ಅದ್ಯಾಕೆ ?


PC: Prakash hegde
ಕಳೆದವಾರ ಬಹುತೇಕ ಹುಚ್ಚು ಮಳೆ ಹುಚ್ಚ ವಿಷ್ಯ ಹೆಚ್ಚು ಕಾಡಿದ್ದಂತೂ ಸತ್ಯ. ಹುಚ್ಚನ ಕಥೆ ಕಂಡಾಗ ನನಗೆ ಕಾಳಿ ಸ್ವಾಮಿ ನೆನಪಾಯಿತು. ಆತ ಸಹ ಮೀಡಿಯಾ ಪ್ರೇಮಿ. ಆತ ಪ್ರತಿಯೊಂದು  ಚರ್ಚೆಯಲ್ಲೂ ಇರಲೇ ಬೇಕು. ಆ ಕೂಗು ಸ್ವಾಮಿ ಕೂಗಾಟ ವೀಕ್ಷರು ಸಹಿಸಲೇ ಬೇಕಾಗಿತ್ತು. ಆತ ಸಹ ಬಾಯಿಗೆ ಬಂದದ್ದೆ  ಮಾತನಾಡಿದರು . ತನಗಿಷ್ಟವಾದ ಅಭಿಪ್ರಾಯಗಳನ್ನು ಹೊರ ಹಾಕಿದರು. ಯಾವ ಮಾಧ್ಯಮ  ಆತನನ್ನು ಬೆಳೆಸಿತೋ ಅದೇ ಮಾಧ್ಯಮದ ಮೂಲಕ ಆತ ...!
ಹುಚ್ಚ ವೆಂಕಟ್ ವಿಷಯ ಅದಕ್ಕಿಂತ ಭಿನ್ನ ಆಗಲಿಲ್ಲ ಬಿಡಿ. ಆತನು ತಿಂದ- ಕುಡಿದ ಕಥೆಯಿಂದ ಹಲ್ಲುಜ್ಜುವ ತನಕ ಎಲ್ಲರ ಗಮನ ಸೆಳೆದು ಕೊನೆಗೆ ಮದುವೆ ಆಗಿರುವ ವಿಷಯದ ಮೂಲಕ ಕೆಳಗೆ ಬಿದ್ದದು ...!
 ಆತನ ಬಗ್ಗೆ ಹೇಳಿದಷ್ಟು ಕಡಿಮೆ ಆಗದಂತಹ ಅಭಿಮಾನದ ಮಾತುಗಳು ಹುಟ್ಟಿದ್ದು ಸತ್ಯ. ಎಲ್ಲಾ ಸೋಶಿಯಲ್ ನೆಟ್ ವರ್ಕ್ ಗಳಲ್ಲೂ  ಹುಚ್ಚನದ್ದೆ ಕಥೆ,  ಅಷ್ಟೊಂದು ಪಾಪ್ಯುಲರ್ ಆಗಿತ್ತು ಆತನ ವರ್ತನೆ.
 ಈ ಟೀವಿಯಲ್ಲಿ ಆತನ ಮದುವೆ ಸಂಗತಿ ಪ್ರಸಾರ ಆಗಿದ್ದು , ಅದಕ್ಕೂ ಮುನ್ನ ಆತನ ಮಾತಿಗೆ ಜನರ ಕೆಂಗಣ್ಣಿನ ಪರಿಣಾಮ ಇವೆಲ್ಲಾ  ಆದ ಬಳಿಕ ಪೊಲೀಸ್  ಅದೂ ಇದು..ಕಥೆ ಇನ್ನು ಮುಂದುವರೆಯುತ್ತಲೇ ಇದೆ.
Image result for orange flower
ಈ ಟೀವಿ ಕನ್ನಡ ವಾಹಿನಿಯಲ್ಲಿ ಒಂದು ಸಂಗತಿ ನನ್ನನ್ನು ಆಕರ್ಷಿಸಿತು. ಇತ್ತೀಚಿನ ಕೆಲವು ದಿನಗಳಿಂದ ನಮಗೆ ಆ ಚಾನೆಲ್ ಪ್ರಸಾರ ಆಗ್ತಾ ಇದೆ. ಸಂಜೆ ಐದು ಗಂಟೆಯ ಸುದ್ದಿ ಇರಬೇಕು , ಇಬ್ಬರು ಸುದ್ದಿಯನ್ನು ಓದುತ್ತಿದ್ದರು. ಇಷ್ಟ ಆಯ್ತು ಇಬ್ಬರು ಓದುವ ಆ ಅಂಶಕ್ಕೆ. ಅಂದರೆ  ಒಬ್ಬರೇ ಸುದ್ದಿ ಓದಿದಾಗಲು ಇಷ್ಟವಾಗುತ್ತದೆ , ಅದೇರೀತಿ ಇಬ್ಬರು ಓದುವಾಗಲು ಸಹ ಇಷ್ಟವಾಗುತ್ತದೆ. ಸ್ಪೀಡ್ ನ್ಯೂಸ್ ಅಂತ ಓದುತ್ತಾರಲ್ಲ ಅದರಲ್ಲಿ ಮಾತ್ರ ಕೆಲವು ನ್ಯೂಸ್ ಗಳು ಏನು ಅಂತ ಅರ್ಥ ಆಗೋದೇ ಇಲ್ಲ ಬಿಡಿ.ಆ ವಿಷಯದಲ್ಲಿ ಉದಯ, ಚಂದನ ಬೆಟರ್ ಅಂತ ಅನ್ನಿಸುವುದುಂಟು. ಸುದ್ದಿ ಅಷ್ಟು   ಹೊಸತು ಅಲ್ಲದೆ ಇದ್ರೂ ಓದುವ ಶೈಲಿ ..
ಪಬ್ಲಿಕ್ ಟೀವಿಯಲ್ಲಿ ರಂಗಣ್ಣನ ಮತ್ತು ಅವರ ಸಹೋದ್ಯೋಗಿ ಜೊತೆಯ ವಾರ್ತಾ ವಿಶ್ಲೇಷಣೆ   ವಿಧಾನ ಇಷ್ಟವಾಗುವ ಒಂದು ಸಂಗತಿ. ದೃಶ್ಯ ಮಾಧ್ಯಮದಲ್ಲಿ ಯಾವುದೇ ಟ್ರೈನಿಂಗ್ ಇಲ್ಲದೆ ಈಗ  ಮಾಸ್ಟರ್ ಆಗಿರುವ ರಂಗಣ್ಣ  ಇಂತಹ ಅನೇಕ ವಿಷಯಗಳ ಮೂಲಕ ವಿಶೇಷ ಎಂದೆನ್ನಿಸುತ್ತಾರೆ.
ಆದರೆ  ಹುಚ್ಚ ವೆಂಕಟ್ ವಿಷಯದಲ್ಲಿ ಅದ್ಯಾಕೆ ರಂಗಣ್ಣನ ಸಹೋದ್ಯೋಗಿಗಳು ಅಷ್ಟು ಒದ್ದಾಡಿದರು ಎನ್ನುವ ಸಂಗತಿ ಮಾತ್ರ ನನಗೆ ಮಾತ್ರವಲ್ಲ ಸಾಕಷ್ಟು ವೀಕ್ಷಕರಿಗೆ ಅರ್ಥ ಆಗಿಲ್ಲ.

ಉಚ್ಚನ್ನ .. ಉಚ್ಚನ್ನ



Courtesy : Prakash Hegde
Words don't have the power to hurt You unless, the person who said it, means a lot to You.
Anger comes alone and takes away all our good qualities with unwanted & unruly words.
Patience too comes alone and brings all good qualities of us, depicting our civilisation.

K S Gurulingaswamy 



ಮೇಲೆ ಹಾಕಿರುವ ಕೋಟ್  ನನ್ನ ಎಫ್ಬಿ ಮಿತ್ರರು, ಸತ್ಸಂಗ್ ಗುರು..ಅವರು ಪ್ರತಿದಿನ ಒಂದೊಂದು ಈ ರೀತಿಯ ಆಧ್ಯಾತ್ಮಿಕ ಸಂದೇಶಗಳನ್ನು ನೀಡ್ತಾ ಇರ್ತಾರೆ. ಬದುಕಿಗೆ ಸಂಪೂರ್ಣವಾಗಿ ಅಳವಡಿಸಿಕೊಳ್ಳ ಬಲ್ಲ, ಹಾಗೂ ಅದನ್ನು ಜೀವಾಳವನ್ನಾಗಿ ಮಾಡಿಕೊಂಡು ಗೆಲ್ಲಲು ಸಾಧನವಾಗುವ  ಅತ್ಯುತ್ತಮ ಮಾತುಗಳು. ನನಗೆ ಸದ್ಗುರು ಜಗ್ಗಿ ವಾಸುದೇವ್ ಅವರ ಬರಹಗಳ ಬಗ್ಗೆ ಅತಿ ಹೆಚ್ಚಿನ ಇಷ್ಟ. ಅದ್ಭುತರೀತಿಯಲ್ಲಿ ಅವರು ಅನಲೈಸ್ ಮಾಡಿರುತ್ತಾರೆ. ಸಕತ್ ಸರಳ ಹಾಗೂ ಸಕತ್ ವಿಶೇಷವಾಗಿರುತ್ತದೆ . 
ಈಗ ಈ  ಸಂಗತಿ ಯಾಕೆ ಬಂತು ಅಂದ್ರೆ ಶನಿವಾರದಿಂದ ಹುಚ್ಚನ ಕಥೆಯನ್ನು ನಮ್ಮ ಕನ್ನಡ ಮಾಧ್ಯಮಿಗಳು ಪೈಪೋಟಿ ಮೇಲೆ ಹರಡುತ್ತಿದ್ದಾರೆ. ಹುಚ್ಚ ವೆಂಕಟ್ ಎನ್ನುವ ಮೆಂಟಲ್ ಮನುಷ್ಯನನ್ನು ಕೂರಿಸಿ ಆತನ ಬಳಿ ಮಾತನಾಡಿಸಿ ಆತನ ಹುಚ್ಚು ಕಲ್ಪನೆಗಳನ್ನು ವೀಕ್ಷಕರ ಮೆದುಳಿನ ತಳಕ್ಕೆ ದೂಕುವ ಪ್ರಯತ್ನದಲ್ಲಿ ನಿರತರಾಗಿದ್ದ ಮಾಧ್ಯಮಗಳ ಸಹನೆಗೆ  ನಮಸ್ತೆ . ಆರಂಭದಲ್ಲಿ  ಹುಚ್ಚ, ಆತನ ಸಹೋದರ , ಆತನ ಅಭಿಮಾನಿಗಳು  ಎಲ್ಲರ ಜೊತೆ ಮಾತುಕತೆ ನಡೆಸಿದ ಟೀವಿ ನೈನ್  ಆಂಕರ್ ರಾಧಿಕ ಅವರ ಮಾತು, ಆ ಹಿಡಿತ, ನಡೆದುಕೊಂಡ ರೀತಿ ತುಂಬಾ ಅದ್ಭುತವಾಗಿತ್ತು. 
ನಾನು ಇಷ್ಟಪಡುವ ಕೆಲವೊಂದು ಆಂಕರ್ ಗಳಲ್ಲಿ ರಾಧಿಕ ಸಹ ಒಬ್ಬರು. ಆ ಹೆಣ್ಣುಮಗಳ ಬ್ಯಾಲೆನ್ಸ್ಡ್ ಮಾತುಗಳು,  ಸೂಪರ್ ಲೈಕ್..
courtesy: Raghupathi Sringeri 


ಕಲರ್ ವಾಹಿನಿಯಲ್ಲಿ  ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಷೋ ನಿಂದ ಹೊರದಬ್ಬಲ್ಪಟ್ಟ  ವೆಂಕಟ್ ಎನ್ನುವ ಸ್ಪರ್ಧಿಯನ್ನು ಕುಳ್ಳರಿಸಿ ಆತನ ಮಂಗಾಟಕ್ಕೆ ಮತ್ತಷ್ಟು ಮದ್ದು  ( ನಮ್ಮಲ್ಲಿ ಸಾರಾಯಿಗೆ ಮದ್ದು ಅಂತಾರೆ ) ನೀಡಿ ವೈದ್ಯ ಮಾಡಿದ್ದ ಮಾಧ್ಯಮ ಮಂದಿ ಕಂಡು ಸಕತ್ ಆಶ್ಚರ್ಯ ಆಗಿದ್ದು ಸತ್ಯ. ಇದು ನನ್ನ ಒಬ್ಬಳ ಅಭಿಪ್ರಾಯವಲ್ಲ ಬಹುತೇಕ ಎಲ್ಲಾ ವೀಕ್ಷಕರದ್ದು ಎನ್ನುವುದು ಸತ್ಯ.

Image result for orange flower

ಡಿಯರ್ ಸುದೀಪ್,

ಸಾಮಾನ್ಯವಾಗಿ ಒಂದು ಸಂಗತಿ ಬಗ್ಗೆ ನಿಮ್ಮ ಬಳಿ ಹೇಳೋಕೆ ಇಷ್ಟ ಪಡ್ತೀನಿ  ಹುಚ್ಚ ವೆಂಕಟ್ ಅತಿರೇಕದ ವರ್ತನೆ, ಆತ ರವಿ ಮೂರೂರ್ ಎನ್ನುವ ಸ್ಪರ್ಧಿಯ ಮೇಲೆ ದಾಳಿ ಮಾಡಿದ್ದು ತಪ್ಪು.  ನಿಮ್ಮ ಎದುರು ನಡೆದ ಇಂತಹ ದುರ್ಘಟನೆಯನ್ನು  ನೀವು ಸರಿಯಾದ ರೀತಿಯಲ್ಲಿ ನಿಭಾಯಿಸಿದ್ದಿರಿ. ವೆಂಕಟ್ ಎನ್ನುವ ವ್ಯಕ್ತಿ  ಪಾಪುಲಾರಿಟಿಗಾಗಿ  ಪರದಾಡುವ ಹುಮ್ಮಸ್ಸಿನಲ್ಲಿ ಯುಟ್ಯೂಬ್ ನಲ್ಲಿ ಮಾಡಿರುವ ಮಾತಿನ  ಪ್ರವಾಹವೇ ಸಾಕ್ಷಿ. ಆತ ಮಾತು ಆರಂಭಿಸುವ ಮುನ್ನವೇ ರೆಕಾರ್ಡ್ ಮಾಡುವ ಸಾಹಸದಲ್ಲಿ ಆತನ ಸೇನೆಯು ಮಗ್ನರಾಗಿದ್ದು ಸಹ ಕೆಲವೊಂದು  ಕಡೆ ರೆಕಾರ್ಡ್ ಆಗಿದೆ.  
 ಡಾ. ವಿಷ್ಣುವರ್ಧನ್ ಅವರ ವಿಷ್ಣುಸೇನೆ ಬಗ್ಗೆ ಎಲ್ಲರಿಗೂ ಗೌರವ ಪ್ರೀತಿ ಇದೆ, ಇದ್ಯಾವುದು ಇದು ಹುಚ್ಚ ಸೇನೆ ?ಆತನನ್ನು ಸಹಿಸೋಕೆ ನಮಗೆ ಶನಿವಾರದಿಂದ ಸಾಧ್ಯ ಆಗ್ತಾ ಇಲ್ಲ, ಅಂತಹುದರಲ್ಲಿ ಬಹಳಷ್ಟು ದಿನಗಳಿಂದ ಅಲ್ಲಿನ ಸ್ಪರ್ಧಿಗಳು ಸಹಿಸಿದ್ದಾರಲ್ಲ, ಅವರಿಗೆ ಬಿಗ್ ಬಾಸ್ ಕಡೆಯಿಂದ ವಿಶೇಷ ಬಹುಮಾನ ನೀಡ ಬೇಕು..
ಮಾಧ್ಯಮಗಳು ನಿಮ್ಮ ನಿರ್ಧಾರವನ್ನು  , ಬಿಗ್ ಬಾಸ್  ಮನೆಯವರ ನಿರ್ಧಾರವನ್ನು  ಸರಿ ಎಂದು ಜಗತ್ತಿಗೆ ತಿಳಿಸುವಲ್ಲಿ ಸಮರ್ಥವಾಗಿ ಕೆಲಸ  ಮಾಡಿದ್ದಾರೆ. ಅವರು ಆತನನ್ನು ಕರೆಯಿಸಿ ಸಂದರ್ಶನ ಮಾಡದೆ ಇದ್ದಿದ್ದರೆ  ಹುಚ್ಚ ವೆಂಕಟ್ ಎನ್ನುವ ಹುಂಬನ ಬಗ್ಗೆ ಗೊತ್ತೇ ಆಗ್ತಾ ಇರಲಿಲ್ಲ.. ಆತನು ಯಾವ ಕಾರಣಕ್ಕೆ ಹೊರ ಬಂದಿರಬೇಕು ಎನ್ನುವ  ಕಾರಣವನ್ನು ಯಾರು ಕೇಳೋಲ್ಲ ಬಿಡಿ ಅಷ್ಟೋ ನಿಚ್ಚಳವಾಗಿ ಆತ ಬೆತ್ತಲಾಗಿ ಬಿಟ್ಟಿದ್ದಾರೆ ತಮ್ಮ ಮಾತುಗಳಿಂದ, ವರ್ತನೆಯಿಂದ. 
ನಿರ್ದೇಶಕ, ಸಾಹಸ ನಿರ್ದೇಶಕ ಡಿಫರೆಂಟ್  ಡ್ಯಾನಿ ಇಂತಹವರನ್ನು ಯಾಕೆ ಬೆಳೆಸ್ತೀರಿ ಎನ್ನುವ ಮಾತನ್ನು ಪದೇಪದೇ ಹೇಳಿದ್ದರು, ಆದರೆ ನಮ್ಮ ಚಾನೆಲ್ ಗಳು ಬಿಡ ಬೇಕಲ್ಲ...!  ಟೀವಿ ನೈನ್  ನಂತರ  ನಮ್ಮ ಕನ್ನಡದ ಎಲ್ಲಾ ಚಾನೆಲ್ ಗಳಿಗೂ ಹುಚ್ಚಾಪಟ್ಟೆ  ಜ್ವರ ಬಂತು.. ಬಂತು ಬಂತು...! 
ಒಂದಂತೂ ಸತ್ಯ ಕಿಚ್ಚ  ನಮ್ಮ ಸುನಾಮಿ ಕಿಟ್ಟಿಗೆ  ಇಷ್ಟು ದಿನ ಕಿಚ್ಚನ್ನ ನಮ್ಮ  ಉಚ್ಚನ್ನ ಹಂಗೆ , ನಮ್ಮ  ಉಚ್ಚನ್ನ ಹೀಗೆ ಎಂದು ಹೇಳ್ತಾ ಇದ್ರು  ಇನ್ನು ಅದು ಸಾಧ್ಯವಿಲ್ಲ,  ಕನಿಷ್ಠ ಯಾವಾಗಲಾದರೂ ಚಿತ್ರಾನ್ನ ತಿನ್ನೋಕೆ, ಕೇಳೋಕೆ ಚಿತ್ರಾನ್ನ ಹಾಡಾದ್ರೂ ಹಾಕಿ  :)  
ಹುಚ್ಚ ವೆಂಕಟ್  ಕೇವಲ ಒಂದು ಸೀಸನ್  ನಲ್ಲಿ ಜನಕ್ಕೆ ಅದೂ ಸ್ವಲ್ಪ ಜನಕ್ಕೆ ಗೊತ್ತಾಗಿರ ಬಹುದೇನೋ.. ಆದರೆ ಕಿಚ್ಚ ವಿಷಯ ಹಾಗಲ್ಲ ಅಲ್ವೇ .. :) . ಜನ ನೋಡೋದು .. ನೋಡ್ತಾ ಬಂದಿರೋದು ಕಿಚ್ಚನ ಮೇಲಿನ  ಪ್ರೀತಿಯಿಂದ..ಬಿಗ್ ಬಾಸ್ ನಲ್ಲಿ ಕಿಚ್ಚನ ಪ್ರಭೆ ಇರುತ್ತೆ..ಯಾಕೇಂದ್ರೆ ವಿ ಲವ್ ಯು ಎನಿ  ಟೈಮ್ ಸುದೀಪ್.  



ಕೊನೆ ಪಂಚು  ನಮ್ಮ  ವಿಕ್ರಮ್ ಜೋಷಿ ಕಡೆಯಿಂದ ... 
ಇನ್ನೂ ಬಾಕಿ ಇದೆ ...ನೋಡುತ್ತಿರಿ...

ಹುಚ್ಚ ವೆಂಕಟ್ T-Shirts 😜
ಹುಚ್ಚ ವೆಂಕಟ್ ಬೊಂಬೆಗಳು 😄
ಹುಚ್ಚ ವೆಂಕಟ್ Quotes ಪುಸ್ತಕಗಳು 😜 
ಹುಚ್ಚ ವೆಂಕಟ್ ದಾಡಿ ಸ್ಟೈಲ್‌ 😂
ಹುಚ್ಚ ವೆಂಕಟ್ ಹೇರ್ ಸ್ಟೈಲ್‌ 😜
ಹುಚ್ಚ ವೆಂಕಟ್ ಡೈಲಾಗ್ಸ್ 😂
ಹುಚ್ಚ ವೆಂಕಟ್ ಚಪ್ಪಲ್ಲು (ಎಕ್ಕಡ) 😂 😂

ರಾಮಾಯಣ

courtesy: Prakash Hegde 


ಪ್ರಕಾಶ್ ಹೆಗ್ಡೆ ನನ್ನ ಎಫ್ ಬಿ ಮಿತ್ರರು, ಯಾವಾಗಲಾದರೊಮ್ಮೆ ನಾನು ಹೋದಂತಹ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಭೇಟಿಯಾಗುವ ಅಕ್ಷರಪ್ರೇಮಿ ಪ್ರಕಾಶ್ ಹೆಗ್ಡೆ ಅವರ ಟ್ಯಾಲೆಂಟ್ ಸಿಕ್ಕಾಪಟ್ಟೆ ಇದೆ. ಅವರ ಆಸಕ್ತಿಗಳಲ್ಲಿ ಫೋಟೋಗ್ರಫಿ ಸಹ ಒಂದಾಗಿದೆ. ಈ ತಿಂಗಳ ಪೂರ್ತಿ  ನಾನು ದೀಪವನ್ನು ನನ್ನ ಬ್ಲಾಗ್ ನಲ್ಲಿ ಬೆಳಗ ಬೇಕು ಎನ್ನುವ ಆಶಯ ಹೊಂದಿರುವ ಬಗ್ಗೆ ನಿಮಗೆ ಮೊದಲೇ ಹೇಳಿದ್ದೆ. ನನ್ನ ಆಶಯ ಪೂರ್ಣವಾಗುತ್ತಿದೆ  . . ಪ್ರಕಾಶ್ ಎಫ್ ಬಿಯ ಗೋಡೆಯ ಮೇಲೆ  ಅವರ ಮನೆಯ  ದೀಪದ ಫೋಟೋಗಳನ್ನು ಹಚ್ಚಿಟ್ಟಿದ್ದರು.  ಪ್ರಕಾಶ್ ಹೆಗ್ಡೆ ಅವರ ಬಳಿ ಕೇಳಿದ ನಾನು ನನ್ನ ಬ್ಲಾಗ್ ನಲ್ಲಿ ನಿಮ್ಮ ಹಣತೆಯನ್ನು ಬೆಳಗಲೆ ಎಂದು .. ಒಂದು ಕಂಡೀಶನ್ ಮೇಲೆ ಸಮ್ಮತಿಸಿದರು. ಅವರ ಕಂಡಿಶನ್  ಗೆ  ಒಪ್ಪಿಗೆ ಇತ್ತು ನಾನು ದೀಪ ಹಚ್ಚಿದ್ದೇನೆ.. ಧನ್ಯವಾದಗಳು ಸರ್ಜಿ 
Image result for blue flowers images

@ ಪೌರಾಣಿಕ ಕಥೆಗಳನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ  ತಮ್ಮ ಕಲ್ಪನೆಯ ಹಂದರದ ಮೂಲಕ ಹೊರ ಹಾಕುತ್ತಾರೆ. ಎಲ್ಲವೂ ಇಷ್ಟ ಆಗುವಂತಿರುತ್ತದೆ. ಅದೇರೀತಿ ಇಷ್ಟ ಆಗುವಂತಹ ಧಾರವಾಹಿ ಸಿಯ ಕೆ  ರಾಮ್ ಅದು ರಾಮಾಯಣದ ಕಥೆ. ಸೆಟ್ಟಿಂಗ್ಸ್, ಆ ಕಲ್ಪನೆ, ಬಳಸಿರುವ ಒಡವೆಗಳ ಪರಿಕಲ್ಪನೆ ತುಂಬಾ ಚಂದ ಇದೆ. ನಾನು ರಾತ್ರಿ 10 : 30 ಯಲ್ಲಿ ವೀಕ್ಷಿಸಿದೆ. ನಿನ್ನೆಯಿಂದ ಆರಂಭವಾಗಿದೆ ಆ ಧಾರವಾಹಿ. ಪುರಾಣ ಪ್ರಿಯರು ಆನಂದವಾಗಿ ವೀಕ್ಷಿಸ ಬಹುದು. ಏಕೆಂದರೆ ರಾಮಾಯಣದಲ್ಲಿ ಹೀರೋ ವಿಲನ್  ಗಳ ಬಗ್ಗೆ ನಮಗೆ ಗೊತ್ತೇ ಇದೆ.. ಆದರೆ ಒಬ್ಬ ನಿರ್ದೇಶಕ ಅದನ್ನು ಯಾವ ರೂಪದಲ್ಲಿ ನೋಡಿದ್ದಾರೆ ಎನ್ನುವುದು ಇಂತಹ ಧಾರಾವಾಹಿಗಳಿಂದ ತಿಳಿಯುತ್ತದೆ .



@ ಸುವರ್ಣ ನ್ಯೂಸ್ ನಲ್ಲಿ ಇಂದು ಪಕ್ಷಿಪ್ರೇಮಿ ಒಬ್ಬಾತನ ವಿಷಯ ಪ್ರಸಾರಿಸುತ್ತಿದ್ದರು. ಪಕ್ಷಿಗಳನ್ನು ಎಲ್ಲರೂ ಪ್ರೇಮಿಸುತ್ತಾರೆ, ಆದರೆ ಅದರ  ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಮಾತ್ರ ಬಹಳ ಕದೀಮೆ. ಆ ನಿಟ್ಟಿನಲ್ಲಿ  ನೋಡುವುದಾದರೆ ಸಣ್ಣ ಉದ್ಯೋಗ ಮಾಡುತ್ತಿರುವ ಆ ವ್ಯಕ್ತಿಯ  ಮನಸ್ಸು ಬಹಳ ದೊಡ್ಡದು. ಆತ ಕಷ್ಟಪಟ್ಟು ದುಡಿದ ಹಣದಲ್ಲಿ ಸ್ವಲ್ಪ ಭಾಗ ಗಿಣಿಗಳ ಊಟಕ್ಕೆ ಮೀಸಲಿಟ್ಟಿದ್ದಾರೆ. ಸುಮಾರು ಐದು ಸಾವಿರ ಗಿಣಿಗಳಿಗೆ ಅನ್ನ ಉಣಬಡಿಸುತ್ತಾರಂತೆ . ಅದನ್ನು ಟೀವಿಯಲ್ಲಿ ಪ್ರಸಾರಿಸಿದರು. ಪ್ರಾಯಶಃ ಮತ್ತೊಮ್ಮೆ ಪ್ರಸಾರ ಮಾಡಬಹುದು. ನೋಡಿ ಚೆನ್ನಾಗಿದೆ. ಇರುವುದರಲ್ಲಿ ಹಂಚಿ ತಿನ್ನುವುದು ಎಂತಹ ವಿಶೇಷ ವ್ಯಕ್ತಿತ್ವ ಅಲ್ವೇ.. 

ನಿಬ್ಬೆರಗು


Image result for deepam

Image result for green color flowers
ವಿಜಯಲಕ್ಷ್ಮಿ ಶಿಬರೂರು ಅವರ ಕವರ್ ಸ್ಟೋರಿ ಅತ್ಯಂತ ಇಷ್ಟವಾಗುವ ಕಾರ್ಯಕ್ರಮಗಳಲ್ಲಿ ಒಂದು. ಹೆಣ್ಣು ಎಂದರೆ ಹೀಗಿರಬೇಕು ಎಂದು ಹೇಳುವಂತಹ ವಿಶೇಷ ಪತ್ರಕರ್ತೆ ಆ ಹೆಣ್ಣುಮಗಳು. ಥೇಟ್ ಸಿನಿಮಾಗಳಲ್ಲಿ ಇರುವ  ಸಾಹಸಮಯಿ ಹೀರೋಯಿನ್ ರಂತೆ. ಆಕೆಯ ಸಾಧನೆ ಬಗ್ಗೆ ಹೆಚ್ಚು ಖುಷಿ ಆಗುತ್ತದೆ. ಆಕೆಯ ತಂಡ, ಸುವರ್ಣ ನ್ಯೂಸ್  ಎಲ್ಲರಿಗೂ ಇಂತಹ ಒಬ್ಬಾಕಿ ಅವರ ಗುಂಪಲ್ಲಿ ಇರುವುದು ಹೆಮ್ಮೆ ಆಗುತ್ತೆ. ನಮಗೂ ಸಹ.. ಡಿಯರ್ ವಿಜಯಲಕ್ಷ್ಮಿ ಸಾಹಸದ ಭರದಲ್ಲಿ ಹಾದಿಯಲ್ಲಿ ಹೆಜ್ಜೆ ಜಾಗ್ರತವಾಗಿಡಿ  ಅದಷ್ಟೇ ನಮ್ಮ ಕಳಕಳಿ .
Image result for green color flowers
@ ಕಲರ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕೀಸ್ ನಲ್ಲಿ  ಕಲಾವಿದ ಮಂಡ್ಯ ರಮೇಶ್ ಅವರ ಬಗ್ಗೆ ವಿಶೇಷವಾಗಿ ಹೇಳ ಬೇಕಿಲ್ಲ. ಏಕೆಂದರೆ ಅವರ ನಟನೆಯನ್ನು ನೋಡಿದರೆ ಸಾಕು.. ಅದೆಷ್ಟು ಜೀವಂತಿಕೆ. ಸಾಮಾನ್ಯವಾಗಿ ಮಂಡ್ಯ ಕನ್ನಡದ ಜೊತೆಗೆ ತಪ್ಪು ಆಂಗ್ಲ ಪದ ಅಂದ್ರೆ  ಅಂಪೈರ್ ಗೆ ಸಪ್ಲೈರ್ ಅನ್ನೋದು, ಹೀಗೆ ಹತ್ತು ಹಲವಾರು ರೀತಿಯಲ್ಲಿ ಅವರು ಜನರನ್ನು ನಗಿಸುತ್ತಾರೆ. ವಿಶೇಷ ಏನೆಂದರೆ ಆ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಅಪರ್ಣ ಅದ್ಯಾಕೋ ತೀರಾ ಕಂಠಪಾಠ  ಮಾಡಿದಂತೆ ಮಾತಾಡ್ತಾರೆ. ಇಂತಹ ಕಾರ್ಯಕ್ರಮದಲ್ಲಿ ಎಷ್ಟು ನ್ಯಾಚುರಲ್ ಆಗಿದ್ರೆ ಅಷ್ಟು ಒಳ್ಳೇದಲ್ವ ? ಇದು ನನ್ನ ಅಭಿಪ್ರಾಯ ಅಷ್ಟೇ !
@ ಚಂದನವಾಹಿನಿ  ಅಚ್ಚ ಮಧ್ಯಮ ವರ್ಗದ  ಹೆಣ್ಣು ಮಗಳಂತೆ  .  ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಒಂದು ವಾಹಿನಿ. ಅದರಲ್ಲಿ  ಬಹಳಷ್ಟು  ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗುತ್ತದೆ. ಅದರಲ್ಲಿ ಒಂದು ಸಾಧಕ ದಂಪತಿಗಳು  ಮತ್ತೊಬ್ಬ ಸಾಧಕ ದಂಪತಿಗಳನ್ನು ಸಂದರ್ಶಿಸುವುದು, ಮಾತನಾಡುವುದು , ಹರಟುವುದು ಏನು ಬೇಕಾದರೂ ಹೇಳ ಬಹುದು. ಅತ್ಯಂತ ಸರಳ ಹಾಗೂ ಸುಂದರ ಕಾನ್ಸೆಪ್ಟ್ ಅದು. ತೀರ ಅಬ್ಬರದ, ಅತಿಯಾದ ಯಾವುದೇ ಇಂತಹ ಅಂಶಗಳಿಗೆ ಆದ್ಯತೆ ನೀಡದೆ ಸರಳ ರೀತಿಯಲ್ಲಿ ಇರುತ್ತದೆ. ನನಗೆ ಅದರ ಹೆಸರು ಗೊತ್ತಿಲ್ಲ ಮತ್ತು ಅದು ಸಾಮಾನ್ಯವಾಗಿ ರಾತ್ರಿ ಎಂಟೂವರೆ ಆ ಸಮಯದಲ್ಲಿ ನೋಡಿದ್ದೇನೆ. ವಾರಕ್ಕೆಷ್ಟು ಬಾರಿ ಬರುತ್ತದೆ ಎನ್ನುವುದುಅರ ಅರಿವಿಲ್ಲ. ಸಾಧ್ಯವಾದರೆ ನೋಡಿ, ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಅದೂ ಒಂದು...
Image result for green color flowers
@ ಜೀ ಕನ್ನಡ ವಾಹಿನಿಯಲ್ಲಿ ಲಿಲ್  ಚಾಂಪ್ಸ್ ಅಂತಿಮ ಹಣಾಹಣಿ ಸಿದ್ಧವಾಗ್ತಾ ಇದೆ.. ರಾಜೇಶ್, ಅರ್ಜುನ್, ವಿಜಯ್ ಪ್ರಕಾಶ್ ಮೂರು ಅತಿರಥ ಮಹಾರಥರ ಸಮ್ಮುಖದಲ್ಲಿ ಮುದ್ದು ಮಕ್ಕಳು ತಮ್ಮ ಪ್ರತಿಭೆ ತೋರುತ್ತಿದ್ದಾರೆ. ಅದರಲ್ಲಿ  ಅಭಿನವ್ ಚಂದ್ರಕಾಂತ್ ಭಟ್ ಮತ್ತು ಅಧೀಶ್ ಎನ್ನುವ ಇಬ್ಬರು ಪುಟಾಣಿ   ಮಕ್ಕಳು ಇದ್ದಾರೆ. ಆದರೆ ಅವರ ಪ್ರತಿಭೆ ದೈತ್ಯ. ಮೇಷ್ಟ್ರು ಹೇಳಿಕೊಟ್ಟ ಹಾಡು ಹಾಡಬೇಕು ಹಾಡ್ತ್ವಿ  ಎಂದು ಕಲಿತ ಹಾಡನ್ನು ಹೇಳಿಕೊಟ್ಟಂತೆ ಹಾದಿ ನಿಬ್ಬೆರಗು ಉಂಟು ಮಾಡ್ತಾರೆ.  ಅದೇರೀತಿ ಮಕ್ಕಳು ನಂತಹ ಆಡುವ ಮಾತುಗಳು ಸಹಿತ ಇಷ್ಟ ಆಗುತ್ತೆ.. ಗುರುಗಳು ಕೇಳಿದ ಪ್ರಶ್ನೆಗೆ ಉತ್ತರಿಸುವ ವಿಧಾನವೂ ಆಪ್ಯಾಯ..