ್ಮನ್ನು ಕೀಟಲೆ ಮಾಡುವುದು ಅಭಿಮಾನಂದಿಂದ,ಅದರ ಬಗ್ಗೆ ನಿಮಗೆ ಬೇಸರ ಆಗುತ್ತೇನೋ ಎನ್ನುವ ಒಂದು ಗೊಂದಲ ನನ್ನನ್ನು ಕಾಡುತ್ತಿರುತ್ತದೆ. ಆದರೂ ಸಹ ನಾನು ನಿಮ್ಮನ್ನು ರೇಗಿಸುವುದು ಬಿಟ್ಟಿಲ್ಲ..ಪತ್ರಿಕೆಗಳು, ಚಾನೆಲ್ಗಳು ಅದರ ಪ್ರತಿನಿಧಿಗಳು, ಅದರಲ್ಲಿ ಬರೆದವರು, ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವರು ಎಲ್ಲರಿಗಿಂತ ನಾನು ಹಾಗೂ ನನ್ನಂತಹ ಅತಿ ಸಾಮಾನ್ಯ ವೀಕ್ಷಕರು ಬಹಳ ಮುಖ್ಯ ಸುದೀಪ್, ಯಾಕೇಂದ್ರೆ ನಾವು ಮೆಚ್ಚುಗೆ ತೋರಲು, ಇಷ್ಟಪಟ್ಟು ಹೇಳಲು, ಮನಕ್ಕೆ ತೋರಿದ ಒಳ್ಳೆಯ ಮಾತನ್ನು ವ್ಯಕ್ತ ಪಡಿಸಲು ಯಾವ  ಪ್ರಭಾವಳಿ, ಅದು ಇದು ಪಡೆದಿರಲ್ಲ.. ನಮಗೆ ಗೊತ್ತಿರುವುದು ಪ್ರಾಮಾಣಿಕವಾಗಿ ಮನಕ್ಕೆ ಅನ್ನಿಸಿದ್ದನ್ನು ಹೇಳೋದಷ್ಟೇ.. ನಿಮ್ಮ ಕಡೆಯಿಂದ ಮರ್ಯಾದೆ ಸಿಗಬೇಕು, ನಮ್ಮನ್ನು ಗುರುತಿಸಿ ಹೊಗಳ ಬೇಕು ಎನ್ನುವ ಯಾವ ಒಂದು ಪೂರ್ವಾಗ್ರಹ ಪೀಡಿತರು ನಾವಲ್ಲ.. ತುಂಬಾ ಸರಳ ಮನದವರು.. ಸಾಮಾನ್ಯರು ಹಾಗಿದ್ದುದರಿಂದಲೇ ಎಲ್ಲವೂ ಚಂದ ಚಂದವಾಗಿರುವುದು..
ಏನೇ ಇದ್ದರು  ಕಳೆದ ಬಾರಿ ನಾನು ನಿಮಗೆ ಮಾಡಿದ ಕೀಟಲೆಗೆ ಸಾಕಷ್ಟು ಅನಂತ್ ಹಾಗೂ  ನಿಮ್ಮ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಕೆಲವು ಹೆಣ್ಣು ಮಕ್ಕಳು ಕೆಂಪು ಕೆಂಪಾಗಿ ನನ್ನ ಬಳಿ ಭಾವನೆ ವ್ಯಕ್ತಪಡಿಸಿದ್ದಾರೆ. ಖುಷಿ ಆಯ್ತು ನನಗೆ ಅವೆಲ್ಲ  ಓದಿ.. :)
ಮತ್ತೊಂದು ಸಂಗತಿ ಹೇಳ್ತೀನಿ ಸಾಮಾನ್ಯವಾಗಿ ನೀವು  ಆರಂಭದಲ್ಲಿ ಪುಟ್ಟ ಪುಟ್ಟ ರಸ್ತೆ, ದೊಡ್ಡ ದೊಡ್ಡ ಮನೆ, ಪುಟ್ಟ ಪುಟ್ಟ ಕಂಗಳು ಎಂದು ಹೇಳ್ತೀರಿ, ಅದರ ಜೊತೆ ಕರ್ನಾಟಕದ ಸಮಸ್ತ ಗ್ರಾಮೀಣ ವೀಕ್ಷಕರನ್ನು ಸಹ ನಿಮ್ಮ ಸ್ವಾಗತದ ಸಾಲಿನಲ್ಲಿ ಸೇರಿಸಿಕೊಳ್ಳಿ.. ಅವರಷ್ಟು ಖುಷಿ ಪಡೋರು ಮತ್ತೊಬ್ಬರಿಲ್ಲ..ಬೆಂಗಳೂರಿನಂತಹ ಮಹಾನಗರಕ್ಕಿಂತ ಪುಟ್ಟ ಹಳ್ಳಿಗಳು, ಎಲ್ಲೋ ಇರುವ ವಿಕ್ಷಕರೇ ನಿಮ್ಮನ್ನು - ನಿಮ್ಮ  ಮಾತನ್ನು  ಹೆಚ್ಚು ಹೆಚ್ಚು ಮೆಚ್ಚಿರೋದು ...

ಗಮನಕ್ಕೆ ಬಂದಿದ್ದರೆ !


Image result for green and yellow flowers
ನಿನ್ನೆ ಬೆಳಿಗ್ಗೆ ಸುವರ್ಣ ನ್ಯೂಸ್ ನಲ್ಲಿ  ಪ್ರಸಾರ ಆಗ್ತಾ ಇದ್ದ ಕಾರ್ಯಕ್ರಮ ಗಮನ ಸೆಳೆಯಿತು. ಉತ್ತಮ ಆಂಕರ್ ಗಳಲ್ಲಿ, ನನಗೆ ಇಷ್ಟವಾದ ಒಂದಷ್ಟು ಆನಕರ್ಗಳಲ್ಲಿ ಒಬ್ಬರಾದ ಸಹನಾ ಭಟ್ ಆ ಕಾರ್ಯಕ್ರಮ ನಡೆಸಿ ಕೊಡ್ತಾ ಇದ್ರು. ಸಿಟಿ ಟ್ಯಾಕ್ಸಿ  ಥರ ಈಗ ಸಿಟಿ ಬೈಕ್  ಅಂತ ನಗರದಲ್ಲಿ ತನ್ನ ಸೇವೆ ಆರಂಭ ಮಾಡಿದೆಯಂತೆ.. ಇಂತಿಷ್ಟು ನಿಗದಿತ  ದಾರಿ ಕ್ರಮಿಸಿದರೆ ಇಂತಿಷ್ಟು ಮೊತ್ತ ಹಾಗೂ ಆ ಬಳಿಕ  ಅದರ ಮೊತ್ತ  ಹೆಚ್ಚುತ್ತದೆ... ಹೀಗೆ ಪ್ರತಿಯೊಂದು ಸಂಗತಿ ಬಗ್ಗೆ ಇತ್ತು ಕಾರ್ಯಕ್ರಮ.. ಆಟೋ, ಟ್ಯಾಕ್ಸಿ ಬೇಡ ಅನ್ನೋರಿಗೆ ಇದು ಹೆಚ್ಚು ಸೂಕ್ತ ಅನ್ನುವ ಮಾತನ್ನು ಹೇಳ್ತಾ ಇದ್ರು. ಈಗ ಸಧ್ಯಕ್ಕೆ ಗಂಡಸರು ಮಾತ್ರ ಇದರ ಸೌಲಭ್ಯ ಪಡೆಯುವಂತಿದ್ದು, ಇಷ್ಟರಲ್ಲೇ ಹೆಣ್ಣುಮಕ್ಕಳಿಗೂ ಆ ಸೌಲಭ್ಯ ಕೊಡ್ತಾರಂತೆ ಮಂದಿ.ಸಂತೋಷ ಆಯ್ತು ಬಿಡಿ ಕೇಳಿ..
ಆದರೆ ಈ ರೀತಿಯ ಸೌಲಭ್ಯ ಇದೇ ಮೊದಲಲ್ಲ.ಏಕೆಂದರೆ  ಶಿರಸಿಯಲ್ಲಿ ಈಗಾಗಲೇ ಇಂತಹ ಸೌಲಭ್ಯ ಆರಂಭವಾಗಿ ತುಂಬಾ ಸಮಯವಾಗಿದೆ ಅಲ್ವ ಭಟ್ರೇ   :-) ಅದರೂ ಬೆಂಗಳೂರಿನಲ್ಲಿ ಸಾಕಷ್ಟು ಜನ ಬಿಟ್ಟಿ ಲಿಫ್ಟ್ ತಗೊಳೋರು ಆದರೆ ಈಗ ಪೈಸೆ ನೀಡ ಬೇಕು ಅಷ್ಟೇ !
Image result for green and yellow flowers
@ ಈ ಬೇಸರ , ಗೊಂದಲ, ಆತಂಕ, ಯೋಚನೆ, ಪ್ರಶ್ನೆ,  ಏನು ಬೇಕಾದರೂ ಅನ್ನಿ ನನ್ನ ಎಫ್ ಬಿ ಮಿತ್ರರು ಆಗಿರುವ, ಹಿಸ್ಟರಿ ಪ್ರೊಫೆಸರ್ ಆದ, ಪುರಾಣ ಪುಣ್ಯಕಥೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ   ಅಶೋಕ್ ಶೆಟ್ಟರ್ ಅವರು ತಮ್ಮ ಈ ಮನದ ಮಾತನ್ನು ಎಫ್ ಬಿ ಗೋಡೆ ಮೇಲೆ ಹರಡಿದ್ದಾರೆ.. ಅವರ ಮನದ ಭಾವದ ಮಾತಿನ, ನೋವಿನ, ಗೊಂದಲದ, ಅಚ್ಚರಿಯ, ಆಸಕ್ತಿಯ ಇನ್ನು ಹಲವಾರು ಅಂಶಗಳ ಮುಖ್ಯ ವ್ಯಕ್ತಿ ಅರ್ನಬ್ ಗೋಸ್ವಾಮಿ  .. ಅಶೋಕ್ ಅವರ ಮನದ ಮಾತು ಯಥಾವತ್  ಕಾಪಿ ಪೇಸ್ಟ್ ಮಾಡಿ ಇಲ್ಲಿ ಹಾಕಿದ್ದೇನೆ.. ಜೊತೆ ಬಂದಿರುವ ಕಾಮೆಂಟ್ ಗಳನ್ನೂ ಸಹಿತ.. ನಿಮ್ಮಲ್ಲಿ ಯಾರಾದರು ಉತ್ತರ ಹೇಳಿ  ಅಶೋಕ್ ಅವರ ಗೊಂದಲ ದೂರ ಮಾಡಿ ಪುಣ್ಯ ಕಟ್ಟಿಕೊಳ್ಳಿ  . ;-)
 ..Over  to  Ashok  Shettar ...


ಭಾರತದ ಪುರಾಣ, ದಂತಕಥೆ, ಐತಿಹ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದವರಿದ್ದರೆ ದೇವರು ನಾರದನಿಗೆ "ನೀನು ಮುಂದಿನ ಜನ್ಮದಲ್ಲಿ ಅರ್ನಬ್ ಗೋಸ್ವಾಮಿಯಾಗಿ ಹುಟ್ಟು" ಎಂದು ಶಾಪ ಕೊಟ್ಟ ಪ್ರಸಂಗವೇನಾದರೂ ತಮ್ಮ ಗಮನಕ್ಕೆ ಬಂದಿದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತರುವದು..
Comments
M.s. Rudreswaraswamy Narada had a purpose in doing something, but this gentleman?
LikeReply18 hrs
Raghavan Chakravarthy True..before that one must bring it to the notice of Arnab himself as there is a possible curse that he won't know unless someone explicitly reminds him of so...
LikeReply8 hrs
ಕನ್ನಡಿಗ ವಿಶ್ವನಾಥ್ ಶಾಪದ ಬಗ್ಗೆ ಗೊತ್ತಿಲ್ಲ , ಆದರೆ ನಿಮ್ಮ ಮಾತು ನಿಜ ಅನಿಸುತ್ತದೆ ಸರ್
LikeReply28 hrs

GV Jayashree Ghatt
Write a reply...
Rajeev Ramachandra ನಿಮ್ಮ ಮಾತು ನಿಜ ಬಿಡಿ

ನಾರದನ "ನಾರಾಯಣ ನಾರಾಯಣ"...See More

LikeReply38 hrs
Ramakanth Puranik Really, India want to know about it !
LikeReply18 hrs
Santosh Hulagabali Really, i want to know about it
LikeReply7 hrsEdited
Ashok Shettar You should try and know it soon Baale, The Nation can't wait too long for you to know what you are doing..
LikeReply7 hrsEdited
GV Jayashree Ghatt

Write a reply...
Venkatramana Gowda ಅರ್ನಬ್ ಗೋಸ್ವಾಮಿ ಮತ್ತಿತರ ಪೀಸುಗಳಾಗಿ ಹುಟ್ಟು ಎಂದಿರಬೇಕು ಶಾಪ.
LikeReply6 hrs
Padmapani Jodidar Naaradanu ,raamaayanada manthareyannu vivaahavaadanendoo,avana vamshasthare eegina ella tv anchor galendu kaage puraanadalli helalaagide,sir
LikeReply46 hrs
Ashok Shettar ತುಂಬ ಚೆನ್ನಾಗಿ ಕಾಗೆ ಹಾರಿಸ್ತೀರಲ್ರೀ ನೀವು..
LikeReply26 hrs
Krishnamurthy Srinath ನಾರ‌ದ‌ನ‌ ಕೈಲೊ0ದು ತ‌0ಬೂರಿಯಿತ್ತು.
ಇವ‌ನ‌ ಕೈ ಮ‌ತ್ತು ತ‌ಲೆ ಎರ‌ಡ‌ಕ್ಕೂ ದೇವ‌ರು ಏನ‌ನ್ನೂ ಪ‌ರಿಪಾಲಿಸ‌ಲಿಲ್ಲ‌.ಅಯ್ಯೋ ಪಾಪ‌ ಅ0ತ‌ ಒ0ದು ಕ‌ನ್ನ‌ಡ‌ಕ‌ ಮಾತ್ರ‌
smile emoticon ಪರಿಪಾಲಿಸಿದ್ದಾನೆ. :

LikeReply5 hrs
Eranna Itigi ನಾನೆಲ್ಲೂ ಇದನ್ನು ಕೇಳಿಲ್ಲ ಬಿಡಿ .
LikeReply5 hrs
Ravi Belagere Television has become repulsive to me becoz of Arnab Goswamy. Hate to see him. Kivi harida meke tharaa badkothaane.
LikeReply2 hrs
*G.V.Jayashree
Journalist