ಫೇಮಸ್ ...ಫೇಮಸ್ ..!


ಬಿಗ್ ಬಾಸ್ ನಲ್ಲಿ ಅತ್ಯಂತ ಹೆಚ್ಚು ಖುಷಿ ಕೊಟ್ಟ ಸಂಗತಿ ಅಂದ್ರೆ ಕ್ರೇಜಿಸ್ಟಾರ್   ರವಿಚಂದ್ರನ್ ಅವರ ಆಗಮನ. ಅತಿ ಹೆಚ್ಚು ಇಷ್ಟ ಆಗುವುದು ರವಿ ಮಾಮನಹೊಸತನಗಳಿಂದ. ಏನೇ ಆದರು ಕನ್ನಡದಲ್ಲಿ ಹೊಸ ಆಯಾಮ ತಂದ ವಿಶಿಷ್ಟ ಪ್ರತಿಭೆ.ಆ ಕಾರ್ಯಕ್ರಮದಲ್ಲಿ ಅದರಲ್ಲೂ ರವಿಚಂದ್ರನ್ ಅವರ ಮಾತುಗಳು ಮನಸ್ಪರ್ಶಿ ಆಗಿತ್ತು. ಅತ್ತಿತ್ತ ಅಲುಗಾಡದೆ ಅವರ ಮಾತುಗಳನ್ನು ಕೇಳುವಂತಾಯಿತು.

@ಜೀ ಹಿಂದಿ ವಾಹಿನಿಯಲ್ಲಿ ಈಗ  ಸಿನೆ ಸ್ಟಾರ್ ಕಿ  ಖೋಜ್ ಎನ್ನುವ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ  ಪ್ರಸಾರ ಆಗ್ತಾ ಇದೆ .ಸಾಮಾನ್ಯವಾಗಿ ನನಗೆ ಯಾವುದೇ ಕಾರ್ಯಕ್ರಮ ಆಗಿರಲಿ ಆಡಿಶನ್ ನೋಡೊಕೆ ಇಷ್ಟ ಆಗುತ್ತೆ..ಯಾಕೆ ಅಂದ್ರೆ ಅಲ್ಲಿ ಅಪ್ಪಟ ಪ್ರತಿಭೆಗಳು, ಕನಸು ಹೊತ್ತ ಪ್ರತಿಭೆಗಳು ಅವರ ಕಾತುರ ಎಲ್ಲವು ಇಷ್ಟ ಆಗುತ್ತೆ!
ಸೊನಾಲಿ ಬೇಂದ್ರೆ, ಪರಿಣಿತಿ ಚೋಪ್ರ, ಚಂದ ಇದೆ. ನಿಜಕ್ಕೂ ಚಂದ ಇದೆ.. ನೋಡುವ ಹಾಗು ನೋಡಬಹುದಾದ ಕಾರ್ಯಕ್ರಮ ಇದು!
@ ಸುವರ್ಣ ವಾಹಿನಿಯಲ್ಲಿ ಅವನು ಮತ್ತೆ ಶ್ರಾವಣಿ ಧಾರಾವಾಹಿಯಲ್ಲಿ ಜಯಲಕ್ಷ್ಮಿ ನಟನೆ ನೋಡುವಾಗ  ಆಕೆಯ ಮುಂದೆ ಹಿರಿಯ ಕಲಾವಿದ ನಾಗರಾಜ್ ಮೂರ್ತಿ ಅವರು ಸಪ್ಪೆ ಆಗಿ ಬಿಟ್ಟಿದ್ದಾರೆ. ಈ ಬಗ್ಗೆ ಅವರ ಧರ್ಮಪತ್ನಿ ಮತ್ತು ನಮ್ಮ ಮೇಡಂ  ಅವರು ನೋಡೆಮಾ ನಾಗರಾಜ್ ಮೂರ್ತಿ ಜಯಲಕ್ಷ್ಮಿಯಿಂದ ಫೇಮಸ್ ಆದರು ಅಂತ ನಕ್ರು ಇತ್ತೀಚಿಗೆ  ಮಾತನಾಡುವಾಗ ನಕ್ಕು ಹೇಳಿದ್ರು.ಭದ್ರ ಮೇಡಂ ಅಂತ ಹೇಳೋಕೆ ಮುನ್ನವೇ ಅವರೆತಮ್ಮ ಪತಿಯನ್ನು ರೇಗಿಸಿದ ಕಥೆ ಸಹ ಹೇಳಿನಕ್ರು. ಹೀಗೆ ಆ ಧಾರಾವಾಹಿಯಲ್ಲಿ ಕಥೆಗಿಂತ ಇಂತಹ ಅನೇಕ ಸಂಗತಿಗಳು  ಬರುತ್ತೆ. 

ಇತ್ತೀಚಿಗೆ ಅನೇಕ ಕಾರಣಗಳಿಂದ ಬ್ಲಾಗ್ ಬರೆಯೋಕೆ ಪುರುಸೊತ್ತು ಆಗ್ತಾ ಇತ್ತ. ನನ್ನ ಎಪ್ಭಿ ಮಿತ್ರರಾದ ಗುರುಮೂರ್ತಿ ಅವರು ವಾರಕ್ಕೊಮ್ಮೆ ಆದರು ಬರೀರಿ ಬ್ಲಾಗ್ ನಲ್ಲಿ ಓದೋಕೆ ಇಷ್ಟ ಎನ್ನುವ ಮಾತನ್ನು ಹೇಳಿದರು ... ಬಿಡುವು ಮಾಡಿಕೊಂಡು  ಬರೆಯುವ ಉತ್ಸಾಹದಲ್ಲಿ ಕೂತಿದ್ದೇನೆ...
ನಾನು ಬರೆದದ್ದು ಆಸಕ್ತಿಯಿಂದ  ಓದುವ ಎಲ್ಲರಿಗು ಥ್ಯಾಂಕ್ಸ್.. ಇನ್ನೇನು ತಾನೇ ಹೇಳೋಕೆ ಸಾಧ್ಯ :-) 



No comments: