ಸ್ಟ್ರಾಂಗು ಗುರು ??

Image result for orange flowers
ನಮ್ಮ ಮನೆಯಲ್ಲಿ ಈಗ ರಾಜ್ ನ್ಯೂಸ್, ಬಿಟಿವಿ ಸಹ ಪ್ರಸಾರ ಆಗುತ್ತೆ. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಈ  ಕೊಡೆ ಸಿಸ್ಟಂ ಬಂದ ಬಳಿಕ ಎಷ್ಟೇ ಚಾನೆಲ್ಗಳು ಆರಂಭವಾದರೂ ಸಹ ನಾವು ನೋಡೋದು ತುಂಬಾ ಅವಧಿ ಕರಗಿ ಕಳೆದು ಹೋದ ಬಳಿಕವಷ್ಟೇ  . ಈಗ ಈ ಚಾನೆಲ್ಗಳು  ನಮ್ಮ ಟೀವಿ ಪರದ ಮೇಲೆ ರಾರಾಜಿಸಿ ಒಂದಷ್ಟು ಸಮಯ ಮಾತ್ರ ಕಳೆದಿದೆ..
 ರಾಜ್ ನ್ಯೂಸ್ ನಲ್ಲಿ ಇವತ್ತು ಸಂಜೆ ಒಂದು ಸುದ್ದಿ ವೀಕ್ಷಿಸಿದೆ.. ಸಕತ್ ಖುಷಿ ಆಯ್ತು.. ಸ್ವಚ್ ಭಾರತ ಮಾಡಲು ಬಿಡುಗಡೆ ಮಾಡಿದ ಹಣವನ್ನು ಗುಳುಂ ಎಂದು ಸ್ವಚಗೊಳಿಸಿದ ವ್ಯಕ್ತಿಗೆ ಸಂಬಂಧಿತ ಅಧಿಕಾರಿ ಅದರಲ್ಲೂ ಮಹಿಳಾಧಿಕಾರಿ ಬಸ್ಕಿ ಹೊಡೆಸಿದ ಸುದ್ದಿ ಪ್ರಸಾರ ಆಗೋದು ಕಂಡು ಸಂತೋಷ ಆಯ್ತು ರೀ.. ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು ಅಂತ ಹಾಡು ಹೇಳದೆ ಇದ್ರೂ..ಇಂತಹ ದಕ್ಷ ಅಧಿಕಾರಿಗಳು ಬಂದ್ರೆ ಸರ್ಕಾರ ಏನು ಮಾಡಬೇಕು ಅಂತ ನಿರ್ಧಾರ ಮಾಡಿರುತ್ತೋ ಅದನ್ನು ಮಾಡಬಹುದು.. ಆದರೆ ಎಲ್ಲಾ ಸರ್ಕಾರಗಳು ಇಂತಹ ಅಧಿಕಾರಿಗಳ ಪರ ಇರುತ್ತೆ ಅನ್ನೋಕೆ ಆಗಲ್ಲ.. ಹಾಗೆ ಮಾಡೋಕೆ ಹೊರಟ ಅಧಿಕಾರಿಗಳು ಬೇಗ ಶಿವನಪಾದ ಸೇರಿ ಬಿಡ್ತಾರೆ. ಆದರೆ ಪಾಪ ಆ ಹೆತ್ತಕರುಳುಗಳು  ಬದುಕಿರುವ ತನಕ ..........
Image result for orange flowers

@ಈ ಟೀವಿ ಕನ್ನಡ ಸುದ್ದಿವಾಹಿನಿಯಲ್ಲಿ  ಈಗ ಬದುಕು ಕಂಡುಕೊಂಡಿರುವ  ನನ್ನ ಮೆಚ್ಚಿನ ನಿರೂಪಕರಲ್ಲಿ ಒಬ್ಬರಾದ  ರಮಾಕಾಂತ್ ಬರ್ ಬರ್ತಾ ಜಾಸ್ತಿ ಸ್ಮಾರ್ಟ್  ಆಗ್ತಾ ಇದ್ದಾರೆ.. ಕ್ಯಾ ಬಾತ್ ಹೈ :-) ...
@ಪ್ಲಸ್ ಸುವರ್ಣ ಚಾನೆಲ್  ಸಿನಿಮಾಗಳನ್ನು ಪ್ರಸಾರಿಸುವ ವಾಹಿನಿ... ಇವತ್ತು ಗುಣಸಾಗರಿ ನೋಡಿ ಖುಷಿ ಆಯ್ತು. ಅದಕ್ಕೆ ಕಾರಣ ಆ ಚಿತ್ರ ಕಪ್ಪುಬಿಳುಪು.. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿದ್ದು ಆ ಫ್ಯಾಂಟಸಿ, ಅದಕ್ಕಿಂತಲೂ ಹೆಚ್ಚು ಆನಂದ ನೀಡಿದ್ದು ಪಂಡರಿಭಾಯಿ  ಅವರ ಅಭಿನಯ..  ನನಗೆ ಹಳೆಯ ಚಿತ್ರಗಳು ಹೆಚ್ಚು ಮಾನಸೋಲ್ಲಾಸ ನೀಡುತ್ತದೆ..

ಸ್ಟ್ರಾಂಗು ಗುರು ??

Image result for orange flowers
ನಮ್ಮ ಮನೆಯಲ್ಲಿ ಈಗ ರಾಜ್ ನ್ಯೂಸ್, ಬಿಟಿವಿ ಸಹ ಪ್ರಸಾರ ಆಗುತ್ತೆ. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಈ  ಕೊಡೆ ಸಿಸ್ಟಂ ಬಂದ ಬಳಿಕ ಎಷ್ಟೇ ಚಾನೆಲ್ಗಳು ಆರಂಭವಾದರೂ ಸಹ ನಾವು ನೋಡೋದು ತುಂಬಾ ಅವಧಿ ಕರಗಿ ಕಳೆದು ಹೋದ ಬಳಿಕವಷ್ಟೇ  . ಈಗ ಈ ಚಾನೆಲ್ಗಳು  ನಮ್ಮ ಟೀವಿ ಪರದ ಮೇಲೆ ರಾರಾಜಿಸಿ ಒಂದಷ್ಟು ಸಮಯ ಮಾತ್ರ ಕಳೆದಿದೆ..
 ರಾಜ್ ನ್ಯೂಸ್ ನಲ್ಲಿ ಇವತ್ತು ಸಂಜೆ ಒಂದು ಸುದ್ದಿ ವೀಕ್ಷಿಸಿದೆ.. ಸಕತ್ ಖುಷಿ ಆಯ್ತು.. ಸ್ವಚ್ ಭಾರತ ಮಾಡಲು ಬಿಡುಗಡೆ ಮಾಡಿದ ಹಣವನ್ನು ಗುಳುಂ ಎಂದು ಸ್ವಚಗೊಳಿಸಿದ ವ್ಯಕ್ತಿಗೆ ಸಂಬಂಧಿತ ಅಧಿಕಾರಿ ಅದರಲ್ಲೂ ಮಹಿಳಾಧಿಕಾರಿ ಬಸ್ಕಿ ಹೊಡೆಸಿದ ಸುದ್ದಿ ಪ್ರಸಾರ ಆಗೋದು ಕಂಡು ಸಂತೋಷ ಆಯ್ತು ರೀ.. ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು ಅಂತ ಹಾಡು ಹೇಳದೆ ಇದ್ರೂ..ಇಂತಹ ದಕ್ಷ ಅಧಿಕಾರಿಗಳು ಬಂದ್ರೆ ಸರ್ಕಾರ ಏನು ಮಾಡಬೇಕು ಅಂತ ನಿರ್ಧಾರ ಮಾಡಿರುತ್ತೋ ಅದನ್ನು ಮಾಡಬಹುದು.. ಆದರೆ ಎಲ್ಲಾ ಸರ್ಕಾರಗಳು ಇಂತಹ ಅಧಿಕಾರಿಗಳ ಪರ ಇರುತ್ತೆ ಅನ್ನೋಕೆ ಆಗಲ್ಲ.. ಹಾಗೆ ಮಾಡೋಕೆ ಹೊರಟ ಅಧಿಕಾರಿಗಳು ಬೇಗ ಶಿವನಪಾದ ಸೇರಿ ಬಿಡ್ತಾರೆ. ಆದರೆ ಪಾಪ ಆ ಹೆತ್ತಕರುಳುಗಳು  ಬದುಕಿರುವ ತನಕ ..........
Image result for orange flowers

@ಈ ಟೀವಿ ಕನ್ನಡ ಸುದ್ದಿವಾಹಿನಿಯಲ್ಲಿ  ಈಗ ಬದುಕು ಕಂಡುಕೊಂಡಿರುವ  ನನ್ನ ಮೆಚ್ಚಿನ ನಿರೂಪಕರಲ್ಲಿ ಒಬ್ಬರಾದ  ರಮಾಕಾಂತ್ ಬರ್ ಬರ್ತಾ ಜಾಸ್ತಿ ಸ್ಮಾರ್ಟ್  ಆಗ್ತಾ ಇದ್ದಾರೆ.. ಕ್ಯಾ ಬಾತ್ ಹೈ :-) ...
@ಪ್ಲಸ್ ಸುವರ್ಣ ಚಾನೆಲ್  ಸಿನಿಮಾಗಳನ್ನು ಪ್ರಸಾರಿಸುವ ವಾಹಿನಿ... ಇವತ್ತು ಗುಣಸಾಗರಿ ನೋಡಿ ಖುಷಿ ಆಯ್ತು. ಅದಕ್ಕೆ ಕಾರಣ ಆ ಚಿತ್ರ ಕಪ್ಪುಬಿಳುಪು.. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿದ್ದು ಆ ಫ್ಯಾಂಟಸಿ, ಅದಕ್ಕಿಂತಲೂ ಹೆಚ್ಚು ಆನಂದ ನೀಡಿದ್ದು ಪಂಡರಿಭಾಯಿ  ಅವರ ಅಭಿನಯ..  ನನಗೆ ಹಳೆಯ ಚಿತ್ರಗಳು ಹೆಚ್ಚು ಮಾನಸೋಲ್ಲಾಸ ನೀಡುತ್ತದೆ..

ವಿಚಿತ್ರವಾಗಿ

Image result for pink flowers
ನಿನ್ನೆ   ಮೇಕೆ  ಕಥೆ  ಮೊನ್ನೆ ಸಿಕ್ಕಿ ಬಿದ್ದ  ಪ್ರಶ್ನಪತ್ರಿಕೆ ತೋಳನ ಕಥೆಯ  ಮುಂದೆ ಏನೇನೇನು ಮುಖ್ಯವಾಗಿಲ್ಲದೇ ಇದ್ದರು ತೋಳನ ಕಥೆ ಬಿಟ್ಟು ಮೇಕೆಗಳ ಕಡೆಗೆ ಕ್ಯಾಮರ ಲೈಟು, ಪೇಪರ್,ಇಂಕು ಚೆಲ್ಲಿದ್ದು ಮಾತ್ರ ಖೇದ ಅನ್ನಿಸಿತು. ಆದರೆ ಒಂದು ಜಾತಿ ಮಾತ್ರ ಸದಾ ಚರ್ಚಿತ ಅಂದ್ರೆ ಅದೆಷ್ಟು ಸ್ಟ್ರಾಂಗ್ ನೋಡಿ ನಮ್ಮ ಭಾರತೀಯ ಸಮಾಜದ ಜಾಸ್ತಿ ಬುದ್ಧಿವಂತರು, ಜಾಸ್ತಿ ತಿಳಿದವರ ಕಣ್ಣಲ್ಲಿ, ಬರಹದಲ್ಲಿ.
ಇಡೀ ಸಮುದಾಯವೇ ಮೇಕೆತಿಂದಂಗೆ ಮಾತಾಡಿದ ಮಂದಿ ಕಡಿಮೆ ಇಲ್ಲ ಬಿಡಿ. ಒಂದು ಹನಿ ನೀರು ಕುಡಿಯದೆ ಏಕಾದಶಿ ಉಪವಾಸ ಮಾಡುವ ಕರ್ಮಠರ ಬಗ್ಗೆ ಅರಿಯದೆ, ಒಟ್ಟೊಟ್ಟಿಗೆ ಎರಡು ಏಕಾದಶಿ ಬಂದರೆ ಎರಡೂ ದಿನಗಳು ಒಂದು ಉದ್ಧರಣೆ ತೀರ್ಥ ಸೇವಿಸಿ ಸದಾ ತಮ್ಮ ಆಚಾರಗಳ ಬಗ್ಗೆ ಶ್ರದ್ಧೆ ಇತ್ತು ಬದುಕುವ ಬಹುತೇಕ ಬ್ರಾಹ್ಮಣರಿಗೆ ನಿನ್ನೆ ಮೇಕೆ ಮಾಂಸ ತಿನ್ನಿಸಿ ಬಿಟ್ರು ಬಿಡಿ ಚರ್ಚೆ, ಬರಹ, ಸೋಶಿಯಲ್ ಮೀಡಿಯಾಗಳ ಮೂಲಕ ! ಒಂದು ಸತ್ಯ ಯಾವುದನ್ನು ಹಣಿಯೋಕೆ ಹೋಗ್ತೀರೋ ಅದು ಮಣಿಯಲ್ಲ!!
Image result for pink flowers
@ ಅತ್ಯಂತ ಸುಂದರ , ವಿಶೇಷವಾದ ಧಾರವಾಹಿ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುವ  ತಮನ್ನಾ. ಎರಡು ಬಲಿಷ್ಠ ಕೋಮಿನ ಹುಡುಗರನ್ನು ಆಟದ ಮೂಲಕ ಒಂದು ಮಾಡಿ ಅವರಲ್ಲಿರುವ ಉತ್ತಮಿಕೆಗಳು, ಬಾಲ್ಯದ ಮುಗ್ಧತೆ , ಪ್ರತಿಭೆ ಎಲ್ಲವನ್ನು ಹೊರ ತರುವಂತೆ ಮಾಡುವ ಪ್ರಯತ್ನ ಪ್ರತಿಯೊಂದು ಅದ್ಭುತ ರೀತಿಯಲ್ಲಿ ಹಣೆದಿದ್ದಾರೆ ಕಥೆಗಾರರು. ಎರಡು ಕೋಮಿನವರ ಬಗ್ಗೆ ಕೆಟ್ಟದಾಗಿ, ವಿಚಿತ್ರವಾಗಿ ತೋರಿಸುವ ಕಥೆಗಳು, ಧಾರಾವಾಹಿಗಳು, ಸಿನಿಮಾಗಳ ಮುಂದೆ ಈ ಕಥೆ - ಸೀರಿಯಲ್ ವಾವ್ ವಿಶಿಷ್ಟವಾಗಿದೆ.