ವಾಹ್

 

ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು ಮನಕ್ಕೆ  ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮನುಷ್ಯನ ಕ್ರೌರ್ಯ ಎಲ್ಲೇ ಮೀರಿದಾಗ ಯಾವುದಾದರೊಂದು ಘಟನೆ ನಡೆಯುತ್ತಿರುತ್ತದೆ,

ಈ ಬಾರಿ ಜೀ ಕನ್ನಡ ವಾಹಿನಿ ಯ ಸರೆಗಮಪ ಕಾರ್ಯಕ್ರಮ ತುಂಬಾ ಉಲ್ಲಾಸ ಕೊಟ್ಟಿದೆ. ಅದಕ್ಕೆ ಮುಖ್ಯ ಕಾರಣ ರಾಜೇಶ್‌ ಕೃಷ್ಣನ್.‌ ಅವರ ಧ್ವನಿ, . ಜೊತೆಗೆ ಅರ್ಜುನ್‌ ಜನ್ಯ ಮತ್ತು ವಿಜಯ ಪ್ರಕಾಶ್‌, ಅನುಶ್ರೀ  ಮತ್ತು ಇಡೀ ಟೀಂ.

ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪ್ರಸಾರವಾದ ಕಾರ್ಯಕ್ರದಲ್ಲಿ ಕರಿಮಾಯಿ ರಂಗಗೀತೆ ಹೆಚ್ಚು ಖುಷಿ ಕೊಟ್ಟಿತ್ತು. ಅದೇರೀತಿ ನನ್ನ ಮೆಚ್ಚಿನ ಗಾಯಕಿಯರಲ್ಲಿ ಒಬ್ಬರಾದ ಅನುರಾಧ ಭಟ್‌ ಅವರ ಗಾನಸುಧೆ ಈ ಬಾರಿಯ ಕಾರ್ಯಕ್ರಮ ವಾಹ್ ಅನ್ನುವಂತೆ ಮಾಡಿತು..‌

ಸಂಕ್ರಾಂತಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ತೀರ್ಪುಗಾರರ ಮುಂದೆ ಇಟ್ಟಿದ್ದ ಮರದ ಪುಟ್ಟ ಎತ್ತಿನಗಾಡಿ.. ಬೊಂಬೆ ಹಬ್ಬದಲ್ಲಿ ನಾನು ಕನಿಷ್ಟ ಎರಡು ಗಾಡಿಯನ್ನಾದರೂ ಇಟ್ಟು ಕಾನ್ಸೆಪ್ಟ್‌ ಮಾಡಿರುತ್ತೇನೆ.. ಓಹ್‌ ಗಾಡ್ಸ್‌ ನನಗೆ ಆ ಗಾಡಿ ಸಿಕ್ಕಿದ್ದಿದ್ದರೇ ಮುಂದಿನ ಬಾರಿಯ ಹಬ್ಬಕ್ಕೆ ಇಡ್ತಾ ಇದ್ದೆ J ಆದಷ್ಟು ಜ್ಯೂರಿಗಳ ಮತ್ತು ಮೆಂಟರ್‌ ಗಳ ಹೆಸರು ವೀಕ್ಷಕರಿಗೆ ಗೊತ್ತಾಗುವಂತೆ ಅವರಿರುವ ಕಡೆ ಅವರ  ನೇಮ್‌ ಪ್ಲೇಟ್‌ ಹಾಕಿ ಪಾ..ಹೆಚ್ಚು ಜನರನ್ನು ತಲಪುತ್ತೀರಿ..




ಕಿಚ್ಚ ಸುದೀಪ ನಟನೆಯ ಮ್ಯಾಕ್ಸ್‌ ಓಟ ತುಂಬಾ ಚೆನ್ನಾಗಿದೆ.. ನನ್ನ ಕಡೆಯಿಂದಕಡೆಯಿಂದ ವಿಶ್ವಾಸಪೂರಿತ ಕಂಗ್ರಾಟ್ಸ್‌ ಸುದೀಪ ಮತ್ತು ಟೀಂ.

ಬಿಗ್‌ ಬಾಸ್‌ ೧೧ ಹೇಳಿಕೊಳ್ಳುವಷ್ಟು ಖುಷಿ ಕೊಡಲಿಲ್ಲ. ನನಗೆ. ಬಹುತೇಕ ಎಲ್ಲಾ ಸ್ಪರ್ಧಿಗಳೂ  ಜಗಳಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆ ರಂಜಿಸಲು ಕೊಡಲಿಲ್ಲ. ಹಳೆಯ ಬಹುತೇಕ ಸೀಸನ್‌ ಗಳಲ್ಲಿ ಆದಷ್ಟು ತಮ್ಮ  ಪ್ರತಿಭೆಯನ್ನು ಜನರ ಮುಂದಿಡಲು  ಪ್ರಯತ್ನ ಪಡುತ್ತಿದ್ದರು. ಮಾಸ್ಟರ್‌ ಆನಂದ್‌, ಶೃತಿ, ಸೃಜನ್‌ ಲೋಕೇಶ್‌  , ಅರುಣ್‌ ಸಾಗರ್‌ ಯಾರೇ ಆಗಲಿ ಅವರು ಬರಲಿ ಅಂತ ಕಾತುರದಿಂದ ಕಾಯುವಂತಾಗುತ್ತಿತ್ತು. ಆದರೇ ಈ ಬಾರಿ ಆ ರಜತ್‌ ಅಹಂಕಾರ, ಭವ್ಯ ಅವರ ಅತಿ ನಾಟಕೀಯತೆ ಮತ್ತು ಸೋಗಲಾಡಿತನ ದೇವುಡಾ …! ಎಲ್ಲವನ್ನೂ ದಾಷ್ಟಿಕವಾಗಿ ಹೇಳುವ ಮತ್ತು ಒರಟಾಗಿ ನಡೆದುಕೊಳ್ಳುವ ವಿಧಾನ, ತಮ್ಮಿಂದ ಮಾತ್ರ  ಬಿಗ್‌ ಬಾಸ್‌ ನಂತಹ ಕಾರ್ಯಕ್ರಮಕ್ಕೆ ಟಿಆರ್‌ಪಿ ಎನ್ನುವ ಭ್ರಮೆ.. ಇವೆಲ್ಲಾ ಭ್ರಮನಿರಸನ ಉಂಟು ಮಾಡಿದೆ. ಮೋಕ್ಷಿತ, ಮ್ಯಾಕ್ಸ್‌ ಮಂಜು,ಹಣುಮಂತು ಇವರುಗಳು ಸ್ವಲ್ಪ ಜಾಸ್ತಿ ಇಷ್ಟ ಆದ್ರು.

ಬಿಗ್‌ ಬಾಸ್‌ ನ ಈ ಸೀಜನ್‌ ನನ್ನ ಕೊನೆಯ ಸೀಜನ್‌ ಅಂತ ಸುದೀಪ ಹೇಳಿದ್ದಾರೆ. ಅವರ ಮುಂದಿನ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿ. ಸುದೀಪ ನಾನುಕಂಡ ಅತ್ಯುತ್ತಮ ನಿರೂಪಕರಲ್ಲಿ ನೀವೂ ಒಬ್ಬರು.ನಿಮ್ಮ ಜೊತೆ ನಿಮ್ಮನ್ನು ನಂಬಿರುವವರಿಗೂ ಯಶಸ್ಸು ಸಿಗಲಿ. ಸಾಮಾನ್ಯವಾಗಿ ನಾನು ಕಂಡಂತೆ ಬರೆಯುವವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗದು ಸುದೀಪ.(ನಾನು ಮತ್ತು ನನ್ನಂತ ಬರೆಯುವವರು ಸಾಮಾನ್ಯವಾಗಿ ನಿರ್ಲಕ್ಷಕ್ಕೆ ಒಳಗಾದವರೇ) ಕಳೆದ ಹದಿನೆಂಟು ವರ್ಷಗಳಿಂದ ನಾನು ಬ್ಲಾಗ್‌ ಬರೆದಿದ್ದೀನಿ ಟೀವಿ ಕಾರ್ಯಕ್ರಮಗಳ ಬಗ್ಗೆ. ಒಂದರ್ಥದಲ್ಲಿ ಗೋಸ್ಟ್‌ ರೈಟರ್.‌ ಆದರೇ ನನ್ನನ್ನು ಭೇಟಿ ಆಗಿರುವವರು ಮತ್ತು ಭೇಟಿ ಆಗಬೇಕು ಅಂತ ಇಷ್ಟ ಪಟ್ಟಿದ್ದು ಸಹ ಬೆರಳೆಣಿಕೆ. ನನ್ನ ಕೆರಿಯರ್‌ ಗ್ರಾಫ್‌ ನೆಲಕಚ್ಚಿದೆ, ಹಾಗಂತ ಬೇಜಾರಿಲ್ಲ ಯಾಕೇಂದ್ರೆ  ನಾಳೆ ಎನ್ನುವುದು ನಿಗೂಢ..

 





ಗಾಬರಿ

 


ಸಾಮಾನ್ಯವಾಗಿ ಸಿನಿಮಾ ರಿವ್ಯೂ ಗಳನ್ನು ಹೆಚ್ಚಾಗಿ ಪತ್ರಕರ್ತರು ಬರೆಯುವುದಕ್ಕಿಂತ ಮೊದಲೇ ಸಿನಿಮಾರಂಗದ ಮಂದಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದು ಇಷ್ಟೇ ಅದರ ಕಥೆ ಎಂದು ನಿರ್ಧರಿಸಿ ಬಿಡುತ್ತಾರೆ. ಉಪೇಂದ್ರ ಅವರ ಯು ಐ ಮೊದಲು ರಿವ್ಯೂ ಓದಿದ್ದು ಸಿನಿ ಕ್ಷೇತ್ರದ ಒಬ್ಬರು ಬರೆದದ್ದು. ಆನಂತರ ಸಿನಿ ಪ್ರೇಮಿ ಒಬ್ಬರು ಬರೆದ್ದು ಓದಿದೆ. ಸಿನಿಪ್ರೇಮಿ ಅವರ ಬರಹ ಚೆನ್ನಾಗಿತ್ತು. ಸದಾ ಸಿನಿ ಪತ್ರಕರ್ತರ ಬಗ್ಗೆ ಕೆಟ್ಟಕೋಪ ಇರುವ ಸಿನಿ ಮಂದಿ ಅವರ ಮನೆಯವರೇ ಅಂದರೆ ಸಿನಿಮಾ ಮಂದಿ ಬರೆಯುವ ವಿಮರ್ಶೆ ತಡೆದರೆ ಸಿನಿಮಾ ಬಹುತೇಕ ಹಿಟ್‌ ಆದಂತೆ. ಹಾಗೇ ಮಾಡೋಕೆ ಸಾಧ್ಯವೇ ಇಲ್ಲ..ಅಲ್ವೇ!

ಹೀಗೆ ವಾಹಿನಿಗಳನ್ನು ಬದಲಾಯಿಸುವಾಗ ಮೇಘಾಲಯ, ಅಸ್ಸಾಂ,ಮಿಜೋರಾಮ್‌, ತ್ರಿಪುರ ಹೀಗೆ ಒಟ್ರಾಶಿ ಬೇರೇ ಬೇರೆ ಭಾಷೆಗಳ ದೂರದರ್ಶನ ನೋಡಿದೆ.ಕಾಶ್ಮೀರ್‌ ದೂರದರ್ಶನದಲ್ಲಿ ಪಾಕಿಸ್ತಾನ್‌ ರಿಪೋರ್ಟರ್‌ ಎನ್ನುವ ಅರ್ಧಗಂಟೆ ನ್ಯೂಸ್‌ ನೋಡಿದೆ. ಪಾಕಿಸ್ತಾನದ ವಿದ್ಯಮಾನಗಳ ಬಗ್ಗೆ ತಿಳಿಸುತ್ತಾರೆ ಸುದ್ದಿಯಲ್ಲಿ ಅರ್ಧದಷ್ಟು ಸಾವಿನ ಸುದ್ದಿ, ಆದರೂ ವಾರ್ತೆಯನ್ನು ಓದುವ ಹೆಣ್ಣುಮಗಳ ಕಾನ್ಫಿಡೆನ್ಸ್‌ ಇಷ್ಟ ಆಯಿತು. ಅದಾದ ಬಳಿಕ ಲಡಕ್‌ ನ್ಯೂಸ್‌ ಬಂತು ಸ್ವಲ್ಪ ಬೆಚ್ಚಿಬೀಳುವಂತೆ ಗಾಬರಿ ಗಾಬರಿ ಮುಖ..

ಮೇಘಾಲಯ ಮತ್ತು ಅಸ್ಸಾಂ ದೂರದರ್ಶನ ಲೋಗೊ ಥೇಟ್‌ ಜೀ ನ್ಯೂಸ್‌ ನಂತೆ ಇತ್ತು. ಆ ವಾಹಿನಿಗಳ ಫ್ಯಾನ್‌ ಆದೆ .. ಆಗಾಗ ನೋಡೋಕೆ ಸಿಕ್ತು ಒಂದಷ್ಟು ಬೇರೆ ಬೇರೆ ಭಾಷೆಗಳ ದೂರದರ್ಶನ..

 




ಘನತೆ

 

ಜಗ್ಗೇಶ್‌ ಕನ್ನಡದ ಅಪರೂಪದ ಕಲಾವಿದರು. ಹೆಚ್ಚಾಗಿ ತಮ್ಮ ಲೂಸ್‌ ಟಾಕ್‌ ನಿಂದ ಹೆಚ್ಚು ಜನರ ಗಮನ ಸೆಳೆದವರು.ಜಗ್ಗಣ್ಣನ ಬಗ್ಗೆ ಹೇಳುವಾಗ  ಸಾಮಾನ್ಯವಾಗಿ  ನೆನಪಿಗೆ ಬರುವ ಅಂಶಗಳು.. ಗುರು ರಾಘವೇಂದ್ರ ಸ್ವಾಮಿ, ಹಾಸ್ಯ, ಅಪರೂಪದ ನಟ, ಯಾವುದನ್ನು ಯಾವಾಗ ಹೇಗೆ ಹೇಳಬೇಕೆಂದು ತಿಳಿಯದ ವ್ಯಕ್ತಿತ್ವ ಮತ್ತು ರೀಲ್ಸ್..‌

