ಕಾರ್ಯಕ್ರಮ !


ಯುಗಾದಿ ಹಬ್ಬದಲ್ಲಿ ಉದಯ ನ್ಯೂಸ್ನಲ್ಲಿ ಜಾನಪದ ಮತ್ತು ಸಿನಿಮ ಕಲಾವಿದರ ಸಮ್ಮಿಲನದ ಕಾರ್ಯಕ್ರಮ ಇತ್ತು. ನನ್ನ ಆಲ್ ಟೈಮ್ ಹಾಸ್ಯಕಲಾವಿದ, ಸಂಗೀತ ನಿರ್ದೇಶಕ ಸಾಧುಕೋಕಿಲ ಆ ಕಾರ್ಯಕ್ರಮದ ಮುಖ್ಯ ಭಾಗವಾಗಿದ್ದರು. ಸಿನಿಮಾಹಾಡುಗಳ ಜೊತೆಜೊತೆಗೆ ಅಲ್ಲಿ ಜಾನಪದ ಗೀತೆಗಳು ಸಹ ಇತ್ತು.ತುಂಬಾ ಖುಷಿ ಕೊಟ್ಟ ಕಾರ್ಯಕ್ರಮ. ಸಾಮಾನ್ಯವಾಗಿ ಹಾಸ್ಯದ ಕಾರ್ಯಕ್ರಮಗಳು ಅಂದ್ರೆಅತಿ ಹೆಚ್ಚು ಪ್ರೀತಿ ನನಗೆ . ಕನ್ನಡದಲ್ಲಿ ಉದಯ ಕಾಮಿಡಿ ನೋಡ್ತಾ ಇರ್ತೀನಿ. ಅದರಲ್ಲೂ ವಿಶೇಷವಾಗಿ ಸಾಧು ಕೋಕಿಲ ಅವರಸಿನಿಮಾ ಕ್ಲಿಪ್ಪಿಂಗ್ ಇದ್ರೆ ಖುಷಿ.. ಇನ್ನು ಜಗ್ಗೇಶ್ ಅಹಾ.. ಅದೇ ರೀತಿ ಇನ್ನು ಅನೇಕರಿದ್ದಾರೆ. ಅದನ್ನು ಹೊರತು ಪಡಿಸಿದರೆ ನ್ಯೂಸ್ ಚಾನೆಲ್ಗಳಲ್ಲಿ ಪ್ರಸಾರಿಸುವ ಹಾಸ್ಯ ಕಾರ್ಯಕ್ರಮಗಳನ್ನು ನೋಡ್ತೀನಿ.. ಈ ಹಾಸ್ಯ ಮಾಡುವವರದ್ದು ಒಂದೇ ರೀತಿ ಇರುತ್ತೆ.. ಒಂದರಲ್ಲಿ ಒಬ್ಬರು ಹೇಳಿದ್ದಾರೆ, ಅದನ್ನೇ ಸ್ವಲ್ಪ ತಿರುಗಿಸಿ ಮತ್ತೊಂದು ಕಾರ್ಯಕ್ರಮದಲ್ಲಿ ಹೇಳ್ತಾರೆ... ಅದೇ ರೀತಿ ಮತ್ತೊಂದು ಕಾರ್ಯಕ್ರಮದಲ್ಲಿ ಇನ್ನೊಬ್ಬರು.. ಒಟ್ಟಾರೆ ಇವರುಗಳು ಭೂಮಿ ಗುಂಡಗಿದೆ ಅಂತ ಮತ್ತೆ ಮತ್ತೆ ಸಾಬೀತು ಮಾಡಿಬಿಡ್ತಾರೆ ;-)  ತೆಲುಗು ಸಹ ನಾನು ಆಗಾಗನೋಡ್ತಾ ಇರ್ತೀನಿ... ಅದರಲ್ಲಿ ಜೆಮಿನಿ ಕಾಮಿಡಿ ಚಾನೆಲ್ ಹೆಚ್ಚು ವೀಕ್ಷಿಸೊದು... ಮಜಾ ಬರುತ್ತೆ ಹಾಸ್ಯ ನಟರು ನಟಿಸಿರುವ ದೃಶ್ಯಗಳನ್ನು ವೀಕ್ಷಿಸುವಾಗ ...

ಕಳೆದವಾರ  ವಿ ಚಾನೆಲ್ ನೋಡುವಾಗ ಒಂದು ಕಾರ್ಯಕ್ರಮ ತುಂಬಾ ಗಮನ ಸೆಳೆಯಿತು.ಹೀರೋಸ್ ಅಂತ ಅದರ ಹೆಸರು. .. ಲೈಂಗಿಕ ಕಿರುಕುಳ ದಂತಹ   ಸಮಸ್ಯೆ, ಅಂತಹ ಹರಾಸ್ ಮೆಂಟ್ ಮತ್ತು  ಅಬ್ಯುಸ್ ನಂತಹ ಸಮಸ್ಯೆಗಳಿಂದ ಹೆಣ್ಣು ಯಾವರೀತಿ ತನ್ನನ್ನು ತಾನು ರಕ್ಷಿಸಿ ಕೊಳ್ಳುತ್ತಾಳೆ  ಎನ್ನುವುದು ಇದರ ಮುಖ್ಯ ಅಂಶ.. ಟೀನಿಗಳ ಕಾರ್ಯಕ್ರಮ. ಕಿವಿ ಕೇಳದ ಮತ್ತು ಮಾತು ಬರದ ಹುಡುಗಿಯೊಬ್ಬಳನ್ನು ಆಕೆಯ ಪಕ್ಕದ   ಮನೆಯಾತ, ಅದರಲ್ಲೂ ಬ್ರಹ್ಮಚಾರಿ, ಅದರಲ್ಲೂ ಆ ಹುಡುಗಿಯ ತಾಯಿಯನ್ನು ಮದುವೆಆಗ್ತಿನಿ ಎಂದು ಮಾತು  ಈ ಹುಡುಗಿಯ ದೇಹದ ರುಚಿ ನೋಡಲು ಪ್ರಯತ್ನಿಸುತ್ತಿದ್ದ ..ಇದನ್ನು ಆಕೆ ಎದುರಿಸಿದ್ದು.. ಅದನ್ನು ಜಗತ್ತಿಗೆ ತೋರಿದ್ದು .. ಎಲ್ಲವನ್ನು ಅದ್ಭುತವಾಗಿ ಪಿಕ್ಚರೈಸ್ ಮಾಡಿದ್ದರು... ಮತ್ತೆ ಎಂದಾದರು ಪ್ರಸಾರ ಮಾಡಿದರೆ ತಪ್ಪದೆ ನೋಡಿ.. ಆ ಮೂಕ ಹುಡುಗಿಯ ಪಾತ್ರ  ಮಾಡಿದ ಹೆಣ್ಣುಮಗಳ ನಟನೆ.. ನಿಜಕ್ಕೂ ಆ ಕಾರ್ಯಕ್ರಮ ಅತ್ಯಂತ ಆತಂಕ ಮತ್ತು ಗಾಬರಿಯಿಂದ .. ನೋಡಿದ್ದೇ..ನಿಜಕ್ಕೂ  ತಪ್ಪದೆ ನೋಡಲೇ ಬೇಕಾದ ಕಾರ್ಯಕ್ರಮ! 

No comments: