ಕೋರ್ಟ್‌

 


ಜಿಯೊ ಹಾಸ್ಟಾರ್‌ ನಲ್ಲಿ ಕ್ರಿಮಿನಲ್‌ ಜಸ್ಟಿಸ್‌ ಎನ್ನುವ ಸೀರಿಸ್‌ ಇದೆ. ಅದರಲ್ಲಿ ಕೋರ್ಟ್‌ ಕಥಾಹಂದರ ಇರುವ ಈ ಸೀರೀಸ್‌ ನಲ್ಲಿ ಪಂಕಜ್‌ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಾಲ್ಕು ಸೀಜನ್‌ ಇದೆ. ಭಿನ್ನ ಕಥೆಗಳು.

ಇದೇ ಓಟಿಟಿ ಯಲ್ಲಿ ಇಲ್ಲಿಗಲ್ ಎನ್ನುವ ಮತ್ತೊಂದು  ವೆಬ್‌ ಸೀರೀಸ್‌ ಇದೆ. ಅದೂ ಸಹ ಕೋರ್ಟ್‌ ಸಂಬಂಧಿತ ಕಥೆ. ಅದರ ಕಥೆ ಸಹ ತುಂಬಾ ಆಸಕ್ತಿದಾಯವಾಗಿದೆ. ಈ ಕೋರ್ಟ್‌ ಸೀರೀಸ್‌ ಬಗ್ಗೆ ಏಕೆ ಹೇಳೋಕೆ ಹೊರಟಿದ್ದೀನಿ ಎಂದರೆ ಮುಖ್ಯವಾಗಿ ಟೀವಿ ಧಾರವಾಹಿಗಳಲ್ಲಿ ಟಿ.ಎನ್‌ . ಸೀತಾರಾಮ್‌ ಸರ್‌ ಬಳಿಕ ಹೆಚ್ಚು ಗಮನ  ಸೆಳೆದಿರುವ ಲಾಯರ್‌ ಗಳು ಅಂದರೆ ಭಾರ್ಗವಿ  ಎಲ್‌ ಎಲ್‌ ಬಿ ಯ ಭಾರ್ಗವಿ ಮತ್ತು ಅವರ ಮಾವ ಜೆ.ಪಿ ಪಾಟೀಲ್‌  ನಟನೆ ಅದ್ಭುತ.ಯಾವುದೇ ಧಾರವಾಹಿ ಆಗಿರಲಿ ಅದರ ಪಾತ್ರಧಾರಿಗಳ ನಟನೆ ಅದ್ಭುತವಾಗಿರುತ್ತದೆ. ಭಾರ್ಗವಿಯ ಪಾತ್ರಧಾರಿಗಳು  ಇದ್ಕೆ ಹೊರತಲ್ಲ ..ಅದ್ಭುತ ನಟನೆ..

 

ಸ್ಟಾರ್ ಸುವರ್ಣ ವಾಹಿನಿಯಲ್ಲಿ  ಪ್ರಸಾರ ಆಗುವ ಸುವರ್ಣ ಗೃಹಮಂತ್ರಿ ರಿಯಾಲಿಟಿ ಶೋ ಅಂದಕಾಲತ್ತಿನಲ್ಲಿ  ಉದಯ ವಾಹಿನಿಯಲ್ಲಿ ಇದೇ ಹೋಲಿಕೆಯ ಕಾರ್ಯಕ್ರಮಗಳು ಪ್ರಸಾರ ಆಗುತ್ತಿತ್ತು. ಯಾವುದೇ ಬೇಸರ ಇಲ್ಲದೆ, ಆರಾಮವಾಗಿ ಎಲ್ಲರ ಜೊತೆ ನೋಡ ಬಹುದಾದ ಕಾರ್ಯಕ್ರಮ ಇದಾಗಿದೆ. ಸಿಲ್ಲಿ ಲಲ್ಲಿಯ ರವಿಶಂಕರ್‌ ಹೋಸ್ಟ್‌ ಮಾಡುತ್ತಿದ್ದಾರೆ .

ಶೆಫ್

ಸೋನಿ ವಾಹಿನಿಯಲ್ಲಿ ಮಾಸ್ಟರ್‌ ಶೆಫ್‌ ಶೋ ಆರಂಭ ವಾಗಿದೆ. ತುಂಬಾ ಇಷ್ಟಪಟ್ಟು ವೀಕ್ಷಣೆ ಮಾಡುವ ರಿಯಾಲಿಟಿ ಶೋಗಳಲ್ಲಿ ಇದೂ ಒಂದು. ರಣವೀರ್‌ , ವಿಕಾಸ್‌ ಮತ್ತು ಕುನಾಲ್‌ ಈ ಬಾರಿ ಜಡ್ಜ್‌  ಗಳಾಗಿದ್ದಾರೆ. ಕುನಾಲ್‌ ಕೆಲವು ಸೀಸನ್‌ ಗಳಲ್ಲಿ ಮಿಸ್ಸಿಂಗ್.‌ ಅದರಲ್ಲೂ ಇತ್ತೀಚೆಗೆ ರೀಲ್ಸ್‌ ಅದೂ ಎಂತಹದ್ದು ಅಂದರೆ ಅದನ್ನು ಅವರೇ ಹೇಳಬೇಕು. ನಾನಂತೂ ಅವರ ಈ ರೀಲ್ಸ್‌ ಪ್ರಯೋಗವನ್ನು ಸಿಕ್ಕಾಪಟ್ಟೆ ಎಂಜಾಯ್‌  ಮಾಡಿದ್ದೀನಿ. ರಣವೀರ್‌ , ವಿಕಾಸ್‌ ಮತ್ತು ಕುನಾಲ್‌ ಜೋಡಿಯ ಮಾಸ್ಟರ್‌ ಶೆಫ್‌, ಇಡೀ ಭಾರತ ಒಂದಡಿಗೆಯ  ಮನೆಯಲ್ಲಿ ಸೇರಿ  ವಿವಿಧತೆಯಲ್ಲಿ ಏಕತೆ ಎನ್ನುವುದನ್ನುಸಾಬೀತು ಮಾಡುತ್ತದೆ.ಇದರ ಹಿನ್ನಲೆ ಸಂಗಿತ ತುಂಬಾ ಮಧುರವಾಗಿದೆ. ( ಇಂಗ್ಲಿಷ್‌  ಸಿನಿಮಾಗಳಲ್ಲಿ ಇರುವಂತೆ).ಈ ಬಾರಿ ವಿಶಿಷ್ಟವಾಗಿದೆ ಶೆಫ್‌ ಗಳ ಕಲರವ..

 ಕಲರ್ಸ್‌ (ಹಿಂದಿ) Laughter Chefs – Unlimited Entertainment  ಎನ್ನುವ  ಸೆಲೆಬ್ರಿಟಿ ಅಡುಗೆ ಶೋ ಪ್ರಸಾರ ಆಗುತ್ತಿದೆ. ಹಿಂದಿ ಧಾರವಾಹಿ, ಸಿನಿಮಾ ಕಲಾವಿದರು ಇದರ ಮುಖ್ಯ ಆಕರ್ಷಣೆ ವೀಕ್ಷಕರಿಗೆ. ನನಗೆ ಹೆಚ್ಚು ಆಕರ್ಷಿತವಾಗಿರುವ ಅಂಶ ಇದರ ಮಾಸ್ಟರ್‌ ಹರ್ಪಾಲ್‌ ಸಿಂಗ್‌ ಸೊಖಿ ಮತ್ತು ಭಾರತಿ ಸಿಂಗ್.‌ಹರ್ಪಾಲ್‌ ಅವರ ಫ್ಯಾನ್‌ ದೊಡ್ಡ ಗುಂಪೇ ನಮ್ಮ ಮನೆಯಲ್ಲಿದೆ.ಭಾರತಿ ಸಿಂಗ್‌ ಟೈಮಿಂಗ್‌ ವಾಹ್‌ ಎಷ್ಟು ಪ್ರತಿಭಾವಂತೆ !

 

 

ಅಷ್ಟೇ....

 


ಮೊದಲೆಲ್ಲಾ ಯಾವುದೇ ಒಂದು ಕಾರ್ಯಕ್ರಮ ಇರಲಿ ಅದನ್ನು ವೀಕ್ಷಕರು ಆಸಕ್ತಿಯಿಂದ ವೀಕ್ಷಣೆ ಮಾಡುತ್ತಿದ್ದರು. ಆಗ ವಾಹಿನಿಗಳ  ಸಂಖ್ಯೆ ಕಡಿಮೆ ಇತ್ತು  ಅಥ್ವಾ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳು ಪ್ರಸಾರ ಆಗುತ್ತಿತ್ತು ಎಂದು  ಹೇಳಬಹುದಾದರೂ, ಎಲ್ಲಾ ಭಾಷೆಯ  ಬಹುತೇಕ ವಾಹಿನಿಗಳು ತಮ್ಮ ಕೈಲಾದಷ್ಟು ಉತ್ತಮ ಕಾರ್ಯಕ್ರಮ ನೀಡುವ ವಿಷಯದಲ್ಲಿ  ಸದಾ ಮಗ್ನವಾಗಿರುತ್ತವೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಲಿಟಿ ಶೋ ಗಳು , ಧಾರವಾಹಿಗಳು ಯಾವುದೇ ಇರಲಿ ಭಿನ್ನವಾಗಿರುತ್ತವೆ. ಅದೇರೀತಿ  ಕಲರ್ಸ್ ಕನ್ನಡ ವಾಹಿನಿಯಲ್ಲೂ ಸಹಿತ ( ನಾನು ಹೆಚ್ಚಾಗಿ ವೀಕ್ಷಿಸುವ ಕಾರ್ಯಕ್ರಮಗಳ  ಬಗ್ಗೆ  ಹೇಳುತ್ತಿದ್ದೀನಿ)‌

ಧಾರವಾಹಿಗಳ ವಿಷಯಕ್ಕೆ ಬರುವುದಾದರೆ  ಕೆಲವೊಂದು ಬದಲಾವಣೆಗಳು ಅವುಗಳ ವೀಕ್ಷಣೆ ಹೆಚ್ಚು ಮಾಡುವಂತೆ ಮಾಡಿದೆ. ಭಾಗ್ಯಲಕ್ಷ್ಮಿ (ಕಲರ್ಸ್‌ ) ದಿಲೀಪ್ರಾಜ್ಬಂದ ಮೇಲೆ ಅದರ ಖದರ್ಬೇರೆ  ಆಗಿದೆ..

ಅಪ್ಪನ ಪಾತ್ರಕ್ಕೆ ಜೀವ ತುಂಬಿದ್ದಾರೆ ಜೀ ಕನ್ನಡ ವಾಹಿನಿ ಲಕ್ಷ್ಮಿ ನಿವಾಸದ ಅಪ್ಪ ಮತ್ತು  ನಂದಗೋಕುಲ (ಕಲರ್ಸ್‌ ) ನಂದ  ಪಾತ್ರ ಅದ್ಭುತ. ಆದರೇ ಸ್ಟಾರ್ಸುವರ್ಣ ದಲ್ಲಿ ವಸುಧೈವ ಕುಟುಂಬ ದಲ್ಲಿ ಅವಿನಾಶ್‌  ಮಾತ್ರ ಫೋಟೊದಲ್ಲಿ ಕೂತಿದ್ದಾರೆ. ಬಹಳ ನಿರೀಕ್ಷೆ ಇತ್ತು

ಇನ್ನು ರಿಯಾಲಿಟಿ ಶೋ ಗಳು ಯಾವುದೇ ಆಗಿರಲಿ ಅದರ ತೀರ್ಪುಗಾರರು ವೀಕ್ಷಕರ ಮನದಲ್ಲಿ ನೆಲೆ ಊರಿರುತ್ತಾರೆ.   ಸ್ಪರ್ಧೆಗಳ ಸೀಜನ್‌ ಗಳಲ್ಲಿ  ಅದೇ ಜಡ್ಜ್ ಗಳು ಬರಬೇಕು ಮತ್ತು ಅವರೆಂದಿಗೂ  ಬೋರ್‌ ಹೊಡಿಸಲ್ಲ. ಒಂದು ಸೀಜನ್‌ ನಲ್ಲಿ ಹೆಚ್ಚು ಜನಪ್ರಿಯ ಆದಂತಹ ಯಾವುದೇ ಸ್ಫರ್ಧಿ ಮತ್ತೊಂದು ಸೀಜನ್‌ ನಲ್ಲಿ ಬಂದರೇ ನೋಡುವ ಉತ್ಸಾಹ ಇರುವುದಿಲ್ಲ.

ಸುದೀಪಾ ಇಲ್ದೆ ಇರುವ ಬಿಗ್‌ ಬಾಸ್‌ ಇಮ್ಯಾಜಿನೇಷನ್‌ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಸಚ್ಚಿ!

ಸುದೀಪಾ ನೀವು ಆರಂಭದಲ್ಲಿ ತೋರುವ ಉತ್ಸಾಹ ಕ್ರಮೇಪಿ ಕಡಿಮೆ ಮಾಡಿಕೊಳ್ಳುತ್ತೀರಿ. ಅದರಲ್ಲು ಸೋಶಿಯಲ್‌ ಮೀಡಿಯಾದ ಮಂದಿ ಕೊಡುವ ಕಮೇಂಟ್‌ ಗಳ ಬಗ್ಗೆ ಹೆಚ್ಚು ಪರ್ಸನಲೈಜ್‌ ಆಗ್ತೀರಿ ಅಂತ ಅನ್ನಿಸಿತು.  ಪ್ರತಿಭಾವಂತ, ಆಂತ್ರಪ್ರಿನಿಯರ್‌, ಕಲಾವಿದ, ಉತ್ತಮ ಪ್ರಜೆಂಟರ್‌ ಆಗಿರುವ ನೀವು ಎಲ್ಲದಕ್ಕೂ ಉತ್ತರ ಕೊಡಬೇಕಿಲ್ಲ. ನಿಮಗಾಗಿ ಟೀವಿ ಮುಂದೆ ಕೂರುವ ಅಸಂಖ್ಯಾತ ಮಂದಿ ಇದ್ದಾರೆ.ಅವರಿಗೆ ನೀವು ನ್ಯಾಯ ಒದಗಿಸಿದರೆ ಸಾಕು ಅಲ್ವಾ?!ಪ್ರತಿವರ್ಷ  ನಿಮಗಾಗಿ ಕಾಯ್ತಾರೆ . ಈ ವರ್ಷ ಇರುವ ಟ್ರೆಂಡ್‌ ಮುಂದಿನ ವರ್ಷ ಅದೇ ಸ್ಫರ್ಧಿಗೆ ಇರಲ್ಲ. ಆದರೇ  ನೀವು, ಶಿವಣ್ಣ, ರಮೇಶ್‌,ಪ್ರೇಮ, ನಿಶ್ವಿಕ, ಅರ್ಜುನ್,ರಚಿತ, ಅನುಶ್ರೀ,ವಿಜಯ,ರಾಜೇಶ್‌,ಜಗ್ಗಣ್ಣ,ತಾರ ಅನುರಾಧ, ಭಟ್ರು,ತರುಣ್‌,ನಿರಂಜನ್…ಹೀಗೆ ನೀವು-ನಿಮ್ಮಂತಹವರು  ಬರುವುದನ್ನೇ ಕಾಯುವ ಅತಿ ದೊಡ್ಡ ಗುಂಪಿದೆ. ಅವರಿಗೆ ನ್ಯಾಯ ಒದಗಿಸುವ ಕಡೆಗಷ್ಟೇ ನಿಮ್ಮ ಆದ್ಯತೆ ಇರಲಿ.

ಹೇಳಬೇಕು ಅಂತ ಅನ್ನಿಸಿತು. .. ಅಷ್ಟೇ

 

 


ವಾಹ್

 

ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು ಮನಕ್ಕೆ  ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮನುಷ್ಯನ ಕ್ರೌರ್ಯ ಎಲ್ಲೇ ಮೀರಿದಾಗ ಯಾವುದಾದರೊಂದು ಘಟನೆ ನಡೆಯುತ್ತಿರುತ್ತದೆ,

ಈ ಬಾರಿ ಜೀ ಕನ್ನಡ ವಾಹಿನಿ ಯ ಸರೆಗಮಪ ಕಾರ್ಯಕ್ರಮ ತುಂಬಾ ಉಲ್ಲಾಸ ಕೊಟ್ಟಿದೆ. ಅದಕ್ಕೆ ಮುಖ್ಯ ಕಾರಣ ರಾಜೇಶ್‌ ಕೃಷ್ಣನ್.‌ ಅವರ ಧ್ವನಿ, . ಜೊತೆಗೆ ಅರ್ಜುನ್‌ ಜನ್ಯ ಮತ್ತು ವಿಜಯ ಪ್ರಕಾಶ್‌, ಅನುಶ್ರೀ  ಮತ್ತು ಇಡೀ ಟೀಂ.

ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪ್ರಸಾರವಾದ ಕಾರ್ಯಕ್ರದಲ್ಲಿ ಕರಿಮಾಯಿ ರಂಗಗೀತೆ ಹೆಚ್ಚು ಖುಷಿ ಕೊಟ್ಟಿತ್ತು. ಅದೇರೀತಿ ನನ್ನ ಮೆಚ್ಚಿನ ಗಾಯಕಿಯರಲ್ಲಿ ಒಬ್ಬರಾದ ಅನುರಾಧ ಭಟ್‌ ಅವರ ಗಾನಸುಧೆ ಈ ಬಾರಿಯ ಕಾರ್ಯಕ್ರಮ ವಾಹ್ ಅನ್ನುವಂತೆ ಮಾಡಿತು..‌

ಸಂಕ್ರಾಂತಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ತೀರ್ಪುಗಾರರ ಮುಂದೆ ಇಟ್ಟಿದ್ದ ಮರದ ಪುಟ್ಟ ಎತ್ತಿನಗಾಡಿ.. ಬೊಂಬೆ ಹಬ್ಬದಲ್ಲಿ ನಾನು ಕನಿಷ್ಟ ಎರಡು ಗಾಡಿಯನ್ನಾದರೂ ಇಟ್ಟು ಕಾನ್ಸೆಪ್ಟ್‌ ಮಾಡಿರುತ್ತೇನೆ.. ಓಹ್‌ ಗಾಡ್ಸ್‌ ನನಗೆ ಆ ಗಾಡಿ ಸಿಕ್ಕಿದ್ದಿದ್ದರೇ ಮುಂದಿನ ಬಾರಿಯ ಹಬ್ಬಕ್ಕೆ ಇಡ್ತಾ ಇದ್ದೆ J ಆದಷ್ಟು ಜ್ಯೂರಿಗಳ ಮತ್ತು ಮೆಂಟರ್‌ ಗಳ ಹೆಸರು ವೀಕ್ಷಕರಿಗೆ ಗೊತ್ತಾಗುವಂತೆ ಅವರಿರುವ ಕಡೆ ಅವರ  ನೇಮ್‌ ಪ್ಲೇಟ್‌ ಹಾಕಿ ಪಾ..ಹೆಚ್ಚು ಜನರನ್ನು ತಲಪುತ್ತೀರಿ..




ಕಿಚ್ಚ ಸುದೀಪ ನಟನೆಯ ಮ್ಯಾಕ್ಸ್‌ ಓಟ ತುಂಬಾ ಚೆನ್ನಾಗಿದೆ.. ನನ್ನ ಕಡೆಯಿಂದಕಡೆಯಿಂದ ವಿಶ್ವಾಸಪೂರಿತ ಕಂಗ್ರಾಟ್ಸ್‌ ಸುದೀಪ ಮತ್ತು ಟೀಂ.

ಬಿಗ್‌ ಬಾಸ್‌ ೧೧ ಹೇಳಿಕೊಳ್ಳುವಷ್ಟು ಖುಷಿ ಕೊಡಲಿಲ್ಲ. ನನಗೆ. ಬಹುತೇಕ ಎಲ್ಲಾ ಸ್ಪರ್ಧಿಗಳೂ  ಜಗಳಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆ ರಂಜಿಸಲು ಕೊಡಲಿಲ್ಲ. ಹಳೆಯ ಬಹುತೇಕ ಸೀಸನ್‌ ಗಳಲ್ಲಿ ಆದಷ್ಟು ತಮ್ಮ  ಪ್ರತಿಭೆಯನ್ನು ಜನರ ಮುಂದಿಡಲು  ಪ್ರಯತ್ನ ಪಡುತ್ತಿದ್ದರು. ಮಾಸ್ಟರ್‌ ಆನಂದ್‌, ಶೃತಿ, ಸೃಜನ್‌ ಲೋಕೇಶ್‌  , ಅರುಣ್‌ ಸಾಗರ್‌ ಯಾರೇ ಆಗಲಿ ಅವರು ಬರಲಿ ಅಂತ ಕಾತುರದಿಂದ ಕಾಯುವಂತಾಗುತ್ತಿತ್ತು. ಆದರೇ ಈ ಬಾರಿ ಆ ರಜತ್‌ ಅಹಂಕಾರ, ಭವ್ಯ ಅವರ ಅತಿ ನಾಟಕೀಯತೆ ಮತ್ತು ಸೋಗಲಾಡಿತನ ದೇವುಡಾ …! ಎಲ್ಲವನ್ನೂ ದಾಷ್ಟಿಕವಾಗಿ ಹೇಳುವ ಮತ್ತು ಒರಟಾಗಿ ನಡೆದುಕೊಳ್ಳುವ ವಿಧಾನ, ತಮ್ಮಿಂದ ಮಾತ್ರ  ಬಿಗ್‌ ಬಾಸ್‌ ನಂತಹ ಕಾರ್ಯಕ್ರಮಕ್ಕೆ ಟಿಆರ್‌ಪಿ ಎನ್ನುವ ಭ್ರಮೆ.. ಇವೆಲ್ಲಾ ಭ್ರಮನಿರಸನ ಉಂಟು ಮಾಡಿದೆ. ಮೋಕ್ಷಿತ, ಮ್ಯಾಕ್ಸ್‌ ಮಂಜು,ಹಣುಮಂತು ಇವರುಗಳು ಸ್ವಲ್ಪ ಜಾಸ್ತಿ ಇಷ್ಟ ಆದ್ರು.

ಬಿಗ್‌ ಬಾಸ್‌ ನ ಈ ಸೀಜನ್‌ ನನ್ನ ಕೊನೆಯ ಸೀಜನ್‌ ಅಂತ ಸುದೀಪ ಹೇಳಿದ್ದಾರೆ. ಅವರ ಮುಂದಿನ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿ. ಸುದೀಪ ನಾನುಕಂಡ ಅತ್ಯುತ್ತಮ ನಿರೂಪಕರಲ್ಲಿ ನೀವೂ ಒಬ್ಬರು.ನಿಮ್ಮ ಜೊತೆ ನಿಮ್ಮನ್ನು ನಂಬಿರುವವರಿಗೂ ಯಶಸ್ಸು ಸಿಗಲಿ. ಸಾಮಾನ್ಯವಾಗಿ ನಾನು ಕಂಡಂತೆ ಬರೆಯುವವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗದು ಸುದೀಪ.(ನಾನು ಮತ್ತು ನನ್ನಂತ ಬರೆಯುವವರು ಸಾಮಾನ್ಯವಾಗಿ ನಿರ್ಲಕ್ಷಕ್ಕೆ ಒಳಗಾದವರೇ) ಕಳೆದ ಹದಿನೆಂಟು ವರ್ಷಗಳಿಂದ ನಾನು ಬ್ಲಾಗ್‌ ಬರೆದಿದ್ದೀನಿ ಟೀವಿ ಕಾರ್ಯಕ್ರಮಗಳ ಬಗ್ಗೆ. ಒಂದರ್ಥದಲ್ಲಿ ಗೋಸ್ಟ್‌ ರೈಟರ್.‌ ಆದರೇ ನನ್ನನ್ನು ಭೇಟಿ ಆಗಿರುವವರು ಮತ್ತು ಭೇಟಿ ಆಗಬೇಕು ಅಂತ ಇಷ್ಟ ಪಟ್ಟಿದ್ದು ಸಹ ಬೆರಳೆಣಿಕೆ. ನನ್ನ ಕೆರಿಯರ್‌ ಗ್ರಾಫ್‌ ನೆಲಕಚ್ಚಿದೆ, ಹಾಗಂತ ಬೇಜಾರಿಲ್ಲ ಯಾಕೇಂದ್ರೆ  ನಾಳೆ ಎನ್ನುವುದು ನಿಗೂಢ..

 





ಗಾಬರಿ

 


ಸಾಮಾನ್ಯವಾಗಿ ಸಿನಿಮಾ ರಿವ್ಯೂ ಗಳನ್ನು ಹೆಚ್ಚಾಗಿ ಪತ್ರಕರ್ತರು ಬರೆಯುವುದಕ್ಕಿಂತ ಮೊದಲೇ ಸಿನಿಮಾರಂಗದ ಮಂದಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದು ಇಷ್ಟೇ ಅದರ ಕಥೆ ಎಂದು ನಿರ್ಧರಿಸಿ ಬಿಡುತ್ತಾರೆ. ಉಪೇಂದ್ರ ಅವರ ಯು ಐ ಮೊದಲು ರಿವ್ಯೂ ಓದಿದ್ದು ಸಿನಿ ಕ್ಷೇತ್ರದ ಒಬ್ಬರು ಬರೆದದ್ದು. ಆನಂತರ ಸಿನಿ ಪ್ರೇಮಿ ಒಬ್ಬರು ಬರೆದ್ದು ಓದಿದೆ. ಸಿನಿಪ್ರೇಮಿ ಅವರ ಬರಹ ಚೆನ್ನಾಗಿತ್ತು. ಸದಾ ಸಿನಿ ಪತ್ರಕರ್ತರ ಬಗ್ಗೆ ಕೆಟ್ಟಕೋಪ ಇರುವ ಸಿನಿ ಮಂದಿ ಅವರ ಮನೆಯವರೇ ಅಂದರೆ ಸಿನಿಮಾ ಮಂದಿ ಬರೆಯುವ ವಿಮರ್ಶೆ ತಡೆದರೆ ಸಿನಿಮಾ ಬಹುತೇಕ ಹಿಟ್‌ ಆದಂತೆ. ಹಾಗೇ ಮಾಡೋಕೆ ಸಾಧ್ಯವೇ ಇಲ್ಲ..ಅಲ್ವೇ!

ಹೀಗೆ ವಾಹಿನಿಗಳನ್ನು ಬದಲಾಯಿಸುವಾಗ ಮೇಘಾಲಯ, ಅಸ್ಸಾಂ,ಮಿಜೋರಾಮ್‌, ತ್ರಿಪುರ ಹೀಗೆ ಒಟ್ರಾಶಿ ಬೇರೇ ಬೇರೆ ಭಾಷೆಗಳ ದೂರದರ್ಶನ ನೋಡಿದೆ.ಕಾಶ್ಮೀರ್‌ ದೂರದರ್ಶನದಲ್ಲಿ ಪಾಕಿಸ್ತಾನ್‌ ರಿಪೋರ್ಟರ್‌ ಎನ್ನುವ ಅರ್ಧಗಂಟೆ ನ್ಯೂಸ್‌ ನೋಡಿದೆ. ಪಾಕಿಸ್ತಾನದ ವಿದ್ಯಮಾನಗಳ ಬಗ್ಗೆ ತಿಳಿಸುತ್ತಾರೆ ಸುದ್ದಿಯಲ್ಲಿ ಅರ್ಧದಷ್ಟು ಸಾವಿನ ಸುದ್ದಿ, ಆದರೂ ವಾರ್ತೆಯನ್ನು ಓದುವ ಹೆಣ್ಣುಮಗಳ ಕಾನ್ಫಿಡೆನ್ಸ್‌ ಇಷ್ಟ ಆಯಿತು. ಅದಾದ ಬಳಿಕ ಲಡಕ್‌ ನ್ಯೂಸ್‌ ಬಂತು ಸ್ವಲ್ಪ ಬೆಚ್ಚಿಬೀಳುವಂತೆ ಗಾಬರಿ ಗಾಬರಿ ಮುಖ..

ಮೇಘಾಲಯ ಮತ್ತು ಅಸ್ಸಾಂ ದೂರದರ್ಶನ ಲೋಗೊ ಥೇಟ್‌ ಜೀ ನ್ಯೂಸ್‌ ನಂತೆ ಇತ್ತು. ಆ ವಾಹಿನಿಗಳ ಫ್ಯಾನ್‌ ಆದೆ .. ಆಗಾಗ ನೋಡೋಕೆ ಸಿಕ್ತು ಒಂದಷ್ಟು ಬೇರೆ ಬೇರೆ ಭಾಷೆಗಳ ದೂರದರ್ಶನ..