ವೆರಿ ಬ್ಯಾಡ್ ವೆರಿ ಬ್ಯಾಡ್!


ಹೀಗೆ ಲೆಕ್ಕ ಹಾಕಿಕೊಳ್ತಾ ಇದ್ದೆ ನಮ್ಮ ಕನ್ನಡದಲ್ಲಿ ಅದೆಷ್ಟು ಕನ್ನಡ ನ್ಯೂಸ್ ಚಾನೆಲ್ ಗಳಿವೆ   ಮತ್ತು ಆರಂಭ ಆಗುತ್ತಿವೆ ಅಂತ. ಆದರೆ ಅವೆಲ್ಲಕ್ಕಿಂತ ಆರಂಭ ಆಗಿರುವ ನ್ಯೂಸ್ ಚಾನೆಲ್ಗಳಲು ಅದೆಷ್ಟರ ಮಟ್ಟಿಗೆ ಜನರನ್ನು ತಲಪುತ್ತಾ ಇದೆ ಅಂತ ಲೆಕ್ಕ ಹಾಕಿದೆ... ಬೇಕಾದಷ್ಟು ಇದ್ರೂ ಕನ್ನಡ  ಜನತೆಗೆ ಮಾತ್ರ ಲೆಕ್ಕ ಹಾಕುವಷ್ಟು ಚಾನೆಲ್ಗಳು  ನೋಡುವ ಅವಕಾಶ ಇದೆ.. ವೆರಿ ಬ್ಯಾಡ್ ಅಲ್ವೇ !

ಇಂದು ವಿಶ್ವ ಎಡಚರರ ದಿನಾಚರಣೆ. ನಾನು ಲೆಫ್ಟಿ ಆದ ಕಾರಣ ನನಗೆ ನಾನೇ ವಿಶ್ ಮಾಡಿಕೊಳ್ಳುತ್ತಾ, ನನ್ನಂತಹ ಲೆಫ್ಟಿ  ಗಳಿಗೂ ನನ್ನ ಕಡೆಯಿಂದ ದೊಡ್ಡ ವಿಶ್. ಲೆಫ್ಟಿ ಗಳು ಸಕತ್ ಬುದ್ಧಿವಂತರಂತೆ, ಸಾಧಕರಂತೆ, ತುಂಬಾ ಸಾಹಸಿಗಳು, ಮಾಡ ಬೇಕಾಗಿರೋದನ್ನು ಮಾಡಿಯೇ  ತೀರುತ್ತಾರಂತೆ   :-) ಖುಷಿ ಆಯ್ತು ಅವೆಲ್ಲ ಓದಿದಾಗ .. ನಾವು ಹಾಗೆ ಇಲ್ಲದೆ ಇದ್ರೂ ಅಂತಹ ಗುಣ ಹೊಂದಿರ್ತಾರೆ ಅಂತ ಓದುವಾಗ ಖುಷಿ ಅನ್ನಿಸುತ್ತೆ. 
ಇತ್ತೀಚೆಗೆ ಪ್ರಶಂಸೆ ಅನ್ನೋ ಬಗ್ಗೆ ಓದ್ತಾ ಇದ್ದೆ.. ಪ್ರಶಂಸೆ ಮತ್ತು ಹೊಗಳಿಕೆಗೆ ಇರುವ ವ್ಯತ್ಯಾಸ ಅಪಾರ. ಬಿಡಿ ಆ ವಿಷ್ಯ. ಆದರೆ ಮನುಷ್ಯರ ಗುಣಗಳನ್ನು ಪ್ರಶಂಸೆ ಮಾಡೋದು ಹೃದಯದಿಂದ, ಹೊಗಳಿಕೆ ಹೆಚ್ಚಾಗಿ ಹೊರ ಬರುವುದರ ಬಗ್ಗೆ ನಿಮಗೆ ತಿಳಿದೇ ಇದೆ ಅದರ ಬಗ್ಗೆ ವಿವರಿಸ ಬೇಕಿಲ್ಲ.

ನನಗೆ ಪ್ರಶಂಸೆ ಮಾಡಿ ಗೊತ್ತು ... ಇತ್ತೀಚೆಗೆ ಒಂದು ಸಂಗತಿ ಓದಿದೆ ಇಲಿಯಾನ ಗೊತ್ತಲ್ಲ ದಕ್ಷಿಣ ಭಾರತದ ಸಿನಿಮಾಗಳ ಬಳಿಕ ಉತ್ತರ ಭಾರತದ ಕಡೆಗೆ ಹೊರಟ ಗೋವಾ ಹುಡುಗಿ. ಕೆಲವು ದಿನಗಳ ಹಿಂದೆ ಆಕೆ ದೆಹಲಿ ಏರ್ಪೋರ್ಟ್ನಲ್ಲಿ  ಒಬ್ಬಾಕೆ ಓಡಿ ಬಂದು ಇಲಿಯಾನ ಕೈಗೆ ಒಂದು ಪತ್ರ ನೀಡಿ ನಾನು ಹೋದ ಮೇಲೆ ಓಡಿ ಎಂದು ಹೇಳಿದಳಂತೆ. ಅದನ್ನು ಓದಿದಾಗ ಅದರಲ್ಲಿ ಆಕೆ ನೀನು ನೋಡೋಕೆ ತುಂಬಾ ಚಂದ ಇದ್ದಿ. ಸಿನಿಮಾದಲ್ಲೂ ಹಾಗೂ ನೇರವಾಗಿಯೂ ಸಹ ! ನೀನು  ಹೆಚ್ಚು ಗ್ಲಾಮರಸ್ ಪಾತ್ರಗಳಿಗೆ ಆದ್ಯತೆ ನೀಡದೆ ಸಾಮಾನ್ಯವಾಗಿ ಎಲ್ಲರಿಗೊ ಇಷ್ಟ ಆಗುವ ಪಾತ್ರಗಳಿಗೆ ಆದ್ಯತೆ ನೀಡು ಎಂದು ಬರೆದಿದ್ದರಂತೆ. ಅದನ್ನು ಓದಿದ ಆಕೆಗೆ ತಡೆಯಲಾದಷ್ಟು ಖುಷಿ ಖುಷಿ.. ಇಲಿಯಾನ ಬಗ್ಗೆ ಬರೆಯಲು ಹೊಗಳಿ ಬರೆಯಲು ಕಾದು ಕುಳಿತಿರುತ್ತಾರೆ. ಅಲ್ಲದೆ ಚಿತ್ರನಟರಿಗೆ ಇಂತಹ ಹೊಗಳಿಕೆ ಸಾಮಾನ್ಯ.. ಆದರೆ ಪ್ರಶಂಸೆ  ಮಾತುಗಳನ್ನು ಆಡುವ ಮಂದಿ ವಿರಳ..ಈ ಸಂಗತಿ ಆಕೆಗೆ ಸಕತ್ ಇಂಪ್ರೆಸ್ ಮಾಡಿತ್ತು.   ಈ ವಿಷಯದಲ್ಲಿ ಸ್ವಪ್ರಶಂಸೆ ಅಂತ ತಿಳಿ ಬೇಡಿ.. ನಾನು ತುಂಬಾ ಪ್ರಾಮಾಣಿಕವಾಗಿ   ಹೇಳೋದು ಹೇಳ್ತೀನಿ.. ದೊಡ್ಡ ದೊಡ್ಡ ಕಲಾವಿದರ ಬಗ್ಗೆ ಬರೆಯೋಕೆ ಹೋದಾಗ ಅವರಿಗೆ ಹೊಗಳಿಕೆ ಸಾಮಾನ್ಯ ನಿನ್ನದೇನು  ಮಹಾ ಅಂತ ಹೇಳಿದ ಫ್ರೆಂಡ್ಸ್ ಗಳಿದ್ದಾರೆ. ಆದರೆ ದೊಡ್ಡ ಅಭಿನೇತ್ರಿಗಳಿಗೆ ನಾನು ಹೇಳಿದ್ದು ಒಂದು ಧೂಳಿನ ಕಣ ಆದರು ತೊಂದ್ರೆ ಇಲ್ಲ.. ನನಗೆ ಅನ್ನಿಸಿದ್ದು   ಹೇಳ್ತೀನಿ..ಪ್ರಶಂಸೆ ಮಾಡ್ತೀನಿ!

@@ ಬಿಗ್ ಬಾಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಇಷ್ಟ ಆಗ್ತಾರೆ ಕಾರಣ ಅವರ ಒಂದು ಎನೆರ್ಜಿ ಹಾಗಿದೆ. ಮುಖ್ಯವಾಗಿ ಕೆಲವರು ತುಂಬಾ ಇಷ್ಟ ಆಗ್ತಾರೆ.. ಹಾಗಂತ ನಾವು ಅವರನ್ನು ಹೊಗಳ ಬೇಕಿಲ್ಲ.. ಪ್ರಶಂಸೆ ಮಾಡುವುದರಲ್ಲಿ ತಪ್ಪಿಲ್ಲ. ಅನೇಕ ಚಿತ್ರಗಳಲ್ಲಿ ಅನ್ನುವುದಕ್ಕಿಂತ ಅನೇಕ ಭಾಷೆಗಳಲ್ಲಿ ನಟಿಸುವ ಕೆಲಸ ನಿಜಕ್ಕೂ  ಭಿನ್ನ.. ಕಿಚ್ಚ ಬಗ್ಗೆ ಹೆಣ್ಣುಮಕ್ಕಳಿಗೆ ಸಾಕಷ್ಟು ಪ್ರೀತಿ ವಿಶ್ವಾಸ ಇದೆ. ಅದನ್ನು ವಿಶ್ವಾಸ ವಾತ್ಸಲ್ಯ ಅಂತ ಪರಿಗಣಿಸಿದರೆ ಒಳಿತು. ಬಿಗ್ ಬಾಸ್ ಅಂತ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನಿರೂಪಿಸಿ ಜನರನ್ನು ಆಕಡೆ ಆಕರ್ಷಿಸುವ ಕೆಲಸದಲ್ಲಿ ಕಿಚ್ಚ ಪಾತ್ರ ಜಾಸ್ತಿನೇ ಇದೆ..ಅವರ ಸ್ಟೈಲ್ಸ್, ಮಾತಾಡುವಾಗ ಅಂದ್ರೆ ಹಿರಿಯ ಕಲಾವಿದರ ಜೊತೆ ಹರಟುವಾಗ ಆಗುವ ಇನ್ವಾಲ್ವ್ ಎಲ್ಲ ಇಂಪ್ರೆಸ್ಸಿವ್. 

ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ದೊಡ್ಡ ವೆಸ್ಟ್ ಹಾಗೆ ಅಕುಲ್ ವರ್ತನೆ  ಸಹ ಅತಿ ಅನ್ನಿಸುತ್ತೆ. ಆದರೆ ಸಂತೋಷ್ ಬಚಾವ್ ಆಗಿರೋದೆ ಆಶ್ಚರ್ಯ.ಮುಖ್ಯವಾಗಿ ನೀತುಗೆ ಬಿಗ್ ಬಾಸ್ ಮನೆಯಲ್ಲಿ ಇರಬೇಕಾದ ಅಗತ್ಯ ಇದ್ದೆ ಇದೆ. ಕಾರಣ ಇಷ್ಟೇ ಆಕೆ ಸ್ವಲ್ಪ ಮಟ್ಟಿಗೆ ಡಿಪ್ರೆಸ್ ಆಗಿದ್ದಾರೆ. ಅದಕ್ಕೆ ಕಾರಣ ಆಕೆಯ ದೇಹದ ತೂಕ.. ಎಲ್ಲರಿಗು ಗೊತ್ತು ಗಾಳಿಪಟದ  ಸಣ್ಣಕ್ಕಿದ್ದ ನೀತು ದಪ್ಪ ಆಗಲು ತೆಗೆದುಕೊಂಡ ಔಷಧಿಯ ದುಷ್ಪರಿಣಾಮ ಈರೀತಿ ಮಾಡಿಸಿದೆ. ಹಾಗಂತ ಕೇಳಿದ್ದೇನೆ.. ಆ ಬೇಸರ ಮತ್ತೊಂದು ರೂಪದಲ್ಲಿ ಹೊರ ಬರ್ತಾ ಇದೆ...ದೀಪಿಕ  ಕನ್ನಡ ಕೇಳಿದಾಗ ಅಯ್ಯ ಅಯ್ಯ ಅಯ್ಯ ಅಂತ ಅನ್ನಿಸುತ್ತೆ. ಅದೇರೀತಿ ಅಕುಲ್ ಅತಿ ಮತ್ತು ಕನ್ನಡ ಕೇಳಿದಾಗ @#$%!@@#$$$$%%%^^&* ಥರದ ಭಾವ ಉಂಟಾಗುತ್ತೆ ;-)

@@ ಆಹಾ ಆಹಾ  ಸಲ್ಮಾನ್  ಖಾನ್ ಮತ್ತೆ ಬಿಗ್ ಬಾಸ್  ಕಾರ್ಯಕ್ರಮ ನಡೆಸಿಕೊಡ್ತಾ ಇದ್ದಾರೆ. ಆ ಸುದ್ದಿ ಓದಿ ಸಕತ್ ಖುಷಿ ಆಯ್ತು ನನಗೆ. ಸಲ್ಮಾನ್ ಇಲ್ಲದ ಬಿಗ್ ಬಾಸ್ ನೋ ನೋ ನೋ ಅನ್ನಿಸಿತ್ತು. ಸಲ್ಮಾನ್ ಬಗ್ಗೆ ಕಳೆದ ಹದಿನೈದು ದಿನದಿಂದ ನ್ಯೂಸ್ ಬರೀತಾನೆ ಇದ್ದೀನಿ ನನ್ನ ಆನ್ಲೈನ್ ಪೇಪರ್ ನಲ್ಲಿ ಅದರ ಬಗ್ಗೆ ಮುಂದೆ ತಿಳಿಸ್ತೀನಿ.. 

@@ ಜೀ ಹಿಂದಿಯಲ್ಲಿ ಹೊಸ ಪ್ರತಿಭೆಗಳ  ಇಂಡಿಯಾಸ್  ಬೆಸ್ಟ್ ಸಿನಿ ಸ್ಟಾರ್ ಕಿ ಖೋಜ್ ಮತ್ತು ಜಡ್ಜ್ ಗಳಾದ ವಿಜಯ್ ಕೃಷ್ಣ ಆಚಾರ್ಯ, ಅನುರಾಗ್ ಬಸು ಹಾಗು ಸೋನಾಲಿ ಬೇಂದ್ರೆ ಅವರ ಜಡ್ಜ್ಮೆಂಟ್, ಇನ್ವಾಲ್ವ್ಮೆಂಟ್ ಎಲ್ಲದಕ್ಕಿಂತ ಹೊಸ ಸ್ಪರ್ಧಿಗಳ ಬಗ್ಗೆ ಎಲ್ಲವು ಖುಷಿ ಕೊಡುತ್ತೆ. ನನಗೆ ಇಂತಹ ಹೊಸ ಪ್ರತಿಭೆಗಳು ಅಂದ್ರೆ ಜಾಸ್ತಿ ಇಷ್ಟ . ಅವರ ಬಗ್ಗೆ ಹೇಳೋಕೆ ಏನು ಇರಲ್ಲ ಲೋ ಪ್ರೊಫೈಲ್ ಆದ್ರೆ ಅತಿ ಎತ್ತರದ ಪ್ರತಿಭೆ ಆಸೆ ಇರುತ್ತದೆ..  
 ಸಾಕಷ್ಟು ಇದೆ ತಲೆಯಲ್ಲಿ ಆದ್ರೆ ಅದಾಗ ಆದಾಗ ಬರೀತೀನಿ.. 

ಕಳೆದ ವಾರವಿಡಿ ನನಗೆ ಸಕತ್ ದಿಗ್ಬ್ರಾಂತಿ ಆಗಿತ್ತು.. ಕೊಳವೆ ಬಾವಿಯಲ್ಲಿ ಆ ಮಗು ಬಿದ್ದು ಸತ್ತೆ ಹೋಯ್ತಲ್ಲ.. ಸ್ವಲ್ಪ ಇಕ್ಕಟ್ಟಾದರು   ನಮಗೆ ಇರೋಕೆ ಆಗಲ್ಲ ಅಂತಹ ಪರಿಸ್ಥಿತಿ ಯಲ್ಲಿ ಆ ಮಗು ಅದೆಷ್ಟು ಕಷ್ಟ ಪಟ್ಟಿರ ಬಹುದು? ಅದೆಷ್ಟು ಹೆದರಿರ ಬಹುದು.. ಈ ಸಾವು ನ್ಯಾಯವೇ ?

ಆ ... ಜನ್ಮದ ಮಗಳು


ಕೆಲವು ಸಂಗತಿಗಳು ಸಕತ್ ಮಜಾ ಕೊಡುತ್ತೆ. ಆ ಸಂಗತಿ ಟೀವಿಯಲ್ಲಿ ಕಂಡಾಗ ನಗಬೇಕು ಅಥವಾ ಸುಮ್ಮನೆ ಇರ ಬೇಕೋ ಗೊತ್ತಿಲ್ಲ ಗೊತ್ತಾಗಲ್ಲ . ಅದರೂ ಅಂತಹ ಸಂಗತಿಗಳನ್ನು ನಾನು ಹೆಚ್ಚು ಮಜವಾಗಿ ಕಾಣ್ತೀನಿ. ನಾನು ಅನೇಕ ರೀತಿಯ ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ   ಅಡುಗೆ ಕಾರ್ಯಕ್ರಮದತ್ತಲು ಸಹಿತ ಹೆಚ್ಚು ಗಮನ ಕೊಡ್ತೀನಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಒಗ್ಗರಣೆ ಡಬ್ಬಿಯಲ್ಲಿ ಪುನರ್ಜನ್ಮದ ಬಗ್ಗೆ ಕೆಲಸ ಮಾಡಿರುವ ಸ್ವಾಮಿಜಿ ಅಥವಾ ಗುರೂಜಿ ಅವರು ಸಹ ಆಗಾಗ ಬಂದು ವಿಶೇಷವಾದ ಅಡುಗೆಯನ್ನು  ಮಾಡುತ್ತಾರೆ  . ಪುನರ್ ಜನ್ಮದ ಬಗ್ಗೆ ಎಂತಹ ಸತ್ಯಗಳು ಇವರು ಹೇಳುತ್ತಾರೋ ಗೊತ್ತಿಲ್ಲ  ,ಆದರೆ ಬದುಕಿಗೆ ಬೇಕಾದ ಕೆಲವು ಸಂಗತಿಗಳನ್ನು ಕೇಳಿ ಅದರಂತೆ ನಡೆದು ಪ್ರಯೋಜನ ಹೊಂದಿರುವವರು ಇದ್ದಾರೆ. ಇವರು ಅಡುಗೆ ಮಾಡ್ತಾರಲ್ಲ ಆ ಸಂಗತಿಗೆ ಬರೋದಾದರೆ ಇತ್ತೀಚೆಗೆ ಒಂದು ಅಡುಗೆ ಹೇಳಿಕೊಟ್ರು. ನೀವು ನಂಬ್ತೀರೋ   ಇಲ್ವೋ ಅದನ್ನು ಅವರ ಐದನೇ ಜನ್ಮದ ಅಂದ್ರೆ ಈಗಾಗಲೇ ಪೂರೈಸಿರೋ ಜನ್ಮ ಒಂದರ ಮಗಳು ಈಗ ಅವರ ಆಫೀಸಲ್ಲಿ   ಕೆಲಸ ಮಾಡ್ತಾ ಇದ್ದಾರಂತೆ. ಇದು  ಆಕೆ ಹೇಳಿಕೊಟ್ಟ ಅಡುಗೆ ! ಆ  ಅಡುಗೆಗಿಂತ ಅವರ ಐದನೇ ಜನ್ಮದ  ಮಗಳ ಬಗ್ಗೆ ಹೆಚ್ಚು ಕುತೂಹಲ ಆಯ್ತು. ಮುಖ್ಯವಾಗಿ ಅಷ್ಟು  ಜನ್ಮಗಳು ಕಳೆದರೂ ಸಹ ಅಪ್ಪನನ್ನು ಹಿಂಬಾಲಿಸಿಕೊಂಡು ಬಂದಿರುವ ಆ ಹೆಣ್ಣುಮಗಳ ಸಂಗತಿ ಎಷ್ಟು ರೋಚಕ ಅಲ್ವ ? 


@@ ಇದೇ ವಾಹಿನಿಯಲ್ಲಿ ಪ್ರಸಾರ ಆಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅದ್ಭುತವಾಗಿದೆ. ಪುನೀತ್ ರಾಜ್ ಕುಮಾರ್ ಮತ್ತು ರವಿ ಚಂದ್ರನ್ ಅವರ ತುಂಬಾ ಚಂದ ಇತ್ತು. ಕನ್ನಡ ಚಿತ್ರರಂಗದಲ್ಲಿ ಹೊಸತನಗಳನ್ನು ನೀಡಿರುವ ರವಿ ಮಾಮ ಅವರು ಸಿಲ್ಕ್ ಸ್ಮಿತಾ ಅವರ  ಸಾವಿನ ಬಗ್ಗೆ ಹೇಳುವಾಗ ಹೆಚ್ಚು ಬೇಜಾರು ಅನ್ನಿಸಿತು. ಎಷ್ಟೋ ಸಂಗತಿಗಳು ಹಾಗೆ ಆಗ ಬೇಕು ಅಂತ ಬರೆದಿದ್ದರೆ ಯಾರೇನು ಮಾಡೋಕೆ ಆಗಲ್ಲ..ಒಟ್ಟಾರೆ ಎರಡು ಎಪಿಸೋಡ್ ಗಳು ತುಂಬಾ ಆಸಕ್ತಿ ಹೆಚ್ಚಿಸಿತು. 
ರಮೇಶ್ ಕನ್ನಡದ ಫೈನೆಸ್ಟ್  ನಿರೂಪಕ.. ಆದರೆ ಈ ಕಾರ್ಯಕ್ರಮದಲ್ಲಿ ಮತ್ತಷ್ಟು ಇಷ್ಟ ಆಯ್ತು. ಈ ಕಾರ್ಯಕ್ರಮ ಸಾಕಷ್ಟು ಹಿಂದೆ ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗಿದ್ದ ಜೀನ ಇಸಿ ಕ  ನಾಮ್ ಹೈ ನಂತೆ ನನಗೆ ಅನ್ನಿಸಿತು. ಅದರಲ್ಲಿ ಫಾರೂಕ್ ಶೇಖ್ ಒಂದಷ್ಟು ಎಪಿಸೋಡ್ ಮತ್ತು ಸುರೇಶ ಒಬೇರಾಯ್ ಒಂದಷ್ಟು ಎಪಿಸೋಡ್ ನಲ್ಲಿ ಕಾನ್ಸಿಕೊಂಡಿದ್ದರು. ಅತ್ಯಂತ ಸುಂದರ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು ಅದು. ಈಗ ಅದೇ ಧಾಟಿಯ ಈ ಕಾರ್ಯಕ್ರಮವು ಸಹ ಸೂಪರ್ ಆಗಿದೆ.