ವಾವ್ ವಾವ್ !



ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಇನ್ನಿಲ್ಲ.. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ದೊರಕಲಿ !



ಸುವರ್ಣ ವಾಹಿನಿಯಲ್ಲಿ ಸಂಪಾದಕೀಯ ಅನ್ನುವ ಪದ ಕಾಣ ಸಿಗ್ತಾ ಇತ್ತು ಕಳೆದ ವಾರ. ತುಸು ಕುತೂಹಲದಿಂದ ನಾನು ಕಾದೆ ಏನಿರ ಬಹುದು ನೋಡುವ ಅಂತ. ಅದರಲ್ಲಿ ಅನಂತ್ ಚಿನಿವಾರ್ ಸಂಪಾದಕೀಯದ ಬಗ್ಗೆ ವಿವರಣೆ ನೀಡುತ್ತ, ವಿಷಯ ವಿಶ್ಲೇಷಿಸಿದರು. ನನಗೆ ಅದರ ಬಗ್ಗೆ ಸ್ವಲ್ಪ ಗೆಸ್ ಇತ್ತು, ಆದರೆ ಆ ಕಾರ್ಯಕ್ರಮ ನೋಡುವವರೆಗೂ ಸುಮ್ಮನಿರುವ ಅಂತ ಕಾದೆ. ನಿಜಕ್ಕೂ ಖುಷಿ  ಕೊಡ್ತು. ಒಂಬತ್ತು ಗಂಟೆಯ ಕಾರ್ಯಕ್ರಮ ಕಾದು ನೋಡುವಂತೆ ಮಾಡಿದವರು ಶಶಿಧರ್ ಭಟ್. ಅವರ ಕಾರ್ಯಕ್ರಮ, ಅದರಲ್ಲೂ ನ್ಯೂಸ್ -ವ್ಯೂಸ್ ಹೆಚ್ಚು ಆಸಕ್ತಿ ಬೆಳೆಸಿತು ಸಾಮಾನ್ಯರಲ್ಲಿ. ಈಗಲೂ ಸುವರ್ಣ ನ್ಯೂಸ್ ಲ್ಲಿ ಒಳ್ಳೆಯ  ಕಾರ್ಯಕ್ರಮ ನೀಡಿದವರ ಪಟ್ಟಿಯಲ್ಲಿ ಶಶಿ ಸರ್ ಸಹ ಸೇರ್ಪಡೆಯಾಗಿದ್ದಾರೆ. ಅನಂತ್ ಅವರೀ ಕಾರ್ಯಕ್ರಮದಲ್ಲಿ ಭಿನ್ನತೆ ಇದೆ ಅನ್ನಿಸಿತು. ಒಂದು ಸಂಗತಿ ಸರ..! ನೀವು ಸಿನಿಮಾದವರ ಕಡೆಗೆ ಹೋಗ ಬೇಡಿ. ಒಮ್ಮೆ ನೀವು ಜನಶ್ರೀ ವಾಹಿನಿಯಲ್ಲಿ  ದರ್ಶನ್ ಅವರನ್ನು ಸಂದರ್ಶಿಸುವಾಗ ಸಾಕಷ್ಟು ಸಿನಿ ಜರ್ನೊಗಳು ಸಿಟ್ಟಾಗಿದ್ದರು. ಛೆ ಇವರಿಗೆ ನೆಟ್ಟಗೆ  ಸಂದರ್ಶನ ಮಾಡೋಕೂ ಬರಲ್ಲ ಅಂತ.. ನೋಡಿ ಹೇಗಿದೆ ಸುದ್ದಿಮನೆಗಳಲ್ಲಿ ಇರುವವರ ಕತೆ .ನಿಮಗೇನು ಇದು ಹೊಸದಲ್ಲ ಬಿಡಿ ಸರಾ... ನೀವು ಅದರ ಭಾಗ ತಾನೆ ;-)

@ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ ಎಫ್ ಐ ಆರ್ ನಿರೂಪಕ ಅಜಿತ್  ಬಗ್ಗೆ ಸಾಕಷ್ಟು ಮಂದಿಗೆ ಇಷ್ಟ ಅನ್ನುವ ಸಂಗತಿಗೆ ಗೊತ್ತಾಗಿದೆ. ಯಾಕಿಷ್ಟ ಅಂದ್ರೆ ಅವರ ಮಾತಿನ ಶೈಲಿ .. ಪದಗಳು ಬಳಸುವ ರೀತಿ.. ಒಂದೆರಡು ದಿನ ಅಜಿತ್ ಕಾಣಲಿಲ್ಲ ಆತ ಬೇರೆ ಕಡೆಗೆ ಹೊರಟರಾ ಅನ್ನುವ ಆತಂಕ ಆಗಿತ್ತು ವೀಕ್ಷಕರಿಗೆ.. ನಿರೂಪಕರಿಗೆ ಇದಕ್ಕಿಂತ ಒಳ್ಳೆಯ ಕಾಣಿಕೆ ಇನ್ನೇನಿದೆ ಅಲ್ವೇ?


ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗುವ ನಚ್ ಬಳಿಯೇ ತೀರ್ಪುಗಾರರು ಮೂರು ಜನ ಇಷ್ಟ ಆಗ್ತಾರೆ. ಶಿಲ್ಪ ಶೆಟ್ಟಿ ಕುಂದ್ರ , ಸಾಜಿದ್ ಮತ್ತು ಟೆರೆನ್ಸ್ . ಸಾಜಿದ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಶೈಲಿ ನನ್ನನ್ನು ತುಂಬಾ ಆಕರ್ಷಿಸಿದೆ. ತುಸು ಜಾಸ್ತಿನೇ ಹಾಸ್ಯ ಬೆರೆಸುವ ಸಾಜಿದ್ ಬಗ್ಗೆ, ಮುದ್ದಾದ ಕನ್ನಡದ ತುಳು ಚೆಲುವೆ ;-) ಶಿಲ್ಪ,ತಮ್ಮ ಯೂನಿಕ್ ಸ್ಟೈಲ್ ಗಳಿಂದ ಗಮನ ಸೆಳೆಯುವ ಟೆರೆನ್ಸ್ ... ಹೆಚ್ಚು ಹೇಳಲ್ಲ..! ಜಾಸ್ತಿ ಬರೆಯೋದಿದೆ!

* ಜೀಹಿಂದಿ ವಾಹಿನಿಯಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮ ಅದ್ಭುತ. ನಿನ್ನೆ ಎಪಿಸೋಡ್ ಸಿಕ್ಕಾಪಟ್ಟೆ ಚೆನ್ನಾಗಿತ್ತು. ಅದರಲ್ಲೂ ಸರ್ಕಸ್ ನ ಜೋಕರ್ ಜೋಡಿ ಮತ್ತು ಕಸರತ್ತು ಆಡಿದ ಮತ್ತೊಂದು ಜೋಡಿ ಸಕತ್ . ಪ್ರಸಾರ ಆಗುವ ಪ್ರತಿಬಾರಿಯೂ ನೋಡಲು ಇಷ್ಟ ಆಗುವಂತಹ ಎಪಿಸೋಡ್ ನಿನ್ನೆಯದು.ಸ್ಪರ್ಧಿಗಳು ಯಶಸ್ವಿಗಾಗಿ ಮಾಡುವ ಪ್ರಯತ್ನ ಅನನ್ಯ. ಈ ಕಾರ್ಯಕ್ರಮ ವಾವ್ ವಾವ್ !



No comments: