ಡೈಲಾಗ್

Image may contain: one or more people
ಚಿತ್ರಸೆರೆ : ವೆಂಕಟೇಶ್ ಮೂರ್ತಿ
ಕಳೆದ ಭಾನುವಾರ, ದಿನಾಂಕ ೦೩-೧೧-೨೦೧೯ ರಂದು ಗೋಖಲೆ ಇನ್ಸ್ಟಿಟ್ಯುಟ್, ಎನ್.ಆರ್.ಕಾಲೋನಿಯಲ್ಲಿ ಶ್ರೀ ಮುರಳಿ ಶ್ರೀನಿವಾಸನ್ ಅವರ ವಸಂತ ಪ್ರಕಾಶನದ ಮೂಲಕ ಮಹಾಭಾರತ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶ್ರೀ ಪೇಜಾವರ ಮಠದ ಪರಮ ಪೂಜ್ಯ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಆಗಮಿಸಿದ ವೇಳೆ ಸೆರೆಹಿಡಿದ ಚಿತ್ರ
 ಶ್ರೀ ಪೇಜಾವರ ಮಠದ ಪರಮ ಪೂಜ್ಯ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಶ್ರೀಕೃಷ್ಣನ  ಬಳಿ  ಶಾಶ್ವತವಾಗಿ  ತೆರಳಿದಾಗ  ಈ ಚಿತ್ರ ಪಟ ಹೆಚ್ಚು  ಬಳಕೆಯಾಯಿತು. ವೆಂಕಿಪಿಡಿಯ  ಎಂದು  ಫ್ರೆಂಡ್ ಸರ್ಕಲ್ ನಲ್ಲಿ ಪ್ರಸಿದ್ಧರಾಗಿರುವ ವೆಂಕಿ ಅದ್ಭುತ ಛಾಯಾಚಿತ್ರಗಾರ .

ಗುರುಗಳು ಶಾಶ್ವತವಾಗಿ  ಭೌತಿಕ  ದೇಹ ತ್ಯಜಿಸಿದ  ದಿನ  ಕನ್ನಡ ಸುದ್ದಿವಾಹಿನಿಗಳ ನಿರೂಪಕರು   ನಿಜಕ್ಕೂ ಅದ್ಭುತವಾಗಿ ವಿಷಯದ  ಪ್ರಸ್ತಾವನೆ, ಮಂಡನೆ ಮಾಡಿದರು . ಆದರೆ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ...! ಬಿಡಿ ...!
Image result for green color background

ಚಂದದ ಧಾರವಾಹಿ ಎಂದು ಹೇಳುವುದಕ್ಕಿಂತ ಸಾಮಾನ್ಯರಿಗೆ ಇಷ್ಟವಾಗುವಂತಹ ಕಥಾಹಂದರ ಇರುವಂತಹದ್ದು ಅಂದ್ರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸುಬ್ಬಲಕ್ಷ್ಮಿ ಸಂಸಾರ. ಸುಬ್ಬಲಕ್ಷ್ಮಿ ಪಾತ್ರಧಾರಿ ಬಗ್ಗೆ ಹೇಳುವಷ್ಟಿಲ್ಲ. ಬಾಲನಟಿಯಾಗಿ , ಕಂಠದಾನ ಕಲಾವಿದೆಯಾಗಿ, ಸೀರಿಯಲ್ ನಟಿಯಾಗಿ ಹೀಗೆ ಹಲವಾರು ಬಗೆಯಲ್ಲಿ ಕನ್ನಡ ಕಲಾಪ್ರಿಯರ ಮನಗೆದ್ದ ಪ್ರತಿಭಾವಂತೆ. ಅವರ ಜೊತೆ ಶನಾಯ, ಗುರುಮೂರ್ತಿ, ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್,ಜೊತೆಗೆ  ಅರುಣ್ ಪಾತ್ರಧಾರಿ,ಬಾಲಕಲಾವಿದರು , ಮನೆಕೆಲದ ಪಾತ್ರ ಮಾಡಿರುವ  ನಟಿ   ...   ಎಲ್ಲರು ಸಕತ್ತಾಗಿ ಮಾಡಿದ್ದಾರೆ. ಪತಿ ಪತ್ನಿ ವೊ ಎನ್ನುವ ಅಂಶದ ಅಡಿಯಲ್ಲಿ ಈ ಕಥೆ ಸಾಗುತ್ತದೆ. ಮುಖ್ಯವಾಗಿ ಈ ಧಾರಾವಾಹಿಯ ಸಂಭಾಷಣೆ ತುಂಬಾ ವಿಶೇಷವಾಗಿದೆ. ಇಡೀ  ವಾರದಲ್ಲಿ ಪ್ರಸಾರವಾಗುವಂತಹ ಎಪಿಸೋಡ್ ಗಳಲ್ಲಿ ಪ್ರತಿ ಸಂಚಿಕೆಯಲ್ಲೂ  ಸಾಮಾನ್ಯವಾಗಿ  ಎರಡು ಮೂರಾದರೂ ತುಂಬಾ ಇಷ್ಟ ಆಗುವಂತಹ ಡೈಲಾಗ್ ಗಳು  ಇರುತ್ತದೆ.(ಮಿನಿಮಮ್ ).

No comments: