ನಿಗೂಢ !


ಮಾಯಾ ಮಂತ್ರ, ದೆವ್ವ ಭೂತ ಅಂದ್ರೆ ವೀಕ್ಷಕರಿಗೆ ತುಂಬಾ ಇಷ್ಟ.. ವೀಕ್ಷಕರು ಅಂದ್ರೆ ಟೀವಿ ವೀಕ್ಷಣೆ ಮಾಡೋರು ಮಾತ್ರವಲ್ಲ ಆಮ್ ಆದ್ಮಿ ಗಳಿಗೆ ತುಂಬಾ ಇಷ್ಟ,, 
ಆದ ಕಾರಣ ಮ್ಯಾಜಿಕ್ ಮೋಡಿಗಳಿಗೆ ಹೆಚ್ಚು ಆದ್ಯತೆ ನೀಡ್ತಾರೆ ಜನಗಳು. ಅಯ್ಯೋ ಬಿಡಿ ಕಣ್ಕಟ್ಟು ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳ  ಬೇಕು  ಅನ್ನುವ ಮಾತು ಆಡಿದರೂ ಸಹ ಕಣ್ಕಟ್ಟು ವಿದ್ಯೆಯ ಬಗ್ಗೆ ಜನರಿಗೆ ಆಸಕ್ತಿ ಇದ್ದೆ ಇದೆ.
ನಿನ್ನೆ ಉದಯ ನ್ಯೂಸ್ ನಲ್ಲಿ ನಿಗೂಢ ಜಗತ್ತು ಅನ್ನುವ ಕಾರ್ಯಕ್ರಮ ವೀಕ್ಷಿಸಿದೆ. ಅದು ಸಹ ಕಣ್ಕಟ್ಟು ವಿದ್ಯೆ ಬಲ್ಲ ಅದಕ್ಕಿಂತಲೂ ಹೆಚ್ಚಾಗಿ ವಿಶೇಷ  ಶಕ್ತಿ ಎಂದು ಹೇಳ ಬಹುದಾ ಗೊತ್ತಿಲ್ಲ ಆದರೆ ಆ  ವಿದ್ಯೆ ಬಲ್ಲ ವ್ಯಕ್ತಿಯೊಬ್ಬರ ಬಗ್ಗೆ ಪ್ರಸಾರ ಮಾಡಿದರು ಕಾರ್ಯಕ್ರಮದಲ್ಲಿ. 

ಆತನ ತನ್ನ  ಬಾಯಲ್ಲಿ ಕೆಂಡ ಇಟ್ಟುಕೊಂಡ-ಬೆಂಕಿ ಉಗುಳಿದ. ಹಾವುಗಳ ಜೊತೆಯ ಆತನ ಒಡನಾಟ ಭಯದಿಂದ ಮೈ ನಡಗುವಂತಹದ್ದು . ಯಾವ ಇಂಡಿಯಸ್  ಗಾಟ್  ಟ್ಯಾಲೆಂಟ್ ನಲ್ಲೂ ಕಾಣದ ಪ್ರತಿಭೆ.. ಆತ ಈಗ ಎಲ್ಲ ಆಕರ್ಷಣೆಯ ಕೇಂದ್ರ ಬಿಂದು. ಕೇರಳ ನಿವಾಸಿಯ ಬಗ್ಗೆ  ಪ್ರಸಾರಿಸಿದ ಕಾರ್ಯಕ್ರಮ ನಿಗೂಢವಾಗಿ ಇತ್ತು.
ಬೇರೆ ವಾಹಿನಿಗಳಲ್ಲಿ ಇಂತಹ ಕಾರ್ಯಕ್ರಮಗಳು ಪ್ರಸಾರ ಆದರೂ ಹೆಚ್ಚು ಗಿಮಿಕ್ಕುಗಳಿರುತ್ತೆ.ಆದರೆ ಇಲ್ಲಿ ಮಾತ್ರ ಅಂತಹ ಯಾವುದೇ ಅತಿರೇಕಗಳು ಇಲ್ಲದೆ ಒಪ್ಪವಾಗಿ  ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು.
ಹೆಸರು ನಿಗೂಢ ಆಗಿದ್ದರೂ ನಿರೂಪಕ ಮಾತ್ರ ಸುಂದರವಾಗಿದ್ದುದು ಆ ಕಾರ್ಯಕ್ರಮದ ಮತ್ತೊಂದು ವಿಶೇಷ 

ಕಲರ್ ವಾಹಿನಿಯಲ್ಲಿ  ಜೈ ಮಾ ದುರ್ಗಾ ಅನ್ನುವ ಧಾರವಾಹಿ ಪ್ರಸಾರ ಆಗುತ್ತದೆ.ಸಂಪೂರ್ಣವಾಗಿ ದೇವಿ-ಅಮ್ಮನವರ  ಮಹಿಮೆ. ಶಾಂತ ಮುಖಭಾವದ ಹೆಣ್ಣುಮಗಳು ಆ ಪಾತ್ರ ನಿರ್ವಹಿಸಿರುವುದು .ನಾವು ಹೆಚ್ಚಾಗಿ ರಮ್ಯಕೃಷ್ಣ ರಂತಹ ಪಾತ್ರಧಾರಿಗಳನ್ನು ಕಂಡಿರೋದು ,ಆದರೆ ದೇವರು ಇಷ್ಟು ಸಾಫ್ಟಾಗಿ  ಛೆ 
ಈ ಧಾರಾವಾಹಿಗೆ ಸಂಬಂಧಿಸಿದಂತೆ  ಅನೇಕ ವೀಕ್ಷಕಿರು, ಅದರಲ್ಲೂ ತೆಲುಗು -ದೇವರ ಸಿನಿಮಾಗಳನ್ನು ವೀಕ್ಷಿಸಿದವರು ಈ ಹಿಂದಿ ದೇವರಿಗೆ  ಆಟಿಟ್ಯುಡ್ ಇಲ್ಲ, ಅದಕ್ಕೆ ನೋಡೋಕೆ ಬೇಸರ ಅನ್ನುವ ಅಭಿಪ್ರಾಯ ಪಟ್ಟಿದ್ದಾರೆ.. ಹೇ ಮಾತೆ ಒಮ್ಮೆ ಒಂದಷ್ಟು ಸೌತ್ ಸಿನಿಮಾಗಳನ್ನು ನೋಡಿದರೆ ಒಳ್ಳೆಯದು..ನೀವು ಶಾಂತಮೂರ್ತಿ ಆಗಿರೋದು ದಕ್ಷಿಣದ ವೀಕ್ಷಕರಿಗೆ ಇಷ್ಟ ಇಲ್ಲ ;-)



No comments: