ವಾಸುದೇವ....Vasudeva
JOVIAL,JOY..........
ದೇಸಿ ಪ್ರತಿಭೆ
ಜಾಕ್ ಪಾಟ್
ಸ್ಟಾರ್ ಸುವರ್ಣ ಮನೋರಂಜನಾ ವಾಹಿನಿಯನ್ನು ಬಹಳ ದಿನಗಳ ಬಳಿಕ ನಾನು ಮುಖ್ಯವಾಗಿ ಬಿ ಆರ್ ಛಾಯ ಮೇಡಂ ಮತ್ತು ಪದ್ಮಪಾಣಿ ಸರ್ ಕಾರಣದಿಂದ ವೀಕ್ಷಿಸಿದೆ. ಅದರಲ್ಲಿ ಪ್ರಸಾರ ಆಗುವ ಜಾಕ್ ಪಾಟ್ ಎನ್ನುವ ಕಾರ್ಯಕ್ರಮದಲ್ಲಿ ಈ ದಂಪತಿಗಳಿಗೆ ಹಾಗೆನ್ನುವುದಕ್ಕಿಂತ ಛಾಯ ಮೇಡಂ ಗೆ ಸನ್ಮಾನ ಆಗುವ ಕಾರ್ಯಕ್ರಮ ಇತ್ತು ಪ್ರೇಮದಿನದ ಸಲುವಾಗಿ... !
ಅಲ್ಲಿ ಬಹಳ ದಿನಗಳ ನಂತರ ನಿರೂಪಕಿ ಅನುಪಮಾ ಗೌಡ ರನ್ನು ನೋಡಿ ಖುಷಿ ಆಯ್ತು. ಕನ್ನಡದ ಕೆಲವು ಉತ್ತಮ ನಿರೂಪಕ/ಕಿ ಯಾರ ಸಾಲಿಗೆ ಸೇರಿರುವ ಅನುಪಮಾ ಭಾಷೆ ಹಾಗು ಅವರ ಸುವರ್ತನೆ ಇಷ್ಟ ಆಗುತ್ತದೆ. ಬಿಗ್ ಬಾಸ್ ಗೆ ಎರಡನೇ ಬಾರಿ ಬಂದ ಅನುಪಮಾ ಅನೇಕರೀತಿಯಲ್ಲಿ ತಮ್ಮನ್ನು ಪಾಲಿಶ್ ಮಾಡಿಕೊಂಡಿದ್ದರು. ಅದು ಒಳ್ಳೆಯ ಬೆಳವಣಿಗೆ. ಪದ್ಮಪಾಣಿ ಸರ್ ನನಗೆ ಫೇಸ್ ಬುಕ್ ಮಿತ್ರರು. ನನ್ನ ಪೋಸ್ಟ್ ಗಳಿಗೆ ಲೈಕ್ ಒತ್ತುವ ಮತ್ತು ಕಾಮೆಂಟ್ ಹಾಕುವ ಹೃದಯ ವಿಶಾಲಿಗಳು.. ತಿಳಿಹಾಸ್ಯದ ಮನಸ್ಸು ಇರುವ ಪದ್ಮಪಾಣಿ ಸರ್ ಮತ್ತು ನನ್ನ ಮೆಚ್ಚಿನ ಗಾಯಕಿ ಛಾಯಾ ಮೇಡಂ ಅವರನ್ನು ಜಾಕ್ ಪಾಟ್ ವೇದಿಕೆಯ ಮೂಲಕ ನೋಡಿ ಖುಷಿ ಆಯಿತು. ಈ ಕಾರ್ಯಕ್ರಮದಲ್ಲಿ ತುಂಬಾ ಇಂಪ್ರೆಸ್ ಮಾಡಿದ ಮತ್ತೊಂದು ಸಂಗತಿ ಅಂದರೆ ವಿವಿಧ ಪ್ರಕಾರಗಳ ಸಂಗೀತ.ಅದು ಗಾಯನ, ವಾದನ.. ಹೀಗೆ ಹತ್ತು ಹಲವಾರು ಇರಬಹುದು. ತುಂಬಾ ಚೆನ್ನಾಗಿತ್ತು.ತಾರಾ ದಂಪತಿಗಳಾದ ಸಿಹಿಕಹಿ ಚಂದ್ರು ಮತ್ತು ಗೀತಾ ಮೇಡಂ ಅವರಿಗೆ ನಡೆದ ಸನ್ಮಾನ ಮತ್ತು ಮಾತುಕತೆ ಚಹಾದ ಅಲ್ಲಲ್ಲ ಕಾಫಿ ಜೊತೆಯ ಚೂಡಾ ಇದ್ದಂಗೆ ಇತ್ತು..
ಲಾಸ್ಟ್ ರೆಸಿಪೀಸ್
ಎಪಿಕ್ ಚಾನಲ್ ನಲ್ಲಿ ಒಂದೊಳ್ಳೆಯ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಲಾಸ್ಟ್ ರೆಸಿಪೀಸ್ ಅಂತ ಅದರ ಹೆಸರು.ಆದಿತ್ಯಬಲ್ ಅದರ ನಿರೂಪಕ. ಈ ಕಾರ್ಯಕ್ರಮದ ವಿಶೇಷ ಅಂದ್ರೆ ಮರೆಯುತ್ತಿರುವ, ಅಥವಾ ಬಹಳ ಹಿಂದೆ ಬಳಸುತ್ತಿದ್ದ ಪಾಕ ವಿಧಾನ. ನಾನು ಆ ಚಾನಲ್ ವೀಕ್ಷಣೆ ಮಾಡುವಾಗ ನಮ್ ಕರ್ನಾಟಕದ ಹೆಮ್ಮೆಯ ಮಹಾರಾಜ ರಾಜಾಧಿರಾಜ ಶ್ರೀ ಕೃಷ್ಣದೇವ ರಾಯರ ವಂಶಕ್ಕೆ ಸೇರಿದ ರಾಜಮಾತೆ ಮತ್ತು ಅವರ ಸೊಸೆ 500 ವರ್ಷದಷ್ಟು ಹಳೆಯ ರೆಸಿಪಿ ಮಾಡಿ ತೋರಿಸಿದರು. ರಾಜಮಾತೆ ಹೆಸರು ಚಂದ್ರಕಾಂತ ದೇವಿ. ಮೊಟ್ಟೆ ಯಿಂದ ಮಾಡಿದ ಒಂದು ಸರಳವಾದ ತಿನಿಸನ್ನು ತೋರಿಸಿಕೊಟ್ಟರು. ನಮ್ಮಲ್ಲಿ ಬಳಸುವ ಮರಾಠಿ ಮೊಗ್ಗು, ಕಲ್ಲುಹೂವನ್ನು ಉಪಯೋಗಿಸಿ ಮಾಡಿದ ಆಹಾರವನ್ನು ಆಂಕರ್ ಚಪ್ಪರಿಸಿಕೊಂಡು ತಿಂದದ್ದು ಬೇರೆ ವಿಷ್ಯ.
ನಾನು ಸಾಮಾನ್ಯವಾಗಿ ವೆಜ್ ಅಥವಾ ನಾನ್ವೆಜ್ ಅಡುಗೆ ನೋಡುತ್ತೇನೆ.. ನಾನು ಶಾಕಾಹಾರಿ ಆಗಿದ್ದರು ಸಹ .. ಯಾಕೆಂದ್ರೆ ಯಾವುದೇ ದೇಶ, ಸಂಸ್ಕೃತಿಯವರು ಅಡುಗೆ ಮಾಡುವ ವಿಧಾನ,ಅವರು ಬಳಸುವ ಸಾಂಬಾರ ಪದಾರ್ಥಗಳು ..ನನಗೆ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ ಅದಕ್ಕಷ್ಟೇ..!
ಫುಡ್ ಫ್ಯಾಕ್ಟರಿ
ಸಿಗುತ್ತಾ ?!
ಕೋವಿಡ್ ಸಮಯದಲ್ಲಿ ವಾರ್ತಾ ವಾಹಿನಿಗಳನ್ನು ಹೆಚ್ಚು ನೋಡ್ತಾ ಇದ್ದೆ. ಸೋಷಿಯಲ್ ಮೀಡಿಯಾದಲ್ಲಿದ್ದ ಅನೇಕ ಸ್ನೇಹಿತರ ಸಾವು, ಪ್ರಪಂಚದಲ್ಲಿ ಆದ ಸಾವುಗಳು ಮನಕ್ಕೆ ಖೇದ ಉಂಟು ಮಾಡಿತ್ತು. ಆದ ಕಾರಣ ಆದಷ್ಟು ಮನಕ್ಕೆ ಬೇಸರ, ನೋವು ಉಂಟಾಗುವ ವಿಷಯಗಳನ್ನು ನಾನು ವೀಕ್ಷಿಸಬಾರದು ಎಂದು ನಿರ್ಧಾರ ಮಾಡಿದ್ದೆ. ಆದರೂ ಬಹಳ ಸಮಯದ ನಂತರ ಸಾಮಾನ್ಯವಾಗಿ ವೀಕ್ಷಿಸುವ ವಾರ್ತಾ ವಾಹಿನಿಗಳನ್ನು ಹೊರೆತು ಪಡಿಸಿ ಹಾಗೆ ಪ್ರಜಾ ಮತ್ತು ರಾಜ್ ನ್ಯೂಸ್ ಕಡೆ ಬಂದೆ. ಆಯೋ ಎಂಥ ಅನ್ಯಾಯ .. !!!! ರಾಜ್ ನ್ಯೂಸ್ ನಲ್ಲಿ beauty ಟಿಪ್ಸ್ ಅನ್ನುವ ಕಾರ್ಯಕ್ರಮದ ಹೆಡ್ಡಿಂಗ್ ತೋರಿಸ್ತಾ ಇದ್ರೂ.. ಆದರೆ ಅಲ್ಲಿ ಪ್ರಸಾರ ಆಗ್ತಾ ಇದ್ದುದು ನ್ಯೂಸೂ... ಇನ್ನು ಪ್ರಜಾ ದಲ್ಲಿ ಸಾಂತ್ವಾನ ಅನ್ನುವ ಪ್ರೋಗ್ರಾಮ್ ಇತ್ತು ಪಟ್ಟಿಯಲ್ಲಿ ಆದರೆ ಅಲ್ಲೂ ಸಹ ಪ್ರಸಾರ ಆಗ್ತಾ ಇದ್ದುದ್ದು ನ್ಯೂಸು.. ದೇವುಡಾ ನ್ಯೂಸ್ ನೋಡುವುದರಿಂದ ಸಾಂತ್ವಾನ ಸಿಗುತ್ತಾ ?!
-
ಈಗಷ್ಟೇ ಒಂದು ತಮಾಷೆ ಪ್ರಶ್ನೆ ಓದಿದೆ ತೆಲುಗು ಗ್ರೂಪ್ ಒಂದರಲ್ಲಿ , ಹೀಗೆ ಒಂದು ಸರ್ತಿ ಒಬ್ಬ ಹುಡುಗನ ಹೆಸರು ಕೇಳಿದಾಗ ಅವನು 6ಜೂನ್ ಎಂದು ಉತ್ರ ಕೊಟ್ಟನಂತೆ , ಹಾಗಾ...
-
ಗೆದ್ದವರ ಬದುಕನ್ನು ಕೂಲಂಕಷವಾಗಿ ನೋಡಿದಾಗ ಬಹುತೇಕರು ಅಪಮಾನದ ಮೂಸೆಯಲ್ಲಿ ಕರಗಿ ಸುಂದರ ಆಕೃತಿ ಪಡೆದಿರುತ್ತಾರೆ. ವಿಷಾದ , ವಿಡಂಬನೆ, ತಮಾಷೆ ಅಂದ್ರೆ ಆ ರೀತಿ ಅಪಮಾನ...
-
ಸರಳ ಸದಭಿರುಚಿಯ ಹಾಸ್ಯಭರಿತ ವಾಸಂತಿ ನಲಿದಾಗ ಚಿತ್ರವನ್ನು ನಿರ್ದೇಶನ ಮಾಡಿರುವವರು ನನ್ನ ಎಫ್ಬಿ ಮಿತ್ರ ರವೀಂದ್ರ ವೆಂಶಿ..ಆಗಾಗಲೇ ಅವರು ಅನೇಕ ಚಿತ್ರಗಳನ್ನು ನಿರ್ದ...