:(

ಮುಗಿಯಿತು ಆ ಹೆಣ್ಣು ಮಗಳ ಬದುಕು... ಕಾನೂನು -ನ್ಯಾಯ ಎಲ್ಲವೂ ಇದೆ.. 

ಆದರೆ ಅದ್ಯಾರಿಗೆ ಸಿಗುತ್ತೋ ...!!


ವಿಶೇಷ


ಸುವರ್ಣ ನ್ಯೂಸ್ ನಲ್ಲಿ ಬೆಳಗಿನ ಪ್ಯಾಕೇಜ್ ಚೆನ್ನಾಗಿದೆ. ಎಲ್ಲವೂ ಇದೆ ಎಲ್ಲ ಇದೆ..ಮುದ್ದಾದ ಇಬ್ಬರು ನಿರೂಪಕಿಯರು ,ಕಾನೂನು ಕಟ್ಲೆ, ಅಡುಗೆ ಮನಿಪ್ಲಾಂಟ್  ..ಎಲ್ಲವೂ ಇದೆ.. ಇಲ್ಲಿ ಕಾನೂನು ತಿಳಿಸಿ ಕೊಡುವ ಲಾಯರ್ ಸಾಹೇಬರು ಮೇಘ ಸೀರಿಯಲ್ ರೀತಿ ಸ್ವಲ್ಪ ಮಾತ್ರ ವಿಷಯ ಹೇಳ್ತಾರೆ.. ಸೀರಿಯಲ್ ನಲ್ಲಿ ಮಗ ಮನೆ ಬಾಗಿ ಲುತಟ್ಟಿದಂಗೆ .. 

ಮನಿಪ್ಲಾಂಟ್  ಕಾರ್ಯಕ್ರಮ ಸಹ ಅತ್ಯಂತ ಆಸಕ್ತಿಕರ .ರವೀಂದ್ರ ಜೋಷಿ ಅವರ ಹೇಳುವ ರೀತಿ ಮನ ಮುತ್ತೆ. ಸಾರಿ ರವೀಂದ್ರ ನೀವು ಹೇಳಿರುವುದನ್ನು ಕಾರ್ಯಗತ ಮಾಡಲು ಸಾಧ್ಯ ಆಗಲ್ಲ ..  

ಪಬ್ಲಿಕ್ ಟೀವಿಯಲ್ಲಿ ಬೆಳಗಿನ ಕಾರ್ಯಕ್ರಮ ಸಹ ಚೆನ್ನಾಗಿರುತ್ತೆ. ರಂಗಣ್ಣ, ರಾಘವ, ಯಾರೇ ನಡೆಸಿಕೊಡಲಿ ಸ್ಟಫ್ ನ್ಯೂಸ್ ಆಗಿರೋದ್ರಿಂದ ಬೇಸರ ಅನ್ನಿಸಲ್ಲ.. 

ಕಲರ್  ವಾಹಿನಿಯಲ್ಲಿ ಬಿಗ್  ಬಾಸ್  ಬಹುಜನರ ಮೆಚ್ಚುಗೆ ಕಾರ್ಯಕ್ರಮ.ಅಲ್ಲಿರುವ ಜನಗಳ ಆಕರ್ಷಣೆ ಒಂದು ಕಡೆ. ಅದೇ ರೀತಿ ಪ್ರೆಸೆ೦ಟರ್ ಸಲ್ಮಾನ್ ಖಾನ್ ಆಕರ್ಷಣೆ..
ಲೈವ್ಲಿಯಾಗಿ ಇರುವ ಪ್ರೆಸೆ೦ ಟ ರ್  ಸಲ್ಮಾನ್ boy .. ಈ ಕಾರ್ಯಕ್ರಮದಲ್ಲಿ ಅತ್ಯಂತ ಸುಂದರಿಯಾರು ಅಂದ್ರೆ ಮೊದಲು ಕರಿಷ್ಮ, ಸಪ್ನಾ,ಊರ್ವಶಿ , ಆಶಿಕ, ಡೆಲ್ನಾಜ್ .ಆದರೆ ಸನ ಮುದ್ದಾಗಿದ್ದಾಳೆ ವಿನಃ ಸುಂದರಿ ಅನ್ನುವ ಪಟ್ಟ ಸಿಗಲ್ಲ. ಇದು ನನ್ನ ಅಭಿಪ್ರಾಯ.
ಇತ್ತೀಚಿಗೆ ಪ್ರಸಾರವಾದ ಷೋ ನಲ್ಲಿ ಅಮ್ಮಂದಿರ ವಿಶೇಷ ಇಷ್ಟ ಆಯ್ತು. ಅಮ್ಮ ಅಂದ್ರೆ ಬೆಲೆ ಕಟ್ಟಲಾಗದ ವ್ಯಕ್ತಿ :-).ತುಂಬಾ ಎಮೋಷನಲ್ ಆಗಿತ್ತು.
 ನಮ್ಮ ತಾಯಿ ಶಾಲೆಯಲ್ಲಿ ಒಂದು ಪುಟ್ಟ ಮಗು ಸದಾ ಒಂದೇ ಬಣ್ಣದ T ಶರ್ಟ್  ಧರಿಸಿ ಬರ್ತಾ ಇದ್ದನಂತೆ. ಆತನ ವರ್ತನೆ ಅಮ್ಮನಿಗೆ ಆಶ್ಚರ್ಯ ! ಯಾಕೆ ಹೀಗೆ ಅಂತ ವಿಚಾರಿಸಿದಾಗ ಬೆಳಕಿಗೆ ಬಂದ  ಸಂಗತಿ ಆ ಮಗುವಿನ ಆ ಟೀಶರ್ಟ್ ಮೇಲೆ ಸಲ್ಮಾನ್ ಖಾನ್ ಫೋಟೋ ಇತ್ತಂತೆ.. ವಾಟ್ ಯಾ ಸಲ್ಮಾನ್.. ಬಿಗ್ ಸ್ಕ್ರೀನ್ ಸಲ್ಮಾನ್, ಸ್ಮಾಲ್  ಸ್ಕ್ರೀನ್ ಸಲ್ಮಾನ್.. ಫುಲ್ ಸಲ್ಮಾನ್.. 



ಏನಿದು?


ಶಾಂತಿ ದೂತ ಏಸು ಕ್ರಿಸ್ತ  .. ಜಗತಿನ ಬಹುಭಾಗದ ಜನರ ಆರಾಧ್ಯ ದೈವ.. ಸಮಾಜದ ಒಳಿತಿಗಾಗಿ ಶ್ರಮಪಟ್ಟ ದೇವದೂತ .. ಆ ದೇವನನ್ನು ನಂಬಿದ ಎಲ್ಲ ಭಕ್ತರಿಗೂ ಕ್ರಿಸ್ತ ಜಯಂತಿ ಹಾರ್ದಿಕ ಶುಭಾಶಯಗಳು.. ನಿಮ್ಮ ಬದುಕಲ್ಲಿ ಸದಾ ಸುಖ ಸಂತೋಷ ಗಳು ನೆಲಸಿರಲಿ.. ಬದುಕು ಯಶಸ್ವಿ ಪಥದಲ್ಲಿ ನಡೆಯಲಿ..ಹ್ಯಾಪಿ ಕ್ರಿಸ್ಮಸ್ ...

ಸುವರ್ಣ ನ್ಯೂಸ್ ವಾಹಿನಿಯಲ್ಲಿ ಏನಿದು? ಅನ್ನುವ ಒಂದು ಕಾರ್ಯಕ್ರಮ ಪ್ರಸಾರ ಆಗುತ್ತೆ ಅನ್ನುವ ಬೆದರಿಕೆ ಒಡ್ದು ತ್ತಿದ್ದರು  :-) ಏನಿರ ಬಹುದು ಅಂತ ಕುತೂಹಲದಿಂದ ವೀಕ್ಷಿಸಿದರೆ ದೆವ್ವದ ಲೈವ್ ಷೋ..ಯಪ್ಪಾ ನಿಜ ಕಣ್ರೀ.. 
ದೆವ್ವದ , ಅಗೋಚರ ಶಕ್ತಿ ಬಗ್ಗೆ ತೋರಿಸಲು ಹೊರಟಿದ್ದರು.. ದೆವ್ವವನ್ನು ಎದುರು ಹಾಕಿಕೊಳ್ಳುವ ಇವರ ಈ ಧೈರ್ಯಕ್ಕೆ ... 




ಸುವರ್ಣ ನ್ಯೂಸ್  ಲ್ಲಿ ನಿರೂಪಕಿ ಸಹನಾ ಭಟ್  ಒಬ್ಬ ವಿದೇಶಿ ಮಾಡೆಲ್ ಸಣ್ಣ ಆಗಲು ಮಾಡಿದ ಪ್ರಯತ್ನ ಅದರ  ಫಲಿತಾಂಶದ ಬಗ್ಗೆ ಒಂದು ಕಾರ್ಯಕ್ರಮನಡೆಸಿ ಕೊಡ್ತಾ ಇದ್ರೂ. ಸಹನಾ ಟಿವಿ ಪರದೆಯ ಮೇಲೆ ಕಾಣ ಸಿಗುವ ಹಸನ್ಮುಖಿ  ಹೆಣ್ಣುಮಗಳು .. ಎದುರು ಸಿಕ್ಕಾಗ ನಗ್ತಾರೋ ಇಲ್ಲವೋ ಗೊತ್ತಿಲ್ಲಾ.. ದಯಮಾಡಿ ಅದನ್ನು ಪರೀಕ್ಷೆ ಮಾಡಲು ಹೋಗದಿರಿ .
ಏನೇ ಹೇಳಿ ಅತಿಯಾದರೆ ಅಮೃತವೂ ವಿಷ ಅನ್ನುವುದಕ್ಕೆ ಇದೆ ಉದಾಹರಣೆ. ಎಲುಬು ಸುಂದರಿ ಕಥೆ ಕಂಡು ಪಾಪ ಅನ್ನಿಸಿತು. ಹೊಟ್ಟೆ ತುಂಬ ಸರಳ ಆಹಾರ, ಕೈತುಂಬ ಕೆಲಸ, ಕಣ್ತುಂಬಾ ನಿದ್ದೆ ಮಾಡಿದರೆ ಎಲ್ಲವೂ ಓಕೆ ಅಲ್ವ ಕ್ಯೂಟ್ ಸಹನ 
ಎನಿವೆಸ್  ಕಾರ್ಯಕ್ರಮ ಚೆಂದಿತ್ತು ..


ಸ್ಪಂದನೆ


ಅತ್ಯಂತ ಹೇಯಕರ ಸಂಗತಿ. ನಾಳಿನ ಕನಸು ಕಾಣುತ್ತಾ ವೈದ್ಯಕೀಯ ರಂಗದಲ್ಲಿ ಬೆಳೆಯ ಬೇಕಾಗಿದ್ದ  ಬಾಲೆ  ಎಂತಹ ಪರಿಸ್ಥಿತಿ ಎದುರಿಸುವಂತಾಗಿದೆ ದುರಲ್ ಕಾಮುಕರಿಂದ.. ತುಂಬಾ ನೋವಾಗಿದೆ ನನಗಂತೂ.. ಆ ಮಗು ಅನುಭವಿಸುತ್ತಿರುವ ಯಾತನೆ, ಆಕೆಯ ಬದುಕಿನಲ್ಲಿ ಆದ ಅನ್ಯಾಕ್ಕಾಗಿ ಹೋರಾಡುತ್ತಿರುವ ಯುವಶಕ್ತಿ , ತಮ್ಮ ಕೈ ಸಿಕ್ಕವರನ್ನು  ಕೋಲಿನಿಂದ ಬಡಿದು ಸೇಡು ತೀರಿಸಿಕೊಳ್ಳುತ್ತಿರುವ ಪೊಲೀಸರು..ನಾಗರೀಕ ಸಮಾಜ ಕ್ರೌರ್ಯ ಅಂತಾನೆ ಹೇಳ ಬಹುದು.

ದೆಹಲಿಯಲ್ಲಿ ಆದ ಈ ಕ್ರೂರ ಘಟನೆಯು ಸಾಕಷ್ಟು ಗಲಾಟೆಯನ್ನು ಉಂಟು ಮಾಡುತ್ತಿದೆ ನಿಜ.. ಆದರೆ ಇದರ ಹಿಂದೆ ಇರುವುದು ಸಾರ್ವಜನಿಕರ ಆಕ್ರೋಶ, ಮುಖ್ಯವಾಗಿ ನಮ್ಮ ವ್ಯವಸ್ಥೆಯ ವಿಧಾನದಲ್ಲಿ ಇರುವ ಹೋಗ್ಲಿಬಿಡು ಅಂಶದ ವಿರುದ್ಧ ಅಸಹನೆ.
ಎಲ್ಲವಾಹಿಗಳು ಇದರ ಬಗ್ಗೆ ಪ್ರಸಾರ ಮಾಡ್ತಾನೆ ಇದೆ. ಸುವರ್ಣ ನ್ಯೂಸ್  ವರದಿಗಾರ ಪ್ರಶಾಂತ್ ನಾತೂ ಸ್ಥಳಕ್ಕೆ ಹೋಗಿ ಅಲ್ಲಿ ಇರುವ ವಿದ್ಯಾರ್ಥಿಗಳ ಬಳಿ ಮಾತನಾಡಿಸುತ್ತಿದ್ದರು. ಅಲ್ಲಿನ  ಬಿಸಿ ಇಲ್ಲಿನವರಿಗೂ ಮುಟ್ಟಿಸಲು ಪ್ರಯತ್ನಿಸಿ  ಯಶಸ್ವಿ ಆದರು.. ಆ ಪ್ರತಿಭಟನೆ  ನಾಳಿನ ದಿನಗಳಲ್ಲಿ  ಸರ್ಕಾರ ಯಾವುದೇ ಬಗೆಯಲ್ಲೂ  ತೋರಿಕೆಯ ನ್ಯಾಯ ಕೊಡ ಬಾರದು ಎನ್ನುವುದನ್ನು ಪ್ರತಿಪಾದಿಸುತ್ತಿತ್ತು.
ಕೃಪೆ :ಸತೀಶ್ ಆಚಾರ್ಯ 

CNN IBN ವಾಹಿನಿಯ  ಎಡಿಟರ್ ಇನ್ ಚೀಫ್ ರಾಜ್ ದೀಪ್ ಸರ್ ದೇಸಾಯಿ ಅವರು ಸಹ ಘಟನೆ ನಡೆದ ಸ್ಥಳದಲ್ಲಿ ಸಾಮಾನ್ಯ ವರದಿಗಾರಂತೆ ಮೈಕ್ ಹಿಡಿದು ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಾ ಇದ್ದುದು ಮಾತ್ರ ನನಗೆ ತುಂಬಾ ವಿಶೇಷ ಅನ್ನಿಸಿತು, ಜೊತೆ ಆ ಪತ್ರಕರ್ತರ  ಸ್ಪಂದನೆ ಇಷ್ಟ ಆಯ್ತು. 
Indianjournalistpolitical commentator and news presenter. Sardesai is the Editor-in-Chief of IBN18 Network, that includes CNN-IBNIBN-7 and IBN-Lokmat.ಇವಿಷ್ಟು ಇವರ ಸರಳ ಬಯೋಡೇಟಾ  :-). 
ಅತ್ಯುನ್ನತ ಹುದ್ದೆಯ ವ್ಯಕ್ತಿ  ಹೀಗೆ ... ವಾವ್!ಇಂದು ರಾಜ್ ದೀಪ್ ನಮ್ಮ ಹೋಂ ಮಿಸ್ಟರ್ ಅವರ ಜೊತೆಯಲ್ಲಿ  ಇಂದು ನೇರ ಸಂದರ್ಶನ ಮಾಡಿದರು ಈ ಸಂಗತಿ ಬಗ್ಗೆ.. ಯಾವ ರೀತಿ ಸಮಸ್ಯೆಗೆ ಪರಿಹಾರ ಒದಗಿಸುತ್ತೀರಿ  , ವಿಶೇಷ ಸೆಶನ್ ಏರ್ಪಡಿಸುತ್ತಿರ..ಪೊಲೀಸರ  ವರ್ತನೆ, ಎಲ್ಲದರ ಬಗ್ಗೆ ಕೇಳಿದರು.ಮಾತಿನ ಮಧ್ಯೆ ಮಿಸ್ಟರ್ ಶಿಂಧೆ ಅನ್ನುತ್ತ  ಕೇಳಿದ ಪ್ರಶ್ನೆಗಳು  ಸಖತ್ತಾಗಿತ್ತು.ಅಂತಿಮವಾಗಿ ಅವರು ಈ ಸಂಗತಿಯ ಬಗ್ಗೆ ಹೇಳುತ್ತಾ  ಒಬಾಮ ಅವರು ಮಕ್ಕಳ  ಮಾರಣ ಹೋಮ ಆದ ನಂತರ ಇಡಿ ದೇಶ ಕುರಿತು ಮಾತನಾಡಿದ್ದನ್ನು ನೆನಪಿಸುತ್ತಾ..ನಮ್ಮ ಪ್ರಧಾನಿ ಯಾಕೆ ಹಾಗೆ ಮಾಡಲಿಲ್ಲ ಎನ್ನುವ ಪ್ರಶ್ನೆ ಎಸೆದರು.. ಇಲ್ಲ ಅವರು ಆಗ ಮೀಟಿಂಗ್ ನಲ್ಲಿ ಇದ್ದರು ಎನ್ನುವ ಉತ್ತರ ಬಂದಿದ್ದು ಶಿಂಧೆ ಅವರಿಂದ..!

ಮುಖ್ಯವಾಗಿ ಒಂದು ಸಂಗತಿ ಎಲ್ಲರಿಗೂ ಆತಂಕ ತರುವ೦ತದ್ದಾಗಿದೆ , ನಾಳೆ ಸಾಕ್ಷಿ ಆಧಾರ ಇಲ್ಲ ಆದ್ದರಿಂದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್ ಹೇಳಿದರೆ... ? ಅದನ್ನು ನೆನಪಿಸಿ ಕೊಳ್ಳುವುದಕ್ಕೆ  ಸಾಧ್ಯವಿಲ್ಲ..ಏನು ಬೇಕಾದ್ರೂ ಸಾಧ್ಯ..!