ಒಳ್ಳೆ ಯದು..




ನನಗೆ ತುಂಬಾ ವಿಸ್ಮಯ ಅನ್ನಿಸೋದು ಅಡುಗೆ ವಿಷಯದ  ರಿಯಾಲಿಟಿ ಷೋ ಅಡುಗೆ  ಮಾಡುವ, ಕಾರ್ಯಕ್ರಮ ನೋಡುವ ವಿಷಯ ಅಂದ್ರೆ ಮೂಗು ಮುರಿಯುವ ಮಂದಿ ಅನೇಕ. ಅಂತಹುದರಲ್ಲಿ ಅದಕ್ಕಾಗಿ ಅಷ್ಟೆಲ್ಲ  ಖರ್ಚು ಮಾಡೋದು ಅಂದ್ರೆ . ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಮಾಸ್ಟರ್  ಶೆಫ್ . ಅನೇಕಾನೇಕ ಎಲೆಮರೆ ಕಾಯಿ, ಬಡತನದಿಂದ ಮೇಲೆ ಬರಲಾಗದೆ ನರಳುವ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ . ದೇಶದ ಯಾವುದೋ ಮೂಲೆಯಲ್ಲಿ ಒಂದು ಪುಟ್ಟ ಹೋಟೆಲ್ ನಲ್ಲಿ ಅಡುಗೆ ಮಾಡುತ್ತಿರುವ ಪ್ರತಿಭೆ ಇಲ್ಲಿ ಅವಕಾಶ.ಜೋ ಜೀತ ವಹಿ ಸಿಕಂದರ್ . 






ಸಂಜೀವ್ ಕಪೂರ್ , ವಿಕಾಸ್ ಖನ್ನ, ಕುನಾಲ್ ಕಪೂರ್ ಇವರು ತೀರ್ಪುಗಾರರು. ಅಡುಗೆ ಮನೆ ಬದುಕಲ್ಲಿ ಅಷ್ಟೈಶ್ವರ್ಯ  ಮತ್ತು ಕೀರ್ತಿ ತಂದು ಕೊಡ ಬಲ್ಲದು. ಇವರುಗಳು ಆಸಕ್ತಿ ಇದ್ರೆ ವಿಶ್ವದಲ್ಲಿ ನೀವು ನಂಬರ್ ಒನ್ ಆಗ ಬಹುದು ಎಂದು ತೋರಿಸಿ ಕೊಟ್ಟವರು . ಚೆಫ್ ಸಂಜೀವ್ ಕಪೂರ್ ಒಂದು ರೀತಿ ನಮಗೆಲ್ಲ ಗುರು . ಅಂದ್ರೆ ಅವರ ಬಳಿ ನಾವೆಲ್ಲಾ ಏಕಲವ್ಯನಂತೆ ಅಡುಗೆ ಪಾಠ ಕಲಿತಿರೋದು. ಜೀ ವಾಹಿನಿಯಲ್ಲಿ ಖಾನ ಕಜಾನ ಪ್ರಸಾರ ಆಗುತ್ತಿದ್ದ ಸಮಯ ದಿಂದ ಹಿಡಿದು ಈ ವರೆಗೂ ಅವರು ಅಂದ್ರೆ ಅಡುಗೆ ಕಲಿಕೆ ಆಸಕ್ತಿ ಇರುವವರಿಗೆ ಗೌರವ, ಪ್ರೇಮ ಆದರ, ಆಪ್ಯಾಯ.   
ಯಾರು ಗೆಲ್ಲುತ್ತಾರೆ ಅನ್ನುವುದಕ್ಕಿಂತ ಅದರಲ್ಲಿ ನಾವು ತಿಳಿಯುವ ಅನೇಕ ಸಂಗತಿಗಳಿವೆ.. ಸೊ ಇದೊ೦ದು ಒಳ್ಳೆಯ ಪಾಠ ಶಾಲೆ ನಮಗೆ. 
ನಮ್ಮ ದೇಶದಲ್ಲಿ ತುತ್ತು ಅನ್ನಕ್ಕಾಗಿ ಒದ್ದಾಡುತ್ತಿರುವವರು ಹೇರಳ ಸಂಖ್ಯೆಯಲ್ಲಿದ್ದಾರೆ. ಮಾಸ್ಟರ್  ಶೆಫ್ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಆಹಾರ ಕಲಿಕೆ ಸಮಯದಲ್ಲಿ ಪೋಲಾಗುತ್ತೆ . ಬಡ-ನಿರ್ಗತಿಕರಿಗೆ ಆಹಾರ ನೀಡುವ ಕೆಲಸ ಮಾಡಿದರೆ ಅಡುಗೆ ಅನ್ನುವ ಮಹತ್ತರವಾದ ಕೆಲಸಕ್ಕೆ ಸಾರ್ಥಕತೆ ಸಿಗುತ್ತೆ. ಕೆಟ್ಟದಾಗಿ ಅಡುಗೆ ಮಾಡಿರುವವರಿಗೆ ಅದೇ ಆಹಾರವನ್ನು ಸರಿಪಡಿಸುವ ಶಿಕ್ಷೆ ನೀಡಿ.ಯಾಕೇಂದ್ರೆ  ಅಡುಗೆಲ್ಲಿ ತಪ್ಪಾದ್ರೆ ಅದನ್ನು ಸರಿಮಾಡುವ ಕಲೆ ಗೊತ್ತೇ ಇರುತ್ತೆ .  ಅದನ್ನು ಹಸಿದವರಿಗೆ ಕೊಡುವ ಕೆಲಸ ಮಾಡಿದರೆ ಎಷ್ಟು ಒಳ್ಳೆ ಯದು.. ನಿಮ್ಮಿಂದ ಅದು ಸಾಧ್ಯವೇ  ಸಂಜೀವ್ ಗುರುಜಿ? 

No comments: