ಬಡೋ-ಮೆಹೆಕ್

Image result for orange flowers images

ಜೀ ಹಿಂದಿ ವಾಹಿನಿಯಲ್ಲಿ ಜಿಂದಗಿಕಿ ಮೆಹೆಕ್ ಅನ್ನುವ ಧಾರವಾಹಿ ಪ್ರಸಾರ ಆಗ್ತಾ ಇದೆ.  ಅಡುಗೆ ಆಸಕ್ತಿ ಇರುವ ಮಧ್ಯಮವರ್ಗದ ಹೆಣ್ಣುಮಗಳ ಕಥಾಹಂದರ ಹೊಂದಿರುವ ಧಾರವಾಹಿ. ಮೆಹೆಕ್ ಶರ್ಮ ಪಾತ್ರಧಾರಿಯಾದ ಸಮೀಕ್ಷಾ, ಶೌರ್ಯ ಪಾತ್ರಧಾರಿ ಕರಣ್  ಅವರು ನಟಿಸಿದ್ದಾರೆ. ಈ ಕಥೆಯಲ್ಲಿ ಮಧ್ಯಮವರ್ಗದ ಹೆಣ್ಣುಮಗಳು ಪ್ರತಿಷ್ಠಿತ ರಿಯಾಲಿಟಿ ಷೋ ನಲ್ಲಿ ಭಾಗವಹಿಸುತ್ತಾಳೆ..ಆಗ ಎದುರಾಗುವ ಸಮಸ್ಯೆಗಳು,ನಾಯಕ ಶೌರ್ಯನ ವರ್ತನೆ ಪ್ರತಿಯೊಂದು  ಇಂತಹ ಧಾರಾವಾಹಿಗಳಲ್ಲಿ ಸಾಮಾನ್ಯ. ಆದರೂ ಸಹ ಕಥೆಯು ವಿಭಿನ್ನ ಅಂಶದ ಅಡಿಯಲ್ಲಿ ಇರುವುದು, ಮಧ್ಯಮವರ್ಗದ ಅವಿಭಕ್ತ ಕುಟುಂಬ.. ಹೈ ಕ್ಲಾಸ್ ಜನಗಳ ಮನಸ್ಥಿತಿ ಎಲ್ಲವೂ ಚೆನ್ನಾಗಿ ತಿಳಿಸುತ್ತಾ ಸಾಗುತ್ತಾರೆ ನಿರ್ದೇಶಕರು.ಬೋರ್ ಹೊದಿಸದ ಧಾರವಾಹಿ ಅದು ... ಅದರಲ್ಲೂ ನನ್ನಂತಹ ಮಧ್ಯಮವರ್ಗದ ಹೆಣ್ಣುಮಕ್ಕಳಿಗೆ ನಿಜವಾಗಿಯೂ ಇಷ್ಟ ಆಗುವಂತಹ ಧಾರವಾಹಿ ಅಂತ ಮಾತ್ರ ಧೈರ್ಯವಾಗಿ ಹೇಳೋಕೆ ಇಷ್ಟ ಪಡ್ತೀನಿ :-)
Image result for orange flowers images

@ಅಂಡ್ ಟಿವಿಯಲ್ಲಿ ಬಡೋ ಬಹು ಎನ್ನುವ ಹೆಸರಿನ ಧಾರವಾಹಿ ಪ್ರಸಾರ ಆಗ್ತಾ ಇದೆ. ದಪ್ಪಗಿರುವ ಹೆಣ್ಣುಮಗಳ ಕಥೆ ಅದು. ಒಂದು ಹಳ್ಳಿಯಲ್ಲಿ ಪ್ರಾಮಾಣಿಕವಾಗಿದ್ದು, ಕಷ್ಟಪಟ್ಟು ದುಡಿದು, ತನ್ನ ಮನೆ ಕೆಲಸ ಅಲ್ಲದೆ ಬೇರೆಯವರ ಮನೆ ಕೆಲಸವನ್ನು ಸಹ ಬೇಸರ ಇಲ್ಲದೆ ಮಾಡುವ ಒಳ್ಳೆಯ ಮನಸ್ಥಿತಿಯ ಹೆಣ್ಣುಮಗಳು ಕೋಮಲ್. ಆಕೆಯ ಆ ಸ್ಥೂಲದೇಹ ಕಂಡು ಯಾವ ಗಂಡು ಸಹ ಮದುವೆ ಆಗಲು ಒಪ್ಪಲ್ಲ . ಕೊನೆಗೆ ಅದೇ ಊರಿನ ಮುಖಂಡ ಕೋಮಲ್ ಳನ್ನು ತನ್ನ ಸೊಸೆಯಾಗಿ ಮಾಡಿಕೊಳ್ಳುತ್ತಾರೆ . ರಿಟಾಶಾ, ಪ್ರಿನ್ಸ್ ಇದರಲ್ಲಿ ಮುಖ್ಯ ಪಾತ್ರಧಾರಿಗಳು.ಪಂಕಜ್ ಧೀರ್ ಅವರು ಸಹ ಮುಖ್ಯಪಾತ್ರಧಾರಿ. ನಿಜ ಚೆನ್ನಾಗಿದೆ ...





ಟೀಬಿ



ನಮಗೆ ಈ ತಿಂಗಳ 28 ರಂದು ಬಂದ್ ಬೇಕಾಗಿಲ್ಲ ಎನ್ನುವ ಮಾತು, ಅಭಿಪ್ರಾಯ ಹೆಚ್ಚಾಗಿ ಕೇಳಿ ಬರುತ್ತಿದೆ. ನಿಜಕ್ಕೂ ಅಂತಹ ನಡೆ ಸ್ವಾಗತಾರ್ಹ. ವಾಟ್ಸ್ ಅಪ್ , ಎಫ್ಬಿ , ಟ್ವಿಟ್ಟರ್  ಯಾವ ಜಾಲತಾಣವೆ ಆಗಿರಲಿ ಅಲ್ಲಿ ಇಂತಹ ಸಂದೇಶಗಳು ಹರಿದು ಬರುತ್ತಲೇ ಇವೆ. ಬಂದ್ ಬೇಡರಿ ನಮಗೆ ... ಅದರಲ್ಲೂ ಉತ್ತರ ಭಾರತದ ಅಂತಹ ಹೆಸರುವಾಸಿಯಾದ ನಾಯಕರು ಇದರ ಮುಂದಾಳತ್ವ ವಹಿಸಿದ್ದಾರೆ ಅಂದ್ರೆ ...!!
ಇನ್ನು ದೈವವನ್ನು ನಂಬಿರುವ ಅಪಾರ ಸಂಖ್ಯೆಯ ಸಾನ್ಯರಿಗೆ ಅಂದು ಕೊನೆಯ ಕಾರ್ತಿಕ ಸೋಮವಾರ. ಅಂದು ಲಕ್ಷ ದೀಪೋತ್ಸವ, ವಿಶ್ವ ವಿಖ್ಯಾತ  ಕಳ್ಳೆ ಕಾಯ್ ಪರಿಷೆ , ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು..
ಕಾಳಧನಿಕರ ಸೊಂಟ ಮುರಿಯಲು ಪ್ರಧಾನಿ ಮಾಡುತ್ತಿರುವ ಕೆಲಸಗಳಲ್ಲಿ ನೋಟ್ ಬ್ಯಾನ್  ಹೆಚ್ಚು ಪತರಗುಟ್ಟಿಸಿದೆ  ಮಂದಿಯಲ್ಲಿ. ಪ್ರಧಾನಿ ಮೋದಿಜಿ ಅವರ ಈ ನಿರ್ಧಾರ ನನಗಂತೂ ಸಿಕ್ಕಾಪಟ್ಟೆ ಖುಷಿ ತಂದಿದೆ. ಐನೂರು, ಸಾವಿರ ರೂಗಳು ಸಾಮಾನ್ಯರಿಗೆ ಅಷ್ಟೊಂದು ಮಹತ್ವದ್ದಲ್ಲ. ನಾನು ಕಂಡಂಗೆ ಅತಿ ಹೆಚ್ಚು ಬಳಕೆ ಮಾಡುವುದು ನೂರುಗಳು, ಐವತ್ತು, ಇಪ್ಪತ್ತು ಮತ್ತು ಹತ್ತು ರೂಗಳು. ಬಿಡಿ ಅವೆಲ್ಲ ಹೇಳುವ ಅಗತ್ಯವಿಲ್ಲ. ಮೋದಿಜಿ ಐವತ್ತು ರೂಗಳ ನೋಟ್ ಸಹ ಬ್ಯಾನ್ ಮಾಡಿದ್ರೆ ಒಳ್ಳೆಯದು. ಐವತ್ತು ರೂಗಳ ಖೋಟಾ ನೋಟುಗಳು ಬೇಕಾದಷ್ಟು  ಅಸಲಿ ನೋಟ್  ಗಳ ಜೊತೆ ಹಂಚಿವೆ. ಮಾರುಕಟ್ಟೆಗಳಲ್ಲಿ  ಇದರ ಪ್ರಭಾವ ಜಾಸ್ತಿ.. ನಮಗೆ  ವಸ್ತುಗಳನ್ನು ಕೊಳ್ಳುವ ಆತುರದಲ್ಲಿ ವ್ಯಾಪಾರಿ ಕೊಡುವ ಚಿಲ್ಲರೆ ಬಗ್ಗೆ ಗಮನ ಇರಲ್ಲ. ಅದರಲ್ಲೂ ಹಬ್ಬಗಳ ಸಮಯದಲ್ಲಿ ಇಂತಹ ಮೋಸಕ್ಕೆ ಒಳಗಾಗುವವರು ನಮ್ಮಂತಹ ಸಾಮಾನ್ಯರು.
@ ಕನ್ನಡದ ಪ್ರಸಿದ್ಧ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಎಫ್ಬಿ ಅವರು ಹೀಗೆ  ಹೇಳಿದ್ದಾರೆ..


Decision was good...
But execution was bad...
ಹಾಗಂತ ನೋಟ್ ban ವಿರುದ್ಧ ದೇಶ ಬಂದ್ ಮಾಡುವುದು ಮೂರ್ಖತನ ಎಂದು ನನ್ನ ಭಾವನೆ...
ಮಾತಿನಲ್ಲಿ ಚರ್ಚೆ ಮಾಡಿ..ಬಂದ್ ಬೇಡ..
ಜನರ ವಿಶ್ವಾಸ ಕಳೆದು ಕೊಳ್ಳಬೇಡಿ...
...ಅತಿ ಶ್ರೀಮಂತರಿಗೆ ಈ ಕ್ರಮದಿಂದ ಕಷ್ಟವಿಲ್ಲ...ಮಧ್ಯಮವರ್ಗದವರಿಗೆ, ಕೂಲಿ ಹಣವನ್ನು ನಂಬಿದವರಿಗೆ ಕಷ್ಟದ ದಿನಗಳು...ಆದರೆ ಇದು ಕಪ್ಪು ಹಣದ ಯುದ್ಧದ ವಿರುದ್ಧ ಒಂದು ಹೆಜ್ಜೆ ಅನ್ನುವುದಂತೂ ಒಂದಷ್ಟು ಮಟ್ಟಿಗೆ ಸತ್ಯ...
ಬಂದ್ ಬೇಡ...ಆದರೆ ಕ್ರಮಗಳ ಸುಧಾರಣೆಯಂತೂ ಆಗಲೇ ಬೇಕು...‌
ಎಷ್ಟೋ ಲಕ್ಷ ಕೋಟಿ ಕಪ್ಪು ಹಣ ಬ್ಯಾಂಕಿಗೆ ಜಮೆಯಾಗಿದೆ ಎಂದು post ಹಾಕುತ್ತಾರೆ...ಬ್ಯಾಂಕಿಗೆ ಜಮೆಯಾಗಿರುವುದು, ಲೆಕ್ಕ ಸಿಗುವ ಹಣ...ಕಪ್ಪು ಹಣ ಹಾಕಿ ಏಕೆ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ...!? ಅದೆಲ್ಲಾ ದುಡಿದ, ತೆರಿಗೆ ಕಟ್ಟಿದ ಸ್ವಂತ ಹಣ
ಈ ಕ್ರಮದಿಂದಾಗಿ
ತರಕಾರಿ, ಹೂವು, ಜನಗಳ ಕೂಲಿ ಎಲ್ಲಾ ಪಾತಾಳಕ್ಕೆ ಕುಸಿದಿದೆ...
ರೈತರು ಮತ್ತು ಕೃಷಿ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ..
ಆದರೂ ಇದು ಕಪ್ಪು ಹಣದ ವಿರುದ್ಧ ಹೆಜ್ಜೆ ಅನ್ನುವುದು ಸತ್ಯ...
ಚುನಾವಣೆಗಳು ಕೊಂಚ ಕ್ಲೀನ್ ಆಗಬಹುದು...ಹಣ ಇಲ್ಲದ ಪ್ರಾಮಾಣಿಕರಿಗೂ
ಚುನಾವಣೆಗಳಲ್ಲಿ ಯುದ್ಧ ಮಾಡಲು ಧೈರ್ಯ ಬರುತ್ತದೆ..
ದಿನವೆಲ್ಲಾ ಹೇಳುತ್ತಾ ಹೇಗಬಹುದು...ಆದರೆ ಮೊದಲೇ ಹೇ‌ಳಿದಂತೆ.
Decision is good...execution was very bad
ಆದರೆ ಬಂದ್ ಸರಿ ಅಲ್ಲ...
ಹಾಗೆಂದು ಬಂದ್ ಮಾಡುವವರನ್ನು ತೇಜೋವಧೆ ಮಾಡುವುದು ಕೂಡ ಸರಿಯಲ್ಲ..


Image result for orange flower
@ ಟಿವಿ  ನೈನ್  ವಾಹಿನಿ ಅನೇಕ ಉತ್ತಮ ಪ್ರತಿಭೆಗಳ ವೇದಿಕೆ. ನಿಜವೆಂದರೆ ಅಲ್ಲಿ ಕಂಡವರು ಮತ್ತೊಂದು ಕಡೆ ಉಜ್ವಲವಾಗುತ್ತಾರೆ. ಪ್ರತಿಭೆಗಳು ನಿಂತ ನೀರಾಗಬಾರದು. ಈಗ ನನ್ನ ಗಮನ ಹೆಚ್ಚು ಸೆಳೆದ  ವಾರ್ತಾವಾಚಕ -ನಿರೂಪಕ ಮಹಂತೇಶ್. ವಾರ್ತೆ ಓದುವಾಗ ಸ್ಪಷ್ಟತೆ, ವೀಕ್ಷಕರಿಗೆ ಅರ್ಥವಾಗುವಂತೆ ಓದುವ.. ನಿರೂಪಣೆ ಮಾಡುವಾಗ ಜನರ ಗಮನ ಸೆಳೆಯಲು ಬೇಕಾದ ಎಲ್ಲಾ ಅಂಶಗಳು ಮಹಂತೇಶ್ ಅವರಲ್ಲಿದೆ.ನಿನ್ನೆ ಐ ಎ ಎಸ್ ಅಧಿಕಾರಿ ಡಿ ಕೆ ರವಿ ಅವರ ಆತ್ಮಹತ್ಯೆ  ಬಗ್ಗೆ  ಪ್ರಸಾರವಾದ ಕಾರ್ಯಕ್ರಮ ನೀಟಾಗಿ ನಿರೂಪಣೆ ಮಾಡಿ ಮಹಂತೇಶ್ ತಾವು ಉತ್ತಮ ನಿರೂಪಕ ಅನ್ನುವುದನ್ನು ಸಾಬೀತು ಮಾಡಿದ್ರು. ವೈಯಕ್ತಿಕವಾಗಿ ರವಿ ಅವರ ಬಗ್ಗೆ ಪ್ರಸಾರಗೊಂಡ ಆ ಮಾಹಿತಿಗಳು ಅಷ್ಟೇನೂ ಇಷ್ಟ ಆಗಲಿಲ್ಲ. ಯಾಕೇಂದ್ರೆ ಸತ್ತ ವ್ಯಕ್ತಿಯ ಪರ್ಸನಲ್ ಸಂಗತಿಗಳು ಜನರಮುಂದೆ ಬಂದದ್ದು, ಅಶು ಇಷ್ಟ ಆಗಲಿಲ್ಲ... ಹಳೆಯ ಸಂಗತಿಗಳು ಕೆದಕಿ ಸತ್ತ ವ್ಯಕ್ತಿಯ ವ್ಯಕ್ತಿತ್ವದ ಮೇಲೆ .... ?
Image result for orange color images
@ ಸುದ್ದಿ ಟಿವಿ ಪ್ರಸಾರ ಆಗ್ತಾ ಇದೆ ಕಳೆದೆರಡು ದಿನಗಳಿಂದ.. ಶಶಿಧರ್ ಭಟ್ ಅವರ ವಾಹಿನಿ..ನಾಟಿ ವೈದ್ಯ.. ಲಾಲ್ ಬಾಗ್  ನಲ್ಲಿ ಕಳ್ಳೇಕಾಯಿ ಮಾರೋ ಅಜ್ಜಿ.. ಹೀಗೆ ಹಲವಾರು ಸಾಮಾನ್ಯರು ....
ಆ ಅಜ್ಜಿ ಹೇಳಿದಂತೆ ಟೀಬಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಾರ್ತಾವಾಹಿನಿಗಳಲ್ಲಿ ಗದ್ದಲದ ನ್ಯೂಸ್ ಗಳಿಗಿಂತ  ಇಂತಹ ಸಂಗತಿಗಳು ಹೆಚ್ಚು ಆಪ್ತ ಆಗುತ್ತದೆ.

ಬೆಟ್ಸ್ ಕಟ್ಟಿದ್ದಾರಾ !

Image result for pink roses
ಬ್ಲಾಗ್ ಬರಹಗಳು ಇನ್ನು ಸಧ್ಯಕ್ಕೆ ನಿರಂತರವಾಗಿ ಬರೆಯಲಾರೆ. ಆದರೆ ಸಮಯ  ಆದಾಗ ಅದನ್ನು ಬರೆಯುವ ಪ್ರಯತ್ನ ಮಾಡುತ್ತಿರುತ್ತೇನೆ   ಅಷ್ಟೇ.
ಕಲರ್ಸ್ ಕನ್ನಡ ವಾಹಿನಿಯಲ್ಲಿ  ಪ್ರಸಾರ ಆಗ್ತಾ ಇರುವ ಬಿಗ್ ಬಾಸ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಯಾಕೇಂದ್ರೆ ಬಹಳಷ್ಟು ಜನರಿಗೆ ಇಷ್ಟ ಹಾಗೂ ಬಹಳಷ್ಟು ಜನರಿಗೆ ಇಷ್ಟ ಇಲ್ಲ. ಆದರೂ ಸಹ ನೋಡುವವರ ಸಂಖ್ಯೆ ಕಡಿಮೆ ಇಲ್ಲ ಅಂತ ಹೇಳ ಬಲ್ಲೆ. ಯಾಕೆ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ  ಪಡಿಸುತ್ತಲೇ ಇರುತ್ತಾರೆ ಮಂದಿ.
 ಕಿಚ್ಚ ಸುದೀಪಾ ಅವರ ನಿರೂಪಣೆ ಹೆಚ್ಚು ಆಕರ್ಷಕ ಅದಕ್ಕಿಂತಲೂ ಅವರ ಉಡುಗೆ ತೊಡುಗೆಗಳು. ಅದಕ್ಕಿಂತಲೂ ಈ ಬಾರಿ ಹೆಚ್ಚು ಗಮನ ಸೆಳೆದಿರುವುದು ಅವರ ಹೇರ್ ಸ್ಟೈಲ್...
 ಯಾರ ಬಳಿಯಲ್ಲಾದ್ರೂ ಅವರು ಬೆಟ್ಸ್ ಕಟ್ಟಿದ್ದಾರಾ ಎನ್ನುವ ಸಂಶಯ ಕಾಡ್ತಾ ಇದೆ .. ಗೆದ್ರೆ ಮಾತ್ರ ಜುಟ್ಟು ಬಿಚ್ಚೋದು ಅಂತ ;-). ಏನೇ ಇರಲಿ ಆ ಕಾಲದಲ್ಲಿ ಅದೂ ಒಂದಾನೊಂದು ಕಾಲದಲ್ಲಿ ಶಂಕರ  ಈಗ ಸುದೀಪಾ   ಮಧ್ಯದಲ್ಲಿ ಉಪೇಂದ್ರ ಅವರು ಈ ಹೇರ್ ಸ್ಟೈಲ್ ಅತಿ ವಿಖ್ಯಾತ ಮಾಡಿದ್ದಾರೆ.. ;-)
ಈ ಬಾರಿ ಬಿಗ್ ಬಾಸ್ ನಲ್ಲಿ ಒಂದು ಸಂಗತಿ ಸಾಕಷ್ಟು ನಗು ಹಾಗೂ ವಿಸ್ಮಯ ಮೂಡಿಸಿದೆ ನನಗೆ. ಅದೆಂದರೆ, ಎಲ್ಲರೂ ಸ್ಪರ್ಧಿ  ಕೀರ್ತಿ ಅವರನ್ನು ಫೈನಲಿಸ್ಟ್ ಅಂತ ಹೊಗಳಿ ಹೊಗಳಿ.... !
ಆಟದಲ್ಲಿ ಸ್ವಲ್ಪ ವ್ಯತ್ಯಾಸವಾದೆ, ಸೋತರೆ, ಹೀಗೆ ಹಲವಾರು ಸಂಗತಿಗಳನ್ನು ಎದುರಿಸಲಾರದೆ ಅಳುವ ಕೀರ್ತಿ ಇಂತಹ ಸ್ಪರ್ಧೆಯ ಫೈನಲಿಸ್ಟ್ ?
 ಪ್ರಥಮ್  ಮಾಡುವ ಕೆಟ್ಟ  ಗಲಾಟೆಗಿಂತ ಇದು ಕಿರಿಕಿರಿ ತರುವ ಸಂಗತಿ. ಕೀರ್ತಿ ಅವರು ನಿಜಕ್ಕೂ ಆ ಹಂತ ತಲಪುವ ಅರ್ಹತೆ ಹೊಂದಿದ್ದಾರಾ ಎನ್ನುವ ಪ್ರಶ್ನೆ ಮೂಡಿ ಬರುತ್ತದೆ.ಒಂದಂತೂ ಸತ್ಯ ಕಿರಿಕ್ ಅಂತ ಹೊರ ಪ್ರಪಂಚದಲ್ಲಿ ಮಾಡಿದ ಬಿಲ್ಡ್ ಅಪ್  ಮನೆಯಲ್ಲಿ ಮಾಡೋಕೆ ಸಾಧ್ಯವಿಲ್ಲ.
ಪ್ರಥಮ್ ಕಿರಿಕಿರಿ  ಮಾಡುವ ಸ್ಪರ್ಧಿಯಾದರೂ ಅನೇಕ ಕೋನಗಳಲ್ಲಿ ನೋಡಿದರೆ ಆತ ಅತ್ಯಂತ ಸೃಜನಶೀಲ ಎನ್ನುವುದು ಕಂಡು ಬರುತ್ತದೆ. ಆತನ ಕೈಲಿ ಒಂದು ಕೆಲಸ ಕೊಟ್ಟು ಸ್ವಲ್ಪ ವಿನೂತನವಾಗಿ ಮಾಡು ಅಂತ ಹೇಳಿದ್ರೆ ವಿಶೇಷ ರೀತಿಯಲ್ಲಿ ಅದನ್ನು ಪೂರೈಸಿ ಜನಮನ ಸೆಳೆಯುತ್ತಾರೆ. ಕೆಲಸ ಕೊಟ್ಟು ನೋಡಿ ಬೇಕಾದ್ರೆ !!ಐಡೆಂಟಿಟಿ  ಕ್ರೈಸಿಸ್ ನಿಂದ ಬಳಲುತ್ತಿರುವ ಈ ಪ್ರತಿಭೆಯನ್ನು ಸ್ವಲ್ಪ ಟ್ಯೂನ್ ಅಪ್ ಮಾಡಿದ್ರೆ ಸಿನಿರಂಗಕ್ಕೆ ಆತ ಒಳ್ಳೆಯ ಆಸ್ತಿ ಆಗಬಲ್ಲ, ಅದರ ಬಗ್ಗೆ ಯಾವುದೇ ಸಂಶಯ ಬೇಡ !
ಹಾಗೆ ನೋಡಿದ್ರೆ  ನಟ- ನಿರ್ದೇಶಕ ಮೋಹನ್ ತುಂಬಾ ಯೂನಿಕ್. ಅವರು ಮಾಡುವ ಕೆಲಸಗಳು ವಿನೂತನ. ಕಳೆದ ಬಾರಿ ಅವರು ನಿರಂಜನ್ ಅವರ ಕ್ಯಾಪ್ಟನ್ಸಿ  ಬಗ್ಗೆ  ತಮ್ಮ ಅಭಿಪ್ರಾಯವನ್ನು ಅಂಕಗಳ ಮೂಲಕ ಹೇಳಿದ ರೀತಿ ವಿಶೇಷವಾಗಿತ್ತು. ಆ ಬಳಿಕ ಎಲ್ಲರೂ ಕಾಪಿಕ್ಯಾಟ್ ಆಗಿದ್ದು .. ಅದರ ಬಗ್ಗೆ ಹೇಳ ಬೇಕಿಲ್ಲ.ಆಗ  ಹೆಚ್ಚು ಗಮನ ಸೆಳೆದದ್ದು ಓಂ ಪ್ರಕಾಶ್ ರಾವ್. ಸೊನ್ನೆ ಹಾಕಿ ನಂತರ ಎಡಗಡೆ  ಒಂದು ಬರೆದು ಹತ್ತು ಅಂಕ ನೀಡಿದರು. ಅವರ ಚಿತ್ರಗಳ ಹಾಗೆ. ಕೆಲವು ಬಾರಿ ಹತ್ತಕ್ಕೆ ಹತ್ತು, ಕೆಲವು ಬಾರಿ ಸೊನ್ನೆ :-)
ಮಾಳವಿಕಾ ಅದ್ಭುತ ಪ್ರತಿಭಾವಂತೆ ಮತ್ತು ಜಾಣೆ ಆದರೆ ಅವರು ಒಂದಷ್ಟು ಕೋಟೆ ಕಟ್ಟಿಕೊಂಡಿದ್ದಾರೆ   ಅದರಿಂದ ಹೊರ ಬಂದ್ರೆ ....!
ನನಗೆ ಭುವನ್ ಸಹ ಇಷ್ಟ ಆದರು.. ಶೀತಲ್ ಶೆಟ್ಟಿ ಅವರು ಹೇಳಿದಂತೆ ಫೇಕ್ ಅಂತ ಅನ್ನಿಸಲ್ಲಾ...ಅವಕಾಶ ಇದ್ರೂ ಫ್ಲರ್ಟ್  ಮಾಡುವ ಮನಸ್ಥಿತಿ ಹೊಂದಿಲ್ಲ..ಸುದೀಪಾ ಮಾತಿಗೆ,ಸಹ ಸ್ಪರ್ಧಿಗಳ ಮಾತಿಗೆ ನಾಚುವ ಈ ಹುಡುಗ  ಫೇಕ್ ಅಂತ ಅನ್ನಿಸಲ್ಲ ...