ಕೆಟ್ಟ ಪ್ರಭಾವ



You cannot believe in God until you believe in yourself. 
Swami Vivekananda 
 

ಪ್ರಿಯ ಗುರುವೇ ಇಂದು ನಿಮ್ಮ ಜನುಮದಿನ.. ನಿಮಗೆ ನನ್ನ ಹೃದಯಪೂರ್ವಕ  ಶುಭಕಾಮನೆಗಳು 


ಹೆಣ್ಣುಮಗು ಆ ಸಮಾನ -ಈ ಸಮಾನ ಎಂದು ಸದಾ ಗೊಣಗಾಡುವ ದೇಶ ನಮ್ಮದು.ಗೊಣಗಾಡೋದು ಅಂತ ಯಾಕೆ ಹೇಳೋಕೆ ಹೊರಟಿದ್ದೀನಿ ಅಂದ್ರೆ ದೊಡ್ಡ ದೊಡ್ಡ ಸ್ಥಾನದಲ್ಲಿ ಇರುವವರು ಎಲ್ಲರು ಒಂದಲ್ಲ ಒಂದು ರೀತಿ ತಮಗೆ ಇಷ್ಟ ಬಂದಂಗೆ ಹೆಣ್ಣುಮಕ್ಕ ಳಿಗೆ ಪುಕ್ಕಟೆ ಸಲಹೆ ಕೊಡ್ತಾರಲ್ಲ ಅದಕ್ಕೆ ...

ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಇಷ್ಟ ಬಂದ  ಹಾಗೆ ಹೇಳುವ ಜನನಾಯಕರಿಗೆ ಏನು ಹೇಳಬೇಕೋ ಗೊತ್ತಿಲ್ಲ. ಭಾಗವತ್ ಕಥೆ ಒಂದು ರೀತಿ ಆದರೆ ಆಸು ರಾಮ್ ದು ಮತ್ತೊಂದು ರೀತಿ. ಈಗ ಆಯನೂರ್ ಮಂಜುನಾಥ್   ಅವರದು ಇನ್ನೊದು ರೀತಿ.
ಮಕ್ಕಳನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ಇದ್ದಾರಂತೆ ವಾಹಿನಿ ಆಂಕರ್ಸ್ ..ಆ ಹೆಣ್ಣುಮಕ್ಕಳು ಧರಿಸುವ ಉಡುಗೆ-ತೊಡುಗೆ ಮಕ್ಕಳ ಮನದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆಯ೦ತೆ ,ಅಯ್ಯೋ ಇಂತಹ ಮಾತುಗಳನ್ನು ಹೇಳಿದ ಮಹನೀಯರಿಗೆ ದೋರ್ದ೦ಡ ನಮಸ್ಕಾರಗಳು.

ಪಬ್ಲಿಕ್ ವಾಹಿನಿಯಲ್ಲಿ ನಿರೂಪಕ ಹರೀಶ್ ತಮ್ಮ ಸಹೋದ್ಯೋಗಿಗಳಾದ (ಬೇರೆ ಬೇರೆ ವಾಹಿನಿಗಳಲ್ಲಿ ಬದುಕು ಕಾಣುತ್ತಿರುವ ) ಸ್ವಪ್ನ, ಸೌಮ್ಯ  ಮತ್ತು ಶ್ವೇತ ಜೊತೆಯಲ್ಲಿ ತಮ್ಮ ವಾಹಿನಿಯ ರಾಧ ಜೊತೆ ಚರ್ಚೆ ನಡೆಸಿದ್ದರು.ಜೊತೆಗೆ ಸಾಥ್ ನೀಡಿದ್ದು ಮಹಿಳೆ ಯಾರ ಬಗ್ಗೆ ಕಾಳಜಿಯುಳ್ಳ ಮಹಿಳೆ ವಿಮಲಾ.
ಈ ವಿಷಯದ ಬಗ್ಗೆ ಆ ಹೆಣ್ಣು ಮಕ್ಕಳದ್ದು ಮಾತ್ರವಲ್ಲ ನಮ್ಮೆಲ್ಲರ ಪ್ರತಿಭಟನೆ ಇದ್ದೆ ಇದೆ.. 
ಇಂತಹ ಮಾತುಗಳನ್ನು ಉದುರಿಸುವುದಕ್ಕಿಂತ ಮುನ್ನ ಹೆಣ್ಣುಮಕ್ಕಳ ಶ್ರಮ-ಸಾಧನೆ ಬಗ್ಗೆ ಗೌರವಿಸುವುದನ್ನು ಕಲಿತಾಗ ಮಾತ್ರ ಎಲ್ಲವೂ ಉತ್ತಮ ಹಾದಿಯಲ್ಲಿ ನಡೆಯೋದು..




1 comment:

Badarinath Palavalli said...

ಬಾಯಿ ಹರಕು ರಾಜಕಾರಣಿಯ ಅಸಹ್ಯ ಮನಸ್ಥಿತಿ.

ನಮ್ಮ ನಿರೂಪಕಿಯರ ಕಷ್ಟಗಳು ನಾನು ಕಣ್ಣಾರೆ ಕಾಣುತ್ತಿದ್ದೇನೆ.