ಮಾತು

Image result for red flower images
ನಾನು ಹೆಚ್ಚು ಗೌರವಿಸುವ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಸಹ ಒಬ್ಬರು. ಅವರ ಜೀವನಶೈಲಿ, ವಿಚಾರಧಾರೆ, ಆ ಜೀವನ್ಮುಖತೆ, ಸಮಾಜಮುಖಿ ಗುಣ ಎಲ್ಲವೂ ಅನನ್ಯ.ತಮಾಷೆ ಅಂದ್ರೆ ಅನೇಕರಿಗೆ ಅವರೇನು ಮಾಡಿದರೂ ಹಳದಿಯಾಗಿಯೇ ಕಾಣುತ್ತೇ!
ಶ್ರೀಗಳು ಇಫ್ತಾರ್ ಕೂಟ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕೊಟ್ಟರು ಅನ್ನುವ ಸಂಗತಿ ಕೆಲವರಿಗೆ ನಾಟಕೀಯವೆಂದು ಅನ್ನಿಸಿದರೆ ಕೆಲವರಿಗೆ ಖುಷಿ ಅನ್ನಿಸಿದೆ...ಇಂದು ಬೆಳಿಗ್ಗೆ ಫೇಸ್ಬುಕ್ ನೋಡುವಾಗ ತಮ್ಮನಂತಹ  ಮಿತ್ರ ವಿಕ್ರಮ ಜೋಶಿ ತನ್ನ ಗೋಡೆಯಮೇಲೆ ಬರೆದುಕೊಂಡಿದ್ದನ್ನು ಇಲ್ಲಿ ಶೇರ್ ಮಾಡಿದ್ದೇನೆ
Vikram Joshi
5 hrs ·

‘ನಾನು, ನನ್ನ ಇಬ್ಬರು ಅಣ್ಣಂದಿರು 20 ವರ್ಷಗಳಿಂದ ಪೇಜಾವರ ಶ್ರೀಗಳ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದೇವೆ. ಪೇಜಾವರ ಶ್ರೀಗಳು ನಮ್ಮನ್ನು ಯಾವತ್ತೂ ಮುಸ್ಲಿಮರೆಂದು ನೋಡಿಯೇ ಇಲ್ಲ. ಅವರಿಗೇನೂ ಹಿಂದೂಗಳು ಚಾಲಕರಾಗಿ ಸಿಗುವುದಿಲ್ಲ ಎಂದಲ್ಲ, ಅಥವಾ ಮುಸ್ಲಿಮರೇ ಬೇಕು ಎಂದೂ ಅಲ್ಲ. ಅವರಿಗೆ ಎಲ್ಲರೂ ಒಂದೇ. ಶುಕ್ರವಾರ ಕಾರಿನಲ್ಲಿ ಪ್ರಯಾಣಿಸುವಾಗ ನಮಗೆ ನಮಾಜ್‌ ಮಾಡುವ ಸಮಯವಾದರೆ, ದಾರಿ ಮಧ್ಯೆ ಮಸೀದಿ ಬಂದಾಗ ಕಾರು ನಿಲ್ಲಿಸುವಂತೆ ಹೇಳಿ, ನಮಾಜ್‌ ಮಾಡಿ ಬನ್ನಿ ಎಂದು ಸ್ವಾಮೀಜಿ ಕಳುಹಿಸುತ್ತಿದ್ದರು.'''

- ಪೇಜಾವರ ಶ್ರೀಗಳ ವಾಹನ ಚಾಲಕ ಅರೀಫ ಮಹ್ಮದ

ಗುರುಗಳ ಮೇಲೆ ಮತ್ತಷ್ಟು ಗೌರವ ಹೆಚ್ಚಿತು 
****
ನಿನ್ನೆ ವಾಹಿನಿಗಳಲ್ಲಿ ಈ ವಿಷಯವಲ್ಲದೆ, ಬೀಫ್  ಈಟರ್ ಗಳ ಬಗ್ಗೆ ಮಾಧ್ಯಮಿಗಳು ಮಾತಾಡಿದ್ದೇ ಮಾತಾಡಿದ್ದು..
ಪಬ್ಲಿಕ್ ಟೀವಿಯ ರಂಗಣ್ಣ ಜೊತೆಗೆ ಅರವಿಂದ್ ಜೊತೆಯ ವಾರ್ತಾ ಚರ್ಚೆ ನನ್ನ ಗಮನ ಸೆಳೆಯಿತು. ಪೇಜಾವರ ಶ್ರೀಗಳು ನೀಡಿದ ಇಫ್ತಾರ್  ಕೂಟ, ಬೀಫ್  ಈಟರ್ ಗಳು, ತಿಂದವರನ್ನು ಸಮರ್ಥಿಸಿಕೊಳ್ಳುವುದಕ್ಕೆ ತಾವು ಮೀನು ತಿಂದ ಸತ್ಯವನ್ನು  ಜನರ ಮುಂದೆ  ರಮೇಶ್ ಕುಮಾರ್ ಅವರ ಬಗ್ಗೆ... ಒಟ್ಟಾರೆ  ಈ ಮೂರು ಸಂಗತಿಗಳನ್ನು ಸರಳ ಹಾಗೂ ಸಮರ್ಥವಾಗಿ ವೀಕ್ಷಕರಿಗೆ ತಲಪುವಂತೆ ಮಾಡಿದ್ರು ರಂಗಣ್ಣ.. 
ನಿಮ್ಮನ್ನು ಜಾಸ್ತಿ ಮಾತುಗಾರ ಅಂತಾರೆ ಮಂದಿ.. ಆದ್ರೂ ಅನೇಕ ಬಾರಿ ನಿಮ್ಮ ಮಾತೇ  ಇಷ್ಟವಾಗುತ್ತೇ...

ಕ್ವಶ್ಚನ್

Image result for ಹೂವುಗಳು
ಬೇರೆ ಯಾವ  ವಿಷಯದ ಬಗ್ಗೆಯಾದರೂ ಸರಿಯೇ ಕೇಂದ್ರದ ಬಗ್ಗೆ ವಿರೋಧ ಮಾಡಿದರೂ ಸಹ ಯೋಗಾ ದಿವಸ್ ಮತ್ತು ಸ್ವಚ್ ಭಾರತ್ ಬಗ್ಗೆ  ಮೂಗು ಮುರಿಯುವ ಹಾಗಿಲ್ಲ. ಯಾಕೇಂದ್ರೆ ಇವೆರಡೂ ಎಲ್ಲರ ಬದುಕಲ್ಲೂ ಬಹು ಮುಖ್ಯ ಪಾತ್ರ ನಿರ್ವಹಿಸುತ್ತದೆ. ಆರೋಗ್ಯ ಇಲ್ಲದ ಬದುಕಲ್ಲಿ ಬೇರೆಯಾವ ಸಿರಿಗೂ ಬೆಲೆ ಇರಲ್ಲ ಅಲ್ವೇ!
ಈಗ ಬಹು ಸಂಖ್ಯೆಯಲ್ಲಿ ಯೋಗ ಬಗ್ಗೆ  ಮಂದಿ ಆಸಕ್ತಿ ವಹಿಸುತ್ತಿದ್ದಾರೆ.ಕೇವಲ ಯೋಗಾ ದಿವಸ್ ಗೆ ಮಾತ್ರ ಯೋಗಾಭ್ಯಾಸ ಮಾಡುವುದಕ್ಕೆ ಆದ್ಯತೆ ನೀಡುವುದಕ್ಕಿಂತ ಬದುಕಿನ ಭಾಗವಾಗಿ ಮಾಡಿಕೊಂಡರೆ ನಾವು ಸಹಿತ ತಾವೋ ಲಿಂಚ್ ಮತ್ತು ನಾನಮ್ಮಾಳ್ ರಂತೆ 90+ ತನಕ ಬದುಕ ಬಹುದು..
ಟಿವಿ ನೈನ್  ವಾಹಿನಿಯಲ್ಲಿ ಪ್ರಸಾರವಾದ ಯೋಗಾ ದಿವಸ್ ಪ್ರಯುಕ್ತ  ನಡೆದ  ಹಿರಿಯ ಹೆಣ್ಣುಮಕ್ಕಳ  ಯೋಗ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ.

** ಇದೇ ವಾಹಿನಿಯಲ್ಲಿ ಪ್ರಸಾರವಾಗುವ ನಾರಾಯಣ ಸ್ವಾಮಿ ಅವರ  ಹೀಗೂ ಉಂಟೆ ಕಾರ್ಯಕ್ರಮದ ಬಗ್ಗೆ ನನಗಿನ್ನೂ ಆಶ್ಚರ್ಯ ಕಡಿಮೆ ಆಗಿಲ್ಲ. ಯಾಕೇಂದ್ರೆ ಸಾಕಷ್ಟು  ಕಾರ್ಯಕ್ರಮಗಳು ಆರಂಭಿಕ ಹಂತದಲ್ಲಿ ಇದ್ದ ಆಸಕ್ತಿ ಕ್ರಮೇಣ ಕಳೆದುಕೊಳ್ಳುವಂತೆ ಮಾಡುತ್ತದೆ. ಆದರೇ ನಾರಾಯಣ ಸ್ವಾಮಿ ಮಾತ್ರ ಹೆಣ್ಣುಮಕ್ಕಳ ಅದರಲ್ಲೂ ಹಿರಿಯ ಹೆಣ್ಣುಮಕ್ಕಳ ಡಾರ್ಲಿಂಗ್ ಆಗಿದ್ದಾರೆ .. ಇದನ್ನು ಕಂಡಾಗ ನಮ್ಮ ಮನದಲ್ಲಿ ಮೂಡುವ ಕಟ್ಟ ಕಡೆಯ ಕ್ವಶ್ಚನ್ ಹೀಗೆಲ್ಲಾ ಉಂಟೆ ! ;-)