ಅವರು  ಬಿಗ್‌ ಬಾಸ್‌ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ವರ್ತೂರ್ ಸಂತೋಷ್‌ ಅವರ ಒಂದು ಹುಲಿಯುಗುರಿನ ಕಥೆಯ ಬಗ್ಗೆ ಹೇಳುತ್ತಾ ಯಾವೋನೋ ಕಿತ್ತೊದವನು ರೀಲ್ಸ್‌ ಮಾಡಿಕೊಂಡು ಇದ್ದವ ಅದ್ಯಾವುದೋ ಚಾನಲ್‌ ಪ್ರೋಗ್ರಾಂ ಅದರಿಂದ ತನಗೆ ಎದುರಾದ ಕಷ್ಟ , ಜನರ ಕೆಟ್ಟ ಕಮೆಂಟ್‌ ಹೀಗೆ ತಮ್ಮ ಮಾತಿನ ಝರಿ ಹರಿದು ಬಿಟ್ಟಿದ್ದರು‌ ಸಿನಿಮಾ ಪ್ರಮೋಷನ್‌ ಕಾರ್ಯಕ್ರಮದಲ್ಲಿ. . ಅದನ್ನು ಆಗ ವೀಕ್ಷಿಸಿದಾಗ ನನಗೆ ಸಿಕ್ಕಾಪಟ್ಟೆ ನಗು ಬಂದಿತ್ತು,

ನಿಮ್ಮ ಮಾತಿನ ಶೈಲಿಗಲ್ಲ… ವರ್ತೂರ್‌ ಸಂತೋಷ್‌ ಎನ್ನುವ ಸ್ಪರ್ಧಿಯೊಂದಿಗೆ ನಿಮ್ಮನ್ನು ಹೋಲಿಸಿಕೊಂಡಿದ್ದಕ್ಕೆ. ಆತನ ರೀಲ್ಸ್‌ ಬಗ್ಗೆ ನೀವು ಕೆಂಡ ಕಾರಿದ್ದಕ್ಕೆ.. ನೀವು ನೋಡಿದ್ದೀರೋ ಇಲ್ಲವೋ ವರ್ತೂರ್‌ ರೀಲ್ಸ್‌ ನಾನಂತೂ ನೋಡಿದ್ದೀನಿ. ಒಂದು ಹೋಟೆಲ್‌ ನಲ್ಲಿ ಕುಳಿತು ಈ ಚಿಕನ್‌ ಗೆ ಪೆಪ್ಪರ್‌ ಕಡಿಮೆ ಹಾಕಿದಾರೆ, ಉಪ್ಪು ಇನ್ನೂ ಸ್ವಲ್ಪಾ ಬೇಕಾಗಿತ್ತು.. ಇಂತಹ ಮಾತುಗಳಿರುವ ಪುಟ್ಟ ರೀಲ್ಸ್. ಇಲ್ಲಂದ್ರೆ ತಮ್ಮ ಹಳ್ಳಿಕೇರಿ ದನದ ಬಗ್ಗೆ ಇಂತಹ ವಿಷಯಗಳಷ್ಟೇ.. ಆದರೇ ಸಿನಿಮಾ ಕ್ಷೇತ್ರದಲ್ಲಿ ನಿಮ್ಮದೇ ಆದಂತಹ ಛಾಪು ಇದೆ.,ಈ ಕ್ಷೇತ್ರದಲ್ಲಿ  ಗೆಲುವು- ಸೋಲು ಕಂಡಿದ್ದು ಅದೊಂದು ಭಾಗವಷ್ಟೇ , ರಾಜಕೀಯದಲ್ಲಿ ಸಹ ರಾಯರ ದಯೆಯಿಂದ ಉತ್ತಮ ಭವಿಷ್ಯ ಕಂಡಿರುವ ನೀವು ಟೀಕೆಗಳನ್ನು ನೆಗೆಲೆಕ್ಟ್‌ ಮಾಡಿ ವರ್ತೂರ್‌ ಸಂತೋಷನ್ನು ನಿರ್ಲಕ್ಷಿಸಿದ್ದರೆ  ಹೆಚ್ಚು ಘನತೆಯಿಂದ ಕೂಡಿರುತ್ತಿತ್ತು.

ರಾಘವೇಂದ್ರ ರಾಯರ ಪರಮ ಭಕ್ತರಾದ ನಿಮ್ಮ ಬಗ್ಗೆ ಜಾತಿ, ಪಕ್ಷ ಅನ್ನದೇ ಅನೇಕಾನೇಕ ರಾಯರ ಭಕ್ತರು ಇಷ್ಟ ಪಡುತ್ತಾರೆ. ಆದರ್ಶ ಮಾಡಿಕೊಂಡಿದ್ದಾರೆ ಜಗ್ಗಣ್ಣ.ನೀವು ಯಾವಾಗ ಪಕ್ಷ ಬದಲಿಸಿ ಆ ಪಕ್ಷದಿಂದ ಉತ್ತಮ ಭವಿಷ್ಯ ಪಡೆದುಕೊಂಡಿರೋ ಅಂದಿನಿಂದ ನಿಮ್ಮ ಶತ್ರುಪಡೆ ಹೆಚ್ಚಾಯಿತು. ಗೆದ್ದವರು ಇರುವ  ಕಡೆ  ಅಸೂಯೆ ಪಡುವವರು ಇದ್ದೇ ಇರುತ್ತಾರೆ. ಜೀಕನ್ನಡ ದಲ್ಲಿ ಇನ್ನೂ ಉತ್ತಮ ಪ್ರತಿಭೆಗಳು ಹಾಸ್ಯಕ್ಕಷ್ಟೇ ಮಹತ್ವ ಕೊಡುವ ಕಾರ್ಯಕ್ರಮ ನೀಡಿ ಸದಭಿರುಚಿಯ ವೀಕ್ಷಕರ ಹತ್ತಿರ ಆಗಿ.. ಆದಷ್ಟು ಬೇಗ..

ಯಾವುದೇ ಕಾರ್ಯಕ್ರಮ ಇರಲಿ ಅದನ್ನು ನಡೆಸಿಕೊಡುವವರು, ಹಿನ್ನಲೇ ಧ್ವನಿ , ನಿರೂಪಣೆ ಹೀಗೆ ಕೆಲವೊಂದು ಅಂಶಗಳ ಅಡಿಯಲ್ಲಿ ವೀಕ್ಷಕರನ್ನು ಸೆಳೆಯುತ್ತದೆ. ನಿರ್ದಿಷ್ಟ ಕಾರ್ಯಕ್ರಮದಲ್ಲಿ ನಿರ್ದಿಷ್ಟ ವ್ಯಕ್ತಿತ್ವನ್ನು ಬಯಸುವುದು ಸಾಮಾನ್ಯ. ಸರೆಗಮಪ ದಲ್ಲಿ ರಾಜೇಶ್‌ ಕೃಷ್ನ್‌, ಅರ್ಜುನ್‌ ಜನ್ಯ, ವಿಜಯ ಪ್ರಕಾಶ್‌, ಚಂದನದ ಥಟ್‌ ಅಂತ ಹೇಳಿ ಯಲ್ಲಿ ಡಾ. ನಾ. ಸೋಮೇಶ್ವರ್‌, ಬಿಗ್‌ ಬಾಸ್‌ ನಲ್ಲಿ ಸುದೀಪ, ವೀಕೆಂಡ್‌ ನಲ್ಲಿ ರಮೇಶ್‌ ಹೀಗೆ…..!

ಸರೆಗಮಪ ಜೀ ಕನ್ನಡ ವಾಹಿನಿಯ ಪ್ರತಿಷ್ಠಿತ ಸುಂದರ ಕಾರ್ಯಕ್ರಮ. ಅದರ ಬಗ್ಗೆ ಅನೇಕಾನೇಕ ಪಾಜಿಟಿವ್‌, ನೆಗೆಟಿವ್‌ ಅಭಿಪ್ರಾಯಗಳು ಕೇಳಿಬಂದರೂ ಒಟ್ಟಾರೆಯಾಗಿ ಹೇಳುವುದಾದರೆ ಇಷ್ಟ ಆಗುವ ರಿಯಾಲಿಟಿ ಷೋ. ಈ ಬಾರಿ ಜಡ್ಜ್ ಗಳಾಗಿ ರಾಜೇಶ್‌ ಕೃಷ್ಣನ್‌ ಮತ್ತೇ ಸ್ಥಾನ ಅಲಂಕರಿಸಿದ್ದಾರೆ. ಸುಮಧುರ ಕಂಠಸಿರಿ ಅವರ ಹಾಡುಗಳು ಅಹ್‌ ..! ಅರ್ಜುನ್‌ ಜನ್ಯ ರಂತಹ ಅಪರೂಪದ ಸಂಗೀತ ನಿರ್ದೇಶಕ ಮತ್ತು ವಿಜಯ್‌ ಪ್ರಕಾಶ್‌ ರಂತಹ ಬಹುಮುಖ ಪ್ರತಿಭೆ ಸಮ್ಮಿಳನದಿಂದ  ವೀಕೆಂಡ್‌ ಚೆನ್ನಾಗಿ ಕಳೆಯುವಂತೆ ಮಾಡುತ್ತದೆ. ಈ ಕಾರ್ಯಕ್ರಮದ ಮುಖ್ಯ ಸಾರಥಿ ರಾಜೇಶ್‌ .. ಆರಂಭಿಕ ದಿನಗಳಲ್ಲಿ ಈ ಟೀವಿ ಕನ್ನಡ ವಾಹಿನಿಯಲ್ಲಿ ಎಸ್‌ ಪಿ ಬಿ ಅವರ  ಸಂಗೀತ ರಿಯಾಲಿಟಿ ಷೋ ಎದುರು ಜೀ ವಾಹಿನಿಯ ಸರೆಗಮಪ ಫಾಮ್‌ ಗೆ ಬರುವಂತೆ ರಾಜೇಶ್‌  ಮತ್ತು ಟೀಂ ಮಾಡಿದ ಪ್ರಯತ್ನ ನೆನಪಲ್ಲಿದೆ. ಮತ್ತೇ ಆ  ಜಾಗಕ್ಕೆ ಬಂದಿದ್ದು ಖುಷಿ ಆಯ್ತು. 



ಕಂಡ ಸತ್ಯ

 

ನಿನ್ನೆ ಒಂದು ರೀಲ್‌ ನೋಡಿದೆ, ಐಶ್ವರ್ಯ ರೈ ಬಚ್ಚನ್‌, ಆರಾಧ್ಯ ಮತ್ತು ಅಭಿಷೇಕ್‌ ಬಚ್ಚನ್‌ ಇವರು ಅದೆಲ್ಲಿಂದಲೋ ಬರ್ತಾ ಇದ್ದರು. ಅವನ್ನು ತಮ್ಮ ಕ್ಯಾಮರಾ ಗಳಿಂದ ಸೆರೆ  ಹಿಡಿಯುತ್ತಿದ್ದರು ಮಂದಿ. ಐಶ್‌ ತನ್ನ ಮಗಳನ್ನು ಪಕ್ಕಕ್ಕೆ ಎಳೆದು ಕೊಂಡರು.ಅದೂ ತಾಯಿ ತನ್ನ ಕಂದನ ಬಗ್ಗೆ ತೋರಿದ ಕಾಳಜಿ.(ಏನೇನೋ ಟ್ರೋಲ್‌ ಮಾಡಿದ್ದರು ವರ್ಷದ ಹಿಂದೆ ಈ ಮಗುವಿನ ಬಗ್ಗೆ..)  ಆ ಮಗು ತಲೆವಾಲಿಸಿಕೊಂಡು ನಸುನಗುತ್ತಾ ನಡೆಯುತಿದ್ದಳು. ಸಾಮಾನ್ಯವಾಗಿ ಆರಾಧ್ಯ ಳನ್ನು ರೀಲ್‌ ಗಳಲ್ಲಿ ಹೀಗೆ ನೋಡಿರುವುದು ಆ ವಿಷಯ ಬೇರೆ. ಆ ಮಗುವಿನ ಬಗ್ಗೆ ಬರೆಯುವ ಕಮೆಂಟ್‌ ಗಳು, ಅಸೂಯೆ ಮಾತುಗಳು ಬೇಡವೇ ಬೇಡ ಅನ್ನಿಸುವಂತೆ ಇರುತ್ತದೆ. ಇದು ಈಗಿನ ಮನಸ್ಥಿತಿಗಳ ಅನಾವರಣ.

ಕನ್ನಡದ ಸ್ಟೈಲೀಷ್‌ , ಸ್ಫುರದ್ರೂಪಿ ಹಾಗೂ ಅಪರೂಪದ ಪ್ರತಿಭೆ ಕಿಚ್ಚ ಸುದೀಪ ಮಗಳು ಸಾನ್ವಿ ಸುದೀಪ ಕನ್ನಡ ಮಾತನಾಡದೆ ಇದ್ದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ, ಟ್ರೋಲು ಅದೂ ಇದೂ ಎಲ್ಲಾ ಆಯಿತು. ಸಾನ್ವಿ ಕನ್ನಡ ಮಾತನಾಡದೇ ಇರುವ ಅಂಶ ನನಗೇನೂ ವಿಶೇಷಅನ್ನಿಸಲಿಲ್ಲ. ಬಹುತೇಕ ಮನೆಗಳಲ್ಲಿ ಮಕ್ಕಳು ಹೆಚ್ಚು ಮಾತನಾಡುವುದು ಇಂಗ್ಲೀಷ್.‌ ಕನ್ನಡವನ್ನೇ ಓದಬೇಕು, ಕನ್ನಡದಲ್ಲೇ ಬರೆಯಬೇಕು ಅದೂ ಇದೂ ಎಂದು ಜೋರಾಗಿ ಮಾತನಾಡುವ ಮತ್ತು ಸಿಕ್ಕಾಪಟ್ಟೆ ಬರೆಯುವ ಬಹುತೇಕ ದೃಶ್ಯ ಮತ್ತು ಎಲ್ಲಾ ಮಾಧ್ಯಮಗಳ ಮಂದಿಯ ಬಹುತೇಕ ಮಕ್ಕಳು ಹೀಗೆ ಇರುತ್ತಾರೆ. ಇದು ನಾನು ಮತ್ತು ನನ್ನಂತಹವರು ಕಂಡ ಸತ್ಯ. ನನ್ನ ಕಸಿನ್‌ ಒಬ್ಬ ಅತ್ಯತ್ತಮವಾಗಿ ಕನ್ನಡ ಸಾಹಿತ್ಯ, ವಚನ, ಪುರಾಣ ಬಲ್ಲಂತಹವನು,. ವೃತ್ತಿಯಲ್ಲಿ ವಕೀಲ ಅವನಿಗೊಬ್ಬ ಮಗಳು ಅವಳು ಕನ್ನಡದಲ್ಲಿ ಮಾತನಾಡಿದ್ದು ಕೇಳೇ ಇಲ್ಲ. ಸೆಲೆಬ್ರಿಟಿ  ವಕೀಲ,( ದರ್ಶನ್‌ ಕೇಸ್‌ ನಲ್ಲಿ ಟಿವಿ ನೈನ್‌ ಮಂದಿ ಅವನ ಮುಂದೆ ಮೈಕ್‌ ಹಿಡಿದು ಅಭಿಪ್ರಾಯ ಕೇಳುತ್ತಿದ್ದರು. ಆ ವಿಷ್ಯ ಬಿಡಿ!)ಕನ್ನಡ ಪ್ರೇಮಿ ಆದರೆ..! ಇದೇನು ಅಸಹಜ ಅಲ್ಲವೇ ಅಲ್ಲ ಈಗಿರುವ ಪರಿಸ್ಥಿತಿಯಲ್ಲಿ. ನಿಜ ಹೇಳಬೇಕೆಂದರೆ ಅಂತಹ ಮಕ್ಕಳಿಗೆ ಕನ್ನಡ ಜ್ಞಾನ ತುಂಬಾ ಚೆನ್ನಾಗಿ ಇರುತ್ತದೆ. ಸಮಯ ಬಂದಾಗ ಅದು ಅನಾವರಣ ಆಗುತ್ತದೆ. ಸಾನ್ವಿ ಇದಕ್ಕೆ ಹೊರತಲ್ಲ.ಸುದೀಪನನ್ನು ಕಂಡ್ರೆ ನನಗೆ ಇಷ್ಟ ಅಂತ ಈ ಮಾತು ಹೇಳ್ತಾ ಇಲ್ಲ. ಇದು ನಿಚ್ಚಳ ಸತ್ಯ. ಆತ ಸೂಪರ್‌ ಮ್ಯಾಕ್ಸ್‌ ಸ್ಟಾರ್‌ ಆಗಿದ್ದಕ್ಕೆ ಜನ ಆ ಅಂಶವನ್ನು ಹೈಲೈಟ್‌ ಮಾಡ್ತಾ ಇದ್ದಾರೆ.














ಉಡುಪು

 

 ಸುದೀಪ ..

ಹಿಂದೀ ದೂರದರ್ಶನದಲ್ಲಿ ಆಗಿನ್ನೂ ಧಾರವಾಹಿಗಳ ಆರಂಭಕಾಲ. ಸಣ್ಣಪುಟ್ಟ ಧಾರವಾಹಿಗಳು, ಕಥೆಗಳು ಪ್ರಸಾರ ಆಗುತ್ತಿತ್ತು. ಒಂದು ಹೆಚ್ಚು ಮನದಾಳದಲ್ಲಿ ನಿಂತಿದೆ. ಸಿನಿಮಾ ತೆಗೆಯುವ ಟೀಮ್‌ ಒಂದು ಸ್ಲಂ ನಲ್ಲಿ ವಾಸಿಸುವವರ ಬಗ್ಗೆ ಸಿನಿಮಾ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಿದರು. ಸರಿ ಅದಕ್ಕಾಗಿ ನಿಗದಿತ ಸ್ಲಂ ಒಂದನ್ನು ಹುಡುಕಿದರು. ಅಲ್ಲಿ ಪುಟ್ಟ ಸುಂದರಿ ಇದ್ಲು. ಮುದ್ದಾದ ಬಾಲಕಿ ಆ ಸಿನಿಮಾ ಮುಖ್ಯಪಾತ್ರ ಎಂದು ಟೀಂ ನಿರ್ಧಾರ ಮಾಡಿದರು. ಅವಳ ಬಳಿ ತಮ್ಮ ಮನದ ಮಾತನ್ನು ಹೇಳಿದರು. ಆ ಹುಡುಗಿಗೆ ಸ್ವರ್ಗ ಕಾಲಡಿ!! ಸರಿ ಆಕೆ ಬಾಲಿವುಡ್‌ ಪ್ರಸಿದ್ಧ ನಟಿಯರಂತೆ ನಟಿಸುವುದರ ತಾಲೀಮು ಶುರು ಮಾಡಿದಳು. ಯಾವಾಗ ಶೂಟಿಂಗ್‌ ಆಗುತ್ತದೆಯೋ ಎನ್ನುವ ಕಾತುರ ಆಕೆಗೆ. ಇನ್ನೇನು ಆ ದಿನ ಸಮೀಪಕ್ಕೆ ಬಂತು. ಆಗ ನಿರ್ದೇಶಕಿ ಆಕೆಯ ಪಾತ್ರದ ಬಗ್ಗೆ ವಿವರಿಸಿದಳು. ಅದರಲ್ಲಿ ಆ ಹುಡುಗಿ ಸ್ಲಂ ವಾಸಿ ಚಿಂದಿ ಆಯುವ ಹುಡುಗಿ. ಇಷ್ಟು ದಿನ ಖುಷಿಯಿಂದ ಇದ್ದ ಆ ಹುಡುಗಿ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದಳು. ಆಗ ಅವಳು ಹೇಳಿದ್ದಿಷ್ಟೇ. ನಾವಿರುವುದು ಸ್ಲಂ ನಲ್ಲಿ ಹಾಗೆಂದು ಅದನ್ನು ಜನರ ಮುಂದೆ ತರಲು ನನಗೆ ಇಷ್ಟ ಇಲ್ಲ. ನೀವು ನೈಜವಾಗಿ ತರುವ ಪ್ರಯತ್ನದಲ್ಲಿ ಇದ್ದೀರಿ, ಆದರೇ ನಮಗೆ ಈ ಬದುಕಿನ ಮೂಲಕವೇ ತೆರೆಯ ಮೇಲೆ ಕಾಣುವುದು ಇಷ್ಟ ಇಲ್ಲ!

ಇದನ್ನು ಬರೆದದ್ದು ಯಾಕೆ ಅಂದ್ರೆ ,ಬಿಗ್ ಬಾಸ್‌ ಸ್ಫರ್ಧಿ ಅನುಮಂತ(ಶೋಭಾ ಶೆಟ್ಟಿ  ಕರೆಯುವಂತೆ ಬರೆದಿದ್ದೀನಿ ಅಷ್ಟೇ !) ಡ್ರೆಸ್‌ ಕೋಡ್‌ ಲುಂಗಿ ಮತ್ತು ಶರ್ಟ್‌ ಅಂತ ಜಗತ್ತಿಗೆ ತೋರಿಸಿ ಆತನ ಬದಲಾವಣೆಗೆ ಅವಕಾಶ ಕೊಡದ  ಒಂದು ವಾಹಿನಿಯ ಕಾರ್ಯಕ್ರಮ.ಆ ನಿಯಮ ಮುರಿದು ಬಿಗ್‌ ಬಾಸ್‌ ನಲ್ಲಿ ಮಾಡ್ರನ್‌ ಡ್ರೆಸ್ನಲ್ಲಿ ಅವರನ್ನು ಜಗತ್ತಿನ ಮಂದೆ ತಂದ್ರಿ. ಆ ಅಂಶ ನನಗೆ  ತುಂಬಾ ಇಷ್ಟ ಆಯಿತು.ಹನುಮಂತ ಅವರನ್ನು ನೋಡುವ ಪ್ರತಿಬಾರಿಯೂ ನನಗೆ ಮೇಲೆ ಹೇಳಿದ ಕಥೆ ನೆನಪಿಗೆ ಬರುತ್ತಿತ್ತು. ನಾನು ತಪ್ಪದೇ ವೀಕ್ಷಿಸುವ ಕಾರ್ಯಕ್ರಮ  ಬಿಗ್‌ ಬಾಸ್.‌ ಅದರಲ್ಲೂ ಶನಿವಾರ-ಭಾನುವಾರ….ಯಾವುದೇ ಕಾರ್ಯಕ್ರಮ ಇರಲಿ ಅದನ್ನು ಮುನ್ನಡೆಸುವ ಪ್ರಸೆಂಟರ್‌ ಆ ಇಡೀ ಕಾರ್ಯಕ್ರಮದ ಜೀವಾಳ. ಜಾಸ್ತಿ ಹೊಗಳಿಕೆ ಬೇಡ ಅಲ್ವಾ ಸುದೀಪ.