ಟೀಬಿ



ನಮಗೆ ಈ ತಿಂಗಳ 28 ರಂದು ಬಂದ್ ಬೇಕಾಗಿಲ್ಲ ಎನ್ನುವ ಮಾತು, ಅಭಿಪ್ರಾಯ ಹೆಚ್ಚಾಗಿ ಕೇಳಿ ಬರುತ್ತಿದೆ. ನಿಜಕ್ಕೂ ಅಂತಹ ನಡೆ ಸ್ವಾಗತಾರ್ಹ. ವಾಟ್ಸ್ ಅಪ್ , ಎಫ್ಬಿ , ಟ್ವಿಟ್ಟರ್  ಯಾವ ಜಾಲತಾಣವೆ ಆಗಿರಲಿ ಅಲ್ಲಿ ಇಂತಹ ಸಂದೇಶಗಳು ಹರಿದು ಬರುತ್ತಲೇ ಇವೆ. ಬಂದ್ ಬೇಡರಿ ನಮಗೆ ... ಅದರಲ್ಲೂ ಉತ್ತರ ಭಾರತದ ಅಂತಹ ಹೆಸರುವಾಸಿಯಾದ ನಾಯಕರು ಇದರ ಮುಂದಾಳತ್ವ ವಹಿಸಿದ್ದಾರೆ ಅಂದ್ರೆ ...!!
ಇನ್ನು ದೈವವನ್ನು ನಂಬಿರುವ ಅಪಾರ ಸಂಖ್ಯೆಯ ಸಾನ್ಯರಿಗೆ ಅಂದು ಕೊನೆಯ ಕಾರ್ತಿಕ ಸೋಮವಾರ. ಅಂದು ಲಕ್ಷ ದೀಪೋತ್ಸವ, ವಿಶ್ವ ವಿಖ್ಯಾತ  ಕಳ್ಳೆ ಕಾಯ್ ಪರಿಷೆ , ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು..
ಕಾಳಧನಿಕರ ಸೊಂಟ ಮುರಿಯಲು ಪ್ರಧಾನಿ ಮಾಡುತ್ತಿರುವ ಕೆಲಸಗಳಲ್ಲಿ ನೋಟ್ ಬ್ಯಾನ್  ಹೆಚ್ಚು ಪತರಗುಟ್ಟಿಸಿದೆ  ಮಂದಿಯಲ್ಲಿ. ಪ್ರಧಾನಿ ಮೋದಿಜಿ ಅವರ ಈ ನಿರ್ಧಾರ ನನಗಂತೂ ಸಿಕ್ಕಾಪಟ್ಟೆ ಖುಷಿ ತಂದಿದೆ. ಐನೂರು, ಸಾವಿರ ರೂಗಳು ಸಾಮಾನ್ಯರಿಗೆ ಅಷ್ಟೊಂದು ಮಹತ್ವದ್ದಲ್ಲ. ನಾನು ಕಂಡಂಗೆ ಅತಿ ಹೆಚ್ಚು ಬಳಕೆ ಮಾಡುವುದು ನೂರುಗಳು, ಐವತ್ತು, ಇಪ್ಪತ್ತು ಮತ್ತು ಹತ್ತು ರೂಗಳು. ಬಿಡಿ ಅವೆಲ್ಲ ಹೇಳುವ ಅಗತ್ಯವಿಲ್ಲ. ಮೋದಿಜಿ ಐವತ್ತು ರೂಗಳ ನೋಟ್ ಸಹ ಬ್ಯಾನ್ ಮಾಡಿದ್ರೆ ಒಳ್ಳೆಯದು. ಐವತ್ತು ರೂಗಳ ಖೋಟಾ ನೋಟುಗಳು ಬೇಕಾದಷ್ಟು  ಅಸಲಿ ನೋಟ್  ಗಳ ಜೊತೆ ಹಂಚಿವೆ. ಮಾರುಕಟ್ಟೆಗಳಲ್ಲಿ  ಇದರ ಪ್ರಭಾವ ಜಾಸ್ತಿ.. ನಮಗೆ  ವಸ್ತುಗಳನ್ನು ಕೊಳ್ಳುವ ಆತುರದಲ್ಲಿ ವ್ಯಾಪಾರಿ ಕೊಡುವ ಚಿಲ್ಲರೆ ಬಗ್ಗೆ ಗಮನ ಇರಲ್ಲ. ಅದರಲ್ಲೂ ಹಬ್ಬಗಳ ಸಮಯದಲ್ಲಿ ಇಂತಹ ಮೋಸಕ್ಕೆ ಒಳಗಾಗುವವರು ನಮ್ಮಂತಹ ಸಾಮಾನ್ಯರು.
@ ಕನ್ನಡದ ಪ್ರಸಿದ್ಧ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಎಫ್ಬಿ ಅವರು ಹೀಗೆ  ಹೇಳಿದ್ದಾರೆ..


Decision was good...
But execution was bad...
ಹಾಗಂತ ನೋಟ್ ban ವಿರುದ್ಧ ದೇಶ ಬಂದ್ ಮಾಡುವುದು ಮೂರ್ಖತನ ಎಂದು ನನ್ನ ಭಾವನೆ...
ಮಾತಿನಲ್ಲಿ ಚರ್ಚೆ ಮಾಡಿ..ಬಂದ್ ಬೇಡ..
ಜನರ ವಿಶ್ವಾಸ ಕಳೆದು ಕೊಳ್ಳಬೇಡಿ...
...ಅತಿ ಶ್ರೀಮಂತರಿಗೆ ಈ ಕ್ರಮದಿಂದ ಕಷ್ಟವಿಲ್ಲ...ಮಧ್ಯಮವರ್ಗದವರಿಗೆ, ಕೂಲಿ ಹಣವನ್ನು ನಂಬಿದವರಿಗೆ ಕಷ್ಟದ ದಿನಗಳು...ಆದರೆ ಇದು ಕಪ್ಪು ಹಣದ ಯುದ್ಧದ ವಿರುದ್ಧ ಒಂದು ಹೆಜ್ಜೆ ಅನ್ನುವುದಂತೂ ಒಂದಷ್ಟು ಮಟ್ಟಿಗೆ ಸತ್ಯ...
ಬಂದ್ ಬೇಡ...ಆದರೆ ಕ್ರಮಗಳ ಸುಧಾರಣೆಯಂತೂ ಆಗಲೇ ಬೇಕು...‌
ಎಷ್ಟೋ ಲಕ್ಷ ಕೋಟಿ ಕಪ್ಪು ಹಣ ಬ್ಯಾಂಕಿಗೆ ಜಮೆಯಾಗಿದೆ ಎಂದು post ಹಾಕುತ್ತಾರೆ...ಬ್ಯಾಂಕಿಗೆ ಜಮೆಯಾಗಿರುವುದು, ಲೆಕ್ಕ ಸಿಗುವ ಹಣ...ಕಪ್ಪು ಹಣ ಹಾಕಿ ಏಕೆ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ...!? ಅದೆಲ್ಲಾ ದುಡಿದ, ತೆರಿಗೆ ಕಟ್ಟಿದ ಸ್ವಂತ ಹಣ
ಈ ಕ್ರಮದಿಂದಾಗಿ
ತರಕಾರಿ, ಹೂವು, ಜನಗಳ ಕೂಲಿ ಎಲ್ಲಾ ಪಾತಾಳಕ್ಕೆ ಕುಸಿದಿದೆ...
ರೈತರು ಮತ್ತು ಕೃಷಿ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ..
ಆದರೂ ಇದು ಕಪ್ಪು ಹಣದ ವಿರುದ್ಧ ಹೆಜ್ಜೆ ಅನ್ನುವುದು ಸತ್ಯ...
ಚುನಾವಣೆಗಳು ಕೊಂಚ ಕ್ಲೀನ್ ಆಗಬಹುದು...ಹಣ ಇಲ್ಲದ ಪ್ರಾಮಾಣಿಕರಿಗೂ
ಚುನಾವಣೆಗಳಲ್ಲಿ ಯುದ್ಧ ಮಾಡಲು ಧೈರ್ಯ ಬರುತ್ತದೆ..
ದಿನವೆಲ್ಲಾ ಹೇಳುತ್ತಾ ಹೇಗಬಹುದು...ಆದರೆ ಮೊದಲೇ ಹೇ‌ಳಿದಂತೆ.
Decision is good...execution was very bad
ಆದರೆ ಬಂದ್ ಸರಿ ಅಲ್ಲ...
ಹಾಗೆಂದು ಬಂದ್ ಮಾಡುವವರನ್ನು ತೇಜೋವಧೆ ಮಾಡುವುದು ಕೂಡ ಸರಿಯಲ್ಲ..


Image result for orange flower
@ ಟಿವಿ  ನೈನ್  ವಾಹಿನಿ ಅನೇಕ ಉತ್ತಮ ಪ್ರತಿಭೆಗಳ ವೇದಿಕೆ. ನಿಜವೆಂದರೆ ಅಲ್ಲಿ ಕಂಡವರು ಮತ್ತೊಂದು ಕಡೆ ಉಜ್ವಲವಾಗುತ್ತಾರೆ. ಪ್ರತಿಭೆಗಳು ನಿಂತ ನೀರಾಗಬಾರದು. ಈಗ ನನ್ನ ಗಮನ ಹೆಚ್ಚು ಸೆಳೆದ  ವಾರ್ತಾವಾಚಕ -ನಿರೂಪಕ ಮಹಂತೇಶ್. ವಾರ್ತೆ ಓದುವಾಗ ಸ್ಪಷ್ಟತೆ, ವೀಕ್ಷಕರಿಗೆ ಅರ್ಥವಾಗುವಂತೆ ಓದುವ.. ನಿರೂಪಣೆ ಮಾಡುವಾಗ ಜನರ ಗಮನ ಸೆಳೆಯಲು ಬೇಕಾದ ಎಲ್ಲಾ ಅಂಶಗಳು ಮಹಂತೇಶ್ ಅವರಲ್ಲಿದೆ.ನಿನ್ನೆ ಐ ಎ ಎಸ್ ಅಧಿಕಾರಿ ಡಿ ಕೆ ರವಿ ಅವರ ಆತ್ಮಹತ್ಯೆ  ಬಗ್ಗೆ  ಪ್ರಸಾರವಾದ ಕಾರ್ಯಕ್ರಮ ನೀಟಾಗಿ ನಿರೂಪಣೆ ಮಾಡಿ ಮಹಂತೇಶ್ ತಾವು ಉತ್ತಮ ನಿರೂಪಕ ಅನ್ನುವುದನ್ನು ಸಾಬೀತು ಮಾಡಿದ್ರು. ವೈಯಕ್ತಿಕವಾಗಿ ರವಿ ಅವರ ಬಗ್ಗೆ ಪ್ರಸಾರಗೊಂಡ ಆ ಮಾಹಿತಿಗಳು ಅಷ್ಟೇನೂ ಇಷ್ಟ ಆಗಲಿಲ್ಲ. ಯಾಕೇಂದ್ರೆ ಸತ್ತ ವ್ಯಕ್ತಿಯ ಪರ್ಸನಲ್ ಸಂಗತಿಗಳು ಜನರಮುಂದೆ ಬಂದದ್ದು, ಅಶು ಇಷ್ಟ ಆಗಲಿಲ್ಲ... ಹಳೆಯ ಸಂಗತಿಗಳು ಕೆದಕಿ ಸತ್ತ ವ್ಯಕ್ತಿಯ ವ್ಯಕ್ತಿತ್ವದ ಮೇಲೆ .... ?
Image result for orange color images
@ ಸುದ್ದಿ ಟಿವಿ ಪ್ರಸಾರ ಆಗ್ತಾ ಇದೆ ಕಳೆದೆರಡು ದಿನಗಳಿಂದ.. ಶಶಿಧರ್ ಭಟ್ ಅವರ ವಾಹಿನಿ..ನಾಟಿ ವೈದ್ಯ.. ಲಾಲ್ ಬಾಗ್  ನಲ್ಲಿ ಕಳ್ಳೇಕಾಯಿ ಮಾರೋ ಅಜ್ಜಿ.. ಹೀಗೆ ಹಲವಾರು ಸಾಮಾನ್ಯರು ....
ಆ ಅಜ್ಜಿ ಹೇಳಿದಂತೆ ಟೀಬಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಾರ್ತಾವಾಹಿನಿಗಳಲ್ಲಿ ಗದ್ದಲದ ನ್ಯೂಸ್ ಗಳಿಗಿಂತ  ಇಂತಹ ಸಂಗತಿಗಳು ಹೆಚ್ಚು ಆಪ್ತ ಆಗುತ್ತದೆ.

No comments: