ಮುಂಬೈ ನಲ್ಲಿ ತನ್ನ ಸೋದರಿಯನ್ನು ರಕ್ಷಿಸಲು ಹೋದ ಹುಡುಗನನ್ನು ಪೊರ್ಕಿ ಗಳು ಕೊಂದು ಹಾಕಿ ಬಿಟ್ರಂತೆ . ಎಂತಹ ದುಃಖದ ವಿಷ್ಯ ಅಲ್ವೇ..ಯಾವುದೇ ಕಾನೂನು ಬರಲಿ ಅಂತಹವರಿಗೆ ಬುದ್ಧಿ ಕಲಿಸ ಬೇಕಾದರೆ ಜನರು ಜಾಗೃತರಾಗ ಬೇಕು..
ಇದೆ ವಾಹಿನಿಯ ಪಾಸಿಟಿವ್ ಇಂಡಿಯ ಕಾರ್ಯಕ್ರಮ ಸಕತ್ ಇಷ್ಟ ಆಯ್ತು ನನಗೆ.. ದೊಡ್ಡ ಫ್ಯಾನ್ ಆಗ್ ಬಿಟ್ಟಿದ್ದೀನಿ ಆ ಕಾರ್ಯಕ್ರಮಕ್ಕೆ..
ರೇಗಿಸಿ ಚುಡಾಯಿಸಿ ಮಜಾ ತೆಗೆದು ಕೊಳ್ಳುವವರೇ ನಿಮಗೆ ಕಾದಿದೆ ಕಾನೂನಿನ ಸಲಾಕೆ ಬರೆ ಇಡೋಕೆ ಅಂತ ತಿಳಿಸುವ ಪಬ್ಲಿಕ್ ವಾಹಿನಿ ಕಾರ್ಯಕ್ರಮ ಪೂರಕ ವಾಗಿತ್ತು.. ಕೇವಲ ಒಂದು ಗಂಟೆಯ ಷೋ ಮಾಡಿ ಬಿಡುವುದಕ್ಕಿಂತ ಈ ವಿಷಯ ಎಲ್ಲ ಸಾಮಾನ್ಯರಿಗೆ ತಿಳಿಯುವಂತೆ ವಾತಾವರಣ ಕಲ್ಪಿಸ ಬೇಕು ಹಾಗೆ ಆದೀತಾ?
ಇಷ್ಟು ದಿನಗಳ ಕಾಲ ಪಬ್ಲಿಕ್ ವಾಹಿನಿ ಪ್ರಳಯ ಫಿಕ್ಸ್ ಅಂತ ಒದ್ದಾಡ್ತಾ ಇತ್ತು, ಈಗ ಪ್ರಳಯ ಮಿಸ್ .. ಮುಂದೆ ಪ್ರಳಯ ನೆಕ್ಟ್ ಅಂತಾ ಪ್ರಸಾರ ಆಗುತ್ತಾ ರಂಗ ಸರ್ ?? ನಿವ್ಯಾಕೆ ಹಿಂಗಾದ್ರೀ...???!!!!
No comments:
Post a Comment