ಓ ಮೈ ಗಾಡ್ ಬಂದೆ ಬಿಡ್ತು..ಹೌದು ಸ್ವಾಮಿ !


Image result for orange blue flowersಮತ್ತೊಂದು ಕನ್ನಡ  ಬಿಗ್ ಬಾಸ್ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳು, ವಾಹಿನಿಗಳು, ವಾಟ್ಸಪ್ಗಳು, ಅದರ ಗ್ರೂಪ್ ಗಳು, ಮಂದಿಗಳು- ಅವರ ಮಾತುಗಳು, ಎಲ್ಲ ಕಡೆ ಬಿಗ್ ಬಿಗ್ ಬಿಗ್ ಬಾಸ್ ಹೌದು ಸ್ವಾಮಿ !
ಕನ್ನಡ ಬಿಗ್ ಬಾಸ್ ಆರಂಭ ಆಗುತ್ತೋ ಇಲ್ಲವೋ ಎಂದು ಬಿಗ್ ಬಾಸ್ ಅಭಿಮಾನಿಗಳು ಕಾದಿದ್ದೆ ಬಂತು.. ಓ ಮೈ ಗಾಡ್ ಬಂದೆ ಬಿಡ್ತು..ಹೌದು ಸ್ವಾಮಿ !

ಕಿಚ್ಚ ಸುದೀಪ್ ಆ ಕಾರ್ಯಕ್ರಮದ ಅತಿ ಮುಖ್ಯ ಆಕರ್ಷಣೆ ಎನ್ನುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಯಾಕೇಂದ್ರೆ ಅವರಿಗಾಗಿ ಸಾಕಷ್ಟು ಜನರು ಕಾದಿರುತ್ತಾರೆ. ಅವರ ಮಾತು, ಬಾಡಿ ಲಾಂಗ್ವೇಜ್ , ಕೌನ್ಸಿಲಿಂಗ್  ಮಾಡುವ ಪರಿ, ಆ ಭಾಷೆ ಎಲ್ಲರಿಗೂ ಇಷ್ಟವಾಗುತ್ತದೆ. ಇಷ್ಟ ಆಗುವಂತೆ ಮಾತಾಡುತ್ತಾರೆ.. ಹೌದು ಸ್ವಾಮಿ..!
ಅವರು ಒಳ್ಳೆಯ ನಟ, ಕಲಾವಿದ, ಕ್ರಿಕೆಟ್ ಆಟಗಾರ, ಹಾಡುಗಾರ, ನಿರೂಪಕ  , ಪಕ್ಕ ಮಜಾ ತೆಗೆದುಕೊಳ್ಳುವ ಆಸಾಮಿ . ಸಾಮಾನ್ಯವಾಗಿ ಒಂದು ಕಾರ್ಯಕ್ರಮ ಯಶಸ್ಸು ಪಡೆಯ ಬೇಕಾದರೆ ಅನೇಕ ಕಾರಣಗಳು ಇರುತ್ತವೆ, ಅದರಲ್ಲಿ ನಿರೂಪಕನ ಶೈಲಿಯು ಹೆಚ್ಚಿನ ಪ್ರಾಧಾನ್ಯತೆ ಪಡೆದಿರುತ್ತದೆ. ಕಿಚ್ಚ ಮಾತ್ರ ಈ ಕಾರ್ಯಕ್ರಮಕ್ಕೆ ಸೂಟಬಲ್ ಅನ್ನುವುದು ಪದೇಪದೇ ನಿರೂಪಿತವಾಗಿದೆ. ಕಿಚ್ಚ ಅಂದ್ರೆ ಸುಮ್ಮನೆ ಅಲ್ಲ ಹೌದು ಸ್ವಾಮಿ !


ಬಿಗ್ ಬಾಸ್ ನಲ್ಲಿ ಬಾಸ್ಗೆ ಬಾಸ್ ಆಗಿರೋದು ಅಂದ್ರೆ ಹುಚ್ಚ ವೆಂಕಟ್. ಏಕಾಏಕಿ ಆತ ತನ್ನ ಇಮೇಜ್ ಬದಲಾಯಿಸಿಕೊಂಡ ಸ್ಪರ್ಧಿ. ಅವರ ಬಗ್ಗೆ ಎಲ್ಲ ಕಡೆ ಮಾತು ಕಥೆ . ನನ್ನ ಸೋದರಳಿಯಂದಿರಾದ ವಿಶ್ವಾಸ್, ವಿಜೇತ್ ಪೃಥ್ವಿ , ಪವನ್ ,ಸೋದರ ಸೊಸೆಗಳಾದ  ಸಿಂಧು, ಶ್ರಾವಣಿ, ಅಕ್ಕಂದಿರ ಮಕ್ಕಳಾದ ಕಲ್ಪ, ಶರತ್ ಎಲ್ಲರು ಹುಚ್ಚ ವೆಂಕಟ್ ಫ್ಯಾನ್ ಗಳು. ದಿನಕ್ಕೆ ಅದೆಷ್ಟು ಪೋಸ್ಟ್ ಮಾಡ್ತಾರೆ ಹುಚ್ಚ  ಬಗ್ಗೆ ಅಂದ್ರೆ ಅದನ್ನು ಓದುವುದೇ ಒಂದು ಕೆಲಸ. ವಾಟ್ಸಪ್   ಗೆ ಈಗಂತೂ ಸಕತ್ ಜೀವ ಬಂದಿದೆ. ನಮ್ಮ ವಿಜ್ಜು ಅಂತೂ ಅತ್ತೆ ಹುಚ್ಚ ವೆಂಕಟ್ ಅಂತ ದಿನಕ್ಕೆ ಅದೆಷ್ಟು ಬಾರಿ ಜಪಿಸಿ ಹುಚ್ಚು ಹಿಡಿಸಿಕೊಂಡಿದ್ದಾನೆಂದರೆ ಲೆಕ್ಕವೇ ಸಿಗುತ್ತಿಲ್ಲ :-)
courtesy :  Pavan Ghatt

ಕಿಚ್ಚ  ನೋಡಿದರಲ್ಲ ನಿಮ್ಮ ಹುಚ್ಚಿಗೂ ಈ ಹುಚ್ಚಿಗೂ ಇರುವ ಅಲೆ ;-)
ಏನೇ ಹೇಳಿ ಈ ಬಿಗ್ ಬಾಸ್ ನಲ್ಲಿ ಇನ್ನು ಏನೇನು ಹುಚ್ಚ ಮಾಡ್ತಾರೋ ಅನ್ನೋಕುತೂಹಲ ನಮಗೆ.. ಹೌದು ಸ್ವಾಮಿ !
ಇದರ ಮತ್ತೊಂದು ಆಕರ್ಷಣೆ ಅಂದ್ರೆ  ಶ್ರುತಿ ಮತ್ತು ಪೂಜಾ. ಒಂದರ್ಥದಲ್ಲಿ ಇವರಿಬ್ಬರು ತ್ರಿಭುಜದಂತೆ ಒಂದು ಅಂಶದಲ್ಲಿ ಭೇಟಿ ಆಗ್ತಾರೆ.ಶ್ರುತಿಗೆ ಆದಂತೆ ಪೂಜಾ ಬದುಕಲ್ಲಿ ಆಗಬಾರದು. ಅದೇ ನಮ್ಮ ಹಾರೈಕೆ.
ಇದರಲ್ಲಿ ಶ್ರುತಿಯ ವ್ಯಕ್ತಿತ್ವ ತುಂಬಾ ಆಕರ್ಷಣೆ ಉಂಟು ಮಾಡಿದೆ. ಆಕೆಯ ಗಾಂಭೀರ್ಯ ಸಹ.. ಹೌದು ಸ್ವಾಮಿ !

No comments: