ತಮಾಷೇನೆ ಅಲ್ಲ



ಜೀ ಹಿಂದಿ   ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಇಂಡಿಯಾ'ಸ್ ಬೆಸ್ಟ್ ಸಿನಿ ಸ್ಟಾರ್ ಕಿ  ಖೋಜ್ ಆಡಿಶನ್ ಬಗ್ಗೆ ಈ ಮೊದಲೇ ಹೇಳಿದ್ದೆ. ಇಂತಹ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಆಪ್ತ ಅನ್ನಿಸೋದು ನನಗೆ ಆ ಸ್ಪರ್ಧಿಗಳ   ಮೊದಲ ಹಂತದ ಭಾಗವಹಿಸುವಿಕೆ.. ಗೆಲ್ಲ ಬೇಕೆನ್ನುವ ಕಾತುರ, ಭವಿಷ್ಯದ ಬಗ್ಗೆ ಅತಿಯಾದ ನಿರೀಕ್ಷೆ.. ಹೀಗೆ ಹತ್ತು ಹಲವಾರು ಸಂಗತಿಗಳು. 
ಈ ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿ ಗಳಲ್ಲಿ ಒಬ್ಬರಾದ ಸೊನಾಲಿ ಬೇಂದ್ರೆ ಮೂಗನ್ನು ಒಬ್ಬ ಸ್ಪರ್ಧಿ ಡ್ಯಾನ್ಸ್ ಮಾಡಿಕೊಂಡು ಟಚ್ ಮಾಡಿದ.. ಅದು ತಪ್ಪು ನಿಜ ಆದರೆ ಆಕೆ ಕೋಪ ಮಾಡಿಕೊಂಡರು ಸಹ ಆ ಬಳಿಕ ಆ ಪ್ರತಿಭೆಗೆ ಅವಕಾಶ ನೀಡಿದ್ದು....! 
ಆ ಕಾರ್ಯಕ್ರಮದ ತೀರ್ಪುಗಾರ ಆಯುಷ್ಮಾನ್ ಜಾಸ್ತಿ ಇನ್ವಾಲ್ವ್.. ಗುಳಿಗಲ್ಲದ ಈ ತೀರ್ಪುಗಾರ ನಿರೂಪಣೆ ಮಾಡುವಾಗಲು , ನಟಿಸಿದಾಗಲು ಮನ ಸೆಳೆದಿದ್ದರು. ಅದೇರೀತಿ ಜಡ್ಜ್ ಆದಾಗಲೂ
ಆದರೆ ಈ ಕಾರ್ಯಕ್ರಮದಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸಿದ ತೀರ್ಪುಗಾರ ವಿಜಯ್ ಕೃಷ್ಣ  ಅಚಾರ್ಯ್... ಬರೆಯುವವರು ಸಾಮಾನ್ಯವಾಗಿ ತಮ್ಮ ಶಕ್ತಿಯನ್ನು ಅದರತ್ತ ಕೇಂದ್ರೀಕರಿಸಿ ಬಿಡ್ತಾರೆ ಅನ್ನೋದಕ್ಕೆ ಇವರೇ  ಸಾಕ್ಷಿ. ವಿಕ್ಟರಿ ಆಚಾರ್ಯ ಬಗ್ಗೆ ಧೂಮ್ 3  ನೋಡಿದವರಿಗೆ ಮಾತ್ರ ಗೊತ್ತು. ಬಾಲಿವುಡ್ ನ ಚಿತ್ರ ಸಾಹಿತಿ, ಚಿತ್ರಕತೆಗಾರ, ಸಂಭಾಷಣೆಕಾರ, ನಿರ್ದೇಶಕ .. ಎಲ್ಲವು ಈ ಈ ಆಚಾರ್ಯರ ಪದ ತಳದಲ್ಲಿ ವಾವ್! ನೀವು ಸ್ವಲ್ಪ ಮಾತಾಡಿ ವಿಕ್ಟರಿ .. ಸುಮ್ಮನೆ ಇದ್ರೆ ಆಯುಷ್ಮಾನ್ ತಿಂದೆ ಹಾಕ್ತಾರೆ ಪುಣ್ಯಾತ್ಮ !


@@ ಬಿಗ್ ಬಾಸ್ ಪ್ರೇಕ್ಷಕರ ಆಸೆಯಂತೆ ಬದಲಾಗುತ್ತಿದೆ. ಸ್ವಲ್ಪ ಬಿಸಿಬಿಸಿ ಆರಂಭ ಆಗಿದೆ. ಆದರೆ ಪದೇಪದೇ ಬಡಪಾಯಿ  ರೋಹಿತ್ ಬಗ್ಗೆ ಕೆಂಗಣ್ಣು ಬೀಳ್ತಾ ಇದೆ.. ಹೀಗೆ ಮಾಡ್ತಾ ಇದ್ರೆ ಅವರ ಡಾರ್ಲಿಂಗ್ಸ್ ಗೆ ಕೋಪ ಬರೋದು ಖಂಡಿತ !  ರೋಹಿತ್ ವಿಷ್ಯ ನೋಡಿದಾಗ ಹಿಂದಿ ಬಿಗ್ ಬಾಸ್ ಸೀಸನ್ 6  ರಲ್ಲಿ ಸಪ್ನಾ  ಭಾವನಾನಿ ನೆನಪಿಗೆ ಬರ್ತಾರೆ. ಆಕೆಯನ್ನು ಪ್ರತಿಬಾರಿ ನಾಮಿನೆಟ್ ಮಾಡ್ತಾ ಇದ್ರೂ ಮನೆಯವರು.. ಆದರು ಆ ಹೆಣ್ಣುಮಗಳು ಬಚಾವ್ ಆಗತಾನೆ ಇದ್ರೂ. ಕೊನೆಗೆ ಒಂದುವಾರ ಆಕೆಯನ್ನು ನಾಮಿನೇಟ್ ಮಾಡಲಿಲ್ಲ, ಆಕೆ ಸಲ್ಲು ಮಿಯ ಕೇಳಿದ್ದು ಹೇಗೆ ಅನ್ನಿಸ್ತಾ ಇದೆ ನಾಮಿನೇಟ್ ಆಗಿಲ್ಲದೇ ಇರೋದಕ್ಕೆ ಎಂದು ಕೇಳಿದ್ದರು ! ರೋಹಿತ್ ಬಗ್ಗೆನೂ ಅದ್ಯಾಕೋ .. ಪ್ರಾಯಶಃ ಆತ ರೇಡಿಯೋ ಜಾಕಿ ಆಗಿದ್ದಕ್ಕೆ ಇರ ಬೇಕು.. ಏನೇ ಹೇಳಿ ಆಕ್ಟ್ ಮಾಡುವುದಿರಲಿ ಧ್ವನಿಯಿಂದ ಜನರನ್ನು ಹಿಡಿದಿಟ್ಟು  ಕೊಳ್ಳುವುದು...ನೋಡುವ ಸಪ್ನ ಥರ ರೋಹಿತ್ ಹೆಚ್ಚು ಕಾಲ ಇರಲಿ !
ಕಿಚ್ಚ  ಸುದೀಪ್ ಅವರು ಇನ್ನು ಹೆಚ್ಚು ಇನ್ವಾಲ್ವ್ ಆಗಿಲ್ಲ ಅಂತ ಅನ್ನಿಸುತ್ತೆ ಸ್ಪರ್ಧಿಗಳ ಜೊತೆ.. ಅವರು ಹೊಂದಿಕೆ ಆಗಲು ಕಾಲದ ಅಗತ್ಯ ಇದೆ ಅನ್ನೋ ಮಾತು ಕೇಳಿದ್ದೆ.. ಆರಂಭದಲ್ಲೇ ಇಲ್ಲದ್ದು ಮಾತಾಡಿದ್ರೆ ಹೇಳಿದೊರೆ ಬರೆಯಲ್ವ! ತಮಾಷೇನೆ ಅಲ್ಲ! ಇದು ಸಕತ್ತಾಗಿದೆ ಲೈಕ್ ಆಯ್ತು ಕಿಚ್ಚ ... 
ಈ ಬಿಗ್ ಬಾಸ್ ನಲ್ಲಿ ಶಕೀಲಾ ಗೆ ಕನ್ನಡ ಬರಲ್ಲ, ಕಲಿತದ್ದು ನಾವ್ಯಾರು ಕಾಣಲೇ ಇಲ್ಲ ಅದ್ರು ಚೇಚಿ ಚೇಚಿ ಅಂತಆಕೆಯನ್ನು ಅದ್ಯಾಕೋ ಉಬ್ಬಿಸ್ತಾ ಇದ್ದಾರೆ ಕನ್ನಡ ಮಂದಿ! ಕಳೆದ ಬಾರಿ ನಿಖಿತ ಇಂಕ (ಇನ್ನು ) ಇಂಕ ಅಂತ ತೆಲುಗು ಪದ ಹೇಳ್ತಾ ಅದು ಕನ್ನಡದ್ದೇ ಅಂತ ಕನ್ನಡ ವೀಕ್ಷಕರಿಗರಿಗೆ ಬುದ್ಧಿ ಹೇಳೋಕೆ .. ಕಿವಿಯಲ್ಲಿ ಇಂಕ ಅಂತ ಕಣಗಿಲೆ... ! ಬಿಡಿ ಆದರು ಹೇಳಿಕೊಳ್ಳುವ ಆಸಕ್ತಿಕರ ಸ್ಪರ್ಧಿ ಅಲ್ಲದ ಈ ಮಳೆಯಾಳಮ್ಮ ಚೇಚಿ ಅಕ್ಕನ್ನ ಇನ್ನೆಷ್ಟು ಡೇಸ್ ನೋಡ ಬೇಕೋ ಅಯ್ಯೋ!!

ಪಬ್ಲಿಕ್ ಟೀವಿಯಲ್ಲಿ ಬಿಗ್   ಬಾಸ್ ನಿಂದ ಹೊರ ಬಂದ ಅನಿತಾ ಮತ್ತು ಹರ್ಷಿಕ ರನ್ನು  ಬಿಗ್ ಬಾಸ್ ನಿಂದ ಜೀವ ಪಡೆದ ಜಯ ಜಯ ಜಾಕೆಟ್ ಜಯಲಕ್ಷ್ಮಿ ಅವರು ಸಂದರ್ಶಿಸಿದರು. ಕಿಚ್ಚ ಭದ್ರ ಭದ್ರ .. ಈಕೆ ಅಬ್ರಕದಬ್ರ ಮಾಡಿ  ಬಿಗ್ ಬಾಸ್ ಆಂಕರ್ ಆಗುವ ಎಲ್ಲ ಸಾಧ್ಯತೆಗಳು ಕಂಡು ಬರ್ತಾ ಇದೆ.. ಜಯಲಕ್ಷ್ಮಿ ಅಂದ್ರೆ ತಮಾಷೇನೆ   ಅಲ್ಲ 

1 comment:

Badarinath Palavalli said...

ಮೂರು ವಿಮರ್ಷೆಗಳು perfectಊ...