ದ್ವಂದ್ವ ಮನಸ್ಥಿತಿ

 

ಈಗಷ್ಟೇ ಒಂದು ತಮಾಷೆ ಪ್ರಶ್ನೆ ಓದಿದೆ ತೆಲುಗು ಗ್ರೂಪ್ ಒಂದರಲ್ಲಿ , ಹೀಗೆ ಒಂದು ಸರ್ತಿ ಒಬ್ಬ ಹುಡುಗನ ಹೆಸರು ಕೇಳಿದಾಗ ಅವನು  6ಜೂನ್  ಎಂದು ಉತ್ರ ಕೊಟ್ಟನಂತೆ , ಹಾಗಾದ್ರೆ ಅವನ ಹೆಸರೇನು ಎಂದು ಕೇಳಿದ್ದರು . ಅದನ್ನು ನಾನು ಇಲ್ಲಿ ಬರೆಯ ಬೇಕಿಲ್ಲ  ನಿಮಗೆ ಉತ್ರ  ಗೊತ್ತಿರುತ್ತೆ , ಇಂತಹ ಸದಭಿರುಚಿಯ ಜೋಕ್  ಗಳು ಮಾತುಗಳು ಮನಕ್ಕೆ ಹೆಚ್ಚು ಖುಷಿ ಕೊಡುತ್ತದೆ ,ಅದೇ ರೀತಿ ದಡ್ಡ ಉತ್ತರಗಳು ಮನಸ್ಸಿಗೆ ಮುದ ನೀಡದಿದ್ದರೂ   ನಗುವುದಕ್ಕೆ ಸಹಾಯ   ಮಾಡುತ್ತದೆ , ಕೆಲವು ಬಾರಿ ಖೇದ ಸಹ ಅನ್ನಿಸುತ್ತದೆ .ಕನ್ನಡ ಕಲರ್ ವಾಹಿನಿಯ  ಬಿಗ್ ಬಾಸ್ ನಲ್ಲಿರುವ ಸ್ಪರ್ಧಿ ಆರ್ಯವರ್ಧನ್ ಬಗ್ಗೆ , ಅವರು  ಆಡಿದ ಮಾತ ನ್ನು ಬದಲಾಯಿಸುವ ಬಗ್ಗೆ , ಸಂಖ್ಯಾ ಶಾಸ್ತ್ರದ ಹೆಸರು ಹೇಳುತ್ತಾ   ತಮ್ಮ ತಪ್ಪು ಮುಚ್ಚಿಕೊಳ್ಳುವ ರೀತಿ , ಸುದೀಪ ಕ್ಲಾಸ್  ತೆಗೆದುಕೊಳ್ಳುವಾಗ ಅವರಿಗೆ ನೇರವಾಗಿ ಹೇಳುತ್ತಿದ್ದರು ತಮಗೆ ಅಲ್ಲ ಅನ್ನುವಂತಹ ಪೆದ್ದತನ ಇವೆಲ್ಲ  ಕಂಡಾಗ ಇವರ  ಫ್ಯಾನ್  ಕ್ಲಬ್ ನೆನೆದು ದುಃಖ   ಆಗುತ್ತದೆ . ಇವರ ಮಾತನ್ನು ನಂಬಿ ಅದೆಷ್ಟು ಮಂದಿ ಪಾಪ .....! ಮುಖ್ಯವಾಗಿ   ಸುದೀಪಾ ನನಗೆ ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಕಂಡಾಗ.... 

ಅವರಿಬ್ಬರಿಗೂ ತಮ್ಮನ್ನು ತಾವು ಹೆಚ್ಚು ತಿಳಿದವರು ಮತ್ತು ತಮ್ಮ  ಮಾತೇ ಅಂತಿಮ  ಎನ್ನುವ ಮನೋ ಭಾವ ಹೊಂದಿರುವವರು ಎನ್ನುವ ಹೆಮ್ಮೆ ಇದೆ . ಚಿಕ್ಕ -ದೊಡ್ಡ ಎನ್ನದೆ ಹೊರ ಪ್ರಪಂಚದಲ್ಲಿ ಅವರು ಮಾತನ್ನು ಕೇಳುವ ಕೆಲವು ಮಂದಿ ಹಿಂಬಾಲಕರನ್ನುಹೊಂದಿರುವ  ಇವರು ಇಲ್ಲೂ ತಮ್ಮ  ಕೇಳಲಿ ಅನ್ನುವ ಆಸೆ ಹೊಂದಿದ್ದಾರೆ. ಮುಖ್ಯವಾಗಿ ಈ ಆಟಕ್ಕೆ ಬೇಕಾಗಿರುವುದು ಬಾಸಿಸಂ ಅಲ್ಲ ಎನ್ನುವುದು ಅರ್ಥ ಮಾಡಿಕೊಂಡರೆ  ಅದರಲ್ಲೂ  ಮುಖ್ಯವಾಗಿ ರೂಪೇಶ್ ರಾಜಣ್ಣ ತಿಳಿದರೆ ಆಗ  ಅವರಲ್ಲಿರುವ ದ್ವಂದ್ವ  ಮನಸ್ಥಿತಿ ದೂರ ಆಗುತ್ತದೆ 

No comments: