ಕೋರಿಕೆ



ಸ್ಟಾರ್ ಸುವರ್ಣ ವಾಹಿನಿಯಲ್ಲಿ  ಪ್ರಸಾರವಾಗುವ ಅಡುಗೆ ಕಾರ್ಯಕ್ರಮ ಬಹಳ ವಿಶಿಷ್ಟವಾಗಿರುತ್ತದೆ.ಅದರಲ್ಲಿ ಶೆಫ್ ಗಳು ಬಂದು ತಮ್ಮ ಕೈ ರುಚಿಯನ್ನು ತೋರುತ್ತಾರೆ, ವಿಜಯಲಕ್ಷ್ಮಿ ರೆಡ್ಡಿಯವರು ಸಹಿತ ವಿವಿಧ ಅಡುಗೆಯನ್ನು ವೀಕ್ಷಕರಿಗೆ ತೋರಿಸುತ್ತಾರೆ. 
ಆದರೇ ಇವೆಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುವ ಕಾರ್ಯಕ್ರಮ ಅಂದ್ರೆ ಗೌರಿ ಮೇಡಮ್ ಅವರು ತಿಳಿಸಿಕೊಡುವ ಅಡುಗೆ, ಕಷಾಯಗಳು, ಎಲೆ, ಕಾಂಡ , ಬೇರು, ತರಕಾರಿ, ಹಣ್ಣುಗಳ ವಿಶೇಷ ಮಹತ್ವ..  ಜೊತೆಗೆ ಮಕ್ಕಳು, ಹಿರಿಯರು ಎಲ್ಲರಿಗೂ ಅಗತ್ಯವಿರುವ ಮನೆಔಷಧ. ಹಳೆ ಸಿನಿಮಾ ಹೀರೋಯಿನ್ ಥರ ಇರುವ ಗೌರಿ ಮೇಡಮ್ ಅವರು ಧರಿಸುವ ಉಡುಗೆ (ಸೀರೆಗಳು), ಒಡವೆ, ಅಲಂಕಾರ, ಆತ್ಮವಿಶ್ವಾಸ ಹೆಚ್ಚು ಗಮನ ಸೆಳೆಯುತ್ತದೆ.
ಈಗ ಮಳೆಗಾಲ.. ಸಾಮಾನ್ಯವಾಗಿ ಎಲ್ಲರಿಗೂ ನೆಗಡಿ ಹಾಗೂ ಕೆಮ್ಮು ಬಹಳ ಬೇಗ ಬರುತ್ತದೆ.ಅದರಲ್ಲೂ ಮಕ್ಕಳಿಗೆ ನೆಗಡಿ-ಕೆಮ್ಮಿನ  ಉಪಟಳ ಹೆಚ್ಚಾಗಿರುತ್ತದೆ.ಗೌರಿ ಅವರು ಈ ಅಂಶಗಳನ್ನು ಹೈಲೈಟ್ ಮಾಡಿ ಸೂಕ್ತ ಪರಿಹಾರಗಳ ಬಗ್ಗೆ ಹೇಳಿದರೆ ವೀಕ್ಷಕರಿಗೆ ತಿಳಿಸಿದರೆ ಹೆಚ್ಚು ಉಯುಕ್ತವಾಗುತ್ತದೆ ಎಂಬುದು ಅನೇಕ ವೀಕ್ಷಕರ ಕೋರಿಕೆ 

No comments: