ಭಾವನೆ...ಭಾವನೆ...!


ದೇವರು, ಯತಿಗಳು, ಸಂತರು ಹೀಗೆ ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಸ್ವಲ್ಪ ಹೆಚ್ಚಿನ ಜಾಗರೂಕತೆ ಇರಬೇಕು ಯಾರೇ ಮಾತನಾಡಲಿ. ಆದರೆ ಇಂತಹ ವಿಷಯ ಅದರಲ್ಲೂ ಹಿಂದೂ ಧಾರ್ಮಿಕ ಭಾವನೆಗಳ ಬಗ್ಗೆ ಸ್ವಲ್ಪ ಜಾಸ್ತಿನೆ ಹಗುರವಾಗಿ ಮಾತಾಡೋ ಮಂದಿ ಇತರ ಧರ್ಮಗಳ ಬಗ್ಗೆ ಅದಿನ್ಯಾವ ಮಟ್ಟದ್ದು ವಿಶ್ವಾಸವು ಇರದು. ನಿಜ ಯಾವುದು ಅತಿ ಆಗ ಬಾರದು . ಯಾಕೆಂದ್ರೆ ಧರ್ಮ-ಜಾತಿಯು ಹೆಚ್ಚು   ಮನುಷ್ಯ ಮನುಷ್ಯರ ನಡುವೆ ಅತಿ ದೊಡ್ಡ ಕಂದರ ಏರ್ಪಡಿಸಿ ಬಿಡುತ್ತದೆ. 

ನಾನು ಎಲ್ಲ ಧರ್ಮಗಳ ಗುರುಗಳನ್ನು ಹೆಚ್ಚು ಗೌರವಿಸುತ್ತೇನೆ. ಸಾಮಾನ್ಯವಾಗಿ ಅನೇಕ ಧರ್ಮಗಳ ಸಂತರ ರಚನೆ ಓದಿದ್ದೇನೆ. ನಮ್ಮ ತಾಯಿಯನ್ನು ಅತಿ ಹೆಚ್ಚು ಆಕರ್ಷಿಸಿರುವುದು ಕಬೀರ್ ದೋಹ..!  .. ಗೌರವ ಬೇರೆ ಬೇರೆ... ಭಾರತದಂತಹ ದೇಶದಲ್ಲಿ ಎಲ್ಲ ಧರ್ಮದ ಜೊತೆಜೊತೆಯಲ್ಲಿ ಬೆಳೆಯುವುದು ಸಾಮಾನ್ಯ ಸಂಗತಿ. 

ಈಗ ಅತಿ ಹೆಚ್ಚು ಮಾತಿಗೆ ಸಿಕ್ಕಿರುವುದು ಶಿರಡಿ ಸಾಯಿ ಬಾಬ ಅವರ ಸಂಗತಿ. ಅವರು ಏನೇ ಆಗಿರಲಿ, ಹೇಗೆ ಇರಲಿ ಅಪಾರ ಸಂಖ್ಯೆಯ ಭಕ್ತರ ಆಪ್ತ ಬಂಧು. ನಮ್ಮ ಮನೆಯಲ್ಲಿ ನಮ್ಮ ತಾನಿಂದ ಈಗಿನವರೆಗೂ ಅತೀ ಹೆಚ್ಚು ನಂಬಿರುವ ಗುರುಗಳು. ಕ್ಷಣ ಕ್ಷಣ   ಜಪಿಸುವುದು ಮನ ಸಾಯಿ ಸಾಯಿ ಅಂತ. ನಮ್ಮಂತಹ ಪಾರ ಭಕ್ತರು ಇದ್ದಾರೆ ಈ ದುನಿಯಾದಲ್ಲಿ.
ಅದೇ ರೀತಿ ನಮ್ಮ ರಾಘವೇಂದ್ರ ರಾಯರು ಸಹ ಭಕ್ತರ ಕಾಮಧೇನು. ಅವರ ನೆನೆಯದ ದಿನವಿಲ್ಲ,.. ರಾಯರು ಅಪರೋಕ್ಷ ಜ್ಞಾನಿಗಳು..ಇವೆಲ್ಲ ನಮ್ಮಂತಹ  ಭಕ್ತರ ನಂಬಿಕೆ..ಆದರೆ ಕೆಲವು ಸಂಗತಿಗಳು ಮನಸ್ಸಿಗೆ ಬೇಸರ ಆಗುತ್ತದೆ, ಗುರು ಪೀಠದಲ್ಲಿ ಕುಳಿತವರ ರೀತಿಯಿಂದ..


@@ ಮುಖ್ಯವಾಗಿ ರಾಯರು ಯತಿಗಳು ಆದರೆ ಸಂತರಲ್ಲ ಅನ್ನುವ ಬಗ್ಗೆ ಇಂದು ಪಬ್ಲಿಕ್ ಟೀವಿಯಲ್ಲಿ ತುಂಬಾ ಚಂದ  ವಿವರಿಸಿದರು ವಿದ್ವಾಂಸರು. ತುಂಬಾ ಆಸಕ್ತಿಕರ ಆಗಿತ್ತು. ಹರೀಶ್ ಅವರ ನಿರೂಪಣೆಯಲ್ಲಿ ಇದಕ್ಕೆ ಸಂಬಂಧಪಟ್ಟಂತೆ ನಡೆಸಿದ ಕಾರ್ಯಕ್ರಮ  ಆಸಕ್ತಿಯಿಂದ ಇತ್ತು.. ಪೇಜಾವರಶ್ರೀ ಅವರು ಹೇಳಿದಂತೆ ರಾಯರು ಯತಿಗಳು ದೇವರಲ್ಲ, ಆದರೆ ನಮ್ಮ ಪಾಲಿಗೆ ಅವರೇ ದೇವರು.. ಅವರು ಹೇಳುವ ಮಾತಿಗೂ ಮತ್ತು ನಮ್ಮ  ಭಾವನೆಗಳಿಗೂ  ಎರಡಕ್ಕೂ ಗೌರವ ಕೊಡ್ತೀನಿ. ಅದೇರೀತಿ ಸಾಯಿ ಬಾಬ ಅವರು ಸಂತರು ಯಾಕೆ ಅಂದ್ರೆ ಅವರು ಬ್ರಹ್ಮಚಾರಿಗಳು ಅಂತ ವಿದ್ವಾಂಸರೊಬ್ಬರು ಹೇಳಿದರು. ಅದು ಸರಿಯೇ.. ಸೂಫಿ ಸಂತರ ಸಮಕಾಲೀನರು ಬಾಬ ಅವರು ಅವರು ಸಂತರಾಗಿದ್ದರು ನಮಗೆ ಭಗವಾನ್ ಸೊ ನೋ ಮೋರ್ ಇಂತಹ ವಿಷಯಕ್ಕೆ ಸಂಬಂಧಪಟ್ಟಂತೆ. ಅಪಾರ ಸಂಖ್ಯೆ ಜನರ ನಂಬಿಕೆ ಮೇಲೆ ಸದಾ ದಾಳಿ ಮಾಡ ಬೇಡಿ ...!


@@ ಮಾ ವಾಹಿನಿಯಲ್ಲಿ ತೆಲುಗು ಮನ್ಮಥ , ಗ್ರೀಕು ವೀರ ನಾಗಾರ್ಜುನ ಟಾಲಿವುಡ್ ವಿಶೇಷ ಅದರಲ್ಲೂ ಸುಂದರ ಹಾಗೆ ಅನ್ನೋಕ್ಕಿಂತ ಸಕತ್ ಸ್ಟೈಲಿಶ್ ನಟ. ಇತ್ತೀಚಿಗೆ ಓದಿದ ನೆನಪು ಟಾಲಿವುಡ್ ನಲ್ಲಿ ಅತಿ ಹೆಚ್ಚಿನ ಸ್ಟೈಲೀಶ್   ನಟರ ಸಾಲಿಗೆ ನಾಗ್ ಸಹ ಸೇರ್ಪಡೆ ಆಗಿದ್ದಾರೆ. ಅಕ್ಕಿನೇನಿ ಕುಟುಂಬದ ನಾಗಾರ್ಜುನ ಮಾ ಟೀವಿಯಲ್ಲಿ ಕೋಟಿಶ್ವುರುಡು ( ಕರೋಡ್ ಪತಿ  ತೆಲುಗು ) ಕಾರ್ಯಕ್ರಮದ  ನಿರೂಪಕರಾಗಿದ್ದಾರೆ. ದಕ್ಷಿಣ ಭಾರತದಲ್ಲಿ   ಅದರಲ್ಲೂ ಮಾ ಟೀವಿಯಲ್ಲಿ ಬರಿ  ಡಬ್ಬಿಂಗ್ ಡಬ್ಬಿಂಗ್ .. ಆದರೆ ಅವಲ್ಲದರ ಕಿರಿಕಿರಿಯನ್ನು ದೂರ ಮಾಡುತ್ತದೆ ನಾಗ್ ಅವರ ಕಾರ್ಯಕ್ರಮದ ಶೈಲಿ ... ಅದ್ಭುತ...! 




ಜವಾನಿ  ಜಾನ್ -ಎ -ಮನ್  ಹಸೀನ್  ದಿಲ್ರುಬ
ಮಿಲೇ  ದೋ  ದಿಲ್  ಜವಾನ್  ನಿಸಾರ್  ಹೊ  ಗಯಾ
ಜವಾನಿ  ಜಾನ್ -ಎ -ಮನ್  ಹಸೀನ್  ದಿಲ್ರುಬ 
ಮಿಲೇ   ದೋ  ದಿಲ್  ಜವಾನ್  ನಿಸಾರ್  ಹೊ  ಗಯಾ 
ಶಿಕಾರ್  ಖುದ್   ಯಹಾ  ಶಿಕಾರ್  ಹೊ  ಗಯಾ 
ಎಹ್  ಕ್ಯಾ  ಸಿತಮ್  ಹುವಾ  
ಎಹ್  ಕ್ಯಾ  ಗುಲಾಮ್  ಹುವಾ 


ಈ ಹಾಡು ಸೂಕ್ತ ಆಗಿತ್ತು ಇವತ್ತು ನಿರೂಪಕಿ ಉಷಾಗೆ! ಅವರನ್ನು ಟೀವಿ ನೈನ್ ನಲ್ಲಿ ಇಂದು ಅವರು ಸಂಜೆ  ಕ್ರೈಂ ಕಾರ್ಯಕ್ರಮ ನಿರೂಪಣೆ ಮಾಡುವಾಗ ಮಾಡಿಕೊಂಡಿದ್ದ ಹೇರ್ ಸ್ಟೈಲ್ ಕಂಡಾಗ ನೆನಪಾಯಿತು  ! ಉಷಾ ವಾಟ್ ಈಸ್  thissss ಯಾ ;-)

ತಮಾಷೇನೆ ಅಲ್ಲ



ಜೀ ಹಿಂದಿ   ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಇಂಡಿಯಾ'ಸ್ ಬೆಸ್ಟ್ ಸಿನಿ ಸ್ಟಾರ್ ಕಿ  ಖೋಜ್ ಆಡಿಶನ್ ಬಗ್ಗೆ ಈ ಮೊದಲೇ ಹೇಳಿದ್ದೆ. ಇಂತಹ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಆಪ್ತ ಅನ್ನಿಸೋದು ನನಗೆ ಆ ಸ್ಪರ್ಧಿಗಳ   ಮೊದಲ ಹಂತದ ಭಾಗವಹಿಸುವಿಕೆ.. ಗೆಲ್ಲ ಬೇಕೆನ್ನುವ ಕಾತುರ, ಭವಿಷ್ಯದ ಬಗ್ಗೆ ಅತಿಯಾದ ನಿರೀಕ್ಷೆ.. ಹೀಗೆ ಹತ್ತು ಹಲವಾರು ಸಂಗತಿಗಳು. 
ಈ ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿ ಗಳಲ್ಲಿ ಒಬ್ಬರಾದ ಸೊನಾಲಿ ಬೇಂದ್ರೆ ಮೂಗನ್ನು ಒಬ್ಬ ಸ್ಪರ್ಧಿ ಡ್ಯಾನ್ಸ್ ಮಾಡಿಕೊಂಡು ಟಚ್ ಮಾಡಿದ.. ಅದು ತಪ್ಪು ನಿಜ ಆದರೆ ಆಕೆ ಕೋಪ ಮಾಡಿಕೊಂಡರು ಸಹ ಆ ಬಳಿಕ ಆ ಪ್ರತಿಭೆಗೆ ಅವಕಾಶ ನೀಡಿದ್ದು....! 
ಆ ಕಾರ್ಯಕ್ರಮದ ತೀರ್ಪುಗಾರ ಆಯುಷ್ಮಾನ್ ಜಾಸ್ತಿ ಇನ್ವಾಲ್ವ್.. ಗುಳಿಗಲ್ಲದ ಈ ತೀರ್ಪುಗಾರ ನಿರೂಪಣೆ ಮಾಡುವಾಗಲು , ನಟಿಸಿದಾಗಲು ಮನ ಸೆಳೆದಿದ್ದರು. ಅದೇರೀತಿ ಜಡ್ಜ್ ಆದಾಗಲೂ
ಆದರೆ ಈ ಕಾರ್ಯಕ್ರಮದಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸಿದ ತೀರ್ಪುಗಾರ ವಿಜಯ್ ಕೃಷ್ಣ  ಅಚಾರ್ಯ್... ಬರೆಯುವವರು ಸಾಮಾನ್ಯವಾಗಿ ತಮ್ಮ ಶಕ್ತಿಯನ್ನು ಅದರತ್ತ ಕೇಂದ್ರೀಕರಿಸಿ ಬಿಡ್ತಾರೆ ಅನ್ನೋದಕ್ಕೆ ಇವರೇ  ಸಾಕ್ಷಿ. ವಿಕ್ಟರಿ ಆಚಾರ್ಯ ಬಗ್ಗೆ ಧೂಮ್ 3  ನೋಡಿದವರಿಗೆ ಮಾತ್ರ ಗೊತ್ತು. ಬಾಲಿವುಡ್ ನ ಚಿತ್ರ ಸಾಹಿತಿ, ಚಿತ್ರಕತೆಗಾರ, ಸಂಭಾಷಣೆಕಾರ, ನಿರ್ದೇಶಕ .. ಎಲ್ಲವು ಈ ಈ ಆಚಾರ್ಯರ ಪದ ತಳದಲ್ಲಿ ವಾವ್! ನೀವು ಸ್ವಲ್ಪ ಮಾತಾಡಿ ವಿಕ್ಟರಿ .. ಸುಮ್ಮನೆ ಇದ್ರೆ ಆಯುಷ್ಮಾನ್ ತಿಂದೆ ಹಾಕ್ತಾರೆ ಪುಣ್ಯಾತ್ಮ !


@@ ಬಿಗ್ ಬಾಸ್ ಪ್ರೇಕ್ಷಕರ ಆಸೆಯಂತೆ ಬದಲಾಗುತ್ತಿದೆ. ಸ್ವಲ್ಪ ಬಿಸಿಬಿಸಿ ಆರಂಭ ಆಗಿದೆ. ಆದರೆ ಪದೇಪದೇ ಬಡಪಾಯಿ  ರೋಹಿತ್ ಬಗ್ಗೆ ಕೆಂಗಣ್ಣು ಬೀಳ್ತಾ ಇದೆ.. ಹೀಗೆ ಮಾಡ್ತಾ ಇದ್ರೆ ಅವರ ಡಾರ್ಲಿಂಗ್ಸ್ ಗೆ ಕೋಪ ಬರೋದು ಖಂಡಿತ !  ರೋಹಿತ್ ವಿಷ್ಯ ನೋಡಿದಾಗ ಹಿಂದಿ ಬಿಗ್ ಬಾಸ್ ಸೀಸನ್ 6  ರಲ್ಲಿ ಸಪ್ನಾ  ಭಾವನಾನಿ ನೆನಪಿಗೆ ಬರ್ತಾರೆ. ಆಕೆಯನ್ನು ಪ್ರತಿಬಾರಿ ನಾಮಿನೆಟ್ ಮಾಡ್ತಾ ಇದ್ರೂ ಮನೆಯವರು.. ಆದರು ಆ ಹೆಣ್ಣುಮಗಳು ಬಚಾವ್ ಆಗತಾನೆ ಇದ್ರೂ. ಕೊನೆಗೆ ಒಂದುವಾರ ಆಕೆಯನ್ನು ನಾಮಿನೇಟ್ ಮಾಡಲಿಲ್ಲ, ಆಕೆ ಸಲ್ಲು ಮಿಯ ಕೇಳಿದ್ದು ಹೇಗೆ ಅನ್ನಿಸ್ತಾ ಇದೆ ನಾಮಿನೇಟ್ ಆಗಿಲ್ಲದೇ ಇರೋದಕ್ಕೆ ಎಂದು ಕೇಳಿದ್ದರು ! ರೋಹಿತ್ ಬಗ್ಗೆನೂ ಅದ್ಯಾಕೋ .. ಪ್ರಾಯಶಃ ಆತ ರೇಡಿಯೋ ಜಾಕಿ ಆಗಿದ್ದಕ್ಕೆ ಇರ ಬೇಕು.. ಏನೇ ಹೇಳಿ ಆಕ್ಟ್ ಮಾಡುವುದಿರಲಿ ಧ್ವನಿಯಿಂದ ಜನರನ್ನು ಹಿಡಿದಿಟ್ಟು  ಕೊಳ್ಳುವುದು...ನೋಡುವ ಸಪ್ನ ಥರ ರೋಹಿತ್ ಹೆಚ್ಚು ಕಾಲ ಇರಲಿ !
ಕಿಚ್ಚ  ಸುದೀಪ್ ಅವರು ಇನ್ನು ಹೆಚ್ಚು ಇನ್ವಾಲ್ವ್ ಆಗಿಲ್ಲ ಅಂತ ಅನ್ನಿಸುತ್ತೆ ಸ್ಪರ್ಧಿಗಳ ಜೊತೆ.. ಅವರು ಹೊಂದಿಕೆ ಆಗಲು ಕಾಲದ ಅಗತ್ಯ ಇದೆ ಅನ್ನೋ ಮಾತು ಕೇಳಿದ್ದೆ.. ಆರಂಭದಲ್ಲೇ ಇಲ್ಲದ್ದು ಮಾತಾಡಿದ್ರೆ ಹೇಳಿದೊರೆ ಬರೆಯಲ್ವ! ತಮಾಷೇನೆ ಅಲ್ಲ! ಇದು ಸಕತ್ತಾಗಿದೆ ಲೈಕ್ ಆಯ್ತು ಕಿಚ್ಚ ... 
ಈ ಬಿಗ್ ಬಾಸ್ ನಲ್ಲಿ ಶಕೀಲಾ ಗೆ ಕನ್ನಡ ಬರಲ್ಲ, ಕಲಿತದ್ದು ನಾವ್ಯಾರು ಕಾಣಲೇ ಇಲ್ಲ ಅದ್ರು ಚೇಚಿ ಚೇಚಿ ಅಂತಆಕೆಯನ್ನು ಅದ್ಯಾಕೋ ಉಬ್ಬಿಸ್ತಾ ಇದ್ದಾರೆ ಕನ್ನಡ ಮಂದಿ! ಕಳೆದ ಬಾರಿ ನಿಖಿತ ಇಂಕ (ಇನ್ನು ) ಇಂಕ ಅಂತ ತೆಲುಗು ಪದ ಹೇಳ್ತಾ ಅದು ಕನ್ನಡದ್ದೇ ಅಂತ ಕನ್ನಡ ವೀಕ್ಷಕರಿಗರಿಗೆ ಬುದ್ಧಿ ಹೇಳೋಕೆ .. ಕಿವಿಯಲ್ಲಿ ಇಂಕ ಅಂತ ಕಣಗಿಲೆ... ! ಬಿಡಿ ಆದರು ಹೇಳಿಕೊಳ್ಳುವ ಆಸಕ್ತಿಕರ ಸ್ಪರ್ಧಿ ಅಲ್ಲದ ಈ ಮಳೆಯಾಳಮ್ಮ ಚೇಚಿ ಅಕ್ಕನ್ನ ಇನ್ನೆಷ್ಟು ಡೇಸ್ ನೋಡ ಬೇಕೋ ಅಯ್ಯೋ!!

ಪಬ್ಲಿಕ್ ಟೀವಿಯಲ್ಲಿ ಬಿಗ್   ಬಾಸ್ ನಿಂದ ಹೊರ ಬಂದ ಅನಿತಾ ಮತ್ತು ಹರ್ಷಿಕ ರನ್ನು  ಬಿಗ್ ಬಾಸ್ ನಿಂದ ಜೀವ ಪಡೆದ ಜಯ ಜಯ ಜಾಕೆಟ್ ಜಯಲಕ್ಷ್ಮಿ ಅವರು ಸಂದರ್ಶಿಸಿದರು. ಕಿಚ್ಚ ಭದ್ರ ಭದ್ರ .. ಈಕೆ ಅಬ್ರಕದಬ್ರ ಮಾಡಿ  ಬಿಗ್ ಬಾಸ್ ಆಂಕರ್ ಆಗುವ ಎಲ್ಲ ಸಾಧ್ಯತೆಗಳು ಕಂಡು ಬರ್ತಾ ಇದೆ.. ಜಯಲಕ್ಷ್ಮಿ ಅಂದ್ರೆ ತಮಾಷೇನೆ   ಅಲ್ಲ 

ಡಿವೈನ್ ಪಾರ್ಕ್



ಶ್ರೀ ಶಂಕರ ವಾಹಿನಿಯಲ್ಲಿ ಪ್ರತಿ ಗುರುವಾರ ರಾತ್ರಿ 9.30 ಕ್ಕೆ ಡಿವೈನ್ ಪಾರ್ಕ್ ಕಾರ್ಯಕ್ರಮ ಪ್ರಸಾರ ಆಗುತ್ತದೆ. ಹೆಸರೇ ತಿಳಿಸುವಂತೆ ಅದು ದೇವರು,ಆತನಿಗೆ ಸಂಬಂಧಿತ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಡಾ. ಚಂದ್ರ ಶೇಖರ್ ಉಡುಪ ಅವರು. ಯಾವುದೇ ಪ್ರಶ್ನೆ ಇರಲಿ ನೀಡುವ ಉತ್ತರ ಮನಸ್ಸಿಗೆ ಆಪ್ತ ಅನ್ನಿಸುತ್ತದೆ. ಆಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರಿಗೆ ಹೆಚ್ಚು ಇಷ್ಟ  ಆಗುವಂತಹ  ಕಾರ್ಯಕ್ರಮ.ಶಂಕರ ವಾಹಿನಿಯಲ್ಲಿ ಪ್ರಸಾರ ಆಗುವಂತೆ ಆಸ್ಥ, ಸಂಸ್ಕಾರ್,ಭಕ್ತಿ ಯಾವುದೇ ಚಾನೆಲ್  ಆಗಿರಲಿ ಒಟ್ಟಾರೆ ಇಷ್ಟ ಆಗುತ್ತದೆ. ಆದರೆ ಶಂಕರದಲ್ಲಿನ ಡಾಕ್ಟರ್ ಕಾರ್ಯಕ್ರಮ ಅದ್ಭುತ !
ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಅದರಲ್ಲೂ ಪ್ರವಚನಗಳು ಸಹ ಚಂದ ಇರುತ್ತದೆ.
@@ಇದೆ ವಾಹಿನಿಯಲ್ಲಿ ಭಜನ್ ಕಾರ್ಯಕ್ರಮ ಸಹ ಸಕತ್ ಚೆನ್ನಾಗಿದೆ. ಮುಖ್ಯವಾಗಿ ಇದರಲ್ಲಿ ಇರುವಭಿನ್ನತೆ ಸಾಕಷ್ಟು ಗಮನ ಸೆಳೆಯುತ್ತದೆ. ತಮಿಳು ಭಾಷೆ ಬರುವವರಿಗೆ ಸ್ವಲ್ಪ ಹೆಚ್ಚೇ ಇಷ್ಟ ಆಗುತ್ತದೆ.


@ ಸಾಮಾನ್ಯವಾಗಿ ನಾನು ಜೆಮಿನಿ ಕಾಮಿಡಿ ಮತ್ತು ಉದಯ ಕಾಮಿಡಿಯನ್ನು ಆಗಾಗ ನೋಡುತ್ತೇನೆ. ನನಗೆ ತೆಲುಗಿನಲ್ಲಿ  ಬ್ರಹ್ಮಾನಂದಂ ಮತ್ತು ಕನ್ನಡದಲ್ಲಿ ಸಾಧು ಬಾರಿ ಲೈಕ್ ಆಗುತ್ತೆ...
ನಿಜ ಕೆಲವು ಬಾರಿ ಅತಿರೇಕ ಅನ್ನಿಸೋದು ಸಹಜ ಆದರೆ ಇಷ್ಟ ಆಗುತ್ತೆ ಅವರಿಬ್ಬರ ನಟನೆ..
ಇತ್ತೀಚಿಗೆ ಒಂದು ಸಂಗತಿ ಓದಿದೆ ಬ್ರಹ್ಮಾನಂದಂ ಅವರು ಅತ್ಯಂತ ಬ್ಯುಸಿ ಇರುವಕಮೆಡಿಯನ್. ಅವರ ಕಾಲ್ಶೀಟ್ ಸಿಕ್ದೇ ಇದ್ರೆ ಅವರು ಸೂಪರ್ ಹೀರೋಗಳು ಸಹ ನಟಿಸೋಕೆ ಹಿಂದೆಮುಂದೆ ನೋಡ್ತಾರಂತೆ!ಅವರು ಕೇಳಿದಷ್ಟು ಸಂಭಾವನೆ ನೀಡ್ತಾರಂತೆ.ಹಾಗಂತ ಬರೆದಿದ್ರು..

ತಿಳಿ ಹಾಸ್ಯದ ಶೈಲಿ



ಅಡುಗೆ ಕಾರ್ಯಕ್ರಮ ಎಲ್ಲ ಚಾನೆಲ್ ಗಳಲ್ಲೂ ಬರುತ್ತದೆ. ಅದು ಎಲ್ಲರಿಗು ಗೊತ್ತೇ ಇದೆ.. ಅಡುಗೆ ಮಾಡುವವರಿಗಿಂತ ಆ ಕಾರ್ಯಕ್ರಮದ ನಿರೂಪಕರಿಂದ ಕಾರ್ಯಕ್ರಮ ಜೀವಂತ ಆಗಿರುತ್ತದೆ.  ಜೀವಂತಿಕೆ ಇರುವಂತೆ ಮಾಡುವುದರಲ್ಲಿ ಜೀ ಕನ್ನಡ ವಾಹಿನಿ ಮುರಳಿ ಸೇರ್ತಾರೆ.. ತಿಳಿ ಹಾಸ್ಯದ ಶೈಲಿ ಆಕರ್ಷಕವಾಗಿರುತ್ತದೆ .ಸಾಮಾನ್ಯವಾಗಿ ಅಡುಗೆ ಕಾರ್ಯಕ್ರಮಗಳಲ್ಲಿ ಹೆಣ್ಣು ಮಕ್ಕಳು ನಿರೂಪಣೆ ಮಾಡುತ್ತಾರೆ. ನಮ್ಮ ಪುರಾಣ ಇತಿಹಾಸದಲ್ಲಿ ಗಂಡುಮಕ್ಕಳೇ   ಉತ್ತಮ ಅಡುಗೆ ಮಾಡುವವರು,ಅದೇ ರೀತಿ ನಮ್ಮಲ್ಲಿ ಈಗ ಬೃಹತ್ ಕಾರ್ಯಕ್ರಮದಲ್ಲಿ ಏನೇ ಆದರೂ ಅಡುಗೆಯವರು ಗಂಡಸರೇ.  ಹಾಗಿದ್ದರು ಛೆ! ಅಡುಗೆ ಕಾರ್ಯಕ್ರಮ ನೋಡ ಬೇಕಾಗಿರೋದು ಮತ್ತು ನಡೆಸಿಕೊಡ ಬೇಕಾಗಿ ಇರುವವರು ಹೆಂಗಸರು ! ಆದರೆ ಮುರಳಿ ಸಕತ್ತಾಗಿ ನಡೆಸಿಕೊಡ್ತಾರೆ... ಮಾತಿನ ಶೈಲಿ  , ಮಾತನಾಡುವ ರೀತಿ ಇಷ್ಟ ಆಗುವಂತೆ ಇರುತ್ತದೆ..ಅತಿಯಾಗಿ ಮಾತುಕತೆ ಆಡಲ್ಲ !  
ಅಲ್ಲದೆ ಈ ಕಾರ್ಯಕ್ರಮಕ್ಕೆ ಬರುವವರಿಗೆ ಅನೇಕ ಸೌಲಭ್ಯಗಳನ್ನು ಸಹ ನೀಡುತ್ತಾರೆ. ಭಾಗವಹಿಸುವ ಸ್ಪರ್ಧಿಗಳಿಗೆ...! 


@@ಕಲರ್ ವಾಹಿನಿಯಲ್ಲಿ ಪ್ರಸಾರ ಆಗುವ ಸುಂದರ ಕಾರ್ಯಕ್ರಮಗಳಲ್ಲಿ ಜಾಲಕ್ ದಿಕ್ಲಾಜ ಸಹ ಒಂದಾಗಿದೆ. ಬಾಲಿವುಡ್ ನ ಮಹಾನ್ ತಾರೆಯರಾದ ಅಂದ್ರೆ ಅವರದ್ದೇ ಆದ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪ್ರತಿಭೆಗಳಾದ ಮಾಧುರಿ ದೀಕ್ಷಿತ್ ನೆನೆ, ರೆಮೋ ಡಿಸೋಜ ಮತ್ತು ಕರಣ್ ಜೋಹರ್ ಮೂರು ಜನ. ಸಾಮಾನ್ಯವಾಗಿ ಕೆಲವು ರಿಯಾಲಿಟಿ ಶೋಗಳಲ್ಲಿ ಬರುವ ಜಡ್ಜ್ ಗಳು  ಸ್ವಲ್ಪ ಹೆಚ್ಚೇ ಕೋಪದಿಂದ ಹೇಳುತ್ತಾರೆ, ಅಥವಾ ವ್ಯಂಗ್ಯ ಇದ್ದೆ ಇರುತ್ತದೆ . ಆದರೆ ಈ ಪ್ರತಿಭಾವಂತ ತ್ರಿಮೂರ್ತಿಗಳು ಎಂದಿಗೂ ಸ್ಪರ್ಧಿಗಳಿಗೆ ಬೇಜಾರಾಗುವಂತೆ ಮಾಡಿಲ್ಲ.  ಭಾಗವಹಿಸಿದಂತಹ ಸ್ಪರ್ಧಿಗಳ   ಬಗ್ಗೆ ಸಕತ್ತಾಗಿ  ಜಡ್ಜ್  ಮಾಡುತ್ತಾರೆ. ಅಲ್ಲದೆ ಹರ್ಟ್ ಆಗೋ ಹಾಗೆ ಪ್ರತಿಕ್ರಿಯೆ ಮಾಡಲ್ಲ , ರೂಢಾಗಿ ಹೇಳಲ್ಲ , ಫ್ರೆಂಡ್ಲಿಯಾಗಿ ಇರ್ತಾರೆ ...ತುಂಬಿದ ಕೊಡ ತುಳುಕೋಲ್ಲ ಅನ್ನೋದೇ ಇದಕ್ಕೆ ಅಲ್ವೇ