ನಿಗೂಢ

Image result for yellow  color flowers
ಬದುಕೆಷ್ಟು ವಿಚಿತ್ರ ಎಂದರೆ ನಾಳೆ ಎನ್ನುವುದರ ಬಗ್ಗೆ ಯಾರಿಗೂ ಗೊತ್ತೇ ಇರಲ್ಲ. ಇಂದು ಮಾತ್ರ ನಮ್ಮದು ನಾಳೆ ನಮ್ಮದಲ್ಲ .ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂತ ಅಂದ್ರೆ, ಭಾರತದ ಪ್ರತಿಷ್ಠಿತ ರಿಯಾಲಿಟಿ ಶೋಗಳಲ್ಲಿ ಒಂದಾದ  ಜೀ ಹಿಂದಿ ವಾಹಿನಿಯ ಡ್ಯಾನ್ಸ್ ಇಂಡಿಯ ಡ್ಯಾನ್ಸ್ ನಲ್ಲಿ ಮುದಸ್ಸರ್, ಪುನೀತ್ , ಗೇತಿ ,ಚಶ್ಮೆ ಬಹದ್ದೂರ್  ದಾದ ಮಿಥುನ್, ಜಯ್ ಇವರೆಲ್ಲರ ಜೊತೆ ಪ್ರತಿಭಾವಂತ ಸ್ಪರ್ಧಿಗಳು. 
ಅವರ ಪ್ರತಿಯೊಂದು ಷೋ ತಪ್ಪದೆ ನೋಡೋಕೆ ಇಷ್ಟ ಆಗುತ್ತೆ. ತುಂಬಾ ಖುಷಿ ಕೊಡುವ ಕಾರ್ಯಕ್ರಮ ನನಗೆ. ಆದರೆ ಆರಂಭಿಕ ಹಂತದಲ್ಲಿ ಫಿಲಾಸಫರ್   ಆಗಿರೋದು ಯಾಕೆ ಅಂದ್ರೆ ಮುದಸ್ಸರ್ ತನ್ನ ಗುಂಪಿಗೆ ಹರೂನ್  ರಾವ್ ಎನ್ನುವ ಪ್ರತಿಭೆಯನ್ನು ಬಯಸಿದ್ದರು. ಆದರೆ ಆಟ ಪುನೀತ್ ಪಾಲಾದರು. ಆದರೆ  ಮುದಸ್ಸರ್ ಗುಂಪಿಗೆ ವಿಕ್ಕಿ ಎನ್ನುವ ಮುಗ್ಧ ಮಾನವ ಎಂಟ್ರಿ ಆದರು. ಅವರ ಬಗ್ಗೆ ಹೆಚ್ಚೇನೂ ಹೋಪ್ಸ್ ಇರಲಿಲ್ಲ ಮುದಸ್ಸರ್ ಗೆ . ವಿಶೇಷ ಅಂದ್ರೆ ಇಡೀ ಟೀಮ್ ನಲ್ಲಿ ಮೂರು ಜಡ್ಜ್ಗಳ ಸ್ಪರ್ಧಿಗಳು ಸೇರಿದಂತೆ ಹೆಚ್ಚು ಉಜ್ವಲವಾಗಿದ್ದು ಹರೂನ್ , ಸೊಹೇಲ್ ಮುಂತಾದವರು. ಆದರೆ ವಿಕ್ಕಿ ಕಷ್ಟ ಪಟ್ಟು ಗೆಲುವಿನ ಕಡೆಗೆ ನಡೆಯಲು ಆರಂಭಿಸಿದ್ದಾರೆ. ನಾಳೆ ಗೆಲುವು ಯಾರಿಗೆ  ಎನ್ನುವುದು ಗೊತ್ತಿಲ್ಲ. ಆದರೆ  ವಿಷಾದಕರ ಸಂಗತಿ ಎಂದರೆ ಹರೂನ್ ಪ್ರಾಕ್ಟೀಸ್ ಮಾಡುವ ಸಮಯದಲ್ಲಿ ಗಾಯ ಗೊಂಡಿದ್ದಾರೆ.ಅವರ ಈ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಇದು  ಅತಿ  ನೋವಿನ ಸಂಗತಿ. ಯಾರಿಗೆ ಆಗಲಿ ನಾಳೆ ಎನ್ನುವುದು ಅತ್ಯಂತ ನಿಗೂಢ !

@ಕಲರ್ ವಾಹಿನಿಯಲ್ಲಿ ಕಾಮಿಡಿ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಎಲ್ಲ ಪಾತ್ರಗಳು ಇಷ್ಟ ಆಗುತ್ತೆ. ಆದರೆ ಗುತ್ತಿ ಮತ್ತು ಫಲಕ್ ಪಾತ್ರಧಾರಿಗಳು ಸ್ವಲ್ಪ ಜಾಸ್ತಿನೇ ಭಿನ್ನ. ಗುತ್ತಿ ಪಾತ್ರಧಾರಿ ಅದೆಷ್ಟು ಪ್ರತಿಭಾವಂತ. ಅವರ ಮಾತಿನ  ಶೈಲಿ, ನಟನೆ ಕೆಲವು ಬಾರಿ ಪದಗಳು ಸಿಗುತ್ತಿಲ್ಲ :-) ಇವೆಲ್ಲದರ ಜೊತೆ ಸಿದ್ದು ಪಾಜಿ ಅವರ ಪಗಡಿಗೆ ಬಳಸುವ ಬಟ್ಟೆಗಳ ಬಗ್ಗೆ ಸಹ ಸಕತ್ ಆಕರ್ಷಣೆ  ನನಗೆ :-)
<<
ಕನ್ನಡದಲ್ಲೂ  ಕಾಮಿಡಿ ಕಾರ್ಯಕ್ರಮ ಕಲರ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕೀಸ್ ಹೆಸರಲ್ಲಿ ಪ್ರಸಾರ ಆಗ್ತಾ ಇದೆ. ಸೃಜನ್ ಲೋಕೇಶ್ ಅವರ ಮುಖ್ಯ ಭೂಮಿಕೆಯಲ್ಲಿ ಸ್ಟೈಲಿಶ್  ಡೈರೆಕ್ಟರ್  ಇಂದ್ರಜಿತ್ ನಗುವಿನಲ್ಲಿ ಮುನ್ನಡೆಯುತ್ತಿದೆ. ನನಗೆ ಎಲ್ಲರಿಗಿಂತ ಇಷ್ಟ ಆಗುವ ಪಾತ್ರ ಮಿಮಿಕ್ರಿ ಗೋಪಿ ಅವರದ್ದು. ಎಷ್ಟೊಂದು ಪ್ರತಿಭಾವಂತರು. ಸಕತ್ ಇಷ್ಟಪಟ್ಟು ವೀಕ್ಷಿಸುವಂತೆ ಇರುತ್ತದೆ ಅವರ ನಟನೆ. 

No comments: