ಭದ್ರ.. ;-)


ಕನ್ನಡ ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ 3 ರಿಯಾಲಿಟಿ ಷೋ ಕೊನೆ ದಿನಗಳನ್ನು ಸಮೀಸ್ತಾ ಇದೆ.. ಒಂದು ಕಡೆ ಯಾರು ಆ ಥೈಲಿ ಎತ್ತಿಕೊಂಡು ಹೋಗ್ತಾರೋ ಅಂತ ಒದ್ದಾಡುವ ಒಂದಷ್ಟು ಮಂದಿ.. ಇನ್ನೊಂದು ಕಡೆ ಶ್ರುತಿ ಬಗ್ಗೆ ನಾಟಕ  ಆಡ್ತಾ ಇದ್ದಾರೆ  ನಾಟಕ ಅನ್ನುವ ಜನಾ. ವಿಶೇಷ ಅಂದ್ರೆ ಶ್ರುತಿ ಏನೇ ಆಗಿರಲಿ ಆಕೆ ತಾಯಿ ಅನ್ನೋದು ಸತ್ಯ.. ಆಕೆಯು ತನ್ನ ಮಗಳನ್ನು ಕಂಡಾಗ ಸಹ ದುಃಖಿಸದೆ,ಭಾವನೆಗಳನ್ನು ತೋರಿಸದೆ ಇದ್ದಿದ್ದರೆ ಆಗ ಸಹ ಮಂದಿ ಅದನ್ನು ನಾಟಕ ಅಂತಾನೆ ಹೇಳ್ತಾ ಇದ್ರೂ. ಕನ್ನಡದ  ಹೆಣ್ಣುಮಗಳು ಆಕೆ.. ಆಕೆಯು ತನ್ನ ಬದುಕಲ್ಲಿ ಆದ , ಎದುರಿಸಿದ ಕಷ್ಟಗಳು, ಬೇಸರಗಳನ್ನು ಯಾರ ಮುಂದೇನೂ ಪ್ರಲಾಪಿಸ್ತಾ ಇಲ್ಲ.. ಅಳು ಬಂದ್ರು ತಡೆದು ಕೊಳ್ಳುವ ಮನಸ್ಥಿತಿ ಆಕೆ ಬಂದಿದೆ ಅಂದ್ರೆ ಅದಿನ್ಯಾವ ಪರಿ ಆಕೆಯ ಹೃದಯ ಒಡೆದಿರಬಹುದು ?.. ನಾಟಕ ಮಾಡೋರು ಎಷ್ಟು ಮಾಡೋಕೆ ಸಾಧ್ಯ.. ? ಮಗಳನ್ನು ನೋಡಿ ಅತ್ರು ನಾಟಕ ಅಂತಾರಲ್ಲ ಮಂದಿ..!
ಏನೇ ಹೇಳಿ ಬಿಗ್ ಬಾಸ್ ಈ ಅವತರಣಿಕೆ ಸಿಕ್ಕಾಪಟ್ಟೆ ಆಸಕ್ತಿ ಮೂಡಿಸ್ತಾ ಇದೆ.. ಅಯ್ಯಪ್ಪ ಅವರ ತಂದೆ ಜೊತೆ ಕನ್ನಡದಲ್ಲಿ ಮಾತಾಡಿ ಕನ್ನಡಿಗರಿಗೆ ಖುಷಿ ಕೊಟ್ರು, ಆದರೆ ಸಮೀನ ರೆಹಮಾನ್ ಜೊತೆ ಕನ್ನಡದಲ್ಲಿ ಮಾತಾಡ ಬಹುದಿತ್ತು.. ಪೂಜಾ ಗಾಂಧೀ ಅತ್ತೂ  ಅತ್ತೂ ಎರಡನೇ ಬಾರಿ ಹಾಯಾಗಿ ಬಿಗ್ ಬಾಸ್ ಮನೆಗೆ ಬಂದು ಈಗ  ಗ್ರಾಂಡ್ ಫಿನಾಲೆಗೂ ಅವಕಾಶ ಪಡೆದರಲ್ಲ.. ಆಹಾ.. ಹಾಗಾದ್ರೆ ಕೊನೆಯ ಫಲಿತಾಂಶ ಅಕಟಕಟಾ !
ಪೂಜಾ ಗಾಂಧೀ  ಕೈಲಿ ಸಿಕ್ಕಿ ಹಾಕಿಕೊಂಡ ಪಾಪ ಅಯ್ಯಪ್ಪನನ್ನು ಕಂಡ್ರೆ ಅಯ್ಯೋ ಪಾಪ ಅಂತ ಅನ್ನಿಸುತ್ತೆ ;-)
Image result for red flowers
ಕಿಚ್ಚ .. ದೀಪ್ ನಿಮ್ಮ ಕಡೆಗೆ ಈಗ  ಜನರ ಟ್ರಿಗರ್ ಇದೆ .. ಭದ್ರ.. ;-)
 ಉಪ್ಪಿ ಜೊತೆಯ ಕಾರ್ಯಕ್ರಮ ತುಂಬಾ ಮಂದಿಗೆ ಇಷ್ಟ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ವಿಶೇಷತೆ ಅವರ ಬರವಣಿಗೆ, ಆ ಸ್ಟೈಲು .. ದೀಪ್ ಅವರು ನಿಮಗೆ ಕಾಲು ಎಳೆದ ರೀತಿ ಸಕತ್ ಇತ್ತು.. ಅದ್ಸರಿ ನೀವೆ ಅದ್ಯಾಕೆ ಆ ಪರಿ ಉತ್ಸಾಹ ತೋರಿ ಜಾಗ ಬದಲಾಯಿಸಿಕೊಂಡು ಉಪ್ಪಿ ಬಳಿ  ಆ ರೀತಿ,  ಫಿಲಾಸಫಿಯ ಮೂಲಕ ಕಾಲು ಎಳೆಸಿ ಕೊಂಡ್ರಿ ಓಹ್ ಮೈ ಗಾಡ್ ಹೀಗೂ ಉಂಟೆ ;-)  ಏನೇ ಹೇಳಿ ಸುದೀಪ್ ನಾನಂತೂ ಬಿಗ್ ಬಾಸ್ ನ್ನು ಸಕತ್ ಎಂಜಾಯ್ ಮಾಡಿಕೊಂಡು ವೀಕ್ಷಿಸುತ್ತಾ ಇದ್ದೀನಿ.. 

No comments: