ಉಲ್ಲಾಸ

Image result for orange flower

ಪಿ ಮಹಮ್ಮದ್ ಕಿಚ್ಚ ಮತ್ತು ಹುಚ್ಚ ಒಟ್ಟಿಗೆ ಸಿಕ್ಕರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದರು 'ಬಿಬಾ'ಭಿಮಾನಿಗಳು:-)

ಹೀಗೆಂದು ಪ್ರಸಿದ್ಧ ಕಾರ್ಟೂನಿಸ್ಟ್ ಮಹಮದ್ ಸರ್ ಹೇಳಿದ್ದಾರೆ. ಇಂತಹ ರಿಯಾಲಿಟಿ ಶೋಗಳ ಬಗ್ಗೆ ಬೇಸರ ಹೊಂದಿರುವವರು ಈ ಬಗ್ಗೆ ಏನು ಹೇಳ್ತಾರೋ ಗೊತ್ತಿಲ್ಲ, ಆದರೆ  ಹುಚ್ಚ ವೆಂಕಟ್ ರಂತಹ ಅತಿರೇಕದ  ವ್ಯಕ್ತಿತ್ವಗಳ  ನಡುವೆ ದಿನ ಕಳೆಯೋದು ಇದ್ಯಲ್ಲ, ಅದು ಬದುಕಿನ ಅತಿ ದೊಡ್ಡ ಸವಾಲ್. 
ಇಂತಹ  ಸವಾಲ್ ಹಿಂದಿ ಬಿಗ್ ಬಾಸ್ ನಲ್ಲಿ ಸಹ  ಇಮಾಂ ಸಿದ್ಧಿಕಿಯಿಂದ ಆಗ ಇದ್ದ ಸ್ಪರ್ಧಿಗಳು ಎದುರಿಸಿದ್ದರು. ಆತನ ಅತಿರೇಕದ ವರ್ತನೆ ಮತ್ತು ಆ ವಿಚಿತ್ರವಾದ ರೀತಿ ! ಅದೆಲ್ಲಾದಕ್ಕಿಂತ ಖೇದ ಒಂದು ರೀತಿ ಹೇವರಿಕೆ ಎನ್ನಿಸಿದ್ದು ಸಿದ್ಧಿಕಿ ಫೋಟೋಗೆ ಶೋ ನಿಂದ ಹೊಡೆಸಿದ್ದು. ಆಗ ಸ್ಪರ್ಧಿಗಳಿಗೆ ಆತನ ಮೇಲೆ ಇದ್ದ ಆಕ್ರೋಶ, ಅಸಹ್ಯ, ಬೇಸರ ಪ್ರಕಟ ಮಾಡಲು, ಬಿಗ್ ಬಾಸ್ ಮನೆಯರು ಕಂಡುಕೊಂಡ ಮಾರ್ಗ ಅದು. ಹುಚ್ಚ ವೆಂಕಟ್  ವರ್ತನೆ ನೋಡಿದ್ರೆ ಆತನ ಚಿತ್ರಕ್ಕೂ ಅದೇ ಕಥೆ ಆಗುತ್ತಾ ?

Image result for orange flower
ಹಿಂದಿ ಬಿಗ್ ಬಾಸ್  ಕಲರ್ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ. ಈಗಾಗಾಗಲೇ ಇಬ್ಬರು ಮಾಜಿ ಪ್ರೇಮಿಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ರುಪಾಲ್ ಜೊತೆಗಾತಿ ವೀರ ಪಾತ್ರಧಾರಿ ಹುಡುಗಿ ಉಳಿದದ್ದು ಆಶ್ಚರ್ಯ. ಮತ್ತೊಂದು ಸಂಗತಿ ನನಗೆ  ಆಕೆ ಕೂದಲು ಸಕತ್ ಇಷ್ಟ ಆಯ್ತು. ಅಷ್ಟು ಉದ್ದ.. ವಾವ್ 
ಈಗ ಮತ್ತೆ ಉದ್ದ ಕೂದಲು, ಉದ್ದ ಜಡೆ ಫ್ಯಾಶನ್ ಆರಂಭವಾಗಿದೆಯೇನೋ.. ಬಿಡಿ ಅವೆಲ್ಲ ಸಣ್ಣಪುಟ್ಟ ಸಂಗತಿಗಳು.
ಆದರೆ ಬಿಗ್ ಬಾಸ್ ಮನೆಯ ವಾರ್ ನ್ನು  ಒಂದು ಕಡೆ ನಿಲ್ಲಿಸುವ ನಿರೂಪಕ ಸಲ್ಮಾನ್ ಖಾನ್ ಈ ಬಾರಿ ಅದ್ಯಾಕೋ ಹೆಚ್ಚು ಖುಷಿ ಖುಷಿಯಾಗಿ  ಜನರ ಮುಂದೆ ಬಂದಿಲ್ಲ.
ಜನರನ್ನು ರಂಜಿಸುವಾಗ ನಮ್ಮ ವೈಯಕ್ತಿಕ ಸಮಸ್ಯೆಗಳು, ಬೇಸರಗು ಎಷ್ಟೇ ಇದ್ದರೂ ಸಹಿತ ಅದರಿಂದ  ಹೊರಬಂದು ಸಾರ್ವಜನಿಕವಾಗಿ ಮುಖವಾದ ತೊಡಬೇಕು. ಸಲ್ಮಾನ್ ಅದ್ಯಾಕೋ ಈ ಬಾರಿ ! ಮುಂದಿನ ಎಪಿಸೋಡ್ ಗಳಲ್ಲಿ  ಸಲ್ಮಾನ್ Boy  ಹೆಚ್ಚು ಉಲ್ಲಾಸವಾಗಿ ಬರಲಿ.
ಮುಖ್ಯವಾಗಿ ಮತ್ತೊಂದು ವಿಷ್ಯ  ಕನ್ನಡ -ಹಿಂದಿ ಎರಡು ಬಿಗ್ ಬಾಸ್ ಒಟ್ಟಿಗೆ ಆರಂಭವಾಗಿ ಸ್ವಲ್ಪ ಕಷ್ಟ ಆಗಿದೆ. ಎರಡರ ನಡುವೆ ಕನಿಷ್ಠ ಎರಡು ತಿಂಗಳು ಅಥವಾ ಮೂರು ತಿಂಗಳು  ಅಂತರ ಇದ್ರೆ ಕಾರ್ಯಕ್ರಮ  ಗಮನ ಕೊಟ್ಟು ನೋಡ ಬಹುದು. 


@ ಟೀವಿ ನೈನ್ ವಾಹಿನಿಯಲ್ಲಿ ಹುಚ್ಚ ವೆಂಕಟ್ ಬಗ್ಗೆ  ಕಾರ್ಯಕ್ರಮ ಪ್ರಸಾರ ಮಾಡಿತು. ಅವರ ತಾಯಿ ಮರಣಿಸಿದ ಬಳಿಕ ಆತನಿಗೆ  ಮಾನಸಿಕ ಸಮಸ್ಯೆ ಉಂಟಾಯಿತಂತೆ. ಹಾಗಂತ ಅವರ ಅಣ್ಣ , ಟೀವಿ ಧಾರವಾಹಿ ಕಲಾವಿದ  ಕುಶಾಲ್ ಅವರು ಹೇಳಿದರು. ಸಮಸ್ಯೆ ಇದೆ ಎಂದಾಗ ಪರಿಹಾರದತ್ತ ಕೈ ಚಾಚುವುದು ಒಳ್ಳೇದಲ್ವ. ಈಗ ಎಲ್ಲರು ಹುಚ್ಚ ವೆಂಕಟ್ ಕಡೆಗೆ  ಕರುಣೆ ತೋರಿಸೋದೇನು, ಬೈಯ್ಯೋದೇನು, ಹೊಗಳೋದೇನು, ಫ್ಯಾನ್ ಆಗೋದೇನು ??
ಆದರು ನಿನ್ನೆ ಆತ ಕಲಾವಿದ ಆನಂದ್ ಅವರ ಮಿಮಿಕ್ರಿ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ರೀತಿ  ಬಹಳ ಅಸಹ್ಯ. ಹೆಣ್ಣುಮಕ್ಕಳು ಬಗ್ಗೆ ಗೌರವ, ಅವರು ಇಂತಹದ್ದೇ ಬಟ್ಟೆ ಧರಿಸ ಬೇಕು, ಅದೂ ಇದೂ ಅಂತ ಡೈಲಾಗ್ ಹೊಡೆಯೋರ   ಬಗ್ಗೆ ಸದಾ ಅನುಮಾನದ ದೃಷ್ಟಿ ನನಗೆ. ಪಾಪ ಅಲ್ಲಿರುವ ಹೆಣ್ಣುಮಕ್ಕಳನ್ನು ಬಿಗ್ ಬಾಸ್ ರಕ್ಷಿಸ ಬೇಕು !
Image result for orange flower


@ ಎಲ್ಲ ಗಲಿಬಿಲಿ ಕಾರ್ಯಕ್ರಮಗಳ ನಡುವೆ ಮನಸೋಲ್ಲಾಸ ಹೆಚ್ಚಿಸುವ ಹಾಸ್ಯ ಧಾರವಾಹಿ ಸ್ಟಾರ್ ವಾಹಿನಿಯ ಸುಮಿತ್ ಸಂಭಾಲೆಗಾ ದಲ್ಲಿನ ಎಲ್ಲ ಪಾತ್ರಗಳು ಅದ್ಭುತ . ಸುಮಿತ್, ಮಾಯಾ,ಮಮ್ಮಿಜಿ, ಪಾಪಾಜಿ, ಸುಮಿತ್ ಅಣ್ಣನ ಪಾತ್ರಧಾರಿ ಪ್ರತಿಯೊಬ್ಬರೂ...ಹಾಗು ಅಂಡ್ ಟೀವಿಯ ಭಾಭಿಜಿ ಘರ್ ಪೆ ಹೈ ಧಾರವಾಹಿ  ನಿಜಕ್ಕೂ ಚೆನ್ನಾಗಿದೆ. ಫುಲ್ ಮನೋರಂಜನೆ. ಪಾತ್ರಗಳು ಅಷ್ಟೇ ಉಲ್ಲಾಸ ಉತ್ಸಾಹ ನೀಡುವಂತಹದ್ದು. 

No comments: