ಸುದೀಪಾ ?

Image result for red flower images

ಕನ್ನಡ ಬಿಗ್  ಬಾಸ್  ನ್ನು ಆರಂಭದಿಂದಲೂ ನೋಡುತ್ತಾ ಇದ್ದೇನೆ. ಈ ಸೀಸನ್ ಮೂರು ಕಾರಣಗಳಿಂದ ನನಗೆ ತುಂಬಾ ಇಷ್ಟವಾಗಿದೆ. ಮೊದಲನೆಯದ್ದು ಸಾಮಾನ್ಯರು ಮತ್ತು ಸೆಲಬಿಗಳ ಸಂಗಮ, ಎರಡನೆಯದ್ದು  ಆಟಗಳಲ್ಲಿ ಭಿನ್ನತೆ. ಮೂರನೆಯದ್ದು ಅಂದ್ರೆ ಕಿಚ್ಚಾ ಸುದೀಪಾ ನಿರೂಪಣೆ.

ಕಾಮನರ್ ಗಳಲ್ಲಿ  ಸಮೀರ ಮತ್ತು ರಿಯಾಜ್ ಹೆಚ್ಚು ಇಷ್ಟವಾದ ಆಟಗಾರರು.ಹೊರ ಜಗತ್ತಿನಲ್ಲಿ  ಬೇರೆಯದ್ದೇ ಇಮೇಜ್ ಹೊಂದಿರುವ ಭಿನ್ನ ಕೋಮು- ಜಾತಿಯ ಇಬ್ಬರೂ ಒಟ್ಟಾಗಿ , ತುಂಬಾ ಸಾಮರಸ್ಯವಾಗಿ ಇರೋದು ನಿಜಕ್ಕೂ ಇಷ್ಟವಾಗುವ ಸಂಗತಿ. ಮುಖ್ಯವಾಗಿ ರಿಯಾಜ್ ಮತ್ತು ಸಮೀರ್ ಬಗ್ಗೆ  ಸಾಫ್ಟ್ ಕಾರ್ನರ್ ನನಗೆ. ಅದರಲ್ಲೂ ಸಮೀರನ ಬಗ್ಗೆ ಸ್ವಲ್ಪ ಜಾಸ್ತಿ. ಎಲ್ಲಾ ವಿಷಯಗಳ ಬಗ್ಗೆಯೂ  ಬೇರೆ  ಸ್ಪರ್ಧಿಗಳ  ಕೆಂಗಣ್ಣು ಬೀಳುವುದು ಆತನ ಮೇಲೆ ( ನಾನು ಕೇವಲ ಒಂದು ಗಂಟೆ ವೀಕ್ಷಿಸಿದಾಗ ಕಂಡದ್ದು, ನನಗೆ ಅನ್ನಿಸಿದ್ದು ಹೇಳ್ತಾ ಇದ್ದೀನಿ) . ಪ್ರಾಯಶ‍ಃ ಆತನ ಡ್ರಸ್, ಹೇರ್ ಸ್ಟೈಲ್, ಹಣೆಗೆ ಇಡುವ  ಆ ಲಾಂಛನಗಳು, ಮಡಿ ಅಡುಗೆ ಮಾಡಿಕೊಳ್ಳುವ ಸಂಗತಿ ಬೇರೆಯವರಿಗೆ ಅದರಲ್ಲೂ ಬಣ್ಣದ- ಬೆಳಕಿನ ಲೋಕದವರಿಗೆ  ಇಷ್ಟ ವಾಗುತ್ತಿಲ್ಲ ಅಂತ ಕಾಣುತ್ತೆ. 
ಕೃಷಿ ಈ ಬಾರಿಯ ಕ್ಯಾಪ್ಟನ್. ಆಕೆಗೆ ಸಮೀರ್  ಮೇಲೆ ತುಂಬಾ ಬೇಗ ಕೋಪ ಬರುತ್ತೇ. ಅದನ್ನು ಈ ಬಾರಿಯ ನಾಮಿನೇಷನ್ ಮೂಲಕ ತೋರಿಸಿದ್ದು .... !! ಇರ್ಲಿ ಬಿಡಿ ಅದೇನು ದೊಡ್ಡದಲ್ಲ,  ಆದರೇ ಈ ಸರ್ತಿ ಬಂದಿರುವ  ಇಬ್ಬರು ಹುಡುಗಿಯರು ಮಾತ್ರ  ಅದರಲ್ಲೂ   ಕಿರಿಕ್ ಪಾರ್ಟಿ ನಟೀದು ಸ್ವಲ್ಪ ಜಾಸ್ತಿ ಅನ್ನಿಸಿತು. ಇಷ್ಟು ದಿನಗಳ ಕಾಲ ಕಷ್ಟಪಟ್ಟು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸ್ಫರ್ಧಿಗಳನ್ನು ಅದರಲ್ಲೂ  ಜೆಕೆ, ಜಗನ್, ಚಂದನ್ ಹೊರೆತು ಪಡಿಸಿ ಬೇರೆಲ್ಲರ ಬಗ್ಗೆ ವಿಶ್ಲೇಷಣೆ  ಅದರಲ್ಲೂ ಮುಖ್ಯವಾಗಿ ನಿವೇದಿತಾ, ದಿವಾಕರ್, ರಿಯಾಜ್ , ಜಯಶ್ರೀನಿವಾಸ್ , ಸಮಿರ ಅವರುಗಳ ಬಗ್ಗೆ  ಈ ಎರಡೂ ಹೆಣ್ಣುಮಕ್ಕಳಿಗಿರುವ ದೃಷ್ಟಿಕೋನ  ತುಂಬಾ ಹಾಸ್ಯಾಸ್ಪದ ಹಾಗೂ  ಹುಂಬತನದಿಂದ ಕೂಡಿದ್ದು ಅಂತ ಅನ್ನಿಸಿತು. ನಿಜಕ್ಕೂ ಅವರಿಗೆ  ಎಲ್ಲರೂ ಒಂದೇ ಎನ್ನುವ ಭಾವ  ಇದ್ದಿದ್ದರೆ ಖಂಡಿತವಾಗಿ  ನಿವೇದಿತ  ಮುಗ್ಧತೆ ಮುಂದಿಟ್ಟುಕೊಂಡು  ಗೇಮ್ ಆಡ್ತಾ ಇದ್ದಾಳೆ ಅಂತ ಹೇಳ್ತಾ ಇರಲಿಲ್ಲ. ಯಾಕೇಂದ್ರೆ  ನಿವೇದಿತಾ ಮುಗ್ಧತೆ ಹಾಗೂ ಪ್ರಬುದ್ಧತೆ ಎರಡರ ಸಮ್ಮಿಳನ. ಅದನ್ನು ಆಕೆ ಎಂದಿಗೂ  ಕೆಟ್ಟ ಗೇಮ್ ಆಡಲು ಬಳಸಿಲ್ಲ. ಬದುಕಲ್ಲಿ ನಾವು ಸಾಯುವ ತನಕ ಮುಗ್ಧತೆಯನ್ನು ಸ್ವಲ್ಪ ಪ್ರಮಾಣದಲ್ಲಾದರೂ ಹೊಂದಿರಬೇಕು. ಅದು ಬದುಕಿನ ಸವಿಯನ್ನು ಹೆಚ್ಚಿಸುತ್ತದೆ.
ಜಯ ಶ್ರೀನಿವಾಸ್ ಅವರ ಕ್ಷೇತ್ರದಲ್ಲಿ ಕಷ್ಟಪಟ್ಟು ಬಂದವರು. ಅವರದ್ದೇ ಆದ ಅನುಯಾಯಿಗಳನ್ನು ಪಡೆದವರು. ಅದು ಅವರ ಸಾಧನೆ. ಬಿಬಾ ಮನೆಯಿಂದ ಹೊರಬಂದ ನಂತರವೂ  ಎಲ್ಲಾ ಕಾಲದಲ್ಲೂ ಚಾಲ್ತಿಯಲ್ಲಿ ಇರುವ ವ್ಯಕ್ತಿತ್ವ. ಅವರ ಬಳಿ  ಈ  ಮುಗುದೆಯರಲ್ಲದ ಹುಡುಗಿಯರು ಮಾತನಾಡಿದ  ರೀತಿ...!!
ಅದೆಲ್ಲಕ್ಕಿಂತ ಸಮೀರ ಅವರ ಜುಟ್ಟು, ಜನಿವಾರ, ಅಗ್ಗಿಷ್ಟಿಕೆಯ ಜೀವನ ಶೈಲಿಯನ್ನು ಮುಂದಿಟ್ಟುಕೊಂಡು ಅವರ ವೃತ್ತಿಯ ಬಗ್ಗೆ ಮಾತಾಡಿದ್ದು, ಅವರ ಸಂಸ್ಕೃತ ಜ್ಞಾನದ ಬಗ್ಗೆ ಅವಹೇಳನ ಮಾಡಿದ್ದು ಶುದ್ಧ ತಪ್ಪು. ಲಾಸ್ಯ  ಹೆಸರಿಗೆ ಅರ್ಥ ಕೇಳಿ ಇದು ಅರ್ಥ ನಿಮಗೆ ಗೊತ್ತಿಲ್ಲ ಎಂದು ಹೇಳಿದ ರೀತಿ ಸಹ  ಬೇಸರ ನೀಡಿತು.
ಕೊನೆದಾಗಿ ಹೇಳಬೇಕೆಂದು ಅನ್ನಿಸಿರುವ ಮತ್ತೊಂದು ಮುಖ್ಯಸಂಗತಿ ಅಂದ್ರೆ, ಟಾಸ್ಕ್ ನಲ್ಲೂ  ಸಹಿತ ಅವರಿಬ್ಬರೂ ಜೆಕೆ ಮತ್ತು  ಜಗನ್ನಾಥ್ ಅವರಿಬ್ಬರನ್ನೇ ಹುರಿದುಂಬಿಸಿದ್ದು.
ಯಾಕ್ ಹೀಗೆ ಮಾಡಿದ್ರು ಆ ಬಾಲಕಿಯರು ಮಿತ್ರಾ ಸುದೀಪಾ ? :-) 

No comments: