ಪಾಪಾ! ಟಿ ಎನ್ ಸೀತಾರಾಂ !!




ಮುಕ್ತಮುಕ್ತ ಧಾರವಾಹಿ ಬಳಿಕ ಸೀತಾರಂ  ಯಾವ ಕಥೆ ಕೈಗೆ ಎತ್ತಿಕೊಳ್ಳುತ್ತಾರೆ ಎನ್ನುವ ಕುತೂಹಲ ವೀಕ್ಷಕರಿಗೆ  ಇತ್ತು. ನಿಜ ಹೇಳಬೇಕು ಅಂದ್ರೆ ಈ ಟಿವಿ ಕನ್ನಡದ ಸೊಬಗನ್ನು ಹೆಚ್ಚು ಮಾಡುವ ವಿಷಯದಲ್ಲಿ ಟಿಎನ್ಎಸ್ ಅವರ ಧಾರವಾಹಿ ಪ್ರಮುಖ ಪಾತ್ರ ವಹಿಸುತ್ತದೆ. ಈಗ ಪ್ರಸಾರ ಆಗುತ್ತಿರುವ ಮಹಾಪರ್ವ ಒಂದೊಳ್ಳೆ ಧಾರವಾಹಿ.

ಒಂದು ವಿಷಯ ಹೇಳೋದಿದೆ ನಮ್ಮ ಸೀತಾರಾಂ ಸರ್ ಗೆ  ಲಾಯರ್ ಆಗಿ ನಟಿಸೋಕೆ ಅಷ್ಟು ಇಷ್ಟವಿಲ್ಲವಂತೆ. ಹಾಗಂತ ಅವರೇ ಹೇಳಿದ್ರು ಒಮ್ಮೆ. ಅವಕಾಶ ಸಿಕ್ರೆ ಆ ಪಾತ್ರ ಮಾಡಲ್ಲ ಅಂತ ಹೇಳಿದ್ರು. ಆದರೆ ಚಾನೆಲ್ ನವರು ಆ ಪಾತ್ರ ಮಾಡಲೇ ಬೇಕು ಅಂತ ಹಟಕ್ಕೆ ಬೀಳೋದ್ರಿಂದ ಲಾಯರ್ ಆಗೋ ಸೌಭಾಗ್ಯ.. !  ಪಾಪಾ! ಟಿ ಎನ್ ಸೀತಾರಾಂ  !!

 
ಕೆಲವು ಧಾರವಾಹಿಗಳು ಅತ್ಯಂತ ಆಸಕ್ತಿದಾಯಕವಾಗಿರುತ್ತದೆ. ಕೆಲವೊಂದು ಕಾಲ ಕಳೆಯುವುದಕ್ಕೆ ಮಾತ್ರ ಲಾಯಕ್ಕಾಗಿರುತ್ತದೆ. ಜೀ ಹಿಂದಿ ವಾಹಿನಿಯಲ್ಲಿ ಏಳು ಗಂಟೆ ಮತ್ತು ರಾತ್ರಿ ಹತ್ತುಗಂಟೆಗೆ ಪ್ರಸಾರವಾಗುವ ಧಾರವಾಹಿಗಳು ಅದ್ಭುತ. ಸರಳ ಕಥೆ , ಸುಂದರ ಪಾತ್ರವರ್ಗ ಎಲ್ಲವೂ ಇಷ್ಟ ಆಗುತ್ತೆ.
ಅದೇ ರೀತಿ ಈ ವಾಹಿನಿಯಲ್ಲಿ ಜೋಧಾ ಅಕ್ಬರ್ ಧಾರವಾಹಿ ಪ್ರಸಾರ ಆಗ್ತಾ ಇದೆ. ಐತಿಹಾಸಿಕ ಧಾರವಾಹಿ ಅದು .. ತುಂಬಾ ಚೆನ್ನಾಗಿದೆ. ಅಲ್ಲಿ ಬಳಸಿರುವ ಕಾಸ್ಟೂಮ್ಸ್ ಸಕತ್.. ಸಾಂಸಾರಿಕ ಕಥಾಹಂದರ ಹೊಂದಿರುವ ಧಾರವಾಹಿಗಳ ನಡುವೆ ಇದು ಇಷ್ಟ ಆಗುವಂತಿದೆ.
 
ಸ್ಟಾರ್ ವಾಹಿನಿಯಲ್ಲಿ ಅತ್ಯಂತ ಆಕರ್ಷಣೆ ಧಾರವಾಹಿ ಮಹಾಭಾರತ  ಮತ್ತು ಮಕ್ಕಳ ಅಡುಗೆ ರಿಯಾಲಿಟಿ ಶೋ.. ಮಕ್ಕಳಿಗೆ ಜ್ಞಾಪಕ ಶಕ್ತಿ ಚೆನ್ನಾಗಿರೋದು ಸಹಜ.. ಆದರೇ ಅಡುಗೆ ವಿಷಯದಲ್ಲೂ ಯಪ್ಪ! 

No comments: