ಅಭಿಜಾತ ಕಲಾವಿದರು


ಟೀವಿ ನೈನ್  ವಾಹಿನಿ ಮತ್ತು ಜನಶ್ರೀ ವಾಹಿನಿ  ಇಬ್ಬರು ಅಭಿಜಾತ ಕಲಾವಿದರ ಬಗ್ಗೆ ಪ್ರಸಾರ ಮಾಡಿತು. 
ಜನಶ್ರೀ ಅವರು ಇವತ್ತಿನ ಸ್ಪೆಶಲ್ ಎನ್ನುವ ಕಾರ್ಯಕ್ರಮದಲ್ಲಿ, ಮತ್ತು ಟೀವಿ ನೈ ನ್  ಸಕಲಕಲಾವಲ್ಲಭ ಹೆಸರಿನ ಶೀರ್ಷಿಕೆಯ ಕಾರ್ಯಕ್ರಮ. ಎರಡು ಮೈಂಡ್ ಬ್ಲೋಯಿಂಗ್ ಕಾರ್ಯಕ್ರಮ. ಯಾಕೆ ಗೊತ್ತ ಆ ಎರಡು ಕಾರ್ಯಕ್ರಮದ ಕೇಂದ್ರ ಬಿಂದು ಇಬ್ಬರು ಸೂಪರ್ ಸ್ಟಾರ್ ಗಳು.
ಜನಶ್ರೀ ಯಲ್ಲಿ ಶಾರುಖ್ ಖಾನ್ ಮತ್ತು ಟೀವಿ ನೈನ್  ನಲ್ಲಿ ಕಮಲ ಹಾಸನ್. ಈ ಇಬ್ಬರು ಕಲಾವಿದರು ಅಪಾರವಾದ ಕಲಾಭಿಮಾನಿಗಳಿಂದ ಪ್ರೀತಿಯನ್ನು ಗಳಿಸಿರುವ ಕಲಾವಿದರು. ತಾನು ತನ್ನ ಧರ್ಮದಿಂದ ಗುರುತಿಸಿಕೊಳ್ಳದೆ ಪ್ರತಿಭೆಯಿಂದ ಮನಗೆದ್ದು ಅದಕ್ಕೆ ಪೂರಕ ಕಸರತ್ತು  ಮಾಡಿರುವ ಶಾರೂಕ್ ಎಲ್ಲರ ಮುದ್ದು.. ಹಾಗೆಂದರೆ ಪ್ರತಿಯೊಬ್ಬರೂ ಇಷ್ಟ ಪಡುವ ಕಲಾವಿದ. ಆತನಿಗೆ ಆತನ ಮನೆ ಅಂದ್ರೆ ಭಾರತದಲ್ಲಿ ರಕ್ಷಣೆ ಕೊಡ ಬೇಕಾ ? ಸಕತ್ ಬಾಲಿಶ ಸಂಗತಿ .

ಒಂದು ಧರ್ಮದ ಬಗ್ಗೆ ಮತ್ತೊಂದು ಧರ್ಮದವರಿಗೆ ಕೆಲವು ಬಗೆ ಇನ್ ಸೆಕ್ಯೂರಿಟಿ ಆಗುವುದು ಸಹಜ. ಅದರ ಕಾರಣಗಳನ್ನು ನಾವು ಹುಡುಕುತ್ತಾ ಹೋದರೆ ಅಂತಿಮವಾಗಿ ಉಳಿಯುವುದು ಏನು ಇಲ್ಲ.ಅದೇ ರೀತಿ ಜಾತಿಗಳ ವಿಷಯದಲ್ಲೂ ಆಗುತ್ತದೆ.ಬಿಡಿ ಧರ್ಮ ಜಾತಿ ಸಂಗತಿ ಬಿಡಿ ಎಲ್ಲ ವಿಷಯದಲ್ಲೂ ಇಂತಹ  ವಾತಾವರಣ ಇದ್ದದ್ದೇ.

ಕಮಲಾ ಹಾಸನ್ ಅಂದ್ರೆ ನನಗೆ ಸಕತ್ ಇಷ್ಟ. ಆ ಕಲಾವಿದ ಗುರುತಿಸಿ ಕೊಂಡಿರುವುದು .ಅವರ ಸಾಗರ ಸಂಗಮಂ  ಸ್ವಲ್ಪ ಜಾಸ್ತಿನೆ ಇಷ್ಟವಾದ ಸಿನಿಮಾ.ಈಗ ವಿವಾದಿತ ಆಗಿರುವ ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ಓರ್ವ ಮುಸ್ಲಿಂ ನಾಯಕ ಅವರನ್ನು ಟಾ ಕ್ ಷೋ ನಲ್ಲಿ ಸುವರ್ಣ ನ್ಯೂಸ್ ನ ರಂಗ ನಾಥ್ ಚರ್ಚೆಗೆ  ಕುಳ್ಳರಿಸಿ ದ್ದರು . ಆದರೆ ತಮಾಷೆ ಅಂದ್ರೆ ಆತ  ಆ ಸಿನಿಮಾ ನೋಡದೆ ಅದನ್ನು ಬ್ಯಾನ್ ಮಾಡ ಬೇಕು ಅನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಸಕತ್ ನಗು ಬಂದಿತ್ತು.
ಆದರೆ ಬ್ಯಾನ್ ಆಗ ಬೇಕು ಅಂತ ಯಾರು ಒದ್ದಾಡು ತ್ತಿದ್ದಾರೆ ಅನ್ನುವ ಸಂಗತಿ ಈಗ ಸ್ಪಷ್ಟವಾಗಿದೆ.
ಟೀವಿ ನೈನ್  ಪ್ರಸಾರ ಮಾಡಿದ ಸಕಲಕಲಾ ವಲ್ಲಭ ಅನ್ನುವ ಕಮಲ್ ಅವರ ದೈತ್ಯ ಪ್ರತಿಭೆಯ ಬಗ್ಗೆ ಪ್ರಸ್ತುತ ಪಡಿಸಿದ ಕಾರ್ಯಕ್ರಮ ವಾವ್ ..

ಒಟ್ಟಾರೆ ಹೇಳೋದಿಷ್ಟೇ ಕಮಲ್-ಶಾರೂಕ್ ನಮಗೆ ನಿಮ್ಮ ನಟನೆ ಅಂದ್ರೆ ತುಂಬಾ ಇಷ್ಟ. ಭಾರತದಲ್ಲಿ ಪ್ರತಿಭೆಗಳಿಗೆ ಮಾತ್ರ ಮಣೆ  ಹಾಕೋದು ಮತ್ಯಾವುದಕ್ಕೂ ಅಲ್ಲ.. ಈ ಅಂಶ ಭಾರತೀಯರಾದ ನಿಮಗೆ ಗೊತ್ತೇ ಇದೆ ಅಲ್ವೇ !

 

No comments: